AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದ ಕಾಂಚ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ

ರಾಮ, ಸೀತೆ ಮತ್ತು ಲಕ್ಷ್ಮಣರು ತಂಗಿದ್ದ ಪವಿತ್ರ ನಗರ ಚಿತ್ರಕೂಟಕ್ಕೆ ಬರುವ ಅವಕಾಶ ನನಗೆ ಸಿಕ್ಕಿದೆ ಎಂದಿದ್ದಾರೆ ಮೋದಿ. ನನಗೆ ಮತ್ತೆ ಚಿತ್ರಕೂಟಕ್ಕೆ ಬರುವ ಅವಕಾಶ ಸಿಕ್ಕಿದೆ. ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರು ವಾಸಿಸುತ್ತಿದ್ದರು ಎಂದು ನಮ್ಮ ಋಷಿಗಳು ಹೇಳುತ್ತಿದ್ದ ಪುಣ್ಯಭೂಮಿ ಇದು. ಶ್ರೀ ರಘುವೀರ್ ಮಂದಿರ ಮತ್ತು ಶ್ರೀರಾಮ ಜಾನಕಿ ಮಂದಿರಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು ಎಂದ ಮೋದಿ.

ಮಧ್ಯಪ್ರದೇಶದ ಕಾಂಚ್ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Oct 27, 2023 | 8:18 PM

ಚಿತ್ರಕೂಟ ಅಕ್ಟೋಬರ್ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಮಧ್ಯಪ್ರದೇಶದ (Madhya Pradesh) ಚಿತ್ರಕೂಟದಲ್ಲಿರುವ ಕಾಂಚ್ ಮಂದಿರದಲ್ಲಿ (Kanch Mandir)ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂಚ್ ಮಂದಿರವು ರಾಘವ ಸತ್ಸಂಗ ಭವನದ ಜೊತೆಗೆ ಚಿತ್ರಕೂಟ ವಿಹಾರಿ ಮತ್ತು ವಿಹಾರಿಣಿ (ಶ್ರೀರಾಮ ಮತ್ತು ಸೀತಾ ದೇವಿ) ದೇವಸ್ಥಾನವನ್ನು ಒಳಗೊಂಡಿದೆ. ಇದು ಮೂರು ಶಿಖರಗಳನ್ನು ಹೊಂದಿರುವ ದೇವಾಲಯವಾಗಿದೆ. ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣನ ಸುಂದರವಾದ ಪ್ರತಿಮೆಗಳನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ, ಇದನ್ನು ಪ್ರತಿದಿನ ಅರ್ಚಕರು ಪೂಜಿಸುತ್ತಾರೆ.

ಶ್ರೀ ತುಳಸಿ ಪೀಠ ಸೇವಾ ನ್ಯಾಸ್ ಮಧ್ಯಪ್ರದೇಶದ ಚಿತ್ರಕೂಟದ ಜಾಂಕಿ ಕುಂಡ್‌ನಲ್ಲಿರುವ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. 1987 ರ ತುಳಸಿ ಜಯಂತಿ ದಿನದಂದು ಗುರೂಜಿಯವರು ಈ ಸಂಸ್ಥೆಯನ್ನು ಸ್ಥಾಪಿಸಿದರು.

ತುಳಸಿ ಪೀಠವು ಭಾರತ ಮತ್ತು ಪ್ರಪಂಚದಲ್ಲಿ ಹಿಂದೂ ಧಾರ್ಮಿಕ ವಿಷಯಗಳ ಸಾಹಿತ್ಯದ ಪ್ರಮುಖ ಪ್ರಕಾಶಕರಲ್ಲಿ ಒಂದಾಗಿದೆ. ಚಿತ್ರಕೂಟದಲ್ಲಿರುವ ಶ್ರೀ ಸದ್ಗುರು ಸೇವಾ ಸಂಘದ ಟ್ರಸ್ಟ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಬಡವರು ಮತ್ತು ದಮನಿತ ವೈದ್ಯಕೀಯ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್‌ಗೆ ಧನ್ಯವಾದ ಅರ್ಪಿಸಿದರು.

ಎಲ್ಲಾ ದಮನಿತರ, ಬಡವರು, ಆದಿವಾಸಿಗಳ ಮಾನವೀಯತೆಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್‌ಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಧ್ಯಪ್ರದೇಶದ ಚಿತ್ರಕೂಟದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಹೇಳಿದರು.

ರಾಮ, ಸೀತೆ ಮತ್ತು ಲಕ್ಷ್ಮಣರು ತಂಗಿದ್ದ ಪವಿತ್ರ ನಗರ ಚಿತ್ರಕೂಟಕ್ಕೆ ಬರುವ ಅವಕಾಶ ನನಗೆ ಸಿಕ್ಕಿದೆ ಎಂದಿದ್ದಾರೆ ಮೋದಿ. ನನಗೆ ಮತ್ತೆ ಚಿತ್ರಕೂಟಕ್ಕೆ ಬರುವ ಅವಕಾಶ ಸಿಕ್ಕಿದೆ. ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರು ವಾಸಿಸುತ್ತಿದ್ದರು ಎಂದು ನಮ್ಮ ಋಷಿಗಳು ಹೇಳುತ್ತಿದ್ದ ಪುಣ್ಯಭೂಮಿ ಇದು. ಶ್ರೀ ರಘುವೀರ್ ಮಂದಿರ ಮತ್ತು ಶ್ರೀರಾಮ ಜಾನಕಿ ಮಂದಿರಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ನಾನು ಹೆಲಿಕಾಪ್ಟರ್‌ನಿಂದ ಕಾಮತ್ ಗಿರಿ ಪರ್ವತಕ್ಕೆ ನಮನ ಸಲ್ಲಿಸಿದೆ, ರಾಂಚೋದ್ದಾಸ್ಜಿ ಮಹಾರಾಜ್ ಮತ್ತು ಅರವಿಂದ್ ಭಾಯಿ ಮಫತ್‌ಲಾಲ್ ಅವರಿಗೆ ಪುಷ್ಪ ನಮನ ಸಲ್ಲಿಸಲು ಹೋಗಿದ್ದೆ ಎಂದು ಅವರು ಹೇಳಿದರು.

ಚಿತ್ರಕೂಟಕ್ಕೆ ಬಂದ ನಂತರ ನನಗೆ ಎಷ್ಟು ಖುಷಿಯಾಯಿತು ಎಂದು ಹೇಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಶ್ರೀರಾಮ ಜಾನಕಿಯವರ ದರ್ಶನದ ನಂತರ, ಪವಿತ್ರ ಪುರುಷರ ಸಿದ್ಧಾಂತಗಳು ಮತ್ತು ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ಸಾಹವನ್ನು ನೋಡಿ ನಾನು ಎಷ್ಟು ಖುಷಿಪಟ್ಟೆ ಎಂದು ವ್ಯಕ್ತಪಡಿಸುವುದು ಕಷ್ಟ ಎಂದು ಅವರು ಹೇಳಿದರು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಹಿಂದುಳಿದ ಜಾತಿಯವರನ್ನೇ ಸಿಎಂ ಮಾಡುತ್ತೇವೆ: ಅಮಿತ್ ಶಾ

ಇದಕ್ಕೂ ಮುನ್ನ ಪ್ರಧಾನಿಯವರು ಸತ್ನಾ ಜಿಲ್ಲೆಯ ರಘುವೀರ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಚಿತ್ರಕೂಟದಲ್ಲಿರುವ ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಪ್ರದರ್ಶನವನ್ನು ವೀಕ್ಷಿಸಿದರು.  ಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ ಅನ್ನು 1968 ರಲ್ಲಿ ಪರಮ ಪೂಜ್ಯ ರಾಂಚೋದ್ದಾಸ್ಜಿ ಮಹಾರಾಜ್ ಸ್ಥಾಪಿಸಿದರು. ಅರವಿಂದ್ ಭಾಯ್ ಮಫತ್‌ಲಾಲ್ ಅವರು ಪರಮ ಪೂಜ್ಯ ರಾಂಚೋದ್ದಾಸ್ಜಿ ಮಹಾರಾಜ್ ಅವರಿಂದ ಪ್ರೇರಿತರಾಗಿದ್ದರು ಮತ್ತು ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ