AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಸಂಚರಿಸುವ ರಸ್ತೆ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಬಸ್: ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್​ಗೆ ನೋ ಎಂಟ್ರಿ

ಮೋದಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸಮಾವೇಶಕ್ಕೆ ಆಗಮಿಸುವ ಮಹಿಳೆಯರ ಮೇಕಪ್ ಕಿಟ್​ಗೂ ಬ್ರೇಕ್ ಹಾಕಲಾಗಿದೆ. ಜೊತೆಗೆ ಮೋದಿ ಸಾಗೂ ಮಾರ್ಗದಲ್ಲಿ ಬಿಬಿಎಂಪಿ ಕಸದ ಲಾರಿ, ಖಾಸಗಿ ಬಸ್ ಕೆಟ್ಟು ನಿಂತಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸಿದ ಘಟನೆ ನಡೆದಿದೆ.

ಮೋದಿ ಸಂಚರಿಸುವ ರಸ್ತೆ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಬಸ್: ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್​ಗೆ ನೋ ಎಂಟ್ರಿ
ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್​ಗೆ ನೋ ಎಂಟ್ರಿ
ಆಯೇಷಾ ಬಾನು
|

Updated on:Apr 30, 2023 | 11:27 AM

Share

ಕೋಲಾರ: ರಾಜ್ಯ ರಾಜಕೀಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ರಾಷ್ಟ್ರ ನಾಯಕರು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಹಿನ್ನೆಲೆ ಚಿನ್ನದ ನಾಡು ಕೋಲಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ. ಇನ್ನು ಕೋಲಾರ ಹೊರವಲಯದಲ್ಲಿ ನಡೆಯುತ್ತಿರುವ ಮೋದಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸಮಾವೇಶಕ್ಕೆ ಆಗಮಿಸುವ ಮಹಿಳೆಯರ ಮೇಕಪ್ ಕಿಟ್​ಗೂ ಬ್ರೇಕ್ ಹಾಕಲಾಗಿದೆ. ಜೊತೆಗೆ ಮೋದಿ ಸಾಗೂ ಮಾರ್ಗದಲ್ಲಿ ಬಿಬಿಎಂಪಿ ಕಸದ ಲಾರಿ, ಖಾಸಗಿ ಬಸ್ ಕೆಟ್ಟು ನಿಂತಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸಿದ ಘಟನೆ ನಡೆದಿದೆ.

ರಸ್ತೆ ಮಧ್ಯೆ ಕೆಟ್ಟುನಿಂತ ಕಸದ ಲಾರಿ, ಖಾಸಗಿ ಬಸ್

ಮೋದಿ ಸಾಗೋ ಮಾರ್ಗದಲ್ಲಿ ಪೊಲೀಸರಿಗೆ ಡಬಲ್ ಡಬಲ್ ಟೆನ್ಶನ್ ಶುರುವಾಗಿತ್ತು. ಏಕೆಂದರೆ ಬಿಬಿಎಂಪಿ ಕಸದ ಲಾರಿ ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ಮೋದಿ ರಾಜಭವನದಿಂದ ಸಾಗುವ ಮಾರ್ಗದಲ್ಲಿಯೇ ಅಂದರೆ ಐಟಿಸಿ ವಿಂಡ್ಸರ್ ಮ್ಯಾನರ್ ಬಳಿ ಕಸದ ಲಾರಿ ಹಾಗೂ ಕಾವೇರಿ ಜಂಕ್ಷನ್ ಬಳಿ ಖಾಸಗಿ ಬಸ್ ಕೆಟ್ಟು ನಿಂತಿತ್ತು. ಪೊಲೀಸರು ಹರಸಾಹಸಪಟ್ಟು ಕಸದ ಲಾರಿಯನ್ನೇ ಗುದ್ದಾಡಿ ತಳ್ಳಿ ಬದಿಗೆ ನಿಲ್ಲಿಸಿದರು. ಮತ್ತೊಂದೆಡೆ ಕೆಟ್ಟು ನಿಂತಿದ್ದ ಖಾಸಗಿ ಬಸ್​ನಿಂದ ಟ್ರಾಫಿಕ್ ತಲೆ ನೋವು ಶುರುವಾಗಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸುವಂತಾಯಿತು. ಕೊನೆಗೆ ಎರಡೆರಡು ಕ್ರೇನ್ ತರಿಸಿ ಕಸರತ್ತು ನಡೆಸಿ ಬಸ್ ತೆರವು ಮಾಡಲಾಯಿತು.

ಇದನ್ನೂ ಓದಿ: 50 ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ; ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪಕ್ಕೆ ಧ್ವನಿಗೂಡಿಸಿದ ಕುಮಾರಸ್ವಾಮಿ

ಮೋದಿ ಸಮಾವೇಶಕ್ಕೆ ಬರುವ ಮಹಿಳೆಯರು ಮೇಕಪ್ ಕಿಟ್ ತರುವಂತಿಲ್ಲ

ಕೋಲಾರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಸಮಾವೇಶಕ್ಕೆ ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಇನ್ನು ಮೋದಿ ಸಮಾವೇಶಕ್ಕೆ ಬರುವವರನ್ನು ಪರಶೀಲಿಸಲಾಗುತ್ತಿದ್ದು ಅವರ ಬಳಿ ಇದ್ದ ವಾಟರ್ ಬಾಟಲ್, ಬೆಂಕಿ ಪಟ್ಟಣ, ಲೈಟರ್, ಬ್ಲಾಕ್ ಶರ್ಟ್ ಎಲ್ಲವನ್ನೂ ತೆಗೆಸಲಾಗುತ್ತಿದೆ. ಜೊತೆಗೆ ಮಹಿಳೆಯರು ತಮ್ಮ ಬ್ಯಾಂಗ್​ನಲ್ಲಿ ಇಟ್ಟುಕೊಂಡು ಬಂದ ಮೇಕಪ್ ಕಿಟ್ ಗೂ ಬ್ರೇಕ್ ಹಾಕಲಾಗಿದೆ. ಸೋಪ್ ಸ್ನೋ ಸೆಂಟ್ ಸೇರಿದಂತೆ ಮೇಕಪ್ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದೆ. ಚೆಕಿಂಗ್ ಪಾಯಿಂಟ್ ನಲ್ಲೆ ಎಲ್ಲವನ್ನು ತೆಗೆದುಹಾಕಲಾಗುತ್ತಿದೆ.

ಪರಿಪರಿಯಾಗಿ ಕೇಳಿಕೊಂಡ್ರು ಪೊಲೀಸರು ಬಿಡದ ಹಿನ್ನೆಲೆ ಕೆಲ ಮಹಿಳೆಯರು ಸಮಾವೇಶಕ್ಕೆ ತೆರಳದೆ ಮನೆ ಕಡೆ ಹೊರಟಿದ್ದಾರೆ. ಮೇಕಪ್ ಕಿಟ್ ಕಿತ್ತುಕೊಂಡಿದಕ್ಕೆ ಕೆಲ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 11:27 am, Sun, 30 April 23

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ