ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಇಂದಿನ ಚುನಾವಣಾ ಪ್ರಚಾರ; ಯಾರ್ಯಾರು ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

|

Updated on: May 07, 2023 | 6:01 AM

ಕರ್ನಾಟಕ ವಿಧಾನಸಭೆ ಚುನಾವಣೆ: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರಂತಹ ಕೇಂದ್ರದ ಘಟಾನುಘಟಿ ನಾಯಕರು ಇಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ಯಾರ್ಯಾರು ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎಂಬುದು ಇಲ್ಲಿದೆ.

ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಇಂದಿನ ಚುನಾವಣಾ ಪ್ರಚಾರ; ಯಾರ್ಯಾರು ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
ನರೇಂದ್ರ ಮೋದಿ ಸೇರಿದಂತೆ ಕರ್ನಾಟಕದಲ್ಲಿ ಇಂದು ಬಿಜೆಪಿ ನಾಯಕರ ಪ್ರಚಾರ
Image Credit source: PTI
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ (Amit Shah), ಜೆಪಿ ನಡ್ಡಾ (JP Nadda) ಅವರಂತಹ ಕೇಂದ್ರದ ಘಟಾನುಘಟಿ ನಾಯಕರು ಇಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ಸೇರಿದಂತೆ ಹಲವು ಸ್ಟಾರ್ ಪ್ರಚಾರಕರೂ ಬಿಜೆಪಿ ಪರ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಹಾಗಿದ್ದರೆ ಯಾವ ನಾಯಕರು ಯಾವ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ? ಇಲ್ಲಿದೆ ಮಾಹಿತಿ.

ಪ್ರಧಾನಿ ನರೇಂದ್ರ ಮೋದಿ: ಬೆಂಗಳೂರು, ಶಿವಮೊಗ್ಗ, ನಂಜನಗೂಡು

ಕೇಂದ್ರ ಗೃಹ ಸಚಿವ ಅಮಿತ್ ಶಾ: ಬೆಳಗಾವಿ ದಕ್ಷಿಣ, ಹುನಗುಂದ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಆನೇಕಲ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ: ಹರಪನಹಳ್ಳಿ, ಶಿರಗುಪ್ಪ, ಕೂಡ್ಲಿಗಿ

ಕೇಂದ್ರ ಸಚಿವ ಎಸ್. ಜೈಶಂಕರ್: ಮೈಸೂರು

ಕೇಂದ್ರ ಸಚಿವ ವಿ.ಕೆ. ಸಿಂಗ್: ಮಡಿಕೇರಿ, ವಿರಾಜಪೇಟೆ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ: ಕೆಜಿಎಫ್

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್: ಬಸವನಗುಡಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ: ತೇರದಾಳ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ

ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್: ಕೊಪ್ಪಳ, ಹಳಿಯಾಳ, ನಿಪ್ಪಾಣಿ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ: ಹಿರೇಕೆರೂರು, ಶಿವಮೊಗ್ಗ ಗ್ರಾಮಾಂತರ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್: ಹುನಗುಂದ, ಬಾಗಲಕೋಟೆ, ಬಬಲೇಶ್ವರ

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ: ಹೊನ್ನಾಳಿ

ಚಲನಚಿತ್ರ ನಟ ಸುದೀಪ್: ನರಗುಂದ, ಹೊಳಲ್ಕೆರೆ, ಚಳ್ಳಕೆರೆ

ಈ ಎಲ್ಲಾ ನಾಯಕರು ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು ಬಿಜೆಪಿ ಪರ ಅಲೆ ಎಬ್ಬಿಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ