Allu Arjun
ನಿರ್ಮಾಪಕ ಅಲ್ಲು ಅರವಿಂದ್ ಪುತ್ರ, ತೆಲುಗು ಚಿತ್ರರಂಗದ ಹಿರಿಯ ನಟ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ ಅಲ್ಲು ಅರ್ಜುನ್ ಜನಿಸಿದ್ದು ಏಪ್ರಿಲ್ 8, 1982. ಕೇವಲ ಮೂರು ವರ್ಷದ ಮಗುವಿದ್ದಾಗಲೇ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್, ಕಮಲ್ ಹಾಸನ್ರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಸ್ವಾತಿ ಮುತ್ಯಂ’ನಲ್ಲಿಯೂ ಬಾಲನಟನಾಗಿ ನಟಿಸಿದ್ದರು. ಚಿರಂಜೀವಿಯ ‘ಡ್ಯಾಡಿ’ ಸಿನಿಮಾದಲ್ಲಿನ ಸಣ್ಣ ಪಾತ್ರ ಅಲ್ಲು ಅರ್ಜುನ್ಗೆ ಗುರುತು ತಂದುಕೊಟ್ಟಿತು. ಬಳಿಕ ‘ಗಂಗೋತ್ರಿ’ ಸಿನಿಮಾ ಮೂಲಕ ನಾಯಕ ನಟನಾದರು. ಆದರೆ ಅವರಿಗೆ ಭಾರಿ ದೊಡ್ಡ ಹಿಟ್ ನೀಡಿ, ನಾಯಕನಾಗಿ ನೆಲೆ ನಿಲ್ಲುವಂತೆ ಮಾಡಿದ್ದು ‘ಆರ್ಯ’ ಸಿನಿಮಾ. ಈವರೆಗೆ 20 ಸಿನಿಮಾಗಳಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ನಟಿಸಿದ್ದಾರೆ.
ಇನ್ನೂ ಹೆಚ್ಚು ಓದಿ‘ಟ್ರೋಲ್ ಸಂಸ್ಕೃತಿಗೆ ಗುಡ್ಬೈ ಹೇಳಿ’; ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಖಡಕ್ ಸಂದೇಶ
ಹೈದರಾಬಾದ್ನಲ್ಲಿ ನಡೆದ ಅಭಿಮಾನಿ ಸಂಘದ ಸಭೆಯಲ್ಲಿ ನಟ ಅಲ್ಲು ಅರ್ಜುನ್ ಪಾಲ್ಗೊಂಡು ಮಹತ್ವದ ಕಿವಿಮಾತು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇತರರನ್ನು ಟ್ರೋಲ್ ಮಾಡಿ ಸಮಯ, ಹಣ ಹಾಗೂ ಶಕ್ತಿ ಹಾಳು ಮಾಡಿಕೊಳ್ಳಬೇಡಿ. ಆ ನೆಗೆಟಿವ್ ಎನರ್ಜಿಯನ್ನು ನಿಮ್ಮ ಸ್ವಂತ ಬೆಳವಣಿಗೆಗೆ ಬಳಸಿ ಎಂದು ಕರೆ ನೀಡುವ ಮೂಲಕ ಬನ್ನಿ ಗಮನ ಸೆಳೆದಿದ್ದಾರೆ.
- Rajesh Duggumane
- Updated on: Jul 29, 2026
- 7:27 am
ಅಭಿಮಾನಿಗಳಿಗೆ ಆಪತ್ಬಾಂಧವನಾದ ಅಲ್ಲು ಅರ್ಜುನ್; 900 ಫ್ಯಾನ್ಸ್ಗೆ ಇನ್ಶೂರೆನ್ಸ್
ಸ್ಟಾರ್ ನಟ ಅಲ್ಲು ಅರ್ಜುನ್ ಹೈದರಾಬಾದ್ನಲ್ಲಿ ಅಭಿಮಾನಿ ಸಂಘದ ಸದಸ್ಯರನ್ನು ಭೇಟಿಯಾಗಿದ್ದಾರೆ. ಆರು ಗಂಟೆಗಳ ಕಾಲ ನಿಂತೇ ಫೋಟೋ ನೀಡಿದ ನಟ, ಅಭಿಮಾನಿಗಳಿಗೆ ಉಚಿತ ಅಪಘಾತ ವಿಮೆ ಘೋಷಿಸಿದ್ದಾರೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ಹಾಗೂ ಜಿಲ್ಲಾ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ಸಿಗಲಿದ್ದು, ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ.
- Rajesh Duggumane
- Updated on: Jul 29, 2026
- 6:55 am
ಮತ್ತೆ ಒಂದಾಗಲಿದ್ದಾರೆ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ; ಶೀಘ್ರವೇ ಮುಂಬೈನಲ್ಲಿ ‘ರಾಕಾ’ ಶೂಟಿಂಗ್ ಆರಂಭ
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ 'ರಾಕಾ' ಚಿತ್ರದಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಅಟ್ಲಿ ನಿರ್ದೇಶನದ ಈ 700 ಕೋಟಿ ಬೃಹತ್ ಬಜೆಟ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್, ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 2027ರಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
- Rajesh Duggumane
- Updated on: Jun 27, 2026
- 12:35 pm
ವಿಡಿಯೋ ಕಾಲ್ ಮಾಡಿ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಅಲ್ಲು ಅರ್ಜುನ್
ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ತಮ್ಮ ದೊಡ್ಡ ಗುಣದ ಮೂಲಕ ಸುದ್ದಿಯಾಗಿದ್ದಾರೆ. ಮಾರಕ ಕಾಯಿಲೆಯಿಂದ ಬಳಲುತ್ತಿರುವ ಶ್ರದ್ಧಾ ಎಂಬ ಪುಟ್ಟ ಬಾಲಕಿ ಮತ್ತು ತನ್ನ ಆರಾಧ್ಯ ದೈವ ಅಲ್ಲು ಅರ್ಜುನ್ನನ್ನು ಭೇಟಿಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಬಿಡುವು ಮಾಡಿಕೊಂಡ ನಟ, ಆಕೆಗೆ ವಿಡಿಯೋ ಕಾಲ್ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ವಿಡಿಯೋ ಕಾಲ್ನಲ್ಲಿ ಶ್ರದ್ಧಾ ಜೊತೆ ‘ಪುಷ್ಪ’ ಚಿತ್ರದ ಫೇಮಸ್ ಡೈಲಾಗ್ ಹೊಡೆದು ಖುಷಿಪಡಿಸಿದ ಅಲ್ಲು ಅರ್ಜುನ್, ಆಕೆಯನ್ನು ಹೈದರಾಬಾದ್ಗೆ ಆಹ್ವಾನಿಸಿದ್ದಾರೆ.
- Shreelaxmi H
- Updated on: Jun 20, 2026
- 11:22 am
ಧನುಷ್ ನಟನೆಯ ‘ಓಂ’ ಚಿತ್ರದಲ್ಲಿ ‘ಪುಷ್ಪ’ ಸಿನಿಮಾದ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
ಧನುಷ್ ಅವರ ಹೊಸ ಸಿನಿಮಾಗೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಟೀಸರ್ ನೋಡಿದವರಿಗೆ ‘ಪುಷ್ಪ’ ಸಿನಿಮಾ ನೆನಪಾಗಿದೆ. ಈ ಹೋಲಿಕೆಗಳ ಬಗ್ಗೆ ಚಿತ್ರದ ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಪ್ರತಿಕ್ರಿಯಿಸಿದ್ದಾರೆ. ಅಕ್ಟೋಬರ್ 16ರಂದು ಅದ್ಧೂರಿಯಾಗಿ ‘ಓಂ’ ಸಿನಿಮಾ ಬಿಡುಗಡೆ ಆಗಲಿದೆ.
- Madan Kumar
- Updated on: Jun 19, 2026
- 11:02 pm
‘ಪುಷ್ಪ 2’ ಸಂತ್ರಸ್ತನ ಭೇಟಿ ಮಾಡಿದ ಅಲ್ಲು ಕುಟುಂಬ; ಹಲವು ಭರವಸೆ
ಪುಷ್ಪ 2 ಪ್ರೀಮಿಯರ್ನಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಗಾಯಗೊಂಡ ಶ್ರೀತೇಜ್ನ ಮನೆಗೆ ಅಲ್ಲು ಅರ್ಜುನ್ ಕುಟುಂಬ ಭೇಟಿ ನೀಡಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ತಂದೆ ಅಲ್ಲು ಅರವಿಂದ್ ಬಾಲಕನ ಆರೋಗ್ಯ ವಿಚಾರಿಸಿ, ಚಿಕಿತ್ಸೆ, ಶಿಕ್ಷಣಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಶ್ರೀತೇಜ್ಗೆ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದ್ದು, ತಿಂಗಳಿಗೆ ₹1.5 ಲಕ್ಷ ಬಡ್ಡಿ ಸಿಗಲಿದೆ. ಅಲ್ಲು ಅರವಿಂದ್ ಶ್ರೀತೇಜ್ನ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.
- Rajesh Duggumane
- Updated on: May 7, 2026
- 3:15 pm
ಪ್ರೆಗ್ನೆಂಟ್ ಎಂಬ ಕಾರಣಕ್ಕೆ ದೀಪಿಕಾ ಪಡುಕೋಣೆ ಪಾತ್ರಕ್ಕೆ ಕತ್ತರಿ? ‘ರಾಕಾ’ ಚಿತ್ರತಂಡದ ಸ್ಪಷ್ಟನೆ
ನಟಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಎಂಬ ಸುದ್ದಿ ಇತ್ತೀಚೆಗೆ ಹೊರಬಿತ್ತು. 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಅಭಿನಯಿಸುತ್ತಿರುವ ‘ರಾಕಾ’ ಸಿನಿಮಾದ ಬಗ್ಗೆ ಒಂದಷ್ಟು ಗಾಸಿಪ್ ಜೋರಾಗಿದೆ. ಅವುಗಳ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿದೆ.
- Madan Kumar
- Updated on: Apr 23, 2026
- 3:14 pm
100 ಕೋಟಿ ರೂ. ಸುರಿದು ಹೊಸ ಮನೆ ನಿರ್ಮಿಸುತ್ತಿದ್ದಾರೆ ಅಲ್ಲು ಅರ್ಜುನ್; ಹೇಗಿರಲಿದೆ ನಿವಾಸ?
ಅಲ್ಲು ಅರ್ಜುನ್ ಜುಬ್ಲಿ ಹಿಲ್ಸ್ನಲ್ಲಿ 80-100 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಹೊಸ ಮನೆ ನಿರ್ಮಿಸುತ್ತಿದ್ದಾರೆ. 4,000 ಸ್ಕ್ವೇರ್ ಯಾರ್ಡ್ ಜಾಗದಲ್ಲಿ ಮನೆ, ಗಾರ್ಡನ್, ಸ್ವಿಮ್ಮಿಂಗ್ ಪೂಲ್ ಇರಲಿದೆ. ಇದು ಅವರ ಕನಸಿನ ಮನೆ. ಸದ್ಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಚಿರಂಜೀವಿ ಅವರ ಮನೆಯ ಪಕ್ಕದಲ್ಲೇ ಈ ಅದ್ದೂರಿ ನಿವಾಸ ತಲೆ ಎತ್ತುತ್ತಿದೆ.
- Rajesh Duggumane
- Updated on: Apr 23, 2026
- 12:14 pm
ಅಲ್ಲು ಅರ್ಜುನ್ ‘ರಾಕಾ’ ಲುಕ್ ಸಿದ್ಧಪಡಿಸಲು ಪ್ರತಿ ದಿನ 4 ಗಂಟೆ ಮೇಕಪ್
ಅಲ್ಲು ಅರ್ಜುನ್ ನಟನೆಯ ‘ರಾಕಾ’ ಚಿತ್ರವು ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರ ಗೆಟಪ್ ಭಿನ್ನವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಗಿದೆ. ಡಿಫರೆಂಟ್ ಆಗಿರುವ ಈ ಗೆಟಪ್ ಸಲುವಾಗಿ ಅಲ್ಲು ಅರ್ಜುನ್ ಅವರಿಗೆ ಪ್ರತಿದಿನ ಗಂಟೆಗಟ್ಟಲೆ ಮೇಕಪ್ ಮಾಡಲಾಗಿದೆ.
- Madan Kumar
- Updated on: Apr 15, 2026
- 5:07 pm
ಜೂನಿಯರ್ ಎನ್ಟಿಆರ್ ಅಥವಾ ಅಲ್ಲು ಅರ್ಜುನ್? ಜನ್ಮದಿನಕ್ಕೆ ಸಿಗಲಿದೆ ಕ್ಲ್ಯಾರಿಟಿ
ಮೇ 20ರಂದು ಜೂನಿಯರ್ ಎನ್ಟಿಆರ್ ಬರ್ತ್ಡೇ. ಅಂದು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಬಗ್ಗೆ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಅಂದು ಟೀಸರ್ ಕೂಡ ನಿರೀಕ್ಷಿಸಬಹುದು. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಒಂದು ಘೋಷಣೆಗಾಗಿ ಅಭಿಮಾನಿಗಳು ಕಾದಿದ್ದಾರೆ.
- Shreelaxmi H
- Updated on: Apr 15, 2026
- 8:02 am
ಅಲ್ಲು ಅರ್ಜುನ್ ಸಿನಿಮಾ ‘ರಾಕಾ’ ಟೈಟಲ್ ಅರ್ಥವೇನು? ಶುರುವಾಗಿದೆ ಚರ್ಚೆ
ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ‘ರಾಕಾ’ ಶೀರ್ಷಿಕೆ ಈಗ ಅನಾವರಣಗೊಂಡಿದೆ. ‘ಪುಷ್ಪ 2’ ನಂತರ ಅಟ್ಲೀ ನಿರ್ದೇಶನದ ಈ 800 ಕೋಟಿ ರೂ. ಬಜೆಟ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ‘ರಾಕಾ’ ಶೀರ್ಷಿಕೆಯು ನಿಜವಾದ ಅರ್ಥದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.
- Shreelaxmi H
- Updated on: Apr 9, 2026
- 8:13 am
ಅಲ್ಲು ಅರ್ಜುನ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು
‘ಪುಷ್ಪ 2’ ಸಿನಿಮಾದ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಮನೆ ಎದುರು ಜಮಾಯಿಸಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಬೀಸಬೇಕಾಯಿತು. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
- Madan Kumar
- Updated on: Apr 8, 2026
- 7:57 pm