AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಸ್ಯಾಂಡಲ್​​ವುಡ್​​​ ನಟ ನಟಿಯರು: ವರುಣಾದಲ್ಲಿ ಇಂದು ಕಲರ್ ಫುಲ್ ಕ್ಯಾಂಪೇನ್

ವರುಣಾ ಕ್ಷೇತ್ರ. ಸದ್ಯ ಹೈವೋಲ್ಟೇಜ್​​​ ಕ್ಷೇತ್ರ. ವರುಣ ಕ್ಷೇತ್ರವೂ ದಿನ ಒಂದಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇವತ್ತು ಸಹ ವರುಣಾ ವಿಧಾನಸಭಾ ಕ್ಷೇತ್ರ ಸಾಕಷ್ಟು ಕಲರ್ ಫುಲ್ ಆಗಲಿದೆ. ಇದಕ್ಕೆ ಕಾರಣ ವರುಣಾ ಕ್ಷೇತ್ರದಲ್ಲಿ ಸ್ಯಾಂಡಲ್​​ವುಡ್​​​ ನಟ ನಟಿಯರು ಪ್ರಚಾರ ಮಾಡಲಿದ್ದಾರೆ.

ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಸ್ಯಾಂಡಲ್​​ವುಡ್​​​ ನಟ ನಟಿಯರು: ವರುಣಾದಲ್ಲಿ ಇಂದು ಕಲರ್ ಫುಲ್ ಕ್ಯಾಂಪೇನ್
ರಮೇಶ್ ಬಿ. ಜವಳಗೇರಾ
|

Updated on:May 04, 2023 | 7:28 AM

Share

ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರ (Varuna Assembly Constituency) ದಿನೇ ದಿನೇ ರಂಗೇರುತ್ತಿದೆ.‌ ಘಟಾನುಘಟಿ ನಾಯಕರ ನಂತರ ಇದೀಗ ನಟ ನಟಿಯರು ಪ್ರವೇಶ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah )ಅವರು ಇಂದಿನಿಂದ ಎರಡು ದಿನ ವರುಣಾ ಕ್ಷೇತ್ರದಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕ್ಕಿದ್ದಾರೆ. ಅಲ್ಲದೇ, ಸ್ಯಾಂಡಲ್​ವುಡ್​​ ಸ್ಟಾರ್​ಗಳನ್ನ (Sandalwood Stars) ಕರೆದು ತರುತ್ತಿದ್ದಾರೆ. ಸಿದ್ದರಾಮಯ್ಯ ಜೊತೆ ಎಂಟ್ರಿ ಕೊಡ್ತಿರೋ ಕಲಾವಿದರಿಂದ ವರುಣಾ ಮತ್ತಷ್ಟು ಕಲರ್‌ಪುಲ್ ಆಗಲಿದೆ. ಹೌದು, ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಇವತ್ತು ಸ್ಯಾಂಡಲ್‌ವುಡ್ ಚಕ್ರವರ್ತಿ ಡಾ.ಶಿವರಾಜಕುಮಾರ್, ಪತ್ನಿ ಗೀತಾ ಶಿವರಾಜಕುಮಾರ್, ಮೋಹಕತಾರೆ ರಮ್ಯಾ, ಮಾಜಿ ಶಾಸಕ ಮಧು ಬಂಗಾರಪ್ಪ, ಹಾಲಿ ಶಾಸಕರಾದ ಜಮೀರ್ ಅಹಮದ್ ಖಾನ್, ಯತೀಂದ್ರ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಲಿದ್ದಾರೆ. ಇವರೆಲ್ಲರೂ ಸಿದ್ದರಾಮಯ್ಯ ಜೊತೆ ಒಟ್ಟಿಗೆ ರೋಡ್ ಶೋ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ತಾರಾ ಬಳಗದ ರೋಡ್ ಶೋ ಆರಂಭವಾಗಲಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 12 ಗ್ರಾಮಗಳಲ್ಲಿ ಮತಶಿಕಾರಿ ನಡೆಸಲಿದ್ದಾರೆ.

ಇದನ್ನೂ ಓದಿ: Karnataka Election 2023 Live: ಚುನಾವಣೆಗೆ ಕೇವಲ 6 ದಿನ ಬಾಕಿ, ವರುಣನ ನಡುವೆಯೂ ಭರ್ಜರಿ ಪ್ರಚಾರ

ಈಗಾಗಲೇ ಸಿದ್ದರಾಮಯ್ಯ ವರುಣಾದಲ್ಲಿ ಒಂದು ಬಾರಿ ಬೆಳಗ್ಗೆಯಿಂದ ರಾತ್ರಿವರೆಗೂ ಭರ್ಜರಿ ಪ್ರಚಾರ ನಡೆಸಿದ್ದರು. ಆದ್ರೆ, ಈ ಬಾರಿ ಸಿದ್ದರಾಮಯ್ಯ ಸ್ಟಾರ್ ನಟ, ನಟಿಯರ ಜೊತೆ ಪ್ರಚಾರ ನಡೆಸುತ್ತಿರುವುದು ಪ್ರಚಾರಕ್ಕೆ ತಾರಾ ಮೆರುಗನ್ನ ತಂದುಕೊಡಲಿದೆ. ಹಾಗಾದ್ರೆ, ವರುಣಾದಲ್ಲಿ ಸಿದ್ದರಾಮಯ್ಯ ಜೊತೆ ಸ್ಟಾರ್ಸ್​​​​​​​​​ ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವುದನ್ನ ನೋಡುವುದಾದರೆ ವರುಣಾ ಕ್ಷೇತ್ರದಿಂದ ರೌಂಡ್ಸ್​​ ಹಾಕುವ ಸ್ಯಾಂಡಲ್​​​​ ವುಡ್​​ ಸ್ಟಾರ್ಸ್​​​​​ ಬೆಳಗ್ಗೆ 9 ಗಂಟೆಗೆ ರಾಂಪುರದಿಂದ ಸಿದ್ದರಾಮಯ್ಯ ಪರ ಮತಶಿಕಾರಿಗೆ ಚಾಲನೆ ನೀಡಲಿದ್ದಾರೆ. ಇದಾದ ಬಳಿಕ ಬೆಳಗ್ಗೆ 10ಕ್ಕೆ ಗೊದ್ದನಪುರ.. ಬೆಳಗ್ಗೆ 10.30ಕ್ಕೆ ಮರಳೂರು, ಬೆಳಗ್ಗೆ 11ಕ್ಕೆ ತಾಂಡವಪುರ ಗ್ರಾಮಗಳಲ್ಲಿ ಅಬ್ಬರಿಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಕ್ಕೆ ಕೆಂಪಸಿದ್ದನಹುಂಡಿ, ಮಧ್ಯಾಹ್ನ 1ಕ್ಕೆ ಹುಳಿಮಾವು, ಮಧ್ಯಾಹ್ನ 2 ಗಂಟೆಗೆ ಹದಿನಾರು, ಮಧ್ಯಾಹ್ನ 3 ಗಂಟೆಗೆ ಹೊಸಕೋಟೆ ಗ್ರಾಮದಲ್ಲಿ ಮತಯಾಚನೆ ನಡೆಸಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಸುತ್ತೂರು, ಸಂಜೆ 5 ಗಂಟೆಗೆ ಬಿಳಿಗೆರೆ, ಸಂಜೆ 6 ಗಂಟೆಗೆ ನಗರ್ಲೆ, ರಾತ್ರಿ 7 ಗಂಟೆಗೆ ಮಲ್ಲೂಪುರ ಗ್ರಾಮಗಳಲ್ಲಿ ರೌಂಡ್ಸ್​ ಹಾಕಲಿದ್ದಾರೆ.

21 ಗ್ರಾಮಗಳಲ್ಲಿ ಸೋಮಣ್ಣ ರೌಂಡ್ಸ್​​​​

ಇತ್ತ ಸಿದ್ದರಾಮಯ್ಯ ಖುದ್ದು ಅಖಾಡಕ್ಕೆ ಇಳಿಯದಲ್ಲದೇ, ನಟ-ನಟಿಯರನ್ನು ಸಹ ವರುಣಾಕ್ಕೆ ಕರೆ ತರುತ್ತಿದ್ದಾರೆ. ಅತ್ತ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೂಡ ವರುಣ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಮತ ಬೇಟೆ ಮುಂದುವರಿಸಿದ್ದಾರೆ. ಸೋಮಣ್ಣ ಸಹ ಒಂದಲ್ಲ ಎರಡಲ್ಲ ಬರೋಬ್ಬರಿ 21 ಗ್ರಾಮಗಳಲ್ಲಿ ಇವತ್ತು ಮತಯಾಚನೆಗೆ ರೂಟ್​​​ ಸಿದ್ಧಪಡಿಸಿದ್ದಾರೆ.

ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ವರ್ಣ ವಿಧಾನಸಭಾ ಕ್ಷೇತ್ರ ಸಾಕಷ್ಟು ರಂಗು ಪಡೆದುಕೊಳ್ಳುತ್ತಿದೆ. ಚುನಾವಣೆಗೆ ಕೇವಲ ಆರು ದಿನ ಬಾಕಿ ಇದ್ದು ಮತ್ಯಾವ ಘಟಾನುಘಟಿಗಳು ವರುಣಾ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಾರೋ ಎಂದು ಕಾದು ನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:26 am, Thu, 4 May 23

Follow Us
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ