AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಐಟಿ ಕಾರ್ಖಾನೆ’ ಎಂದೇ ಪ್ರಸಿದ್ಧಿಯಾಗಿರುವ ಭಾರತದ ಈ ಪುಟ್ಟ ಹಳ್ಳಿ; ಕಾರಣವೇನು ಗೊತ್ತಾ?

ಬಿಹಾರದ ಗಯಾ ಜಿಲ್ಲೆಯ ಪಟ್ವಾ ಟೋಲಿ ಗ್ರಾಮದಲ್ಲಿ ಪ್ರತೀ ವರ್ಷ ನೂರಾರು ಎಂಜಿನಿಯರ್‌ಗಳು ಹೊರಬರುವುದರಿಂದ "ಐಐಟಿ ಕಾರ್ಖಾನೆ" ಎಂದು ಪ್ರಸಿದ್ಧವಾಗಿದೆ. ಪ್ರತಿ ವರ್ಷ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಈ ಗ್ರಾಮದ ಅನೇಕ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ವೃಕ್ಷ ಎಂಬ ಸಂಸ್ಥೆಯ ಸಹಾಯದಿಂದ ಈ ಗ್ರಾಮದ ಶಿಕ್ಷಣ ವ್ಯವಸ್ಥೆ ಸುಧಾರಿಸಿದೆ. 1991ರಿಂದಲೂ ಈ ಸಾಧನೆ ಮುಂದುವರಿದಿದೆ.

'ಐಐಟಿ ಕಾರ್ಖಾನೆ' ಎಂದೇ ಪ್ರಸಿದ್ಧಿಯಾಗಿರುವ ಭಾರತದ ಈ ಪುಟ್ಟ ಹಳ್ಳಿ; ಕಾರಣವೇನು ಗೊತ್ತಾ?
Patwa Toli
ಅಕ್ಷತಾ ವರ್ಕಾಡಿ
|

Updated on:Apr 22, 2025 | 2:44 PM

Share

ಬಿಹಾರದ ಒಂದು ಹಳ್ಳಿಯು ‘ಐಐಟಿ ಕಾರ್ಖಾನೆ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಏಕೆಂದರೆ ಇಲ್ಲಿಯವರೆಗೆ, ಈ ಹಳ್ಳಿಯಿಂದ ನೂರಾರು ಎಂಜಿನಿಯರ್‌ಗಳು ಹೊರಬಂದಿದ್ದಾರೆ. ಪ್ರತಿ ವರ್ಷ ಇಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಈ ಹಳ್ಳಿಯ ಸಾವಿರಾರು ಮಕ್ಕಳು ಉತ್ತೀರ್ಣರಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ವರ್ಷ ಈ ಹಳ್ಳಿಯ 40 ಮಕ್ಕಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟಕ್ಕೂ ಈ ಗ್ರಾಮದ ಹೆಸರು ‘ಪಟ್ವಾ ಟೋಲಿ’.

ಬಿಹಾರದ ಗಯಾ ಜಿಲ್ಲೆಯಲ್ಲಿ ಪಟ್ವಾ ಟೋಲಿ ಎಂದು ಕರೆಯಲ್ಪಡುವ ನೇಕಾರರ ವಸಾಹತು ಇದೆ. 1991 ರಿಂದ ಈ ಪ್ರದೇಶದಿಂದ ನೂರಾರು ಎಂಜಿನಿಯರ್‌ಗಳು ಹೊರಹೊಮ್ಮಿದ್ದಾರೆ. ಹೌದು, ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಏಪ್ರಿಲ್ 19 ರಂದು ಘೋಷಿಸಲಾಗಿದೆ. ಜೆಇಇ ಮೇನ್ಸ್‌ನಲ್ಲಿ ಅರ್ಹತೆ ಪಡೆದ ಮಕ್ಕಳನ್ನು ಗ್ರಾಮದ ಜನರು ಒಟ್ಟುಗೂಡಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಈ ಗ್ರಾಮ ಕಳೆದ 25 ವರ್ಷಗಳಲ್ಲಿ ದೇಶಕ್ಕೆ ಅನೇಕ ಐಐಟಿ ತಜ್ಞರನ್ನು ನೀಡಿದೆ.

ಎಲ್ಲಿಂದ ಆರಂಭವಾಯಿತು?

1991 ರಲ್ಲಿ ಐಐಟಿ ಪಾಸ್ ಮಾಡಿದ ಪಟ್ವಾ ಗ್ಯಾಂಗ್‌ನಲ್ಲಿ ಜಿತೇಂದ್ರ ಪಟ್ವಾ ಮೊದಲಿಗರು. ಅವರು ಐಐಟಿಯಲ್ಲಿ ಪ್ರವೇಶ ಪಡೆದ ಹಳ್ಳಿಯ ಮೊದಲ ವಿದ್ಯಾರ್ಥಿಯಾದರು. ಅವರ ಈ ಸಾಧನೆಯ ನಂತರ, ಇಡೀ ಪ್ರದೇಶದ ಜನರು ಅವರಿಂದ ಪ್ರೇರಿತರಾದರು ಮತ್ತು ಕ್ರಮೇಣ ಇಡೀ ಗ್ರಾಮದಲ್ಲಿ ಎಂಜಿನಿಯರಿಂಗ್ ವಾತಾವರಣ ಸೃಷ್ಟಿಯಾಯಿತು. ಈಗ ಈ ಹಳ್ಳಿಯ ಹೆಚ್ಚಿನ ಮಕ್ಕಳ ಕನಸು ಯಶಸ್ವಿ ಎಂಜಿನಿಯರ್ ಆಗುವುದು. ಪ್ರತಿ ವರ್ಷ ಈ ಗ್ರಾಮದ ಅನೇಕ ವಿದ್ಯಾರ್ಥಿಗಳು ಜೆಇಇ ಉತ್ತೀರ್ಣರಾಗುತ್ತಾರೆ. ಈ ಹಳ್ಳಿಯಲ್ಲಿ ಬಹುತೇಕ ಪ್ರತಿಯೊಂದು ಮನೆಯಲ್ಲೂ ಒಬ್ಬ ಎಂಜಿನಿಯರ್ ಇರುತ್ತಾನೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ದಿನಗೂಲಿ ಮಾಡುತ್ತಿದ್ದ ವ್ಯಕ್ತಿ ಇಂದು ನ್ಯಾಯಾಧೀಶ; ಮೊದಲ ಪ್ರಯತ್ನದಲ್ಲೇ 26 ನೇ ರ‍್ಯಾಂಕ್

‘ವೃಕ್ಷ’ ಎಂಬ ಸರ್ಕಾರೇತರ ಸಂಸ್ಥೆ ಈ ಗ್ರಾಮದಲ್ಲಿ ಶಿಕ್ಷಣದ ಚಿತ್ರಣವನ್ನು ಬದಲಾಯಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. 2013 ರಲ್ಲಿ, ಈ ಸಂಸ್ಥೆಯು ಈ ಪ್ರದೇಶದ ಮಕ್ಕಳನ್ನು ಐಐಟಿಗೆ ಉಚಿತವಾಗಿ ಸಿದ್ಧಪಡಿಸುವ ಕೆಲಸವನ್ನು ಪ್ರಾರಂಭಿಸಿತು. ಇದರಿಂದಾಗಿ, ದುಬಾರಿ ಶುಲ್ಕವನ್ನು ಭರಿಸಲಾಗದ ಈ ಪ್ರದೇಶದ ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಕನಸನ್ನು ನನಸು ಮಾಡಲು ಶುರು ಮಾಡಿದರು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Tue, 22 April 25

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್