ಪಿಯುಸಿ ಪಾಸ್ ಆದವರಿಗೆ ಉಚಿತ ಸ್ಕೂಟಿ, ಹೆಣ್ಣು ಮಗುವಿಗೆ 2 ಲಕ್ಷ ರೂ. ಬಾಂಡ್, ರಾಜಸ್ಥಾನದಲ್ಲಿ ಬಿಜೆಪಿ ಘೋಷಣೆ

ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ. ಬಿಜೆಪಿ-ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ರಾಜಸ್ಥಾನದತ್ತ ಮುಖ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ‌. ರಾಜಸ್ಥಾನ ಅಭಿವೃದ್ದಿಗಾಗಿ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದಾರೆ.

ಪಿಯುಸಿ ಪಾಸ್ ಆದವರಿಗೆ ಉಚಿತ ಸ್ಕೂಟಿ, ಹೆಣ್ಣು ಮಗುವಿಗೆ 2 ಲಕ್ಷ ರೂ. ಬಾಂಡ್, ರಾಜಸ್ಥಾನದಲ್ಲಿ ಬಿಜೆಪಿ ಘೋಷಣೆ
ಜೆಪಿ ನಡ್ಡಾ
Edited By:

Updated on: Nov 16, 2023 | 2:46 PM

ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ. ಬಿಜೆಪಿ-ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ರಾಜಸ್ಥಾನದತ್ತ ಮುಖ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ‌. ರಾಜಸ್ಥಾನ ಅಭಿವೃದ್ದಿಗಾಗಿ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಸಂಕಲ್ಪ ಪತ್ರದಲ್ಲಿರುವ ಅಂಶಗಳು

* ಪ್ರತಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಪೊಲೀಸ್ ಠಾಣೆ

* ಮಹಿಳಾ ಡೆಸ್ಕ್ ಮತ್ತು ಆ್ಯಂಟಿ ರೋಮಿಯೋ ಸ್ಕ್ವಾಡ್ ರಚನೆ

* ಪ್ರತಿ ಹೆಣ್ಣು ಮಗುವಿನ ಜನನದ ಮೇಲೆ 2 ಲಕ್ಷ ರೂ ಬಾಂಡ್

* 12ನೇ ತರಗತಿ ತೇರ್ಗಡೆಯಾದ ಹುಡುಗಿಗೆ ಸ್ಕೂಟಿ

* ಆರು ಲಕ್ಷ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಆಧಾರಿತ ತರಬೇತಿ

* ಗ್ಯಾಸ್ ಸಿಲಿಂಡರ್ ಮೇಲೆ 450 ರೂ ಸಬ್ಸಿಡಿ

* ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಾರ್ಷಿಕ 1200 ರೂ

*ಪ್ರವಾಸೋದ್ಯಮವನ್ನು ಉತ್ತೇಜಿಸಲು 2000 ಕೋಟಿ ರೂ

* ಖಾಲಿ ಇರುವ ಸರ್ಕಾರಿ ಉದ್ಯೋಗಗಳ ಭರ್ತಿ ಭರವಸೆ

ಪ್ರಣಾಳಿಕೆ ಬಿಡುಗಡೆ ಬಳಿಕ ಕಾಂಗ್ರೆಸ್ ವಿರುದ್ಧ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ, ಮಹಿಳಾ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ, ಕನ್ಹಯ್ಯಾ ಲಾಲ್ ಹತ್ಯೆ ಮುಂತಾದ ವಿಚಾರಗಳ ಮೂಲಕ ರಾಜಸ್ಥಾನದ ಗೆಹ್ಲೋಟ್ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ.

ಇತರ ಪಕ್ಷಗಳಿಗೆ ಪ್ರಣಾಳಿಕೆ ಕೇವಲ ಔಪಚಾರಿಕವಾದರೆ ಬಿಜೆಪಿಗೆ ಇದು ಅಭಿವೃದ್ಧಿಯ ಮಾರ್ಗಸೂಚಿಯಾಗಿದೆ. ಸಂಕಲ್ಪ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ನಮಗೆ ಇತಿಹಾಸವಿದೆ, ನಾವು ಹೇಳಿದ್ದನ್ನು ಮಾಡಿದ್ದೇವೆ. ಹೇಳದೇ ಇರುವುದನ್ನೂ ಮಾಡಿದ್ದೇವೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ರೈತರಿಗೆ ಅಗೌರವ ಮತ್ತು ಕಾಗದ ಸೋರಿಕೆಯ ಪ್ರಕರಣಗಳು ಭ್ರಷ್ಟಾಚಾರದ ದಾಖಲೆಗಳನ್ನು ಮುರಿದಿದೆ ಎಂದು ನಡ್ಡಾ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಓದಿ: ರಾಜಸ್ಥಾನ ಚುನಾವಣೆ 2023: ನಾಲ್ಕು ಸ್ಥಾನಗಳಲ್ಲಿ ಕುಟುಂಬದ ಸದಸ್ಯರ ನಡುವೆಯೇ ಪೈಪೋಟಿ

ಮುಖ್ಯಮಂತ್ರಿ ಗೆಹ್ಲೋಟ್ ಕುಟುಂಬ 11 ಸಾವಿರ ಕೋಟಿ ರೂ.ಗಳ ಗುತ್ತಿಗೆ ಪಡೆದಿದೆ, ಜಲ ಜೀವನ್ ಮಿಷನ್‌ನಲ್ಲಿ ಹಗರಣ ನಡೆದಿದೆ. ಅತ್ಯಾಚಾರದಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ ಭ್ರಷ್ಟಾಚಾರದ ಹೊಸ ಆಯಾಮಗಳು ಕಂಡುಬಂದಿವೆ. ರಾಜಸ್ಥಾನದಂತಹ ಶಾಂತಿಯುತ ಸ್ಥಳದಲ್ಲಿ ತಲೆ ಮತ್ತು ದೇಹವನ್ನು ಕತ್ತರಿಸುವ ಘಟನೆಗಳು ಸಹ ಸಾಕ್ಷಿಯಾಗಿವೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿವೆ. ಬಿಜೆಪಿ ರೈತರ ಬಗ್ಗೆ ಕಾಳಜಿ ವಹಿಸಿದೆ, ಯುವಕರಿಗೆ ಸರ್ಕಾರಿ ಉದ್ಯೋಗ, ಬಡವರಿಗೆ ಉಚಿತ ಆಹಾರ ನೀಡಿದೆ, ಕಾಂಗ್ರೆಸ್‌ನ ಗೆಹ್ಲೋಟ್ ಸರ್ಕಾರ ಬಿಜೆಪಿಯ ಕೆಲಸಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದೆ ಎಂದು ನಡ್ಡಾ ಆರೋಪಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us