
ಬೆಂಗಳೂರು, ಜೂನ್ 3: JEE ಅಡ್ವಾನ್ಸ್ಡ್ 2025 ಪರೀಕ್ಷೆಗಳಲ್ಲಿ ದೀಕ್ಷಾ ವೇದಾಂತು (Deeksha Vedantu) ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಕಂಡಿದ್ದಾರೆ. ದಕ್ಷ್ ತಯಲಿಯಾ ಎನ್ನುವ ವಿದ್ಯಾರ್ಥಿ ಈ ಪರೀಕ್ಷೆಯಲ್ಲಿ ಕರ್ನಾಟಕದ ಟಾಪರ್ ಎನಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇವರು 15ನೇ ರ್ಯಾಂಕ್ ಪಡೆದಿದ್ದಾರೆ. ಗಣಿತ ಪರೀಕ್ಷೆಯಲ್ಲಿ ಅವರು 120ಕ್ಕೆ 120 ಅಂಕ ಪಡೆದು ಗಮನ ಸೆಳೆದಿದ್ದಾರೆ. ದಕ್ಷ್ ಜೊತೆಗೆ ತನ್ನ ಅಕಾಡೆಮಿಯ ಇನ್ನೂ ಹಲವು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ 10,000ದವರೆಗೆ ರ್ಯಾಂಕ್ಗಳನ್ನು ಪಡೆದಿದ್ದಾರೆ ಎಂದು ದೀಕ್ಷಾ ವೇದಾಂತು ಸಂಸ್ಥೆ ಹೇಳಿಕೊಂಡಿದೆ.
ಒಟ್ಟಾರೆ, ದೀಕ್ಷಾ ವೇದಾಂತು ವಿದ್ಯಾರ್ಥಿಗಳು ಈ ಕೆಳಗಿನಂತೆ ರ್ಯಾಂಕ್ಸ್ ಗಳಿಸಿದ್ದಾರೆ:
ದೀಕ್ಷಾ ವೇದಾಂತು ಸಹ-ಸ್ಥಾಪಕರಾದ ಡಾ. ಜಿ ಶ್ರೀಧರ್ ಅವರು ಜೆಇಇ ಅಡ್ವಾನ್ಸ್ಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ತಮ್ಮ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
“ನಮ್ಮ ವಿದ್ಯಾರ್ಥಿಗಳ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಈ ಫಲಿತಾಂಶಗಳು ಕೇವಲ ಅವರ ಶ್ರಮವಲ್ಲ, ದೀಕ್ಷಾ ವೇದಾಂತು ಶೈಕ್ಷಣಿಕ ಪದ್ದತಿಯ ಶಕ್ತಿಯ ಪ್ರತಿಬಿಂಬವಾಗಿದೆ. ನಮ್ಮ ಸುವ್ಯವಸ್ಥಿತ ಪಠ್ಯಕ್ರಮಗಳು, ಪರಿಣತಿ ಮಾರ್ಗದರ್ಶನ, ಮೌಲ್ಯಮಾಪನಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಕಲ್ಪನೆಗಳು ವಿದ್ಯಾರ್ಥಿಗಳನ್ನು ತಾವು ಸಾಧಿಸಬಹುದಾದ ಮಟ್ಟಕ್ಕೆ ತಲುಪಿಸಲು ಸಹಾಯ ಮಾಡಿವೆ. ಹೆತ್ತವರ ನಂಬಿಕೆಗಾಗಿ ನಾವು ಋಣಿ ಆಗಿದ್ದೇವೆ. ಮತ್ತು ಈ ಪೈಕಿ ಪ್ರತಿಯೊಬ್ಬ ವಿದ್ಯಾರ್ಥಿಯ ಧೈರ್ಯ ಮತ್ತು ನಿಷ್ಠೆಗೆ ಅಭಿನಂದನೆಗಳು” ಎಂದು ಡಾ. ಶ್ರೀಧರ್ ಜಿ ಹೇಳಿದ್ದಾರೆ.
“ನಾವು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ತರುವುದಲ್ಲ, ಅವರಿಗೂ ಬೇಕಾದ ಮಾರ್ಗದರ್ಶನ, ಉಪಕರಣಗಳನ್ನು ನೀಡುವುದೇ ಮುಖ್ಯ. ದಕ್ಷ್ ಅವರ ಕರ್ನಾಟಕ ರ್ಯಾಂಕ್ 1 ಮತ್ತು ಇತರ ವಿದ್ಯಾರ್ಥಿಗಳ ಯಶಸ್ಸು ನಮ್ಮ ನಿಲುವು ಸರಿಯಾಗಿದೆಯೆಂಬುದನ್ನು ತೋರಿಸುತ್ತದೆ. ಈ ಸಾಧನೆ ಸಾಧ್ಯವಾಗಿಸಿದ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು.”
“ಈ ಪ್ರಯಾಣ ತೃಪ್ತಿಕರವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು, ದಾರಿ ತೋರಿಸಿದ ಮತ್ತು ಪ್ರೋತ್ಸಾಹಿಸಿದ ವೇದಾಂತು ಶಿಕ್ಷಕರಿಗೆ ಧನ್ಯವಾದಗಳು. AIR 15 ಗಳಿಸಿ ಕರ್ನಾಟಕವನ್ನು ಟಾಪ್ ಮಾಡಿರುವುದು ನನಗೆ ಇನ್ನೂ ನಂಬಲಾಗುತ್ತಿಲ್ಲ. ವೈಯಕ್ತಿಕ ಮಾರ್ಗದರ್ಶನ ಮತ್ತು ರಚನಾತ್ಮಕ ಬೆಂಬಲ ವ್ಯವಸ್ಥೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.”
25 ವರ್ಷಗಳಷ್ಟು ಕಾಲದ ಶೈಕ್ಷಣಿಕ ಪ್ರಯಾಣದಲ್ಲಿ ದೀಕ್ಷಾ ವೇದಾಂತು ಶೈಕ್ಷಣಿಕ ಶ್ರೇಷ್ಠತೆಗೆ ಪ್ರತೀಕವಾಗಿದೆ. JEE, NEET ಮತ್ತು KCET ಮುಂತಾದ ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ತರುವಲ್ಲಿ ಇದು ನಿರಂತರವಾಗಿ ಮುಂಚೂಣಿಯಲ್ಲಿದೆ. JEE ಅಡ್ವಾನ್ಸ್ಡ್ 2025ರ ಫಲಿತಾಂಶದಲ್ಲಿ ದೀಕ್ಷಾ ವೇದಾಂತು ವಿದ್ಯಾರ್ಥಿಗಳ ಈ ಅದ್ಭುತ ಪ್ರದರ್ಶನವು ಸಂಸ್ಥೆಯ ಈ ಶ್ರೇಷ್ಠತೆಯ ಪರಂಪರೆಯ ಮತ್ತೊಂದು ಮೈಲಿಗಲ್ಲು ಎನ್ನಬಹುದು.