ಭಾನುವಾರ ‘ಆದಿಪುರುಷ್’ ಸಿನಿಮಾ ಗಳಿಕೆಯಲ್ಲಿ ಏರಿಕೆ; ಟಿಕೆಟ್ ದರ ಈಗ 112 ರೂಪಾಯಿ

ಭಾನುವಾರ (ಜೂನ್ 25) ‘ಆದಿಪುರುಷ್’ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡಿದ್ದು, ಸಿನಿಮಾ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 274 ಕೋಟಿ ರೂಪಾಯಿ ಆಗಿದೆ.

ಭಾನುವಾರ ‘ಆದಿಪುರುಷ್’ ಸಿನಿಮಾ ಗಳಿಕೆಯಲ್ಲಿ ಏರಿಕೆ; ಟಿಕೆಟ್ ದರ ಈಗ 112 ರೂಪಾಯಿ
ಪ್ರಭಾಸ್​

Updated on: Jun 26, 2023 | 12:45 PM

ದೊಡ್ಡ ಬಜೆಟ್​ ಚಿತ್ರಗಳು ರಿಲೀಸ್ ಆಗಿ ಕೆಲ ವಾರ ಕಳೆದ ಬಳಿಕ 100 ರೂಪಾಯಿ, 112 ರೂಪಾಯಿ ಟಿಕೆಟ್ ದರ ನಿಗದಿ ಮಾಡುವ ಟ್ರೆಂಡ್ ಜೋರಾಗಿದೆ. ಕಳೆದ ವರ್ಷ ರಿಲೀಸ್ ಆದ ‘ಬ್ರಹ್ಮಾಸ್ತ್ರ’ (Brahmastra Movie) ಚಿತ್ರಕ್ಕೆ 100 ರೂಪಾಯಿ ಟಿಕೆಟ್ ದರದ ಆಫರ್ ಸಾಕಷ್ಟು ಸಹಕಾರಿ ಆಗಿತ್ತು. ಈಗ ‘ಆದಿಪುರುಷ್’ ಚಿತ್ರ (Adipurush Movie) ಕೂಡ ಇದೇ ತಂತ್ರ ರೂಪಿಸಿದೆ. ಹಾಗಂತ ಒಂದು ದಿನಕ್ಕೆ ಮಾತ್ರ ಈ ಆಫರ್ ಸೀಮಿತ ಅಲ್ಲ. ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ಅಷ್ಟೂ ದಿನ ಈ ಆಫರ್​ ಲಭ್ಯವಿರಲಿದೆ ಅನ್ನೋದು ವಿಶೇಷ.

ಭಾನುವಾರ (ಜೂನ್ 25) ‘ಆದಿಪುರುಷ್’ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡಿದ್ದು, ಸಿನಿಮಾ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 274 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಭಾರತದಲ್ಲಿ ಈ ಸಿನಿಮಾ ಶೀಘ್ರವೇ 300 ಕೋಟಿ ರೂಪಾಯಿ ಗಳಿಕೆ ಮಾಡಲಿದೆ. ವಿಶ್ವಾದ್ಯಂತ ಚಿತ್ರ ಈಗಾಗಲೇ 400+ ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಟಿಕೆಟ್ ದರ ಇಳಿಸುವ ನಿರ್ಧಾರಕ್ಕೆ ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾ ಪ್ರಭಾವ ಹೆಚ್ಚಿದೆ. ಸಿನಿಮಾ ಚೆನ್ನಾಗಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಬಾಯ್ಮಾತಿನ ಪ್ರಚಾರ ಸಿಗುತ್ತದೆ. ಸಿನಿಮಾ ಉತ್ತಮವಾಗಿರದಿದ್ದರೂ ಕೆಟ್ಟ ವಿಮರ್ಶೆ ಪಡೆದು ಸಿನಿಮಾ ಸೋಲುತ್ತದೆ. ‘ಆದಿಪುರುಷ್’ ಸಾಕಷ್ಟು ಟ್ರೋಲ್ ಆದ ಕಾರಣ ಒಂದಷ್ಟು ಮಂದಿ ಸಿನಿಮಾ ನೋಡಲೇಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇವರನ್ನು ಸೆಳೆಯುವ ನಿಟ್ಟಿನಲ್ಲಿ ಮಲ್ಟಿಪ್ಲೆಕ್ಸ್​ಗಳಲ್ಲಿ 112 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಈ ದರ ನೋಡಿ ಒಂದಷ್ಟು ಮಂದಿ ಬರಬಹುದು ಎನ್ನುವ ಆಲೋಚನೆ ಚಿತ್ರತಂಡದ್ದು.

ಇದನ್ನೂ ಓದಿ: ‘ಆದಿಪುರುಷ್​’ ಕಲೆಕ್ಷನ್​ನಲ್ಲಿ ಸ್ವಲ್ಪ ಚೇತರಿಕೆ; ಮಳೆ ನಡುವೆಯೂ ಹಲವು ಕಡೆಗಳಲ್ಲಿ ಹೌಸ್​ಫುಲ್​

ರಾಮಾಯಣಕ್ಕೆ ಕಾಲ್ಪನಿಕ ಕಥೆಯ ಟಚ್ ನೀಡಲಾಗಿದೆ. ಪಾತ್ರಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ರೀತಿ ಆದಾಗ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಅಂಥ ಸಂದರ್ಭದಲ್ಲಿ ಎಷ್ಟೇ ಆಫರ್ ನೀಡಿದರು ಜನರು ಚಿತ್ರ ನೋಡುವುದಿಲ್ಲ. ಕೆಲವೇ ದಿನಗಳ ಹಿಂದೆ ಚಿತ್ರದ ದರವನ್ನು 150 ರೂಪಾಯಿಗೆ ನಿಗದಿ ಮಾಡಲಾಗಿತ್ತು. ಆದರೂ ಜನರು ಸಿನಿಮಾ ನೋಡಿರಲಿಲ್ಲ. ಈಗ 112 ರೂಪಾಯಿ ಟಿಕೆಟ್ ಆಫರ್​ಗೆ ಪ್ರೇಕ್ಷಕರ ಆಗಮನ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ‘ತಾನಾಜಿ’ ಖ್ಯಾತಿಯ ಓಂ ರಾವತ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us