AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಸಂಚರಿಸುವ ರಸ್ತೆ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಬಸ್: ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್​ಗೆ ನೋ ಎಂಟ್ರಿ

ಮೋದಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸಮಾವೇಶಕ್ಕೆ ಆಗಮಿಸುವ ಮಹಿಳೆಯರ ಮೇಕಪ್ ಕಿಟ್​ಗೂ ಬ್ರೇಕ್ ಹಾಕಲಾಗಿದೆ. ಜೊತೆಗೆ ಮೋದಿ ಸಾಗೂ ಮಾರ್ಗದಲ್ಲಿ ಬಿಬಿಎಂಪಿ ಕಸದ ಲಾರಿ, ಖಾಸಗಿ ಬಸ್ ಕೆಟ್ಟು ನಿಂತಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸಿದ ಘಟನೆ ನಡೆದಿದೆ.

ಮೋದಿ ಸಂಚರಿಸುವ ರಸ್ತೆ ಮಾರ್ಗದಲ್ಲಿ ಕೆಟ್ಟು ನಿಂತ ಕಸದ ಲಾರಿ, ಬಸ್: ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್​ಗೆ ನೋ ಎಂಟ್ರಿ
ಸಮಾವೇಶದಲ್ಲಿ ಮಹಿಳೆಯರ ಮೇಕಪ್ ಕಿಟ್​ಗೆ ನೋ ಎಂಟ್ರಿ
ಆಯೇಷಾ ಬಾನು
ಆಯೇಷಾ ಬಾನು|

Updated on:Apr 30, 2023 | 11:27 AM

Share

ಮುಖ್ಯಾಂಶಗಳು

  • ಚಿನ್ನದ ನಾಡು ಕೋಲಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ
  • ಮೋದಿ ಸಾಗೋ ಮಾರ್ಗದಲ್ಲಿ ಪೊಲೀಸರಿಗೆ ಡಬಲ್ ಡಬಲ್ ಟೆನ್ಶನ್
  • ಮೋದಿ ಸಮಾವೇಶಕ್ಕೆ ಬರುವ ಮಹಿಳೆಯರು ಮೇಕಪ್ ಕಿಟ್ ತರುವಂತಿಲ್ಲ

ಕೋಲಾರ: ರಾಜ್ಯ ರಾಜಕೀಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ರಾಷ್ಟ್ರ ನಾಯಕರು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಹಿನ್ನೆಲೆ ಚಿನ್ನದ ನಾಡು ಕೋಲಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ. ಇನ್ನು ಕೋಲಾರ ಹೊರವಲಯದಲ್ಲಿ ನಡೆಯುತ್ತಿರುವ ಮೋದಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸಮಾವೇಶಕ್ಕೆ ಆಗಮಿಸುವ ಮಹಿಳೆಯರ ಮೇಕಪ್ ಕಿಟ್​ಗೂ ಬ್ರೇಕ್ ಹಾಕಲಾಗಿದೆ. ಜೊತೆಗೆ ಮೋದಿ ಸಾಗೂ ಮಾರ್ಗದಲ್ಲಿ ಬಿಬಿಎಂಪಿ ಕಸದ ಲಾರಿ, ಖಾಸಗಿ ಬಸ್ ಕೆಟ್ಟು ನಿಂತಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸಿದ ಘಟನೆ ನಡೆದಿದೆ.

ರಸ್ತೆ ಮಧ್ಯೆ ಕೆಟ್ಟುನಿಂತ ಕಸದ ಲಾರಿ, ಖಾಸಗಿ ಬಸ್

ಮೋದಿ ಸಾಗೋ ಮಾರ್ಗದಲ್ಲಿ ಪೊಲೀಸರಿಗೆ ಡಬಲ್ ಡಬಲ್ ಟೆನ್ಶನ್ ಶುರುವಾಗಿತ್ತು. ಏಕೆಂದರೆ ಬಿಬಿಎಂಪಿ ಕಸದ ಲಾರಿ ರಸ್ತೆ ಮಧ್ಯೆ ಕೆಟ್ಟು ನಿಂತಿತ್ತು. ಮೋದಿ ರಾಜಭವನದಿಂದ ಸಾಗುವ ಮಾರ್ಗದಲ್ಲಿಯೇ ಅಂದರೆ ಐಟಿಸಿ ವಿಂಡ್ಸರ್ ಮ್ಯಾನರ್ ಬಳಿ ಕಸದ ಲಾರಿ ಹಾಗೂ ಕಾವೇರಿ ಜಂಕ್ಷನ್ ಬಳಿ ಖಾಸಗಿ ಬಸ್ ಕೆಟ್ಟು ನಿಂತಿತ್ತು. ಪೊಲೀಸರು ಹರಸಾಹಸಪಟ್ಟು ಕಸದ ಲಾರಿಯನ್ನೇ ಗುದ್ದಾಡಿ ತಳ್ಳಿ ಬದಿಗೆ ನಿಲ್ಲಿಸಿದರು. ಮತ್ತೊಂದೆಡೆ ಕೆಟ್ಟು ನಿಂತಿದ್ದ ಖಾಸಗಿ ಬಸ್​ನಿಂದ ಟ್ರಾಫಿಕ್ ತಲೆ ನೋವು ಶುರುವಾಗಿದ್ದು ಬಸ್ ತೆರವು ಮಾಡಲು ಪೊಲೀಸರು ಕ್ರೇನ್ ತರಿಸುವಂತಾಯಿತು. ಕೊನೆಗೆ ಎರಡೆರಡು ಕ್ರೇನ್ ತರಿಸಿ ಕಸರತ್ತು ನಡೆಸಿ ಬಸ್ ತೆರವು ಮಾಡಲಾಯಿತು.

ಇದನ್ನೂ ಓದಿ: 50 ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ; ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪಕ್ಕೆ ಧ್ವನಿಗೂಡಿಸಿದ ಕುಮಾರಸ್ವಾಮಿ

ಮೋದಿ ಸಮಾವೇಶಕ್ಕೆ ಬರುವ ಮಹಿಳೆಯರು ಮೇಕಪ್ ಕಿಟ್ ತರುವಂತಿಲ್ಲ

ಕೋಲಾರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಸಮಾವೇಶಕ್ಕೆ ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಇನ್ನು ಮೋದಿ ಸಮಾವೇಶಕ್ಕೆ ಬರುವವರನ್ನು ಪರಶೀಲಿಸಲಾಗುತ್ತಿದ್ದು ಅವರ ಬಳಿ ಇದ್ದ ವಾಟರ್ ಬಾಟಲ್, ಬೆಂಕಿ ಪಟ್ಟಣ, ಲೈಟರ್, ಬ್ಲಾಕ್ ಶರ್ಟ್ ಎಲ್ಲವನ್ನೂ ತೆಗೆಸಲಾಗುತ್ತಿದೆ. ಜೊತೆಗೆ ಮಹಿಳೆಯರು ತಮ್ಮ ಬ್ಯಾಂಗ್​ನಲ್ಲಿ ಇಟ್ಟುಕೊಂಡು ಬಂದ ಮೇಕಪ್ ಕಿಟ್ ಗೂ ಬ್ರೇಕ್ ಹಾಕಲಾಗಿದೆ. ಸೋಪ್ ಸ್ನೋ ಸೆಂಟ್ ಸೇರಿದಂತೆ ಮೇಕಪ್ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದೆ. ಚೆಕಿಂಗ್ ಪಾಯಿಂಟ್ ನಲ್ಲೆ ಎಲ್ಲವನ್ನು ತೆಗೆದುಹಾಕಲಾಗುತ್ತಿದೆ.

ಪರಿಪರಿಯಾಗಿ ಕೇಳಿಕೊಂಡ್ರು ಪೊಲೀಸರು ಬಿಡದ ಹಿನ್ನೆಲೆ ಕೆಲ ಮಹಿಳೆಯರು ಸಮಾವೇಶಕ್ಕೆ ತೆರಳದೆ ಮನೆ ಕಡೆ ಹೊರಟಿದ್ದಾರೆ. ಮೇಕಪ್ ಕಿಟ್ ಕಿತ್ತುಕೊಂಡಿದಕ್ಕೆ ಕೆಲ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 11:27 am, Sun, 30 April 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ