Shravanabelagola Election 2023 Winner: ಶ್ರವಣಬೆಳಗೊಳದಲ್ಲಿ ಸಿ.ಎನ್. ಬಾಲಕೃಷ್ಣಗೆ ಹ್ಯಾಟ್ರಿಕ್ ಗೆಲುವು; ಕಾಂಗ್ರೆಸ್ ಪೈಪೋಟಿ ವಿಫಲ

|

Updated on: May 13, 2023 | 4:59 PM

CN Balakrishna Wins: ಹಾಸನ ಜಿಲ್ಲೆಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎನ್ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವು ಪಡೆದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಾಲಣ್ಣ ರೋಚಕ ಜಯ ಗಳಿಸಿದ್ದಾರೆ.

Shravanabelagola Election 2023 Winner: ಶ್ರವಣಬೆಳಗೊಳದಲ್ಲಿ ಸಿ.ಎನ್. ಬಾಲಕೃಷ್ಣಗೆ ಹ್ಯಾಟ್ರಿಕ್ ಗೆಲುವು; ಕಾಂಗ್ರೆಸ್ ಪೈಪೋಟಿ ವಿಫಲ
ಸಿಎನ್ ಬಾಲಕೃಷ್ಣ
Follow us on

Shravanabelagola Assembly Election Results 2023: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನಿರೀಕ್ಷೆಯಂತೆ ನೇರ ಹಣಾಹಣಿ ಕಂಡ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾ ದಳದ ಸಿ.ಎನ್. ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಎಂ.. ಗೋಪಾಲಸ್ವಾಮಿ ತೀವ್ರ ಪೈಪೋಟಿ ನೀಡಿ ಸೋತಿದ್ದಾರೆ. ಅವರ ಸೋಲಿನ ಅಂತರ ಅಷ್ಟು ದೊಡ್ಡದಿಲ್ಲ ಎಂಬುದು ಗಮನಾರ್ಹ. ಶ್ರವಣಬೆಳಗೊಳ ಜೆಡಿಎಸ್​ನ ಭದ್ರಕೋಟೆ ಆಗಿದ್ದುದು ಬಾಲಕೃಷ್ಣ ಗೆಲುವಿಗೆ ಅನುಕೂಲವಾಗಿತ್ತು ಎನ್ನಲಾಗಿದೆ. ಸಿ.ಎನ್. ಬಾಲಕೃಷ್ಣ ಶಾಸಕರಾಗಿ ಮಾಡಿದ ಕಾರ್ಯದ ಬಗ್ಗೆ ಕ್ಷೇತ್ರದಲ್ಲಿ ಮಿಶ್ರ ಅಭಿಪ್ರಾಯಗಳಿದ್ದವು. ಆದರೆ, ಅಂತಿಮವಾಗಿ ಅವರು ಅಲ್ಪ ಮತಗಳ ಅಂತರದಿಂದ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ ವಿವರ:

  • ಜೆಡಿಎಸ್: ಸಿಎನ್ ಬಾಲಕೃಷ್ಣ– 85,668 ಮತಗಳು
  • ಕಾಂಗ್ರೆಸ್: ಎಂ.. ಗೋಪಾಲಕೃಷ್ಣ– 78,416 ಮತಗಳು
  • ಬಿಜೆಪಿ: ಸಿ.ಆರ್. ಚಿದಾನಂದ– 5,648 ಮತಗಳು

ಇದನ್ನೂ ಓದಿ: Virajpet Election 2023 Winner: ವಿರಾಜಪೇಟೆಯಲ್ಲಿ ಬಿಜೆಪಿಗೆ ಅನಿರೀಕ್ಷಿತ ಸೋಲು; ಗೆದ್ದುಬೀಗಿದ ಪೊನ್ನಣ್ಣ- ಹ್ಯಾಟ್ರಿಕ್ ಸರದಾರನಿಗೆ ಮುಖಭಂಗ

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಒಟ್ಟು 1,98,966 ಮತದಾರರು ಇದ್ದಾರೆ. ಇಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚು ಇದೆ. ಇಲ್ಲಿ ಚುನಾವಣೆಗಳಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ ಎನಿಸುತ್ತವೆ. ಹಾಸನ ಜಿಲ್ಲೆಯ 7 ವಿಧಾಸನಭಾ ಕ್ಷೇತ್ರಗಳಲ್ಲೊಂದಾದ ಶ್ರವಣಬೆಳಗೊಳ ಇತ್ತೀಚಿನ ಕೆಲ ವರ್ಷಗಲ್ಲಿ ಜಾತ್ಯತೀತ ಜನತಾ ದಳದ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಇಲ್ಲಿ ಜೆಡಿಎಸ್​ಗೆ ಪೈಪೋಟಿ ನೀಡಬಲ್ಲ ಪಕ್ಷ ಕಾಂಗ್ರೆಸ್ ಮಾತ್ರವೇ. ಬಿಜೆಪಿ ಇಲ್ಲಿ ಬೇರೂರಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ, ಶ್ರವಣಬೆಳಗೊಳದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಮಾತ್ರವೇ ನೇರ ಪೈಪೋಟಿ ಇತ್ತು. ಉಳಿದ ಯಾವ ಪಕ್ಷಗಳು ಅಥವಾ ಅಭ್ಯರ್ಥಿಗಳು ಠೇವಣಿ ಪಡೆಯುವ ಅವಕಾಶವೂ ಇಲ್ಲ. ಒಂದು ಕಾಲದಲ್ಲಿ ಎಚ್​ಡಿ ದೇವೇಗೌಡರ ರಾಜಕೀಯ ವೈರಿಗಳಾಗಿದ್ದ ಎಚ್​ಸಿ ಶ್ರೀಕಂಠಯ್ಯ ಮತ್ತು ಪುಟ್ಟಸ್ವಾಮಿಗೌಡ ನಿಧನರಾದ ಬಳಿಕ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್ ತುಸು ಪೇಲವಗೊಂಡಿದೆ. ಎಂಎ ಗೋಪಾಲಸ್ವಾಮಿ ಮೂಲಕ ಕಾಂಗ್ರೆಸ್ ಇಲ್ಲಿ ಕಂಬ್ಯಾಕ್ ಮಾಡುವ ಪ್ರಯತ್ನ ವಿಫಲವಾಗಿದೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲ್ಲೋದು ಜೆಡಿಎಸ್ ಪಕ್ಷವೇ ಎಂಬಂತಾಗಿದೆ. 2008ರಲ್ಲಿ ಜೆಡಿಎಸ್ ಪಕ್ಷದ ಟಿಕೆಟ್​ನಲ್ಲಿ ಗೆದ್ದಿದ್ದ ಸಿ.ಎಸ್. ಪುಟ್ಟೇಗೌಡ ಕಾಂಗ್ರೆಸ್​ಗೆ ಪಕ್ಷಾಂತರಗೊಂಡು 2013 ಮತ್ತು 2018ರಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಪುಟ್ಟೇಗೌಡರ ವೈಯಕ್ತಿಕ ವರ್ಚಸ್ಸಿನಿಂದ ಶ್ರವಣಬೆಳಗೊಳದಲ್ಲಿ ಗೆಲ್ಲಬಹುದು ಎಂಬ ಸಣ್ಣ ನಿರೀಕ್ಷೆ ಹುಸಿಯಾಗಿಹೋಗಿತ್ತು. ಸಿಎನ್ ಬಾಲಕೃಷ್ಣ ವಿರುದ್ಧದ ಅಲೆ ಶ್ರವಣಬೆಳಗೊಳದಲ್ಲಿ ಇದ್ದಂತೆ ಮೇಲ್ನೋಟಕ್ಕೆ ತೋರಿದರೂ ಅವರು ಗೆಲುವಿನತ್ತ ಮುನ್ನಡೆದಿದ್ದು ಅಚ್ಚರಿಯೂ ಹೌದು, ನಿರೀಕ್ಷಿತವೂ ಹೌದು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿ