Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಮಕ್ಕಳಿಗೆ ‘ನಾಳೆ ರೂ.300 ತರಲು ಮರೆಯುವುದಿಲ್ಲ’ ಎಂದು 30 ಬಾರಿ ಬರೆಸಿದ ಶಿಕ್ಷಕ

ತಮ್ಮ ಪೋಷಕರು ಡೈರಿ ಮತ್ತು ಗುರುತಿನ ಚೀಟಿ ಶುಲ್ಕವನ್ನು ಪಾವತಿಸದಿದ್ದದ್ದಕ್ಕೆ ಶಿಕ್ಷೆಯಾಗಿ 30 ಬಾರಿ ಈ ವಾಕ್ಯವನ್ನು ಬರೆಯಲು ವಿದ್ಯಾರ್ಥಿಗಳಿಗೆ ಹೇಳಿದ ನಂತರ ಮುಂಬೈನ ಶಾಲೆಯೊಂದು ಟೀಕೆಗಳನ್ನು ಎದುರಿಸಿತು. ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶಾಲಾ ಮಕ್ಕಳಿಗೆ 'ನಾಳೆ ರೂ.300 ತರಲು ಮರೆಯುವುದಿಲ್ಲ’ ಎಂದು 30 ಬಾರಿ ಬರೆಸಿದ ಶಿಕ್ಷಕ
ದಿ ನ್ಯೂ ಹೊರೈಜನ್ ಸ್ಕಾಲರ್'ಸ್ ಸ್ಕೂಲ್
Follow us
ನಯನಾ ಎಸ್​ಪಿ
|

Updated on:Apr 19, 2023 | 10:31 AM

ಮುಂಬೈ: ಥಾಣೆಯ (Thane) ಗೋಧ್‌ಬಂದರ್ ರಸ್ತೆಯಲ್ಲಿರುವ ನ್ಯೂ ಹಾರಿಜಾನ್ ಸ್ಕಾಲರ್ಸ್ ಸ್ಕೂಲ್, ಸುಮಾರು ಐದರಿಂದ ಎಂಟು ವಿದ್ಯಾರ್ಥಿಗಳ (Students) ಪೋಷಕರಿಗೆ ತಮ್ಮ ಡೈರಿ ಮತ್ತು ಗುರುತಿನ ಚೀಟಿಗಳಿಗೆ ಶುಲ್ಕವನ್ನು (Fees) ಪಾವತಿಸಲು ಗಡುವು ಸಮೀಪಿಸುತ್ತಿರುವ ಬಗ್ಗೆ ನೆನಪಿಸಲು ಸೋಮವಾರ (April 17) ವಿದ್ಯಾರ್ಥಿಗಳಿಗೆ ‘ನಾಳೆ ನಾನು ₹300 ತರಲು ಮರೆಯುವುದಿಲ್ಲ’ ಎಂದು ಮೂವತ್ತು ಬಾರಿ ಬರೆಸಿದೆ. ಶುಲ್ಕವನ್ನು ಪಾವತಿಸಲು ಗಡುವು ಏಪ್ರಿಲ್ 20 ಆಗಿತ್ತು. ಶುಲ್ಕವನ್ನು ಕೊಡಲು ಪೋಷಕರಿಗೆ (Parents) ನೆನಪಿಸುವ ನೆಪದಲ್ಲಿ ಮಕ್ಕಳಿಗೆ ಶಿಕ್ಷೆಯನ್ನು ನೀಡಲಾಗಿದೆ. ಇದೆ ವಿಷಯಕ್ಕೆ ಈಗ ಥಾಣೆಯ ಈ ಶಾಲೆ ಭಾರಿ ಟೀಕೆಗೆ ಒಳಗಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ವಿದ್ಯಾರ್ಥಿಯ ಪೋಷಕರು, “ಇದು ಕ್ಷಮಿಸಲಾಗದು ಏಕೆಂದರೆ ಆಘಾತಕ್ಕೊಳಗಾದ ನನ್ನ ಮಗ ಮರುದಿನ ಶಾಲೆಗೆ ಹೋಗಲು ಸಿದ್ಧವಾಗಿಲ್ಲ.” ಶಿಕ್ಷೆಯನ್ನು ಎದುರಿಸಿದ ಇನ್ನೊಬ್ಬ ಪೋಷಕರ ಮಗ, “ಈ ವಾಕ್ಯದ ಬದಲು ಮಕ್ಕಳಿಗೆ ಪಠ್ಯ ಪುಸ್ತಕದಿಂದ ಪ್ಯಾರಾಗ್ರಾಫ್ ಅನ್ನು ಐದು ಬಾರಿ ಬರೆಯುವಂತೆ ಮಾಡಬಹುದಿತ್ತು. ನನ್ನ ಮಗ ಅವಮಾನಕ್ಕೊಳಗಾಗಿದ್ದಾನೆ. ಘಟನೆಯಿಂದ ಉಂಟಾದ ಅವರ ಭಾವನಾತ್ಮಕ ಸಂಕಟವನ್ನು ಯಾರು ಸರಿ ಮಾಡುತ್ತಾರೆ?” ಎಂದು ಶಾಲೆಯ ಈ ನಡತೆಯನ್ನು ಧೂಷಿಸಿದರು.

ಶಿಕ್ಷಕರು ನೀಡಿದ ಈ ಶಿಕ್ಷೆಯನ್ನು ಒಬ್ಬ ವಿದ್ಯಾರ್ಥಿ ಬರೆಯಲು ನಿರಾಕರಿಸಿದಾಗ, “ಶಿಕ್ಷಕರು ಅವಳನ್ನು ತರಗತಿಯ ಮೂಲೆಗೆ ಕಳುಹಿಸಿ ಅಲ್ಲಿ ನಿಂತುಕೊಂಡು ಬರೆಯಲು ಹೇಳಿದರು” ಎಂದು ಇನ್ನೊಬ್ಬ ಪೋಷಕರು ಹೇಳಿದರು.

ಇದನ್ನೂ ಓದಿ: ವಿಟಿಯು ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

ಮಂಗಳವಾರ (ಏಪ್ರಿಲ್ 18), ಪೋಷಕರು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಘಟನೆಯನ್ನು ಆಡಳಿತ ಮಂಡಳಿಗೆ ವರದಿ ಮಾಡಿದ್ದಾರೆ, ನಂತರ ಉಪ ಪ್ರಾಂಶುಪಾಲರು ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದಾರೆ. ಪೋಷಕರು, “ನಾನು ಶಾಲೆಗೆ ಪ್ರವೇಶಿಸಿದ್ದು ಇದೇ ಮೊದಲು. ಈ ಹಿಂದೆ ಹಲವು ಬಾರಿ ಶಿಕ್ಷಕರನ್ನು ಭೇಟಿಯಾಗಲು ಬಯಸಿದ್ದೆವು ಆದರೆ ಪೋಷಕರ ವಿನಂತಿಯನ್ನು ನಿರಾಕರಿಸಲಾಗಿತ್ತು. ಶಾಲೆಯೊಳಗೆ ಪ್ರವೇಶಿಸಲು ಸಹ ನಮಗೆ ಅವಕಾಶ ನೀಡಲಿಲ್ಲ. ಆದರೆ, ಈಗ ಉಪ ಪ್ರಾಂಶುಪಾಲರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, ಆದರೆ ನಮ್ಮ ಮಕ್ಕಳು ಎದುರಿಸಿದ ಅವಮಾನಕ್ಕೆ ಉತ್ತರ ನೀಡಿಲ್ಲ. ಶುಲ್ಕದ ವಿಷಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸದಂತೆ ಈ ಹಿಂದೆ ಪೋಷಕರ ಗುಂಪು ಆಡಳಿತ ಮಂಡಳಿಗೆ ವಿನಂತಿಸಿದೆ’ ಎಂದು ಪೋಷಕರು ತಿಳಿಸಿದ್ದಾರೆ.

Published On - 10:21 am, Wed, 19 April 23

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ