ಶಾಲಾ ಮಕ್ಕಳಿಗೆ ‘ನಾಳೆ ರೂ.300 ತರಲು ಮರೆಯುವುದಿಲ್ಲ’ ಎಂದು 30 ಬಾರಿ ಬರೆಸಿದ ಶಿಕ್ಷಕ

ತಮ್ಮ ಪೋಷಕರು ಡೈರಿ ಮತ್ತು ಗುರುತಿನ ಚೀಟಿ ಶುಲ್ಕವನ್ನು ಪಾವತಿಸದಿದ್ದದ್ದಕ್ಕೆ ಶಿಕ್ಷೆಯಾಗಿ 30 ಬಾರಿ ಈ ವಾಕ್ಯವನ್ನು ಬರೆಯಲು ವಿದ್ಯಾರ್ಥಿಗಳಿಗೆ ಹೇಳಿದ ನಂತರ ಮುಂಬೈನ ಶಾಲೆಯೊಂದು ಟೀಕೆಗಳನ್ನು ಎದುರಿಸಿತು. ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶಾಲಾ ಮಕ್ಕಳಿಗೆ 'ನಾಳೆ ರೂ.300 ತರಲು ಮರೆಯುವುದಿಲ್ಲ’ ಎಂದು 30 ಬಾರಿ ಬರೆಸಿದ ಶಿಕ್ಷಕ
ದಿ ನ್ಯೂ ಹೊರೈಜನ್ ಸ್ಕಾಲರ್'ಸ್ ಸ್ಕೂಲ್
Follow us
|

Updated on:Apr 19, 2023 | 10:31 AM

ಮುಂಬೈ: ಥಾಣೆಯ (Thane) ಗೋಧ್‌ಬಂದರ್ ರಸ್ತೆಯಲ್ಲಿರುವ ನ್ಯೂ ಹಾರಿಜಾನ್ ಸ್ಕಾಲರ್ಸ್ ಸ್ಕೂಲ್, ಸುಮಾರು ಐದರಿಂದ ಎಂಟು ವಿದ್ಯಾರ್ಥಿಗಳ (Students) ಪೋಷಕರಿಗೆ ತಮ್ಮ ಡೈರಿ ಮತ್ತು ಗುರುತಿನ ಚೀಟಿಗಳಿಗೆ ಶುಲ್ಕವನ್ನು (Fees) ಪಾವತಿಸಲು ಗಡುವು ಸಮೀಪಿಸುತ್ತಿರುವ ಬಗ್ಗೆ ನೆನಪಿಸಲು ಸೋಮವಾರ (April 17) ವಿದ್ಯಾರ್ಥಿಗಳಿಗೆ ‘ನಾಳೆ ನಾನು ₹300 ತರಲು ಮರೆಯುವುದಿಲ್ಲ’ ಎಂದು ಮೂವತ್ತು ಬಾರಿ ಬರೆಸಿದೆ. ಶುಲ್ಕವನ್ನು ಪಾವತಿಸಲು ಗಡುವು ಏಪ್ರಿಲ್ 20 ಆಗಿತ್ತು. ಶುಲ್ಕವನ್ನು ಕೊಡಲು ಪೋಷಕರಿಗೆ (Parents) ನೆನಪಿಸುವ ನೆಪದಲ್ಲಿ ಮಕ್ಕಳಿಗೆ ಶಿಕ್ಷೆಯನ್ನು ನೀಡಲಾಗಿದೆ. ಇದೆ ವಿಷಯಕ್ಕೆ ಈಗ ಥಾಣೆಯ ಈ ಶಾಲೆ ಭಾರಿ ಟೀಕೆಗೆ ಒಳಗಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ವಿದ್ಯಾರ್ಥಿಯ ಪೋಷಕರು, “ಇದು ಕ್ಷಮಿಸಲಾಗದು ಏಕೆಂದರೆ ಆಘಾತಕ್ಕೊಳಗಾದ ನನ್ನ ಮಗ ಮರುದಿನ ಶಾಲೆಗೆ ಹೋಗಲು ಸಿದ್ಧವಾಗಿಲ್ಲ.” ಶಿಕ್ಷೆಯನ್ನು ಎದುರಿಸಿದ ಇನ್ನೊಬ್ಬ ಪೋಷಕರ ಮಗ, “ಈ ವಾಕ್ಯದ ಬದಲು ಮಕ್ಕಳಿಗೆ ಪಠ್ಯ ಪುಸ್ತಕದಿಂದ ಪ್ಯಾರಾಗ್ರಾಫ್ ಅನ್ನು ಐದು ಬಾರಿ ಬರೆಯುವಂತೆ ಮಾಡಬಹುದಿತ್ತು. ನನ್ನ ಮಗ ಅವಮಾನಕ್ಕೊಳಗಾಗಿದ್ದಾನೆ. ಘಟನೆಯಿಂದ ಉಂಟಾದ ಅವರ ಭಾವನಾತ್ಮಕ ಸಂಕಟವನ್ನು ಯಾರು ಸರಿ ಮಾಡುತ್ತಾರೆ?” ಎಂದು ಶಾಲೆಯ ಈ ನಡತೆಯನ್ನು ಧೂಷಿಸಿದರು.

ಶಿಕ್ಷಕರು ನೀಡಿದ ಈ ಶಿಕ್ಷೆಯನ್ನು ಒಬ್ಬ ವಿದ್ಯಾರ್ಥಿ ಬರೆಯಲು ನಿರಾಕರಿಸಿದಾಗ, “ಶಿಕ್ಷಕರು ಅವಳನ್ನು ತರಗತಿಯ ಮೂಲೆಗೆ ಕಳುಹಿಸಿ ಅಲ್ಲಿ ನಿಂತುಕೊಂಡು ಬರೆಯಲು ಹೇಳಿದರು” ಎಂದು ಇನ್ನೊಬ್ಬ ಪೋಷಕರು ಹೇಳಿದರು.

ಇದನ್ನೂ ಓದಿ: ವಿಟಿಯು ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

ಮಂಗಳವಾರ (ಏಪ್ರಿಲ್ 18), ಪೋಷಕರು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಘಟನೆಯನ್ನು ಆಡಳಿತ ಮಂಡಳಿಗೆ ವರದಿ ಮಾಡಿದ್ದಾರೆ, ನಂತರ ಉಪ ಪ್ರಾಂಶುಪಾಲರು ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದಾರೆ. ಪೋಷಕರು, “ನಾನು ಶಾಲೆಗೆ ಪ್ರವೇಶಿಸಿದ್ದು ಇದೇ ಮೊದಲು. ಈ ಹಿಂದೆ ಹಲವು ಬಾರಿ ಶಿಕ್ಷಕರನ್ನು ಭೇಟಿಯಾಗಲು ಬಯಸಿದ್ದೆವು ಆದರೆ ಪೋಷಕರ ವಿನಂತಿಯನ್ನು ನಿರಾಕರಿಸಲಾಗಿತ್ತು. ಶಾಲೆಯೊಳಗೆ ಪ್ರವೇಶಿಸಲು ಸಹ ನಮಗೆ ಅವಕಾಶ ನೀಡಲಿಲ್ಲ. ಆದರೆ, ಈಗ ಉಪ ಪ್ರಾಂಶುಪಾಲರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, ಆದರೆ ನಮ್ಮ ಮಕ್ಕಳು ಎದುರಿಸಿದ ಅವಮಾನಕ್ಕೆ ಉತ್ತರ ನೀಡಿಲ್ಲ. ಶುಲ್ಕದ ವಿಷಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸದಂತೆ ಈ ಹಿಂದೆ ಪೋಷಕರ ಗುಂಪು ಆಡಳಿತ ಮಂಡಳಿಗೆ ವಿನಂತಿಸಿದೆ’ ಎಂದು ಪೋಷಕರು ತಿಳಿಸಿದ್ದಾರೆ.

Published On - 10:21 am, Wed, 19 April 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ