Allu Arjun
ನಿರ್ಮಾಪಕ ಅಲ್ಲು ಅರವಿಂದ್ ಪುತ್ರ, ತೆಲುಗು ಚಿತ್ರರಂಗದ ಹಿರಿಯ ನಟ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ ಅಲ್ಲು ಅರ್ಜುನ್ ಜನಿಸಿದ್ದು ಏಪ್ರಿಲ್ 8, 1982. ಕೇವಲ ಮೂರು ವರ್ಷದ ಮಗುವಿದ್ದಾಗಲೇ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್, ಕಮಲ್ ಹಾಸನ್ರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಸ್ವಾತಿ ಮುತ್ಯಂ’ನಲ್ಲಿಯೂ ಬಾಲನಟನಾಗಿ ನಟಿಸಿದ್ದರು. ಚಿರಂಜೀವಿಯ ‘ಡ್ಯಾಡಿ’ ಸಿನಿಮಾದಲ್ಲಿನ ಸಣ್ಣ ಪಾತ್ರ ಅಲ್ಲು ಅರ್ಜುನ್ಗೆ ಗುರುತು ತಂದುಕೊಟ್ಟಿತು. ಬಳಿಕ ‘ಗಂಗೋತ್ರಿ’ ಸಿನಿಮಾ ಮೂಲಕ ನಾಯಕ ನಟನಾದರು. ಆದರೆ ಅವರಿಗೆ ಭಾರಿ ದೊಡ್ಡ ಹಿಟ್ ನೀಡಿ, ನಾಯಕನಾಗಿ ನೆಲೆ ನಿಲ್ಲುವಂತೆ ಮಾಡಿದ್ದು ‘ಆರ್ಯ’ ಸಿನಿಮಾ. ಈವರೆಗೆ 20 ಸಿನಿಮಾಗಳಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ನಟಿಸಿದ್ದಾರೆ.
ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?
ಅಲ್ಲು ಅರ್ಜುನ್ ಭೇಟಿಗೆ 42 ಕಠಿಣ ನಿಯಮಗಳಿವೆ ಎಂಬ ಆರೋಪಕ್ಕೆ ಅವರ ತಂಡ ಸ್ಪಷ್ಟನೆ ನೀಡಿದೆ. ಪಾಡ್ಕಾಸ್ಟ್ನಲ್ಲಿ ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಈ ಆರೋಪ ಮಾಡಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟನ ವೃತ್ತಿಜೀವನಕ್ಕೆ ಈ ಆರೋಪ ಹಾನಿಯಾಗುವ ಸಾಧ್ಯತೆ ಇರುವುದರಿಂದ, ನಟನ ತಂಡ ಈ ಬಗ್ಗೆ ಕ್ಲ್ಯಾರಿಟಿ ನೀಡಿದೆ.
- Rajesh Duggumane
- Updated on: Feb 11, 2026
- 7:07 am
ಬಾಲಿವುಡ್ನ ಸ್ಟಾರ್ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ?
‘ಪುಷ್ಪ 2’ ನಂತರ ಅಲ್ಲು ಅರ್ಜುನ್ ಭರ್ಜರಿ ಯಶಸ್ಸು ಕಂಡಿದ್ದು, ಭಾರತದ ಗಡಿ ದಾಟಿ ಜಪಾನ್ನಲ್ಲೂ ಸದ್ದು ಮಾಡಿದ್ದಾರೆ. ಇವರು ಇದೀಗ ತೆಲುಗು ನಿರ್ದೇಶಕರಿಗಿಂತ ಹೊರತಾಗಿ ತಮಿಳು ನಿರ್ದೇಶಕ ಅಟ್ಲಿ ಜೊತೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ನೇರ ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ ಎಂಬ ವರದಿಗಳಿವೆ.
- Shreelaxmi H
- Updated on: Feb 10, 2026
- 8:19 am
ಮದುವೆಗೆ ಕೆಲವೇ ದಿನ ಬಾಕಿ ಇರುವಾಗಲೂ ಶೂಟಿಂಗ್ ನಿಲ್ಲಿಸಿಲ್ಲ ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಬಹಳ ಅದ್ದೂರಿಯಾಗಿ ನಡೆಯಲಿದೆ. ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಆದರೂ ಕೂಡ ರಶ್ಮಿಕಾ ಮಂದಣ್ಣ ಶೂಟಿಂಗ್ ಮಾಡುತ್ತಿದ್ದಾರೆ. ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ಜೊತೆಗಿನ ಹೊಸ ಸಿನಿಮಾಗೆ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.
- Madan Kumar
- Updated on: Feb 5, 2026
- 3:45 pm
ಸ್ಪಷ್ಟ ತೆಲುಗಿನಲ್ಲಿ ಮಾತನಾಡಿದ ಜಪಾನ್ ವ್ಯಕ್ತಿ; ಶಾಕ್ ಆದ ಅಲ್ಲು-ರಶ್ಮಿಕಾ
ಪುಷ್ಪ 2 ಪ್ರಚಾರಕ್ಕಾಗಿ ಜಪಾನ್ಗೆ ತೆರಳಿದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಅಲ್ಲಿನ ಅಭಿಮಾನಿಯೊಬ್ಬರು ಅಚ್ಚರಿ ಮೂಡಿಸಿದರು. ಓರ್ವ ಜಪಾನಿ ನಿರರ್ಗಳವಾಗಿ ತೆಲುಗು ಮಾತನಾಡಿದಾಗ ಇಬ್ಬರೂ ದಿಗ್ಭ್ರಮೆಗೊಂಡರು. ವಿದೇಶಿಯೊಬ್ಬರು ತನ್ನ ಮಾತೃಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ನೋಡಿ ಅಲ್ಲು ಅರ್ಜುನ್ ಸಂತೋಷಪಟ್ಟರು.
- Shreelaxmi H
- Updated on: Jan 26, 2026
- 10:55 am
ಹೈದರಾಬಾದ್ನ ಅಲ್ಲು ಅರ್ಜುನ್ ಹೊಸ ಥಿಯೇಟರ್ನಲ್ಲಿ ಇಬ್ಬರು ಕನ್ನಡ ನಿರ್ದೇಶಕರ ಫೋಟೋ
Allu Arjun: ಅಲ್ಲು ಅರ್ಜುನ್ ಅವರ 'ಅಲ್ಲು ಸಿನಿಮಾಸ್' ಮಲ್ಟಿಪ್ಲೆಕ್ಸ್ ಕೋಕಾಪೇಟ್ನಲ್ಲಿ ಹೊಸ ಶಾಖೆಯನ್ನು ತೆರೆಯಲಿದೆ. ಸಂಕ್ರಾಂತಿಗೆ ಶುಭಾರಂಭ ಮಾಡಲಿರುವ ಈ ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡದ ನಿರ್ದೇಶಕರ ಫೋಟೋಗಳನ್ನು ಅಳವಡಿಸಲಾಗಿದೆ. 75 ಅಡಿ ದೊಡ್ಡ ಪರದೆಯನ್ನು ಹೊಂದಿರುವ ಇದು ಉತ್ತಮ ಸಿನಿಮಾ ಅನುಭವ ನೀಡಲಿದೆ.
- Rajesh Duggumane
- Updated on: Jan 5, 2026
- 7:37 am
ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆ; ಅಲ್ಲು ಅರ್ಜುನ್ ಎಷ್ಟನೇ ಆರೋಪಿ?
ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಹೈದರಾಬಾದ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಅಲ್ಲು ಅರ್ಜುನ್ ಅವರನ್ನು A11 ಆರೋಪಿ ಎಂದು ಹೆಸರಿಸಲಾಗಿದೆ. ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್ ಪ್ರಮುಖ ಆರೋಪಿಯಾಗಿದೆ. ಈ ದುರ್ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟು, ಅವರ ಮಗ ಗಾಯಗೊಂಡಿದ್ದರು. ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ.
- Rajesh Duggumane
- Updated on: Dec 27, 2025
- 6:47 pm
ಮೂರು ವರ್ಷ, ಐದು ದೊಡ್ಡ ಸಿನಿಮಾ; ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಹಬ್ಬ
ಪುಷ್ಪ ಚಿತ್ರದ ಯಶಸ್ಸಿನ ನಂತರ ಜಾಗತಿಕ ಮನ್ನಣೆ ಗಳಿಸಿದ ಅಲ್ಲು ಅರ್ಜುನ್, ತಮ್ಮ ಮುಂದಿನ ಮೂರು ವರ್ಷಗಳ ಐದು ದೊಡ್ಡ ಯೋಜನೆಗಳನ್ನು ಎಚ್ಚರಿಕೆಯಿಂದ ಯೋಜಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರಗಳು ಪ್ಯಾನ್-ವರ್ಲ್ಡ್ ಮಟ್ಟದಲ್ಲಿ ದಕ್ಷಿಣ ಚಿತ್ರರಂಗದ ಶಕ್ತಿಯನ್ನು ತೋರಿಸಲಿವೆ. ಅಟ್ಲೀ, ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳು ಮತ್ತು ಬಹುನಿರೀಕ್ಷಿತ 'ಪುಷ್ಪ 3' ಈ ಸಾಲಿನಲ್ಲಿ ಸೇರಿವೆ, ಬನ್ನಿ ಅಭಿಮಾನಿಗಳಿಗೆ ಭಾರಿ ಮನರಂಜನೆ ನೀಡಲಿವೆ.
- Shreelaxmi H
- Updated on: Dec 25, 2025
- 8:42 am
‘ಧುರಂಧರ್’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು ಇತ್ತೀಚೆಗೆ 'ಧುರಂಧರ್' ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 5ರಂದು ತೆರೆಕಂಡು ದೇಶಾದ್ಯಂತ 239 ಕೋಟಿ ರೂಪಾಯಿ ಗಳಿಸಿದೆ. ಅಲ್ಲು ಅರ್ಜುನ್, ರಣವೀರ್ ಸಿಂಗ್, ಅಕ್ಷಯ್ ಖನ್ನಾ ಸೇರಿದಂತೆ ಇಡೀ ತಾರಾಗಣ ಹಾಗೂ ನಿರ್ದೇಶಕ ಆದಿತ್ಯ ಧರ್ ಅವರ ಅದ್ಭುತ ಕೆಲಸವನ್ನು ಶ್ಲಾಘಿಸಿದ್ದಾರೆ.
- Shreelaxmi H
- Updated on: Dec 13, 2025
- 12:40 pm
ಮತ್ತೆ ರಿಲೀಸ್ಗೆ ರೆಡಿ ಆದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’; ಕಾರಣ ಏನು?
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ಮುಂದಿನ ವರ್ಷ ಜನವರಿ 16ರಂದು ಜಪಾನ್ನಲ್ಲಿ ತೆರೆ ಕಾಣಲು ಸಜ್ಜಾಗಿದೆ. ‘ಪುಷ್ಪ’ ಚಿತ್ರದ ಯಶಸ್ಸು ಮತ್ತು ಭಾರತೀಯ ಸಿನಿಮಾಗಳಿಗೆ ಜಪಾನ್ನಲ್ಲಿರುವ ಬೇಡಿಕೆಯೇ ಇದಕ್ಕೆ ಕಾರಣ. ಈ ಹಿಂದೆ ‘ಬಾಹುಬಲಿ’, ‘ಕೆಜಿಎಫ್ 2’, ‘ಆರ್ಆರ್ಆರ್’ ಹಾಗೂ 'ಪುಷ್ಪ' ಚಿತ್ರಗಳು ಅಲ್ಲಿ ಮೆಚ್ಚುಗೆ ಗಳಿಸಿದ್ದವು. ಚಿತ್ರದ ಕಥೆಗೂ ಜಪಾನ್ ಲಿಂಕ್ ಇರುವುದರಿಂದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿದೆ.
- Shreelaxmi H
- Updated on: Dec 4, 2025
- 8:59 am
‘ಕಾಂತಾರ ನೋಡಿ ಮೈಮರೆತೆ’; ರಿಷಬ್ ಚಿತ್ರ ಹೊಗಳಿದ ಅಲ್ಲು ಅರ್ಜುನ್
ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸಿನಿಮಾಗಳನ್ನು ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಅಲ್ಲು ಅರ್ಜುನ್ ವಿಮರ್ಶೆ ತಿಳಿಸಿದ ಅನೇಕ ಉದಾಹರಣೆ ಇದೆ. ಈಗ ಅಲ್ಲು ಅರ್ಜುನ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ನೋಡಿ ಮೈಮರೆತಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಲು ಅವರು ಮರೆತಿಲ್ಲ.
- Rajesh Duggumane
- Updated on: Oct 24, 2025
- 1:38 pm
ಅಲ್ಲು ಅರ್ಜುನ್ ಮನೆಯಲ್ಲಿ ವಿವಾಹ ಸಂಭ್ರಮ; ಅಲ್ಲು ಸಿರೀಶ್ ಮದುವೆ ಫಿಕ್ಸ್
ನಟ ಅಲ್ಲು ಸಿರೀಶ್ ಶೀಘ್ರದಲ್ಲೇ ನಯನಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಅಜ್ಜ ಅಲ್ಲು ರಾಮಲಿಂಗಯ್ಯ ಅವರ ಜನ್ಮ ವಾರ್ಷಿಕೋತ್ಸವದಂದು ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗಳಾದ ನಯನಿಕಾ ಜೊತೆ ಸಿರೀಶ್ ಮದುವೆಯಾಗಲಿದ್ದು, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
- Shreelaxmi H
- Updated on: Oct 2, 2025
- 11:05 am
SIIMA 2025 Telugu: ಅಲ್ಲು ಅರ್ಜುನ್ ಅತ್ಯುತ್ತಮ ನಟ, ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ
ಸೈಮಾ ಅವಾರ್ಡ್ಸ್ 2025 ಅದ್ದೂರಿಯಾಗಿ ದುಬೈನಲ್ಲಿ ನಡೆದಿದೆ. ಈ ಬಾರಿ ತೆಲುಗು ಹಾಗೂ ಕನ್ನಡದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮೊದಲು ಹಮ್ಮಿಕೊಳ್ಳಲಾಗಿತ್ತು. 2024ನೇ ಸಾಲಿನ ಸಿನಿಮಾಗಳಿಗೆ ಅವಾರ್ಡ್ ಸಿಕ್ಕಿದೆ. ಇಂದು (ಸೆಪ್ಟೆಂಬರ್ 6) ತಮಿಳು ಹಾಗೂ ಮಲಯಾಳಂ ಭಾಷೆಯ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ.
- Rajesh Duggumane
- Updated on: Sep 6, 2025
- 8:13 am