AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ತೊಳೆಯುವ ಸರಿಯಾದ ವಿಧಾನ? ಸೋಂಕು ತಡೆಯಲು ಈ ನಿಯಮಗಳನ್ನು ಪಾಲಿಸಿ

ಕೈ ತೊಳೆಯುವುದು ಅತ್ಯಂತ ಸರಳವಾದರೂ ಅತ್ಯಂತ ಪರಿಣಾಮಕಾರಿ ಆರೋಗ್ಯಕರ ಅಭ್ಯಾಸವಾಗಿದೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ಕೈ ತೊಳೆಯುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ಮಾತ್ರವಲ್ಲ, ನಿಮ್ಮ ಕುಟುಂಬದವರನ್ನೂ ಸುರಕ್ಷಿತವಾಗಿಡಬಹುದು. ಆದ್ದರಿಂದ ಕೈಗಳ ಸ್ವಚ್ಛತೆಯನ್ನು ಪ್ರತಿದಿನದ ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಿಕೊಳ್ಳಿ. ಆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕೈ ತೊಳೆಯುವ ಸರಿಯಾದ ವಿಧಾನ? ಸೋಂಕು ತಡೆಯಲು ಈ ನಿಯಮಗಳನ್ನು ಪಾಲಿಸಿ
Hand Washing BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 31, 2026 | 11:11 PM

Share

ಮುಖ್ಯಾಂಶಗಳು

  • ಕೈಗಳ ಸ್ವಚ್ಛತೆ ಜೀವ ಉಳಿಸಬಹುದು! CDC ನೀಡಿರುವ ಪ್ರಮುಖ ಸಲಹೆಗಳು
  • ಕೈ ತೊಳೆಯದಿದ್ದರೆ ಯಾವ ರೋಗಗಳು ಬರುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ
  • ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ಯಾಕೆ ಕಲಿಸಬೇಕು?

ದಿನನಿತ್ಯದ ಜೀವನದಲ್ಲಿ ಕೈಗಳು ಅತ್ಯಂತ ಹೆಚ್ಚು ಬಳಸುವ ದೇಹದ ಭಾಗಗಳಲ್ಲಿ ಒಂದಾಗಿದೆ. ಮೊಬೈಲ್ ಫೋನ್ ಬಳಸುವುದು, ಹಣದ ವ್ಯವಹಾರ ಮಾಡುವುದು, ಬಾಗಿಲಿನ ಹ್ಯಾಂಡಲ್ ಹಿಡಿಯುವುದು, ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳನ್ನು ಸ್ಪರ್ಶಿಸುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಕೈಗಳು ವಿವಿಧ ಮೇಲ್ಮೈಗಳ ಸಂಪರ್ಕಕ್ಕೆ ಬರುತ್ತವೆ. ಈ ವೇಳೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಇತರ ಸೂಕ್ಷ್ಮಜೀವಿಗಳು ಕೈಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಕಲುಷಿತ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ ಅಥವಾ ಕೈ ತೊಳೆಯದೇ ಆಹಾರ ಸೇವಿಸಿದರೆ, ಈ ಸೂಕ್ಷ್ಮಜೀವಿಗಳು ದೇಹದೊಳಗೆ ಪ್ರವೇಶಿಸಿ ಶೀತ, ಜ್ವರ, ಫ್ಲೂ, ಅತಿಸಾರ (ಡಯೇರಿಯಾ), ಹೊಟ್ಟೆಯ ಸೋಂಕು ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಕೈ ತೊಳೆಯುವುದು ಆರೋಗ್ಯಕ್ಕೆ ಏಕೆ ಅತ್ಯಗತ್ಯ?

ಸಾಮಾನ್ಯವಾಗಿ ಕೈ ತೊಳೆಯುವುದು ಸಣ್ಣ ಅಭ್ಯಾಸವೆನಿಸಿದರೂ, ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಸರಿಯಾದ ರೀತಿಯಲ್ಲಿ ಕೈ ತೊಳೆಯುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಬಹುದು. ವಿಶೇಷವಾಗಿ ಮಕ್ಕಳಲ್ಲಿ, ವೃದ್ಧರಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೈಗಳ ಸ್ವಚ್ಛತೆ ಜೀವ ರಕ್ಷಕ ಅಭ್ಯಾಸವಾಗಬಹುದು.

ಕೈ ತೊಳೆಯುವ ಸರಿಯಾದ ವಿಧಾನ ಯಾವುದು?

CDC ಮಾರ್ಗಸೂಚಿಗಳ ಪ್ರಕಾರ ಕೈ ತೊಳೆಯುವ ವಿಧಾನ ಹೀಗಿದೆ:

  • ಮೊದಲು ಸ್ವಚ್ಛವಾದ ಹರಿಯುವ ನೀರಿನಲ್ಲಿ ಕೈಗಳನ್ನು ಒದ್ದೆ ಮಾಡಿಕೊಳ್ಳಿ.
  • ನಂತರ ಸಾಬೂನು ಹಚ್ಚಿ.
  • ಎರಡೂ ಅಂಗೈಗಳು, ಕೈಗಳ ಹಿಂಭಾಗ, ಬೆರಳುಗಳ ಮಧ್ಯಭಾಗ, ಹೆಬ್ಬೆರಳು, ಉಗುರುಗಳ ಕೆಳಭಾಗ ಸೇರಿದಂತೆ ಎಲ್ಲಾ
  • ಭಾಗಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ.
  • ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಿರಿ.
  • ನಂತರ ಹರಿಯುವ ನೀರಿನಲ್ಲಿ ಸಾಬೂನನ್ನು ಸಂಪೂರ್ಣವಾಗಿ ತೊಳೆಯಿರಿ.
  • ಸ್ವಚ್ಛವಾದ ಟವೆಲ್ ಅಥವಾ ಏರ್ ಡ್ರೈಯರ್ ಬಳಸಿ ಕೈಗಳನ್ನು ಒಣಗಿಸಿಕೊಳ್ಳಿ.

ಸಾಬೂನು ಇಲ್ಲದಿದ್ದರೆ ಏನು ಮಾಡಬೇಕು?

ಸಾಮಾನ್ಯವಾಗಿ ಸಾಬೂನು ಮತ್ತು ನೀರು ಲಭ್ಯವಿಲ್ಲದಿದ್ದರೆ ಕನಿಷ್ಠ 60% ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಬಹುದು. ಆದರೆ ಕೈಗಳ ಮೇಲೆ ಗೋಚರಿಸುವ ಮಣ್ಣು, ಎಣ್ಣೆ ಅಥವಾ ಕೊಳಕು ಇದ್ದರೆ ಸ್ಯಾನಿಟೈಸರ್ ಸಾಕಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದೇ ಅತ್ಯುತ್ತಮ ವಿಧಾನ. ಈ ಸಂದರ್ಭಗಳಲ್ಲಿ ಕೈ ತೊಳೆಯುವುದು ಕಡ್ಡಾಯ

ಇದನ್ನೂ ಓದಿ: ಪಿರಿಯಡ್ಸ್ ವೇಳೆ ಸ್ಯಾನಿಟರಿ ಪ್ಯಾಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಗೈನಕಾಲಜಿಸ್ಟ್ ಸಲಹೆ

ಈ ಸಂದರ್ಭಗಳಲ್ಲಿ ಕೈ ತೊಳೆಯುವುದನ್ನು ಎಂದಿಗೂ ಮರೆಯಬಾರದು:

  • ಅಡುಗೆ ಮಾಡುವ ಮೊದಲು ಮತ್ತು ನಂತರ
  • ಊಟ ಮಾಡುವ ಮೊದಲು
  • ಶೌಚಾಲಯ ಬಳಸಿದ ನಂತರ
  • ಮಗುವಿನ ಡಯಾಪರ್ ಬದಲಿಸಿದ ನಂತರ
  • ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಆರೈಕೆಗೆ ಮೊದಲು ಹಾಗೂ ನಂತರ
  • ಕೆಮ್ಮಿದ ಅಥವಾ ಸೀನಿದ ನಂತರ
  • ಮೂಗು ಶುಚಿಗೊಳಿಸಿದ ನಂತರ
  • ಕಸ ಮುಟ್ಟಿದ ನಂತರ
  • ಸಾಕುಪ್ರಾಣಿಗಳು ಅಥವಾ ಅವುಗಳ ಆಹಾರವನ್ನು ಮುಟ್ಟಿದ ನಂತರ
  • ಗಾಯಕ್ಕೆ ಡ್ರೆಸ್ಸಿಂಗ್ ಮಾಡುವ ಮೊದಲು ಮತ್ತು ನಂತರ
  • ಸಾರ್ವಜನಿಕ ಸ್ಥಳಗಳಿಂದ ಮನೆಗೆ ಬಂದ ತಕ್ಷಣ

ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ಕಲಿಸುವುದು ಏಕೆ ಮುಖ್ಯ?

ಶಾಲೆಗೆ ಹೋಗುವ ಮಕ್ಕಳು ಆಟದ ಮೈದಾನ, ತರಗತಿ ಕೊಠಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಅವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ಸರಿಯಾದ ಕೈ ತೊಳೆಯುವ ಅಭ್ಯಾಸ ಬೆಳೆಸಿದರೆ, ಶೀತ, ಜ್ವರ, ಹೊಟ್ಟೆ ಸೋಂಕು ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಹಾಯವಾಗುತ್ತದೆ.

ಕೈ ತೊಳೆಯುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳು:

  • ಕೇವಲ ನೀರಿನಿಂದ ಕೈ ತೊಳೆಯುವುದು
  • 20 ಸೆಕೆಂಡುಗಳಿಗಿಂತ ಕಡಿಮೆ ಸಮಯ ಕೈ ತೊಳೆಯುವುದು
  • ಉಗುರುಗಳ ಕೆಳಭಾಗವನ್ನು ಸ್ವಚ್ಛಗೊಳಿಸದಿರುವುದು
  • ಕೈ ತೊಳೆದ ನಂತರ ಕೊಳಕು ಟವೆಲ್ ಬಳಸುವುದು
  • ಸ್ಯಾನಿಟೈಸರ್ ಹಚ್ಚಿದ ತಕ್ಷಣ ಕೈ ತೊಳೆಯುವುದು
  • ಕೈಗಳನ್ನು ಸಂಪೂರ್ಣ ಒಣಗಿಸದೆ ಆಹಾರ ಮುಟ್ಟುವುದು

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಸೋಂಕಿನ ಲಕ್ಷಣಗಳು ಅಥವಾ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?