ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಟಾಲಿವುಡ್ ನಟ ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿ ತಮ್ಮದೇ ಆದ 'ಅಲ್ಲು ಸಿನಿಮಾಸ್' ಮಲ್ಟಿಪ್ಲೆಕ್ಸ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇದನ್ನು ಉದ್ಘಾಟಿಸಿ, ಅಲ್ಲು ಅರ್ಜುನ್‌ರನ್ನು ಶ್ಲಾಘಿಸಿದರು. ಸಿಎಂ ಟಾಲಿವುಡ್ ಹಾಲಿವುಡ್‌ಗೆ ಪೈಪೋಟಿ ನೀಡಬೇಕು, ಬಾಲಿವುಡ್ ಅಥವಾ ಇತರ ರಾಜ್ಯಗಳೊಂದಿಗೆ ಅಲ್ಲ ಎಂದು ಆಶಿಸಿದರು.

ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ
ಅಲ್ಲು ಸಿನಿಮಾಸ್

Updated on: Mar 13, 2026 | 7:35 AM

ಟಾಲಿವುಡ್ ಸ್ಟಾರ್ ಹೀರೋಗಳು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್​​ಗಳನ್ನು ಹೊಂದುತ್ತಿದ್ದಾರೆ. ವಿಜಯ್ ದೇವರಕೊಂಡ, ಮಹೇಶ್ ಬಾಬು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಈಗ ಅಲ್ಲು ಅರ್ಜುನ್ (Allu Arjun) ಕೂಡ ಈ ಉದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟಿದ್ದು, ಹೈದರಾಬಾದ್​ ಅಲ್ಲಿ ಅಲ್ಲು ಸಿನಿಮಾಸ್ ಆರಂಭಿಸಿದ್ದಾರೆ. ಗುರುವಾರ (ಮಾರ್ಚ್ 12) ಇದರ ಉದ್ಘಾಟನೆ ಆಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಅಲ್ಲು ಅರ್ಜುನ್ ಅವರನ್ನು ಸಿಎಂ ಹೊಗಳಿದ್ದಾರೆ.

‘ಅಲ್ಲು ಅರ್ಜುನ್ ಭವಿಷ್ಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಮಿಂಚಬೇಕು. ತೆಲುಗು ನಟರ ಪ್ರತಿಭೆ ಅಲ್ಲಿಗೂ ತಲುಪಬೇಕು. ಇಲ್ಲಿಯವರೆಗೆ, ನಾವು ನಮ್ಮ ತೆಲುಗು ಸಿನಿಮಾಗಳನ್ನು ಬಾಲಿವುಡ್‌ನೊಂದಿಗೆ ಹೋಲಿಸುತ್ತಿದ್ದುದು ಕಲೆಕ್ಷನ್ ವಿಷಯದಲ್ಲಿ ಮಾತ್ರ’ ಎಂದು ರೇವಂತ್ ರೆಡ್ಡಿ ಹೇಳಿದರು.

ವರ್ಷಗಳು ಕಳೆದಂತೆ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನುಮುಂದೆ ಎಲ್ಲಾ ಭಾಷೆಯ ಸಿನಿಮಾಗಳು, ಎಲ್ಲರನ್ನೂ ತಲುಪುತ್ತವೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಕಥೆ ಚೆನ್ನಾಗಿದ್ದರೆ ಯಾವುದೇ ದೇಶದ ಜನ ಇರಲಿ, ಯಾವುದೇ ರಾಜ್ಯದ ಜನ ಇರಲಿ ಸಿನಿಮಾನ ನೋಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

‘ಹಾಲಿವುಡ್‌ನೊಂದಿಗೆ ಟಾಲಿವುಡ್​ ಸ್ಪರ್ಧಿಬೇಕೆ ಹೊರತು, ನೆರೆಯ ರಾಜ್ಯಗಳು ಅಥವಾ ಬಾಲಿವುಡ್‌ನೊಂದಿಗೆ ಇನ್ನು ಮುಂದೆ ಸ್ಪರ್ಧಿಸಬಾರದು’ ಎಂದು ಅವರು ಹೇಳಿದ್ದಾರೆ. ಚಿತ್ರರಂಗಕ್ಕೆ ಸಂಪೂರ್ಣ ಬೆಂಬಲ ನೀಡೋದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

ಅಲ್ಲು ಅರ್ಜುನ್ ಅವರು ವಿವಿಧ ಉದ್ಯಮಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ತಮ್ಮದೇ ಕ್ಷೇತ್ರದಲ್ಲೂ ಅವರು ಬಿಸ್ನೆಸ್ ಆರಂಭಿಸಿದ್ದಾರೆ. ಅಲ್ಲು ಸಿನಿಮಾಸ್ ನಿರ್ಮಾಣ ಮಾಡುವ ಮೂಲಕ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಅವರು AA22xA6 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅಟ್ಲೀ ಇದರ ನಿರ್ದೇಶಕ. ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Fri, 13 March 26

Follow Us