AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಸಾವಿನ ಮನೆಯಲ್ಲೂ ಮತ ಚಲಾಯಿಸಿ, ಆದರ್ಶ ಮೆರೆದ ವೃದ್ಧೆ

ಅವರದು 64 ವರ್ಷಗಳ ಅನ್ಯೋನ್ಯ ದಾಂಪತ್ಯ ಜೀವನ, ಒಬ್ಬರನ್ನೊಬ್ಬರು ಬಿಟ್ಟು ಇರದ ಆ ವಯೋವೃದ್ಧರು, ಆ ಬಡಾವಣೆಯಲ್ಲಿ ಆದರ್ಶ ದಂಪತಿಗಳಾಗಿದ್ದವರು. ಜೀವನದ ಉದ್ದಕ್ಕೂ ವಿವಿಧ ಆದರ್ಶಗಳನ್ನು‌ ಪಾಲಿಸಿಕೊಂಡು ಬಂದಿದ್ದರು. ಅದೇ ಆದರ್ಶವನ್ನು ಅಜ್ಜ ತೀರಿದ ಬಳಿಕವೂ ಪಾಲಿಸಿದ ಅಜ್ಜಿ ಯುವ ಸಮುದಾಯಕ್ಕೆ ಆದರ್ಶವಾಗಿದ್ದಾರೆ. ಹಾಗಾದರೆ ಸಾವಿನ ಮನೆಯಲ್ಲಿ ನಡೆದ ಘಟನೆಯಾದರೂ ಏನು? ಇಲ್ಲಿದೆ‌ ನೋಡಿ.

ಧಾರವಾಡ: ಸಾವಿನ ಮನೆಯಲ್ಲೂ ಮತ ಚಲಾಯಿಸಿ, ಆದರ್ಶ ಮೆರೆದ ವೃದ್ಧೆ
ಮತದಾನ ಮಾಡುವ ಮೂಲಕ ಆದರ್ಶ ಮೆರೆದ ವೃದ್ದೆ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on:May 04, 2023 | 7:23 AM

Share

ಧಾರವಾಡ: ಈ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಜ್ಯೋತಿಬಾ ತಿಬೇಲಿ. ಧಾರವಾಡ (Dharwad)ನಗರದ ಸಾರಸ್ವರಪುರ ಬಡಾವಣೆಯ ಇವರು ನಿವೃತ್ತ ಪಿಎಸ್​ಐ. ಜ್ಯೋತಿಬಾ ತಮ್ಮ 95 ನೇ ವಯಸ್ಸಿನಲ್ಲಿ ರವಿವಾರ (ಏ.30) ತೀರಿಕೊಂಡರು. ಮರುದಿನ ಮನೆಯವರೆಲ್ಲ ಅವರ ಅಂತ್ಯಕ್ರಿಯೆಯ ಚಟುವಟಿಕೆಯಲ್ಲಿ ಮುಳುಗಿರುವಾಗ ಅಲ್ಲಿಗೆ ಚುನಾವಣಾ ಸಿಬ್ಬಂದಿ ಬಂದರು. ಏಕೆಂದರೆ ಸಿಬ್ಬಂದಿ ಅದಾಗಲೇ ಈ ಮನೆಯಲ್ಲಿ ಇಬ್ಬರು 80 ವರ್ಷ ಮೀರಿದವರಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮನೆಯಿಂದಲೇ ಮತ ಪಡೆಯಲು ಸಿಬ್ಬಂದಿ ಬಂದಿದ್ದು, ಬಳಿಕ ಮನೆಯ ಯಜಮಾನ ತೀರಿ ಹೋಗಿರೋದು ಗೊತ್ತಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಉಳಿದವರಿಗೆ ಮತ ಹಾಕಿ ಎಂದು ಹೇಳೋದು ಸರಿಯಲ್ಲ ಎನ್ನುವ ಹೊತ್ತಿಗೆ ಮೃತರ ಪತ್ನಿ ಮತ ಚಲಾಯಿಸಲು ತೀರ್ಮಾನಿಸಿದ್ದಾರೆ. ಹೌದು ಪತ್ನಿ ಶಾಂತಾಬಾಯಿ ಅವರೇ ಪತಿ ತೀರಿಕೊಂಡಿದ್ದರೂ ಮತ ಚಲಾಯಿಸಿ, ಆದರ್ಶ ಮೆರೆದಿದ್ದಾರೆ.

ಇನ್ನು ಮೊದಲಿಗೆ ಬಂದ ಚುನಾವಣಾ ಅಧಿಕಾರಿಗಳು ಮತ ಪಡೆಯದಿರಲು ನಿರ್ಧರಿಸಿದ್ದರು. ಏಕೆಂದರೆ, ಎಲ್ಲರೂ ಮನೆ ಯಜಮಾನನ ಸಾವಿನ ದುಃಖದಲ್ಲಿದ್ದ ಕಾರಣ, ಅಲ್ಲಿಂದ ಹೋಗಲು ನಿರ್ಧರಿಸಿದ್ದರು. ಆದರೆ, ಅಲ್ಲಿದ್ದ ಜ್ಯೋತಿಬಾ ಅವರ ಮಕ್ಕಳು, ತಂದೆ ತೀರಿ ಹೋಗಿದ್ದರೂ ನಮ್ಮ ತಾಯಿ ಮತದಾನ ಮಾಡುತ್ತಾರೆ ಎಂದು ಹೇಳಿದ್ದರು. ಇದರಿಂದ ಅಧಿಕಾರಿಗಳಿಗೆ ಅಚ್ಚರಿಯಾಗಿ, ಕೂಡಲೇ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡು, ಶಾಂತಾಬಾಯಿ ಅವರಿಂದ ಮತದಾನ ಮಾಡಿಸಿದರು. ಇವರ ಸಹಕಾರ ನೋಡಿ ಚುನಾವಣಾಧಿಕಾರಿಗಳು ಸೂಕ್ತ ವ್ಯವಸ್ಥೆ ಹಾಗೂ ತಿಳುವಳಿಕೆ ನೀಡಿ ಮತದಾನ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ಧಾರವಾಡದಲ್ಲಿ ಬಂಡಾಯ ಶಮನ ಮಾಡುವಲ್ಲಿ ಸಕ್ಸಸ್ ಆದ ಟ್ರಬಲ್ ಶೂಟರ್ ಪ್ರಲ್ಹಾದ ಜೋಶಿ : ಇಬ್ಬರು ಬಂಡಾಯಗಾರರ ನಾಮಪತ್ರ ವಾಪಸ್

ಎಷ್ಟೋ ವಿದ್ಯಾವಂತ ಮತದಾರರು ಮತದಾನದ ದಿನ ರಜೆ ಇದ್ದರು, ಮತದಾನ ಮಾಡಲು ಹೋಗದೆ, ಮನೆಯಲ್ಲಿ ಕಾಲ ಕಳೆಯುವಾಗ, ಸಾವಿನ‌ ಮನೆಯಲ್ಲಿಯೂ ಮತದಾನ ಮಾಡುವ ಮೂಲಕ ಅಜ್ಜಿ ಶಾಂತಾಬಾಯಿ, ದುಃಖದ ಸಂದರ್ಭದಲ್ಲಿಯೂ ಸಹ ಮತದಾನದ ಮಾಡಿದ್ದು, ನಿಜಕ್ಕೂ ಅಚ್ಚರಿಯ ಸಂಗತಿ, ಇದರ ಜೊತೆಗೆ ಮತದಾನದ ಅರಿವು ಮೂಡಿಸಿದ ಚುನಾವಣಾ ಸಿಬ್ಬಂದಿ ಕಾರ್ಯ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:18 am, Thu, 4 May 23

Follow Us
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ