AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಶಹೀದ್ ಭಗತ್​ ಸಿಂಗ್ ಪ್ರಾಣ ತ್ಯಾಗದ ದಿನ; ದೆಹಲಿ ಸಿಎಂ ಕೇಜ್ರಿವಾಲ್ ದೇಶಕ್ಕೆ​ ಘೋಷಿಸಿದರು ಭರ್ಜರಿ ಕೊಡುಗೆ! ಏನದು?

Shaheed Bhagat Singh Armed Forces Preparatory School: ಇದು ರೆಸಿಡೆನ್ಶಿಯಲ್ ಸ್ಕೂಲ್. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಇಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ನಿವೃತ್ತ ಸೇನಾನಿಗಳು ಇಲ್ಲಿನ ಅಧ್ಯಾಪಕರಾಗಲಿದ್ದಾರೆ. ಮಾರ್ಚ್​ 27 ರಂದು 9ನೇ ತರಗತಿಗೆ ಮತ್ತು ಮಾರ್ಚ್​ 28 ರಂದು 11ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ನಾಳೆ ಶಹೀದ್ ಭಗತ್​ ಸಿಂಗ್ ಪ್ರಾಣ ತ್ಯಾಗದ ದಿನ; ದೆಹಲಿ ಸಿಎಂ ಕೇಜ್ರಿವಾಲ್ ದೇಶಕ್ಕೆ​ ಘೋಷಿಸಿದರು ಭರ್ಜರಿ ಕೊಡುಗೆ! ಏನದು?
ನಾಳೆ ಶಹೀದ್ ಭಗತ್​ ಸಿಂಗ್ ಪ್ರಾಣ ತ್ಯಾಗ ಮಾಡಿದ ದಿನ; ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ದೇಶಕ್ಕೆ​ ಘೋಷಿಸಿದರು ಭರ್ಜರಿ ಕೊಡುಗೆ!
TV9 Web
| Updated By: ಸಾಧು ಶ್ರೀನಾಥ್​|

Updated on:Mar 22, 2022 | 4:25 PM

Share

ನವದೆಹಲಿ: ಪಂಜಾಬ್ ಅಸೆಂಬ್ಲಿ ಗದ್ದುಗೆ ಗೆದ್ದು ಬೀಗಿರುವ ಆಮ್​ ಆದ್ಮಿ ಪಕ್ಷವು ಈಗ ರಾಷ್ಟ್ರೀಯ ಪಕ್ಷವಾಗುತ್ತಾ ದಾಪುಗಾಲು ಹಾಕುತ್ತಾ ಸಾಗಿದೆ. ಈ ಮಧ್ಯೆ ಆಪ್​ ಅಧಿನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ತಮ್ಮ ಆಡಳಿತದಲ್ಲಿ ಕೆಲ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲೊಂದು ಸೈನಿಕ ಶಾಲೆ ತೆರೆದು, ಅದಕ್ಕೆ ಶಹೀದ್ ಭಗತ್​ ಸಿಂಗ್​ ಸೈನಿಕ ಶಾಲೆ ಎಂದು ನಾಮಕರಣ ಮಾಡಲು ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಭಗತ್ ಸಿಂಗ್ – ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ (Shaheed Bhagat Singh). ಭಗತ್​ ಸಿಂಗ್ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ, ತಮ್ಮ 23ನೇ ಬಿಸಿಯೌವ್ವನದ ವಯಸ್ಸಿನಲ್ಲಿ, 1931ರ ಮಾರ್ಚ್​ 23 ರಂದು ಪ್ರಾಣ ತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (CM Arvind Kejriwal)​ ಈ ನಿರ್ಧಾರ (Shaheed Bhagat Singh Armed Forces Preparatory School) ಪ್ರಕಟಿಸಿರುವುದು ದೇಶಾಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ.

ಶಹೀದ್ ಭಗತ್​ ಸಿಂಗ್ ಉಚಿತ​ ಸೈನಿಕ ಶಾಲೆ! ಎರಡು ವರ್ಷಗಳ ಹಿಂದೆಯೇ ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಈ ಸಂಬಂಧ ಒಂದು ಘೋಷಣೆ ಮಾಡಿದ್ದರು. ಸೈನಿಕ ಶಾಲೆಯೊಂದನ್ನು ತೆರೆದು, ಅದರಲ್ಲಿ ಭದ್ರತಾ ಪಡೆಗಳಿಗೆ ಬೇಕಾಗುವಂತಹ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಈ ಶಾಲೆಯ ಧ್ಯೇಯೋದ್ದೇಶವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ (NDA) ಮಾದರಿಯಲ್ಲಿ ಇದು ಕಾರ್ಯಗತವಾಗಲಿದೆ. ಗಮನಾರ್ಹವೆಂದರೆ ಇದು ಸಂಪೂರ್ಣ ಉಚಿತ ಶಾಲೆಯಾಗಲಿದೆ. ದೆಹಲಿ ವಿಶ್ವವಿದ್ಯಾಲಯದಡಿ ಈಗಾಗಲೇ ಶಹೀದ್ ಭಗತ್​ ಸಿಂಗ್ ಕಾಲೇಜು ಒಂದು (Shaheed Bhagat Singh College) ಕಾರ್ಯನಿರ್ವಹಿಸುತ್ತಿದೆ. ಅದು 1967ರಲ್ಲಿ ಸ್ಥಾಪನೆಗೊಂಡಿದೆ.

ನೂತನ ಸೇನಾ ಕಾಲೇಜು ಸ್ಥಾಪನೆ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರು ನೂತನ ಕಾಲೇಜಿನ ಹೆಸರನ್ನು ಸಹ ಪ್ರಕಟಿಸಿದರು. ಅದು ದೆಹಲಿ ಸರ್ಕಾರದ ಶಹೀದ್ ಭಗತ್​ ಸಿಂಗ್ ಸಶಸ್ತ್ರ ಸೇನಾಪಡೆಗಳ ಪ್ರಿಪರೇಟರಿ ಸ್ಕೂಲ್​ (Delhi govt’s Shaheed Bhagat Singh Armed Forces Preparatory School). 9ನೇ ತರಗತಿ ಮತ್ತು 11 ನೇ ತರಗತಿಗೆ ಇಲ್ಲಿ ಪ್ರವೇಶ ನೀಡಲಾಗುವುದು. 100-100 ಸೀಟುಗಳನ್ನು ನಿಗದಿಪಡಿಸಲಾಗಿದೆ. ಆದರೆ 200 ಸೀಟುಗಳಿಗೆ ಈಗಾಗಲೇ 18,000 ವಿದ್ಯಾರ್ಥಿಗಳು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಝರೋದಾ ಕಲಾನ್​ನಲ್ಲಿ (Jharoda Kalan ) 14 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಈ ಶಾಲೆ ನಿರ್ಮಾಣವಾಗಲಿದೆ. ಇದು ರೆಸಿಡೆನ್ಶಿಯಲ್ ಸ್ಕೂಲ್. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಇಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ನಿವೃತ್ತ ಸೇನಾನಿಗಳು ಇಲ್ಲಿನ ಅಧ್ಯಾಪಕರಾಗಲಿದ್ದಾರೆ. ಮಾರ್ಚ್​ 27 ರಂದು 9ನೇ ತರಗತಿಗೆ ಮತ್ತು ಮಾರ್ಚ್​ 28 ರಂದು 11ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

Published On - 4:21 pm, Tue, 22 March 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್