Success Story: ದಿನಗೂಲಿ ಮಾಡುತ್ತಿದ್ದ ವ್ಯಕ್ತಿ ಇಂದು ನ್ಯಾಯಾಧೀಶ; ಮೊದಲ ಪ್ರಯತ್ನದಲ್ಲೇ 26 ನೇ ರ್ಯಾಂಕ್
ಮಹಾರಾಷ್ಟ್ರದ ಅನಿಕೇತ್ ಕೊಕರೆ ದಿನಗೂಲಿ ಕೆಲಸ ಮಾಡುತ್ತಾ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶರಾಗಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಅವರು, ಕಷ್ಟಪಟ್ಟು ಓದಿ, ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಈ ಸಾಧನೆ ಮಾಡಿದ್ದಾರೆ. ಅವರ ಯಶಸ್ಸು ಯುವಪೀಳಿಗೆಗೆ ಪ್ರೇರಣೆಯಾಗಿದೆ.

ಜೀವನದ ಸಾಕಷ್ಟು ಅಡೆತಡೆಗಳನ್ನು ಮೆಟ್ಟಿನಿಂತು ಮುನ್ನುಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇದಕ್ಕೊಂದು ಉತ್ತಮ ನಿದರ್ಶನ ಅನಿಕೇತ್ ಕೊಕರೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಲಾಮ್ನೂರಿ ಎಂಬ ಸಣ್ಣ ಹಳ್ಳಿಯ ನಿವಾಸಿ 28 ವರ್ಷದ ಅನಿಕೇತ್ ದಿನಗೂಲಿ ಕೆಲಸ ಮಾಡುತ್ತಲೇ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ನ್ಯಾಯಾಂಗ ಸೇವಾ ಪರೀಕ್ಷೆ ಬರೆದು 26 ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶರಾಗಿದ್ದಾರೆ. ಈ ಮೂಲಕ ಇವರು ಯುವಪೀಳಿಗೆಗೆ ಮಾದರಿಯಾಗಿದ್ದಾರೆ.
ಕುತೂಹಲಕಾರಿ ವಿಷಯವೆಂದರೆ ಅನಿಕೇತ್ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಸಾಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅನಿಕೇತ್ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಸಿವಿಲ್ ನ್ಯಾಯಾಧೀಶ ಜೂನಿಯರ್ ಮಟ್ಟ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪರೀಕ್ಷೆ 2022 ರಲ್ಲಿ ಪರೀಕ್ಷೆ ಬರೆದಿದ್ದರು, ಅದರ ಅಂತಿಮ ಫಲಿತಾಂಶವನ್ನು ಮಾರ್ಚ್ 29, 2025 ರಂದು ಬಿಡುಗಡೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಅನಿಕೇತ್ಗೆ 26 ನೇ ರ್ಯಾಂಕ್ ಬಂದಿದ್ದು,ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ದಿನಗೂಲಿ ಕಾರ್ಮಿಕರಾಗಿ ಕೆಲಸ:
ವರದಿಗಳ ಪ್ರಕಾರ, ಅನಿಕೇತ್ ಸರಳ ರೈತ ಕುಟುಂಬದಿಂದ ಬಂದವರು. ಅವರ ತಾಯಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಕುಟುಂಬದಲ್ಲಿ ಏಕೈಕ ಆದಾಯ ಗಳಿಸುವ ಸದಸ್ಯೆಯಾಗಿದ್ದರಿಂದ ಕುಟುಂಬದ ಆದಾಯ ಸೀಮಿತವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅನಿಕೇತ್ ತನ್ನ ಶೈಕ್ಷಣಿಕ ವೆಚ್ಚವನ್ನು ಪೂರೈಸಲು ದಿನಗೂಲಿ ಕಾರ್ಮಿಕನಾಗಿಯೂ ಕೆಲಸ ಮಾಡಬೇಕಾಯಿತು. ಆದಾಗ್ಯೂ, ಅವರು ಹೇಗೋ ಅಖಾರ ಬಾಲಾಪುರ ಜಿಲ್ಲಾ ಪರಿಷತ್ ಶಾಲೆಯಿಂದ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ನಂತರ, ಕಾನೂನು ಅಧ್ಯಯನಕ್ಕಾಗಿ ನಾಂದೇಡ್ನ ನಾರಾಯಣರಾವ್ ಚವಾಣ್ ಕಾನೂನು ಕಾಲೇಜಿಗೆ ಹೋದರು. ಅವರು ಈ ಕಾಲೇಜಿನಿಂದ ಎಲ್ಎಲ್ಬಿ ಮತ್ತು ಎಲ್ಎಲ್ಎಂ ಪದವಿಗಳನ್ನು ಪಡೆದರು.
ಇದನ್ನೂ ಓದಿ: ಗ್ಲಾಮರ್ ಜಗತ್ತಿನಲ್ಲಿ ಮಿಂಚಿದ್ದ ಮಾಜಿ ಮಿಸ್ ಇಂಡಿಯಾ ಇಂದು ಭಾರತೀಯ ಸೇನಾ ಅಧಿಕಾರಿ
ಬೆಳಿಗ್ಗೆಯಿಂದ ಸಂಜೆಯವರೆಗೆ ಅಧ್ಯಯನ:
ಎಲ್ಎಲ್ಎಂ ಮಾಡಿದ ನಂತರ, ಅವರು 2021 ರಲ್ಲಿ ಪುಣೆಗೆ ತೆರಳಿದರು ಮತ್ತು ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಪ್ರಾರಂಭಿಸಿದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಧ್ಯಯನ ಮಾಡುತ್ತಿದ್ದರು. ಏತನ್ಮಧ್ಯೆ, 2022 ರಲ್ಲಿ ಮಹಾರಾಷ್ಟ್ರ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕಟಣೆ ಬಂದಾಗ, ಅವರು ಫಾರ್ಮ್ ಅನ್ನು ಸಹ ಭರ್ತಿ ಮಾಡಿ ಕಷ್ಟಪಟ್ಟು ಕೆಲಸ ಮಾಡಿ ಪ್ರಿಲಿಮ್ಸ್ನಲ್ಲಿ ಉತ್ತೀರ್ಣರಾದರು. ಮುಖ್ಯ ಪರೀಕ್ಷೆಗೆ ತಯಾರಿ ನಡೆಸಲು ಪುಸ್ತಕಗಳನ್ನು ಖರೀದಿಸಲು ಅವನ ಬಳಿ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಸ್ನೇಹಿತರು ಅವನಿಗೆ ಸಹಾಯ ಮಾಡಿದರು ಮತ್ತು ಆಹಾರದ ವೆಚ್ಚವನ್ನು ಸಹ ಭರಿಸಿದ್ದರು.
ಕೊನೆಗೆ ಮುಖ್ಯ ಪರೀಕ್ಷೆಯಲ್ಲಿ ಮತ್ತು ನಂತರ ಸಂದರ್ಶನದಲ್ಲೂ ಉತ್ತೀರ್ಣನಾಗಿದ್ದಾರೆ. ತನ್ನ ಯಶಸ್ಸಿಗೆ ತನ್ನ ತಾಯಿ ಹಾಗೂ ಜೀವನದ ಪ್ರತಿಯೊಂದು ತಿರುವಿನಲ್ಲಿಯೂ ಬೆಂಬಲ ನೀಡಿದ ಮತ್ತು ಕಾಲಕಾಲಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಸ್ನೇಹಿತರಿಗೆ ಸಲ್ಲುತ್ತದೆ ಎಂದು ಅನಿಕೇತ್ ಹೇಳಿದ್ದಾರೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Sat, 12 April 25