ಟಿಕೆಟ್ ಕೈ ತಪ್ಪಿದಕ್ಕೆ ಜೆಡಿಎಸ್​ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ ಬಿಜೆಪಿಗೆ ಯುಟರ್ನ್

ಟಿಕೆಟ್ ಕೈ ತಪ್ಪಿದಕ್ಕೆ ಜೆಡಿಎಸ್​ಗೆ ಹೊಗುತ್ತೇನೆ ಎಂದಿದ್ದ ನೆಹರು ಓಲೇಕಾರ ಯುಟರ್ನ್​​ ಹೊಡಿದಿದ್ದು, ಬಿಜೆಪಿಯಲ್ಲೆ ಮುಂದುವರೆಯೂದಾಗಿ ತಿಳಿಸಿದ್ದಾರೆ.

ಟಿಕೆಟ್ ಕೈ ತಪ್ಪಿದಕ್ಕೆ ಜೆಡಿಎಸ್​ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ ಬಿಜೆಪಿಗೆ ಯುಟರ್ನ್
ನೆಹರು ಓಲೇಕಾರ

Updated on: Apr 23, 2023 | 8:07 PM

ಮುಖ್ಯಾಂಶಗಳು

  • ಟಿಕೆಟ್ ವಂಚಿತ ಬಿಜೆಪಿ ಶಾಸಕ ನೆಹರು ಓಲೇಕಾರ
  • ಟಿಕೆಟ್ ಕೈ ತಪ್ಪಿದಕ್ಕೆ ಜೆಡಿಎಸ್ ಗೆ ಹೊಗುತ್ತೆನೆ ಎಂದಿದ್ದ ಓಲೇಕಾರ ಯುಟರ್ನ್
  • ಬಿಜೆಪಿಯವರು ನನ್ನನ್ನು ಪ್ರಚಾರಕ್ಕೆ ಯಾರು ಕರೆದಿಲ್ಲ

ಹಾವೇರಿ: ಟಿಕೆಟ್ ಕೈ ತಪ್ಪಿದಕ್ಕೆ ಜೆಡಿಎಸ್​ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ (MLA Nehru Olekar) ಯುಟರ್ನ್​​ ಹೊಡಿದಿದ್ದು, ಬಿಜೆಪಿಯಲ್ಲೆ ಮುಂದುವರೆಯೂದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯವದರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನನ್ನ ಕರೆದಿಲ್ಲ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಬಿಜೆಪಿ ಪಕ್ಷದಲ್ಲಿಯೇ ಇದ್ದೇನೆ. ಬೇರೆ ಯಾವ ಪಕ್ಷದ ಬಗ್ಗೆ ನನಗೆ ಒಲುವಿಲ್ಲ. ಬಿಜೆಪಿಯವರು ನನ್ನನ್ನು ಪ್ರಚಾರಕ್ಕೆ ಯಾರು ಕರೆದಿಲ್ಲ. ಮನೆಯಲ್ಲಿಯೇ ಇದ್ದೇನಿ ಬಿಜೆಪಿ ಪರವಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿಎಂ ಬೊಮ್ಮಾಯಿ ಬೇಡ ಎಂದಿದ್ದಾರೆ. ಬೊಮ್ಮಾಯಿ ಕರೆದರೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಪದೇ ಪದೇ ಪಕ್ಷ ಬದಲಾವಣೆ ಮಾಡಿದರೇ ಗೌರವವಿರುವುದಿಲ್ಲ

ಒಂದು ಪಕ್ಷದಲ್ಲಿದ್ದುಕೊಂಡು ಇನ್ನೊಂದು ಪಕ್ಷಕ್ಕೆ ಹೋಗಿ ಪಕ್ಷ ಕಟ್ಟುವುದು ಸುಲಭದ ಮಾತಲ್ಲ. ಪಕ್ಷ ಸಂಘಟನೆ ಮಾಡಿದ ಮೇಲೆ ಅಲ್ಲಿಯೇ ಇದ್ದರೆ ಗೌರವ ಇರುತ್ತೆ, ಬೆಲೆ ಇರುತ್ತೆ. ಪದೇ ಪದೇ ಪಕ್ಷ ಬದಲಾವಣೆ ಮಾಡಿದರೇ ಗೌರವ ಬೆಲೆ ಇರುವದಿಲ್ಲಾ ಎಂಬ ಅಂಶ ತಿಳಿದುಬಂತು. ಹೀಗಾಗಿ ಬಿಜೆಪಿಯಲ್ಲಿಯೇ ಇದ್ದೇನೆ.

ಇದನ್ನೂ ಓದಿ: ವರುಣಾದಲ್ಲಿ ವಿ ಸೋಮಣ್ಣಗೆ ಮುತ್ತಿಗೆ; ಕೈ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ

ನನ್ನ ಸ್ನೇಹಿತರ ಬಳಗ ಸಹ ಇಲ್ಲಿಯೇ ಉಳಿದುಕೊಳ್ಳುವಂತೆ ಒತ್ತಾಯ ಮಾಡಿದ್ದರಿಂದ ಇಲ್ಲಿಯೇ ಉಳಿದುಕೊಂಡಿದ್ದೇನೆ. ನನ್ನ ಹಿಂಬಾಲಕರು ಯಾರು ಸಂಧಾನಕ್ಕೆ ಹೋಗಿಲ್ಲ. ಅವರೇ ನನ್ನ ಕರೆಯಬೇಡಿ ಎಂದಿದ್ದಾರಂತೆ ಹೀಗಾಗಿ ನಾನು ಪ್ರಚಾರಕ್ಕೆ‌ ಹೋಗಿಲ್ಲ.

ಸಿಎಂ ಬೊಮ್ಮಾಯಿ ವಿರುದ್ಧ ನೆಹರು ಓಲೇಕಾರ ಕಿಡಿ 

ಬೊಮ್ಮಾಯಿ ಸಿಎಂ ಆದ ಮೇಲೆ ಅವರ ನಿಲುವು ನಿರ್ಧಾರಗಳು ಬದಲಾಗಿವೆ. ಇದು ಭಗವಂತನ ಇಚ್ಚೆ, ದೇವರೆ ಅವರಿಗೆ ಪಾಠ ಕಲಿಸಬೇಕು. ಇದು ಬಹಳಷ್ಟು ದಿನ ಉಳಿಯುವದಿಲ್ಲ ಈ ರೀತಿ ಮೋಸ ಮಾಡುವಂತದು. ಅನ್ಯಾಯ ಮಾಡುವಂತದಕ್ಕೆ ದೇವರು ಪಾಠ ಕಲಿಸುತ್ತಾನೆ. ಮಾಜಿ ಸಿಎಂ ಯಡಿಯೂರಪ್ಪ, ನಳೀನಕುಮಾರ ಕಟೀಲಾಗಲಿ ನನ್ನ ಜೊತೆ ಇದುವರೆಗೂ ಮಾತನಾಡಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಶಾಸಕ ನೆಹರು ಓಲೇಕಾರ್​​​ಗೆ ರಿಲೀಫ್​​

ಕರ್ನಾಟಕದಲ್ಲಿ ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಸಿ. ಓಲೇಕಾರ್​ಗೆ ಹೈಕೋರ್ಟ್ ರಿಲೀಫ್​ ನೀಡಿದೆ. 2 ವರ್ಷ ಶಿಕ್ಷೆ ವಿಧಿಸಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಅನರ್ಹಗೊಳ್ಳುವ ಭೀತಿಯಿಂದ ನೆಹರು ಓಲೆಕಾರ್​ ಪಾರಾಗಿದ್ದರು.

ಇದನ್ನೂ ಓದಿ: ಲಿಂಗಾಯತ ಸಿಎಂ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು

ದೋಷಿಯಾಗಿಸಿದ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ ನ್ಯಾ. ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತ್ತು. ನೆಹರು ಓಲೆಕಾರ್ ವಿರುದ್ದ ಶಿಕ್ಷೆ ಪ್ರಕಟವಾಗಿದ್ದಾಗ ಭ್ರಷ್ಟಾಚಾರ ಕೇಸ್​ನಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ನೆಹರು ಓಲೆಕಾರ್​ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮುಖಂಡ ಸಂತೋಷ್ ರೆಡ್ಡಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ಇತ್ತೀಚೆಗೆ ದೂರು ನೀಡಲಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Sun, 23 April 23

Loading...
Unable to load recommendations.
Follow Us