AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BECIL Recruitment 2022: ಬಿಇಸಿಐಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

BECIL Recruitment 2022: ಆಸಕ್ತ ಅಭ್ಯರ್ಥಿಗಳು BECIL-www.becil.com ನ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

BECIL Recruitment 2022: ಬಿಇಸಿಐಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
BECIL Recruitment 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 17, 2022 | 8:00 AM

BECIL Recruitment 2022: ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್​ನ (BECIL) ವೈದ್ಯಕೀಯ ಅಧಿಕಾರಿ, PRO, ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು 54 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು BECIL-www.becil.com ನ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ- 54
  • – ವೈದ್ಯಕೀಯ ಅಧಿಕಾರಿ: 6 ಖಾಲಿ ಹುದ್ದೆಗಳು
  • – ವೈದ್ಯಕೀಯ ಅಧಿಕಾರಿ (ಆಯುರ್ವೇದ): 2 ಹುದ್ದೆಗಳು
  • – ಹಿರಿಯ ಪ್ರೋಗ್ರಾಂ ಮ್ಯಾನೇಜರ್ (ತಾಂತ್ರಿಕ): 1 ಹುದ್ದೆ
  • – ಸಾರ್ವಜನಿಕ ಸಂಪರ್ಕ ಅಧಿಕಾರಿ (PRO): 1 ಹುದ್ದೆ
  • – ಜೂನಿಯರ್ ಪ್ರೋಗ್ರಾಂ ಮ್ಯಾನೇಜರ್ (ತಾಂತ್ರಿಕ): 2 ಹುದ್ದೆಗಳು
  • – ಪ್ರೋಗ್ರಾಂ ಮ್ಯಾನೇಜರ್ (ಆಡಳಿತ): 1 ಹುದ್ದೆ
  • – ಯೋಗ ಥೆರಪಿಸ್ಟ್: 2 ಹುದ್ದೆಗಳು
  • – ಸ್ಟಾಫ್ ನರ್ಸ್: 12 ಹುದ್ದೆಗಳು
  • – ಪಂಚಕರ್ಮ ತಂತ್ರಜ್ಞ: 13 ಹುದ್ದೆಗಳು
  • – ಆಡಿಯೋಲಾಜಿಸ್ಟ್: 1 ಹುದ್ದೆ
  • – ನೇತ್ರ ತಂತ್ರಜ್ಞ/ ಆಪ್ಟೋಮೆಟ್ರಿಸ್ಟ್: 1 ಹುದ್ದೆ
  • – OT ತಂತ್ರಜ್ಞ (ನೇತ್ರ): 1 ಹುದ್ದೆ
  • – ಸಹಾಯಕ ಗ್ರಂಥಾಲಯ ಅಧಿಕಾರಿ: 1 ಹುದ್ದೆ
  • – ಪಂಚಕರ್ಮ ಪರಿಚಾರಕ: 10 ಹುದ್ದೆಗಳು

ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಆಸಕ್ತರು ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಹತಾ ಮಾಹಿತಿಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ಮಾಜಿ ಸೈನಿಕ/ಮಹಿಳಾ ವರ್ಗದ ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಎಸ್‌ಸಿ/ಎಸ್‌ಟಿ/ಇಡಬ್ಲ್ಯೂಎಸ್/ಪಿಎಚ್ ವರ್ಗದ ಅಡಿಯಲ್ಲಿ ಬರುವವರು ರೂ.450 ಶುಲ್ಕವನ್ನು ಪಾವತಿಸಬೇಕು.

ವಯೋಮಿತಿ: ವೈದ್ಯಕೀಯ ಅಧಿಕಾರಿ (ಆಯುರ್ವೇದ), ಹಿರಿಯ ಕಾರ್ಯಕ್ರಮ ನಿರ್ವಾಹಕ (ತಾಂತ್ರಿಕ), ಸಾರ್ವಜನಿಕ ಸಂಪರ್ಕ ಅಧಿಕಾರಿ (PRO), ಜೂನಿಯರ್ ಕಾರ್ಯಕ್ರಮ ನಿರ್ವಾಹಕ (ತಾಂತ್ರಿಕ), ಕಾರ್ಯಕ್ರಮ ನಿರ್ವಾಹಕ (ಆಡಳಿತ), ಯೋಗ ಚಿಕಿತ್ಸಕ, ಸ್ಟಾಫ್ ನರ್ಸ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 45 ವರ್ಷಗಳು.

ಆಡಿಯೋಲಾಜಿಸ್ಟ್, ನೇತ್ರ ತಂತ್ರಜ್ಞ/ ಆಪ್ಟೋಮೆಟ್ರಿಸ್ಟ್ ಮತ್ತು OT ತಂತ್ರಜ್ಞ (ನೇತ್ರವಿಜ್ಞಾನ) ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು.

ಪಂಚಕರ್ಮ ತಂತ್ರಜ್ಞ, ಸಹಾಯಕ ಗ್ರಂಥಾಲಯ ಅಧಿಕಾರಿ ಮತ್ತು ಪಂಚಕರ್ಮ ಪರಿಚಾರಕ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷಗಳು.

ವೇತನ: ವೈದ್ಯಕೀಯ ಅಧಿಕಾರಿ, ವೈದ್ಯಕೀಯ ಅಧಿಕಾರಿ (ಆಯುರ್ವೇದ), ಮತ್ತು ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ (ತಾಂತ್ರಿಕ) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ ರೂ. 75,000 ಪಾವತಿಸಲಾಗುತ್ತದೆ.

ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಹುದ್ದೆಗೆ ವೇತನ ರೂ. 70,000. ಜೂನಿಯರ್ ಪ್ರೋಗ್ರಾಂ ಮ್ಯಾನೇಜರ್ (ತಾಂತ್ರಿಕ), ಕಾರ್ಯಕ್ರಮ ನಿರ್ವಾಹಕ (ಆಡಳಿತ) ಮತ್ತು ಯೋಗ ಚಿಕಿತ್ಸಕರಿಗೆ ಮಾಸಿಕ ವೇತನ ರೂ. 50,000 ನೀಡಲಾಗುತ್ತದೆ. ಇನ್ನು ಸ್ಟಾಫ್ ನರ್ಸ್ – ರೂ.37,500, ಪಂಚಕರ್ಮ ತಂತ್ರಜ್ಞ- ರೂ. 24,000, ಆಡಿಯಾಲಜಿಸ್ಟ್- ರೂ. 21,756, ನೇತ್ರ ತಂತ್ರಜ್ಞ/

ಆಪ್ಟೋಮೆಟ್ರಿಸ್ಟ್- ರೂ. 21,756 ಮತ್ತು OT ತಂತ್ರಜ್ಞ (ನೇತ್ರ)- ರೂ. 21,756, ಸಹಾಯಕ ಗ್ರಂಥಾಲಯ ಅಧಿಕಾರಿ-ರೂ. 30,000 ಮತ್ತು ಪಂಚಕರ್ಮ ಅಟೆಂಡೆಂಟ್- ರೂ. 16,000. ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 31, 2022

ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಮತ್ತು ಅರ್ಹ ಅಭ್ಯರ್ಥಿಗ.ಳು BECIL ನ ಅಧಿಕೃತ ವೆಬ್‌ಸೈಟ್‌ಗೆ www.becil.com ಭೇಟಿ ನೀಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ