AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತಾ ಬಳಿ ಇರೋದು ಒಂದು ಪಂಚೆ, ಒಂದು ಶರ್ಟ್ ಅಷ್ಟೆ, ನಾಮಪತ್ರ ಸಲ್ಲಿಕೆಗೆ ದೇವೇಗೌಡ ಬರುತ್ತಾರೆ ಎಂದ ರೇವಣ್ಣ

ಜೆಡಿಎಸ್​ ಸೇರ್ಪಡೆ ಸಂದರ್ಭ ಮಾತನಾಡಿದ ದತ್ತಾ, ಹೆಚ್​ಡಿ ದೇವೇಗೌಡರನ್ನು ಹಾಡಿಹೊಗಳಿದರು.

ಗಣಪತಿ ಶರ್ಮಾ
|

Updated on:Apr 13, 2023 | 10:41 PM

Share

ಮುಖ್ಯಾಂಶಗಳು

  • ಮುಂಜಾವ 3 ಗಂಟೆಗೆ ಕರೆ ಮಾಡಿ ನಿವಾಸಕ್ಕೆ ಕರೆಸಿಕೊಂಡ ದೇವೇಗೌಡರು; ದತ್ತಾ
  • ಹೆಚ್​ಡಿಡಿಯನ್ನು ಹಾಡಿಹೊಗಳಿದ ವೈಎಸ್​ವಿ ದತ್ತಾ
  • ದತ್ತಾ ಕುರಿತ ಹಳೆಯ ವಿಚಾರಗಳನ್ನು ನೆನಪಿಸಿಕೊಂಡ ರೇವಣ್ಣ

ಚಿಕ್ಕಮಗಳೂರು:  ವೈಎಸ್​ವಿ ದತ್ತಾ (YSV Datta) ಬಳಿ ಇರುವುದು ಒಂದು ಪಂಚೆ, ಒಂದು ಶರ್ಟ್ ಅಷ್ಟೆ. ನಾನೇ ಸಚಿವ ಆದಾಗ ಕಾರು ಕೊಡಿಸುತ್ತೇನೆ ಎಂದೆ. ಆದರೆ, ಬೇಡ ಸರ್, ನಂಗೇ ಆಟೋ ಸಾಕು ಅಂದಿದ್ದರು ಎಂದು ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ ನೆನಪಿಸಿಕೊಂಡರು. ದತ್ತಾ ಅವರನ್ನು ಮರಳಿ ಜೆಡಿಎಸ್​​ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, 18ನೇ ತಾರೀಖು ದತ್ತ ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ. ಎಷ್ಟೇ ಕಷ್ಟ ಆದರೂ ದೇವೆಗೌಡರು ಬರುತ್ತಾರೆ, ಬಂದೇ ಬರುತ್ತಾರೆ. ನಾನು ಬದುಕಿರುವವರೆಗೆ ದತ್ತನ ಕೈ ಬಿಡಬಾರದು ಎಂದು ಹೇಳಿದ್ದಾರೆ ಎಂಬುದಾಗಿ ರೇವಣ್ಣ ಹೇಳಿದರು.

ನೀವು ಬೇರೆ ಯೋಚನೆ ಮಾಡಬೇಡಿ. ದೇವೇಗೌಡರ ಮಾತನ್ನು ನಾನು, ದತ್ತಾ, ನೀವು ಎಲ್ಲರೂ ಪಾಲಿಸಬೇಕು. ದತ್ತಾರನ್ನು ಶಾಸಕ ಮಾಡಕೇಬೇಕು ಅಂತ ದೇವೇಗೌಡರು ಹೇಳಿದ್ದಾರೆ. ನಮಗೆ ಹೊಳೆನರಸೀಪುರ, ಕಡೂರು ಬೇರೆ-ಬೇರೆ ಅಲ್ಲ. ನಾನು ದತ್ತಾ ಜೊತೆ ಇರುತ್ತೇನೆ ಎಂದು ಕಡೂರಿನ ಯಗಟಿ ಗ್ರಾಮದ ದತ್ತಾ ಅವರ ಮನೆಯಲ್ಲಿ ರೇವಣ್ಣ ಹೇಳಿದ್ದಾರೆ.

ದೇವೇಗೌಡರನ್ನು ಹಾಡಿಹೊಗಳಿದ ದತ್ತಾ

ಜೆಡಿಎಸ್​ ಸೇರ್ಪಡೆ ಸಂದರ್ಭ ಮಾತನಾಡಿದ ದತ್ತಾ, ಹೆಚ್​ಡಿ ದೇವೇಗೌಡರನ್ನು ಹಾಡಿಹೊಗಳಿದರು. ದೇವೇಗೌಡರು ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿ. 24 ಗಂಟೆಯೂ ಏನಾದರೊಂದು ಯೋಚನೆ ಮಾಡುತ್ತಿರುತ್ತಾರೆ. ರಾತ್ರಿ 3 ಗಂಟೆಗೆ ದೂರವಾಣಿ ಕರೆ ಮಾಡಿದ ದೇವೇಗೌಡರು, ಮನೆಗೆ ಬರುವಂತೆ ಕರೆದರು. ಇಷ್ಟೊತ್ತಿನಲ್ಲಿ ಹೇಗೆ ಬರಲಿ ಎಂದೆ. ಆಟೋ ಮಾಡಿಕೊಂಡು ಬಾರೋ ಎಂದರು. ಹಾಗೆ ಅವರ ಮನೆಗೆ ತೆರಳಿದೆ. ಅವರ ಜತೆ ಕುಳಿತು ಮಾತನಾಡಿದೆ. ‘ನಾನು ಮಲಗಿಕೊಂಡಿದ್ದೆ, ಏನೋ ಒಂದು ಯೋಚನೆ ಬಂತು. ನಿನ್ನ ಜತೆ ಮಾತನಾಡಬೇಕು ಎನಿಸಿತು’ ಎಂದರು. ಇದು ನನ್ನ ಮತ್ತು ದೇವೇಗೌಡರ ನಡುವಣ ಸಂಬಂಧ ಎಂದು ದತ್ತಾ ಹೇಳಿದರು.

ಇದನ್ನೂ ಓದಿ: YSV Datta: ಮತ್ತೆ ಜೆಡಿಎಸ್ ಸೇರಿದ ವೈಎಸ್​ವಿ ದತ್ತಾ; ಕಡೂರು ಟಿಕೆಟ್ ಫಿಕ್ಸ್​

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ ಗುರುವಾರ ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಪಕ್ಷದ ನಾಯಕ ಹೆಚ್​ಡಿ ರೇವಣ್ಣ ಗುರುವಾರ ಸಂಜೆ ಘೋಷಣೆ ಮಾಡಿದ್ದಾರೆ.

ಈ ಬೆಳವಣಿಗೆಯಿಂದ ಈಗಾಗಲೇ ಜೆಡಿಎಸ್​ನಿಂದ ಕಡೂರು ಕ್ಷೇತ್ರದ ಟಿಕೆಟ್​​ ಪಡೆದಿರುವ ಸಿ.ಎಂ. ಧನಂಜಯ್ ನಿರಾಶರಾಗಿದ್ದಾರೆ. ದತ್ತಾ ಜೆಡಿಎಸ್ ಸೇರ್ಪಡೆ ನಂತರ ಸುದ್ದಿಗೋಷ್ಠಿ ನಡೆಸಿದ ಧನಂಜಯ್, ಒತ್ತಡಕ್ಕೆ ಒಳಗಾಗಿ ದತ್ತಾಗೆ ಟಿಕೆಟ್ ಘೋಷಿಸಿದ್ದಾರೆ, 2-3 ದಿನದಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ. ನಾಯಕರು ಚರ್ಚಿಸಿ ಒಳ್ಳೆಯ ನಿರ್ಧಾರಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Thu, 13 April 23

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್