Allu Arjun
ನಿರ್ಮಾಪಕ ಅಲ್ಲು ಅರವಿಂದ್ ಪುತ್ರ, ತೆಲುಗು ಚಿತ್ರರಂಗದ ಹಿರಿಯ ನಟ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ ಅಲ್ಲು ಅರ್ಜುನ್ ಜನಿಸಿದ್ದು ಏಪ್ರಿಲ್ 8, 1982. ಕೇವಲ ಮೂರು ವರ್ಷದ ಮಗುವಿದ್ದಾಗಲೇ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್, ಕಮಲ್ ಹಾಸನ್ರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಸ್ವಾತಿ ಮುತ್ಯಂ’ನಲ್ಲಿಯೂ ಬಾಲನಟನಾಗಿ ನಟಿಸಿದ್ದರು. ಚಿರಂಜೀವಿಯ ‘ಡ್ಯಾಡಿ’ ಸಿನಿಮಾದಲ್ಲಿನ ಸಣ್ಣ ಪಾತ್ರ ಅಲ್ಲು ಅರ್ಜುನ್ಗೆ ಗುರುತು ತಂದುಕೊಟ್ಟಿತು. ಬಳಿಕ ‘ಗಂಗೋತ್ರಿ’ ಸಿನಿಮಾ ಮೂಲಕ ನಾಯಕ ನಟನಾದರು. ಆದರೆ ಅವರಿಗೆ ಭಾರಿ ದೊಡ್ಡ ಹಿಟ್ ನೀಡಿ, ನಾಯಕನಾಗಿ ನೆಲೆ ನಿಲ್ಲುವಂತೆ ಮಾಡಿದ್ದು ‘ಆರ್ಯ’ ಸಿನಿಮಾ. ಈವರೆಗೆ 20 ಸಿನಿಮಾಗಳಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ನಟಿಸಿದ್ದಾರೆ.
ಐಟಂ ಸಾಂಗ್ ಮಾಡಲು ಒಪ್ಪಿಕೊಂಡ ಮೃಣಾಲ್ ಠಾಕೂರ್; ಅಭಿಮಾನಿಗಳಿಗೆ ಹಬ್ಬ
‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಅವರು ಐಟಂ ಸಾಂಗ್ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಮ್ ಚರಣ್, ಅಲ್ಲು ಅರ್ಜುನ್ ಮುಂತಾದ ಸ್ಟಾರ್ ನಟರ ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಲು ಮೃಣಾಲ್ ಒಪ್ಪಿದ್ದಾರೆ. ತಮ್ಮ ಗ್ಲಾಮರ್ ಮೂಲಕ ಮೃಣಾಲ್ ಅವರು ಈ ಹಾಡುಗಳಿಗೆ ಕಳೆ ತುಂಬುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ.
- Madan Kumar
- Updated on: Mar 22, 2026
- 11:03 am
ಅಲ್ಲು ಅರ್ಜುನ್ ವ್ಯಕ್ತಿತ್ವ ಎಂಥದ್ದು? ವಿವರಿಸಿದ ಮ್ಯಾನೇಜರ್
ಅಲ್ಲು ಅರ್ಜುನ್ ಭೇಟಿ ನಿಯಮಗಳ ಬಗ್ಗೆ ಬ್ರಾಂಡ್ ಸ್ಟ್ರಾಟಜಿಸ್ಟ್ ಕಾವೇರಿ ಬರುವಾ ಹೇಳಿಕೆಗಳು ಸಂಚಲನ ಮೂಡಿಸಿದ್ದವು. ಆದರೆ, ಅಲ್ಲು ಅರ್ಜುನ್ ಮ್ಯಾನೇಜರ್ ಶರತ್ಚಂದ್ರ ನಾಯ್ಡು ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಯಾವುದೇ ಕಠಿಣ ಪ್ರೋಟೋಕಾಲ್ಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
- Shreelaxmi H
- Updated on: Mar 14, 2026
- 11:06 am
ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ವಿಚ್ಛೇದನ ಪಡೆದಿದ್ದಾರೆ. ಮಾರ್ಚ್ 11ರಂದು ನ್ಯಾಯಾಲಯ ಇವರ ಪ್ರತ್ಯೇಕತೆಯನ್ನು ಖಚಿತಪಡಿಸಿದೆ. ಈ ಕುರಿತು ನಟಿ ಸಾಮಾಜಿಕ ಜಾಲತಾಣದಲ್ಲಿ ‘Chardi Kala always’ ಎಂದು ಪೋಸ್ಟ್ ಮಾಡಿದ್ದಾರೆ, ಇದು ಕಷ್ಟದಲ್ಲೂ ಆಶಾವಾದವನ್ನು ಸೂಚಿಸುತ್ತದೆ. ಇಬ್ಬರೂ ಮಾನಸಿಕವಾಗಿ ಸಿದ್ಧರಾಗಿದ್ದ ಕಾರಣ ಮತ್ತು ಹನ್ಸಿಕಾ ಜೀವನಾಂಶ ಕೇಳದೇ ಇರುವುದು ಈ ವಿಚ್ಛೇದನದ ಪ್ರಮುಖ ಅಂಶಗಳಾಗಿವೆ.
- Rajesh Duggumane
- Updated on: Mar 13, 2026
- 10:09 am
ಹೈದರಾಬಾದ್ನ ಅಲ್ಲು ಸಿನಿಮಾಸ್ನಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋ
ಅಲ್ಲು ಅರ್ಜುನ್ ಅವರ ‘ಅಲ್ಲು ಸಿನಿಮಾಸ್’ ಮಲ್ಟಿಪ್ಲೆಕ್ಸ್ ಹೈದರಾಬಾದ್ನಲ್ಲಿ ಶುರುವಾಗಿದೆ. ಅತ್ಯಾಧುನಿಕ ಸೌಲಭ್ಯಗಳಿರುವ ಈ ಥಿಯೇಟರ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಚಾಲನೆ ನೀಡಿದರು. ವಿಶೇಷವೆಂದರೆ, ಇಲ್ಲಿನ ವಾಲ್ ಆಫ್ ಫೇಮ್ನಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋಗಳಿವೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
- Rajesh Duggumane
- Updated on: Mar 13, 2026
- 8:35 am
ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ
ಟಾಲಿವುಡ್ ನಟ ಅಲ್ಲು ಅರ್ಜುನ್ ಹೈದರಾಬಾದ್ನಲ್ಲಿ ತಮ್ಮದೇ ಆದ 'ಅಲ್ಲು ಸಿನಿಮಾಸ್' ಮಲ್ಟಿಪ್ಲೆಕ್ಸ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇದನ್ನು ಉದ್ಘಾಟಿಸಿ, ಅಲ್ಲು ಅರ್ಜುನ್ರನ್ನು ಶ್ಲಾಘಿಸಿದರು. ಸಿಎಂ ಟಾಲಿವುಡ್ ಹಾಲಿವುಡ್ಗೆ ಪೈಪೋಟಿ ನೀಡಬೇಕು, ಬಾಲಿವುಡ್ ಅಥವಾ ಇತರ ರಾಜ್ಯಗಳೊಂದಿಗೆ ಅಲ್ಲ ಎಂದು ಆಶಿಸಿದರು.
- Rajesh Duggumane
- Updated on: Mar 13, 2026
- 7:35 am
ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್ಡೇಗೆ ಸಿಗಲಿದೆ ದೊಡ್ಡ ಗಿಫ್ಟ್
ಅಲ್ಲು ಅರ್ಜುನ್ ಅವರ 43ನೇ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಕಾದಿದೆ. ಏಪ್ರಿಲ್ 8 ರಂದು ಅಟ್ಲೀ ನಿರ್ದೇಶನದ ಅವರ ಹೊಸ ಸಿನಿಮಾದ ಟೈಟಲ್ ಅನಾವರಣಗೊಳ್ಳಲಿದೆ. ತಾತ್ಕಾಲಿಕವಾಗಿ AA22XA6 ಎಂದು ಹೆಸರಿಸಲಾದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಕೂಡ ನಟಿಸುವ ಸಾಧ್ಯತೆಯಿದೆ.
- Rajesh Duggumane
- Updated on: Mar 11, 2026
- 9:17 am
ಪಟಾಕಿ ಸ್ಫೋಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಯುವತಿ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್
ಕಾಕಿನಾಡ ಪಟಾಕಿ ಘಟಕ ದುರಂತದಲ್ಲಿ ತಂದೆ ಕಳೆದುಕೊಂಡು, ತಾಯಿಯನ್ನು ಮೊದಲೇ ಕಳೆದುಕೊಂಡ ಅನಾಥೆ ದುರ್ಗಾಳ ಸ್ಥಿತಿ ಎಲ್ಲರ ಮನ ಕಲುಕಿತು. ಮಾನಸಿಕ ಅಸ್ವಸ್ಥೆಯಾದ ಆಕೆಯ ಕೈಹಿಡಿದು, ಅಲ್ಲು ಅರ್ಜುನ್ ಜೀವಿತಾವಧಿ ಪ್ರತಿ ತಿಂಗಳು 7,500 ರೂ. ಆರ್ಥಿಕ ನೆರವು ಘೋಷಿಸಿದರು. ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲು ಅರ್ಜುನ್ ನಿಜವಾದ ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
- Shreelaxmi H
- Updated on: Mar 11, 2026
- 8:11 am
ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ 4 ಕೋಟಿ ರೂ. ಕಾರು ಕೊಟ್ಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರ ವಿವಾಹದ ದಿನದಂದು ಅಲ್ಲು ಸಿರೀಶ್ ಕೂಡ ಮದುವೆ ಮಂಟಪವನ್ನು ಪ್ರವೇಶಿಸಿದ್ದು ಗಮನಾರ್ಹ. ಇದರೊಂದಿಗೆ, ಅಲ್ಲು ಸಿರೀಶ್ ಮತ್ತು ಅಲ್ಲು ಅರ್ಜುನ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳು ಮತ್ತು ಅಭಿನಂದನೆಗಳ ಸುರಿಮಳೆಯಾಯಿತು. ಈಗ ಅವರು ಪತ್ನಿಗೆ ಕೊಟ್ಟ ದುಬಾರಿ ಕಾರು ಚರ್ಚೆಗೆ ಗ್ರಾಸವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Mar 8, 2026
- 9:55 am
ಪ್ರೀತಿಸಿದ ಹುಡುಗಿ ಜೊತೆ ವಿವಾಹ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್
ಪ್ರಸಿದ್ಧ ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಅವರ ಕಿರಿಯ ಪುತ್ರ, ನಾಯಕ ಅಲ್ಲು ಸಿರೀಶ್ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಶುಕ್ರವಾರ (ಮಾರ್ಚ್ 06) ತಮ್ಮ ಗೆಳತಿ ನಯನಿಕಾ ಅವರನ್ನು ವಿವಾಹವಾದರು. ಅವರ ವಿವಾಹವು ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನಡೆಯಿತು. ಆ ಸಂದರ್ಭದ ಫೋಟೋಗಳು ಇಲ್ಲಿವೆ.
- Rajesh Duggumane
- Updated on: Mar 7, 2026
- 7:36 am
ಅಲ್ಲು ಅರ್ಜುನ್ ಕುಟುಂಬ ಸೇರುತ್ತಿರುವ ಈ ನಯಾನಿಕಾ ಯಾರು? ಇದೆ ದೊಡ್ಡ ಉದ್ಯಮ
ನಟ ಅಲ್ಲು ಸಿರಿಶ್ ಉದ್ಯಮಿ ನಯಾನಿಕಾ ರೆಡ್ಡಿಯವರನ್ನು ವಿವಾಹವಾಗುತ್ತಿದ್ದಾರೆ. ಅಲ್ಲು ಅರ್ಜುನ್ ಕುಟುಂಬಕ್ಕೆ ಸೇರುತ್ತಿರುವ ನಯಾನಿಕಾ, ಚಿತ್ರರಂಗದಿಂದ ಹೊರತಾಗಿ ದೊಡ್ಡ ವ್ಯಾಪಾರ ಕುಟುಂಬದವರು. ವರುಣ್ ತೇಜ್ ಪಾರ್ಟಿಯಲ್ಲಿ ಭೇಟಿಯಾಗಿ, ಸ್ನೇಹ ಪ್ರೀತಿಯಾಗಿ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಮಾರ್ಚ್ 6ರಂದು ಹೈದರಾಬಾದ್ನಲ್ಲಿ ವಿವಾಹ ಜರುಗಲಿದ್ದು, ಈ ನೂತನ ಜೋಡಿಯ ಪ್ರೇಮ ಕಥೆ, ಕುಟುಂಬದ ಹಿನ್ನೆಲೆಯ ಮಾಹಿತಿ ಇಲ್ಲಿದೆ.
- Shreelaxmi H
- Updated on: Mar 5, 2026
- 7:50 am
ಮದುವೆಗೆ ಎರಡು ವಾರ ಇರುವಾಗಲೇ ಅಲ್ಲು ಮನೆಯಲ್ಲಿ ಸಂಭ್ರಮ ಆರಂಭ; ಅದ್ದೂರಿ ಪಾರ್ಟಿ
ಅಲ್ಲು ಸಿರಿಶ್ ಮತ್ತು ನಯನಿಕಾ ಮಾರ್ಚ್ 6ರಂದು ವಿವಾಹವಾಗುತ್ತಿದ್ದಾರೆ. ಇವರ ಮದುವೆ ಸಂಭ್ರಮ ಜೋರಾಗಿದೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಇವರಿಗಾಗಿ ಅದ್ದೂರಿ ಪ್ರೀ-ವೆಡ್ಡಿಂಗ್ ಪಾರ್ಟಿ ಆಯೋಜಿಸಿದ್ದರು. ರಾಮ್ ಚರಣ್, ಶ್ರೀಲೀಲಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡ ಅಲ್ಲು ಸಿರಿಶ್, ಇದನ್ನು ‘ಮ್ಯಾಡ್ ಪಾರ್ಟಿ’ ಎಂದು ಕರೆದಿದ್ದಾರೆ.
- Rajesh Duggumane
- Updated on: Feb 23, 2026
- 7:35 am
ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ
ಅಲ್ಲು ಅರ್ಜುನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಮಹಿಳೆ ಈಗ ಕ್ಷಮೆ ಕೇಳಿದ್ದಾರೆ. ತಾವು ನೀಡಿದ್ದ ಹೇಳಿಕೆಗಳಿಗೆ ಯಾವುದೇ ಆಧಾರ ಇಲ್ಲ ಎಂದು ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲು ಅರ್ಜುನ್ ಭೇಟಿ ಮಾಡುವವರಿಗೆ 42 ನಿಮಯಗಳನ್ನು ನೀಡಲಾಗುತ್ತದೆ ಎಂದು ಆಕೆ ಹೇಳಿದ್ದರು.
- Madan Kumar
- Updated on: Feb 17, 2026
- 8:20 pm