ನಾಳೆ ಮತದಾನ: ಗಡಿ ಭಾಗದಲ್ಲಿ ಸೆಕ್ಯುರಿಟಿ ಹೇಗಿದೆ? ಮಾಹಿತಿ ಇಲ್ಲಿದೆ

ರಾಜ್ಯ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಬಹಿರಂಗ ಪ್ರಚಾರ ನಿನ್ನೆ(ಮೇ.8) ಕೊನೆಯಾಗಿದ್ದು, ನಾಳೆ ಮತದಾನ ನಡೆಯಲಿದೆ. ಈ ಹಿನ್ನಲೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬೀಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಬರುವ ವಾಹನಗಳ ಮೇಲೆ ನಿಗಾವಹಿಸಲಾಗಿದ್ದು, ಪ್ರತಿಯೊಂದು ವಾಹನವನ್ನ ತಪಾಸಣೆ ಮಾಡುವ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿಕೊಳ್ಳಲಾಗುತ್ತಿದೆ.

ನಾಳೆ ಮತದಾನ:  ಗಡಿ ಭಾಗದಲ್ಲಿ ಸೆಕ್ಯುರಿಟಿ ಹೇಗಿದೆ? ಮಾಹಿತಿ ಇಲ್ಲಿದೆ
ಉತ್ತರ ಕನ್ನಡ ಗೋವಾ ಚೆಕ್​​ಪೋಸ್ಟ್​

Updated on: May 09, 2023 | 9:32 AM

ಉತ್ತರ ಕನ್ನಡ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಕಾವು ಜೋರಾಗಿದೆ. ಬಹಿರಂಗ ಪ್ರಚಾರ ನಿನ್ನೆ(ಮೇ.8) ಕೊನೆಯಾಗಿದ್ದು, ನಾಳೆ ಮತದಾನ ನಡೆಯಲಿದೆ. ಈ ಹಿನ್ನಲೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬೀಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಬರುವ ವಾಹನಗಳ ಮೇಲೆ ನಿಗಾವಹಿಸಲಾಗಿದ್ದು, ಪ್ರತಿಯೊಂದು ವಾಹನವನ್ನ ತಪಾಸಣೆ ಮಾಡುವ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ಸಿಬ್ಬಂದಿ, ಪೊಲೀಸ್, ಅಬಕಾರಿ ಸೇರಿದಂತೆ 10 ಕ್ಕೂ ಹೆಚ್ಚು ಸಿಬ್ಬಂದಿಗಳನ್ನ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಗೋವಾದಲ್ಲಿ ಕಡಿಮೆ ದರದಲ್ಲಿ ಮದ್ಯ ಸೀಗುವ ಕಾರಣ ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಚೆಕ್ ಪೋಸ್ಟ್‌ನಲ್ಲಿ ಹದ್ದಿನ ಕಣ್ಣು ಇಡಲಾಗಿದೆ.

ಇನ್ನು ಜಿಲ್ಲೆಯಲ್ಲಿ 11,94,714 ಲಕ್ಷ ಮತದಾರರಿದ್ದು, 1435 ಮತಗಟ್ಟೆಗಳನ್ನ ತೆರೆಯಲಾಗಿದೆ. ಅದರಲ್ಲಿ 287 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಇನ್ನು ಚುನಾವಣೆ ಕರ್ತವ್ಯಕ್ಕೆ 6416 ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. 2059 ಪೊಲೀಸ್​ ಸಿಬ್ಬಂದಿಗಳನ್ನ ಹಾಗೂ 18 ಸಿಆರ್​ಪಿಎಫ್ ಅವರನ್ನ​ ನಿಯೋಜನೆ ಮಾಡಲಾಗಿದೆ. ಇನ್ನು ನೀತಿ ಸಂಹಿತೆ ಶುರುವಾದಾಗಿನಿಂದ 1,70,93,985 ಹಣವನ್ನ ಈವರಗೆ ಜಪ್ತಿ ಮಾಡಲಾಗಿದ್ದು, 2,11,13,395 ಮದ್ಯ, 1,44,000 ಬೆಲೆ ಬಾಳುವ ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಜಿಲ್ಲೆಯ ಕುಮಟಾ ತಾಲೂಕಿನA.V ಬಿಳಿಗಾ ಕಾಮರ್ಸ್ ಕಾಲೇಜಿನಲ್ಲಿ ಮೇ.13 ರಂದು ಮತಎಣಿಕೆ ನಡೆಯುತ್ತದೆ.

ಇದನ್ನೂ ಓದಿ:Karnataka Election: ವಿಧಾನಸಭೆ ಚುನಾವಣೆಗೆ ವಿಶೇಷ ರೈಲು, ಹೆಚ್ಚುವರಿ ಕೋಚ್; ವಿವರ ಇಲ್ಲಿದೆ

ಇನ್ನು ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿಯೇ ಅತೀ ಹೆಚ್ಚು ತಾಲೂಕುಗಳನ್ನ ಹೊಂದಿದ ಜಿಲ್ಲೆಯಾಗಿದೆ. ಇದರಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಈ ಬಾರಿ ತೀವ್ರ ಕುತೂಹಲ ಮೂಡಿಸಿದೆ. ಮತದಾರ ಪ್ರಭುಗಳು ಯಾರಿಗೆ ಒಲಿಯಲಿದ್ದಾರೆಂದು ಕಾದು ನೋಡಬೇಕಿದೆ. ಜಿಲ್ಲೆಯು ಗೋವಾ ಗಡಿ ಭಾಗವನ್ನ ಹೊಂದಿಕೊಂಡಿದ್ದು, ಇಲ್ಲಿ ಕಡಿಮೆ ದರದಲ್ಲಿ ಮದ್ಯ ಸೀಗುವ ಹಿನ್ನಲೆ ಹದ್ದಿನ ಕಣ್ಣು ಇಡಲಾಗಿದೆ.  ಗೋವಾದಿಂದ ಬರುವ ಪ್ರತಿಯೊಂದು ವಾಹನವನ್ನ ಚೆಕ್​ ಮಾಡಿಯೇ ಪ್ರವೇಶ ನೀಡಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾದಾಗಿನಿಂದ ಈವೆರೆಗೂ ಅಧಿಕ ಮದ್ಯವನ್ನ ಸೀಜ್​ ಮಾಡಲಾಗಿದೆ. ಈ ಕಾರಣಕ್ಕೆ ಇಂದು ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ