AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Recruitment 2021: ಎಲ್​ಐಸಿ ಎಇ, ಎಎಒ ಹುದ್ದೆ ನೇಮಕಾತಿ ಪರೀಕ್ಷೆ ಅಕ್ಟೋಬರ್​ 31ಕ್ಕೆ; ವೇತನ, ಸೌಲಭ್ಯಗಳ ವಿವರ ಇಲ್ಲಿದೆ

ಅಕ್ಟೋಬರ್​ 31ರಂದು ನಡೆಯಲಿರುವ ನೇಮಕಾತಿ ಪರೀಕ್ಷೆ, ನಂತರದ ಸಂದರ್ಶನ ಮತ್ತು ದಾಖಲೆ ವೆರಿಫಿಕೇಶನ್​​, ವೈದ್ಯಕೀಯ ತಪಾಸಣೆ ಎಲ್ಲದರಲ್ಲೂ ಸರಿಯಾಗಿ ಉತ್ತೀರ್ಣರಾಗಿ ಅರ್ಹರು ಎನ್ನಿಸಿಕೊಂಡ ಅಭ್ಯರ್ಥಿಗಳು ಹುದ್ದೆಗಳಿಗೆ ನೇಮಕವಾಗಲಿದ್ದಾರೆ.

LIC Recruitment 2021: ಎಲ್​ಐಸಿ ಎಇ, ಎಎಒ ಹುದ್ದೆ ನೇಮಕಾತಿ ಪರೀಕ್ಷೆ ಅಕ್ಟೋಬರ್​ 31ಕ್ಕೆ; ವೇತನ, ಸೌಲಭ್ಯಗಳ ವಿವರ ಇಲ್ಲಿದೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Oct 21, 2021 | 1:26 PM

Share

ಲೈಫ್​ ಇನ್ಶೂರೆನ್ಸ್​ ಕಾರ್ಪೋರೇಶನ್​ (LIC)ನ ಅಸಿಸ್ಟೆಂಟ್​ ಇಂಜಿನಿಯರ್ಸ್​ ಮತ್ತು ಅಸಿಸ್ಟೆಂಟ್​ ಅಡ್ಮಿನಿಸ್ಟ್ರೇಟಿವ್​ ಆಫೀಸರ್ಸ್​(ತಜ್ಞರು) ಹುದ್ದೆಗಳ ಪರೀಕ್ಷೇ ಅಕ್ಟೋಬರ್​ 31ರಂದು ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎಲ್​ಐಸಿಯ ಅಧಿಕೃತ ವೆಬ್​ಸೈಟ್​  Licindia.in.ನ್ನು ಪರಿಶೀಲಿಸಬಹುದಾಗಿದೆ.

ಎಲ್​ಐಸಿ ಎಇ (ಎಲ್​ಐಸಿ ಅಸಿಸ್ಟೆಂಟ್​ ಇಂಜಿನಿಯರ್ಸ್​​) ಮತ್ತು ಎಎಒ (ಅಸಿಸ್ಟೆಂಟ್​ ಅಡ್ಮಿನಿಸ್ಟ್ರೇಟಿವ್​ ಆಫೀಸರ್ಸ್) ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಯಲ್ಲಿ ಮಲ್ಟಿಪಲ್​ ಚಾಯಿಸ್​ ಪ್ರಶ್ನೆಗಳು (ಒಂದು ಪ್ರಶ್ನೆ ಕೊಟ್ಟು ಅದಕ್ಕೆ ಮೂರು ಅಥವಾ ನಾಲ್ಕು ಆಯ್ಕೆ ಕೊಟ್ಟಿರುತ್ತಾರೆ. ಅದರಲ್ಲಿ ಒಂದು ಸರಿಯಾದ ಉತ್ತರವನ್ನು ಬರೆಯುವುದು) ಮತ್ತು ವಿವರಣಾತ್ಮಕ ಪ್ರಶ್ನೆಗಳು ಎರಡೂ ಮಾದರಿಯ ಪ್ರಶ್ನೆಗಳಿರುತ್ತವೆ. ಒಟ್ಟು 300 ಅಂಕದ ಈ ಪರೀಕ್ಷೆ ಆನ್​ಲೈನ್​ ಮೂಲಕ ನಡೆಯಲಿದೆ. ವಿವರಣೆ ಬರೆಯಬೇಕಾದ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಕಂಪ್ಯೂಟರ್​​ನಲ್ಲಿ ಟೈಪ್​ ಮಾಡಬೇಕಾಗುತ್ತದೆ.

ಅಕ್ಟೋಬರ್​ 31ರಂದು ನಡೆಯಲಿರುವ ನೇಮಕಾತಿ ಪರೀಕ್ಷೆ, ನಂತರದ ಸಂದರ್ಶನ ಮತ್ತು ದಾಖಲೆ ವೆರಿಫಿಕೇಶನ್​​, ವೈದ್ಯಕೀಯ ತಪಾಸಣೆ ಎಲ್ಲದರಲ್ಲೂ ಸರಿಯಾಗಿ ಉತ್ತೀರ್ಣರಾಗಿ ಅರ್ಹರು ಎನ್ನಿಸಿಕೊಂಡ ಅಭ್ಯರ್ಥಿಗಳು ಹುದ್ದೆಗಳಿಗೆ ನೇಮಕವಾಗಲಿದ್ದಾರೆ. ಹೀಗೆ ಅಂತಿಮವಾಗಿ ನೇಮಕವಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 57 ಸಾವಿರ ರೂಪಾಯಿ ಸಂಬಳ ಇರಲಿದೆ. ಅದರಾಚೆ ಕಂಪನಿಯ ವಿಮೆ, ಮೆಡಿ-ಕ್ಲೇಮ್, ಎಲ್‌ಟಿಸಿ, ಗ್ರಾಚ್ಯುಟಿ ಸೇರಿ ವಿವಿಧ ಭತ್ಯೆಗಳಿಗೆ ಅವರು ಅರ್ಹರಾಗುತ್ತಾರೆ.  ಇನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಐರಿಸ್ (ಕಣ್ಪೊರೆ)​ ಮತ್ತು ಫೋಟೋವನ್ನು ತೆಗೆಯಲು ಮತ್ತು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.  ಮುಖ್ಯ ಪರೀಕ್ಷೆಯ ಪ್ರಾರಂಭಕ್ಕೂ ಮೊದಲು, ಪರೀಕ್ಷೆ ಮುಗಿಸಿ ಆಯಾ ಹಾಲ್​/ಲ್ಯಾಬ್​​ನಿಂದ ಅಭ್ಯರ್ಥಿಗಳು ಹೊರಡುವ ಮೊದಲು, ಸಂದರ್ಶನಕ್ಕೂ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡುವಾಗ, ಎಲ್ಲವೂ ಮುಗಿಸಿ ನಂತರ ತರಬೇತಿಗೆ, ಕೆಲಸಕ್ಕೆ ಹಾಜರಾಗುವ ಮೊದಲು ಈ ಫೋಟೋ, ಕಣ್ಪೊರೆ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ರೋಗಿಗೆ ಗಾಳಿಯನ್ನು ಚುಚ್ಚುವ ಮೂಲಕ 4 ಜನರನ್ನು ಕೊಂದ ‘ಸೀರಿಯಲ್ ಕಿಲ್ಲರ್’ ನರ್ಸ್‌ಗೆ ಮರಣದಂಡನೆ ವಿಧಿಸಲು ಒತ್ತಾಯ

Shah Rukh Khan: ಬಾಲಿವುಡ್​ ನಟ ಶಾರುಖ್​ ಖಾನ್, ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ NCB ದಾಳಿ

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’