AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alankrita Sakshi joins Google: ವಿಪ್ರೋ ಮಾಜಿ ಉದ್ಯೋಗಿ ಅಲಂಕೃತಾಗೆ ಗೂಗಲ್‌ನಲ್ಲಿ ಸಿಕ್ತು ಭಾರೀ ಕೆಲಸ, ಗಂಡ ಬೆಂಗಳೂರಿನಲ್ಲಿ ಟೆಕ್ಕಿ!

Ex-Wipro employee now Google Security Analyst: ಬಿಹಾರದ ಮಹಿಳೆಯೊಬ್ಬರು ದೈತ್ಯ ಟೆಕ್​ ಕಂಪನಿ ಗೂಗಲ್‌ನಲ್ಲಿ ವಾರ್ಷಿಕ 60 ಲಕ್ಷ ರೂಪಾಯಿ ಪ್ಯಾಕೇಜ್‌ ಹೊಂದಿರುವ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗಂತ ಈಕೆ ಯಾವುದೇ IIT ಪದವಿ ಪಡೆದಿಲ್ಲ. ಇವರ ಗಂಡ ಬೆಂಗಳೂರಿನಲ್ಲಿ ಈಗಲೂ ಟೆಕ್ಕಿಯಾಗಿದ್ದಾರೆ! ಅಲಂಕೃತಾ ಗೂಗಲ್​​ನಲ್ಲಿ ಈ ಸ್ಥಾನ ಅಲಂಕರಿಸಿರುವುದನ್ನು ಕಂಡು ಸಾಮಾಜಿಕ ಮಾಧ್ಯಮ ಬೆಕ್ಕಸಬೆರಗಾಗಿದೆ.

Alankrita Sakshi joins Google: ವಿಪ್ರೋ ಮಾಜಿ ಉದ್ಯೋಗಿ ಅಲಂಕೃತಾಗೆ ಗೂಗಲ್‌ನಲ್ಲಿ ಸಿಕ್ತು ಭಾರೀ ಕೆಲಸ, ಗಂಡ ಬೆಂಗಳೂರಿನಲ್ಲಿ ಟೆಕ್ಕಿ!
ವಿಪ್ರೋ ಮಾಜಿ ಉದ್ಯೋಗಿ ಅಲಂಕೃತಾಗೆ ಗೂಗಲ್‌ನಲ್ಲಿ ಕೆಲಸ ಸಿಕ್ತು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 14, 2024 | 4:33 AM

Share

ಬಿಹಾರದ ಮಹಿಳೆಯೊಬ್ಬರು ದೈತ್ಯ ಟೆಕ್​ ಕಂಪನಿ ಗೂಗಲ್‌ನಲ್ಲಿ ವಾರ್ಷಿಕ 60 ಲಕ್ಷ ರೂಪಾಯಿ ಪ್ಯಾಕೇಜ್‌ ಹೊಂದಿರುವ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗಂತ ಈಕೆ ಯಾವುದೇ IIT ಪದವಿ ಪಡೆದಿಲ್ಲ. ಅಲಂಕೃತಾ ಸಾಕ್ಷಿ ಎಂಬ ಈ ಮಹಿಳೆ ಇದಕ್ಕೂ ಮುನ್ನ ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ 2 ವರ್ಷ ಉದ್ಯೋಗಿಯಾಗಿದ್ದರು. ಇವರ ಗಂಡ ಬೆಂಗಳೂರಿನಲ್ಲಿ ಈಗಲೂ ಟೆಕ್ಕಿಯಾಗಿದ್ದಾರೆ! ಅಲಂಕೃತಾ ಗೂಗಲ್​​ನಲ್ಲಿ ಈ ಸ್ಥಾನ ಅಲಂಕರಿಸಿರುವುದನ್ನು ಕಂಡು ಸಾಮಾಜಿಕ ಮಾಧ್ಯಮ ಬೆಕ್ಕಸಬೆರಗಾಗಿದೆ. ಅರ್ನ್ಸ್ಟ್ ಅಂಡ್ ಯಂಗ್, ವಿಪ್ರೋ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಲಂಕೃತಾ ಸಾಕ್ಷಿ ಅವರು ತಮ್ಮ ಲಿಂಕ್ಡ್‌ಇನ್‌ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು Google ಗೆ ಭದ್ರತಾ ವಿಶ್ಲೇಷಕನಾಗಿ ಸೇರಿದ್ದೇನೆ ಎಂದು ಘೋಷಿಸಲು ರೋಮಾಂಚನಗೊಂಡಿದ್ದೇನೆ! ಈ ಅವಕಾಶ ನೀಡಿದ್ದಕ್ಕೆ ಗೂಗಲ್​​ಗೆ ನಾನು ಅಪಾರವಾಗಿ ಆಭಾರಿಯಾಗಿದ್ದೇನೆ. ಮತ್ತು ಗೂಗಲ್​​ನಲ್ಲಿ ನಾವಿನ್ಯ ಮತ್ತು ಕ್ರಿಯಾತ್ಮಕ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಹೊಸ ಆರಂಭಗಳು ಮತ್ತು ಮುಂದಿನ ಪ್ರಯಾಣ ಶುರುವಾಗಿದೆ ಎಂದು ಸಾಕ್ಷಿ ತಮ್ಮ ಲಿಂಕ್ಡ್‌ಇನ್‌ ಖಾತೆಯಲ್ಲಿ (LinkedIn) ಬರೆದುಕೊಂಡಿದ್ದಾರೆ.

ಅಲಂಕೃತಾ ಇದುವರೆಗೂ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದಾರೆ. ಅವರು QRADAR-SIEM, ಸ್ಪ್ಲಂಕ್, ಫಿಶಿಂಗ್ ಇಮೇಲ್ ವಿಶ್ಲೇಷಣೆ, ಫೈರ್‌ವಾಲ್, ಮಾಲ್‌ವೇರ್ ಅನಾಲಿಸಿಸ್, Service-now.com ನಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಅವರ ಬಯೋದಲ್ಲಿ ಉಲ್ಲೇಖಿಸಲಾಗಿದೆ. ಅವರು ಹಜಾರೈಬಾಗ್‌ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ (UCET) ಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಸ್ಟ್ರೀಮ್‌ನಲ್ಲಿ ಎಂಜಿನಿಯರಿಂಗ್ ಅನ್ನು ಪಡೆದಿದ್ದಾರೆ (BTech graduate from the University College of Engineering & Technology in Jharkhand).

ಇದನ್ನೂ ಓದಿ: FCI Recruitment- 15 ಸಾವಿರ ಹುದ್ದೆಗಳು ಖಾಲಿಯಿವೆ, ಆನ್‌ಲೈನ್‌ನಲ್ಲಿ ಇಂದೇ ಅರ್ಜಿ ಸಲ್ಲಿಸಿ

ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಶಂಕರ್ ಮಿಶ್ರಾ ಮತ್ತು ಖಾಸಗಿ ಶಾಲಾ ಶಿಕ್ಷಕಿ ರೇಖಾ ಮಿಶ್ರಾ ದಂಪತಿಯ ಸುಪುತ್ರಿ ಅಲಂಕೃತಾ ಅವರು ಎರಡು ತಿಂಗಳ ಹಿಂದೆ Google ಗೆ “ಸೆಕ್ಯುರಿಟಿ ಅನಾಲಿಸ್ಟ್” ಆಗಿ ಸೇರಿದ್ದಾರೆ. ಬಿಹಾರ ಮೂಲದ ಈ ಯುವತಿ 20203 ರ ಡಿಸೆಂಬರ್‌ನಲ್ಲಿ ಮನೀಶ್‌ ಜೊತೆ ಮದುವೆಯಾಗಿದ್ದಾರೆ. ಅಲಂಕೃತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡೆರ್ಮಾದ ಜವಾಹರ್ ನವೋದಯ ಶಾಲೆಯಲ್ಲಿ ಪಡೆದವರು. ಅವರು ಹರಾಜಿಬಾಗ್ ಜಿಲ್ಲೆಯಿಂದ ಬಿ.ಟೆಕ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಅಲಂಕೃತಾ ಸಾಕ್ಷಿ ಅವರ ಈ ಪೋಸ್ಟ್ ಕ್ಷಿಪ್ರವಾಗಿ ವೈರಲ್ ಆಗಿದೆ. ಭಾರೀ ಲೈಕ್​ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಒಬ್ಬರು ಹೀಗೆ ಬರೆದಿದ್ದಾರೆ: ಅಲಂಕೃತಾ ಅಭಿನಂದನೆಗಳು! ನಿಮ್ಮ Google ನೇಮಕಾತಿ ಸುದ್ದಿಯ ಕುರಿತು ನಾನು ಓದಿದೆ. ಟೆಕ್ ದೈತ್ಯರಿಂದ ಅತ್ಯುನ್ನತ ಪ್ಯಾಕೇಜ್ ಅನ್ನು ಪಡೆದುಕೊಳ್ಳುವುದು ದೊಡ್ಡ ಸಾಧನೆಯಾಗಿದೆ. ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ಇನ್ನು ಮತ್ತೊಬ್ಬರು: ನಿಮ್ಮ ಅದ್ಭುತ ಯಶಸ್ಸಿಗೆ ಅಭಿನಂದನೆಗಳು ಎಂದು ಸೇರಿಸಿದ್ದಾರೆ. ನಾಲ್ಕನೇ ಬಳಕೆದಾರರು ಬರೆದಿದ್ದಾರೆ: ಅಲಂಕೃತಾ ನೀವು ಪ್ರತಿಷ್ಠಿತ IIT, IIIT, IIM ನಿಂದ ಬಂದವರಲ್ಲ ಎಂಬುದು ಆಶ್ಚರ್ಯಕರವಾಗಿದೆ!

ಲಿಂಕ್ಡ್‌ಇನ್ ಪ್ರಕಾರ, ಅಲಂಕೃತಾ ಸಾಕ್ಷಿ ಬಿಹಾರದ ಭಾಗಲ್ಪುರ್ ಜಿಲ್ಲೆಯ ಮೂಲದ ಕೊಡೆರ್ಮಾ ಮತ್ತು ಹಜಾರಿಬಾಗ್‌ನಲ್ಲಿ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಅವರು ಈ ಹಿಂದೆ ವಿಪ್ರೋದಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು. ಮತ್ತು ನಂತರ ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ಭದ್ರತಾ ವಿಶ್ಲೇಷಕರಾಗಿ ಉದ್ಯೋಗ ಮಾಡಿದ್ದಾರೆ.

ಇನ್ನಷ್ಟು  ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ