ಬಿಗ್​​ಬಾಸ್ ಕನ್ನಡ 12: ಉತ್ತಮ ಸ್ಪರ್ಧಿಯೇ ಹೊರಕ್ಕೆ, ಒಳ್ಳೆಯವರಿಗಿದು ಕಾಲವಲ್ಲ ಬಿಡಿ

Bigg Boss Kannada 12: ಬಿಗ್​​ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತರರಿಗೆ ಮನನೋಯಿಸದೆ, ಅನವಶ್ಯಕ ಮಾತುಗಳನ್ನಾಡದೆ, ಅನವಶ್ಯಕ ಜಗಳ ಮಾಡದೆ, ಎಲ್ಲರನ್ನೂ ಗೌರವಿಸುತ್ತಾ, ನಾಟಕೀಯತೆ ಪ್ರದರ್ಶಿಸದೆ ಜಂಟಲ್​​ಮನ್ ಗೇಮ್ ಆಡುತ್ತಿದ್ದ ಒಳ್ಳೆಯ ಸ್ಪರ್ಧಿ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ.

ಬಿಗ್​​ಬಾಸ್ ಕನ್ನಡ 12: ಉತ್ತಮ ಸ್ಪರ್ಧಿಯೇ ಹೊರಕ್ಕೆ, ಒಳ್ಳೆಯವರಿಗಿದು ಕಾಲವಲ್ಲ ಬಿಡಿ
Bigg Boss Kannada 12

Updated on: Dec 07, 2025 | 10:52 PM

ಜೋರಾಗಿ ಗದ್ದಲ ಮಾಡುವವರಿಗೆ, ಸುಖಾ ಸುಮ್ಮನೆ ಜಗಳ ಮಾಡುವವರಿಗೆ, ನಾಟಕೀಯತೆ ಪ್ರದರ್ಶಿಸುವವರಿಗೆ, ಎಲ್ಲ ಭಾವನೆಗಳನ್ನು ಅತಿಯಾಗಿ ತೋರ್ಪಡಿಸಿಕೊಳ್ಳುವವರಿಗೆ, ಸುಖಾ ಸುಮ್ಮನೆ ಮಾತನಾಡುವವರಿಗಷ್ಟೆ ಬಿಗ್​​ಬಾಸ್ (Bigg Boss) ಮನೆಯಲ್ಲಿ ಪ್ರಾಮುಖ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶಾಂತವಾಗಿದ್ದು, ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾ, ಇತರರಿಗೆ ಮನನೋಯಿಸದೆ, ಅನವಶ್ಯಕ ಮಾತುಗಳನ್ನಾಡದೆ, ಅನವಶ್ಯಕ ಜಗಳ ಮಾಡದೆ, ಎಲ್ಲರಿಗೂ ಗೌರವಿಸುತ್ತಾ, ನಾಟಕೀಯತೆ ಪ್ರದರ್ಶಿಸದೆ ಜಂಟಲ್​​ಮನ್ ಗೇಮ್ ಆಡುತ್ತಿದ್ದ ಒಳ್ಳೆಯ ಸ್ಪರ್ಧಿ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಬಿಗ್​​ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಆರಂಭದಿಂದಲೂ ತಮ್ಮ ಒಳ್ಳೆಯತನದಿಂದ ಸೆಳೆದಿದ್ದ ಅಭಿಷೇಕ್ ಅವರು ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಭಿಷೇಕ್ ಅವರು ಈ ವಾರ ಚೆನ್ನಾಗಿ ಆಟವಾಡಿ ಎರಡನೇ ಬಾರಿ ಕ್ಯಾಪ್ಟನ್ ಸಹ ಆಗಿದ್ದರು. ಆದರೆ ಗಿಲ್ಲಿ ಮಾಡಿದ ತರ್ಲೆ ಕೆಲಸದಿಂದ ಅವರ ಕ್ಯಾಪ್ಟೆನ್ಸಿ ಹೋಗಿದ್ದು ಮಾತ್ರವಲ್ಲದೆ. ಈಗ ಅವರು ಬಿಗ್​​ಬಾಸ್ ಮನೆಯಿಂದಲೇ ಹೊರಗೆ ಹೋಗಿದ್ದಾರೆ.

ಈ ವಾರ ಸಾಕಷ್ಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ಧ್ರುವಂತ್, ಧನುಶ್, ಸೂರಜ್, ಮಾಳು, ರಾಶಿಕಾ, ಸ್ಪಂದನಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯದಾಗಿ ಸೂರಜ್, ಮಾಳು ಮತ್ತು ಅಭಿಷೇಕ್ ಮಾತ್ರವೇ ಉಳಿದುಕೊಂಡರು. ಅವರು ಮೂವರನ್ನೂ ಆಕ್ಟಿವಿಟಿ ರೂಂಗೆ ಕಳಿಸಲಾಯ್ತು. ಮೂವರ ಮುಂದೆ ಸೂಟ್​ಕೇಸ್ ಇಡಲಾಗಿತ್ತು. ಸೂಟ್​​ಕೇಸ್​​ನಲ್ಲಿ ಅವರ ಎವಿಕ್ಷನ್​​ಗೆ ಸಂಬಂಧಿಸಿದ ಬೋರ್ಡ್ ಇಡಲಾಗಿತ್ತು. ಅಭಿಷೇಕ್ ಅವರ ಸೂಟ್​ಕೇಸ್​​ನಲ್ಲಿ ‘ದಿ ಎಂಡ್’ ಎಂದು ಬರೆದಿತ್ತು. ಅಲ್ಲಿಗೆ ಅಭಿಷೇಕ್ ಅವರ ಆಟ ಅಂತ್ಯವಾಯ್ತು.

ಇದನ್ನೂ ಓದಿ:ಆ ಒಂದು ಆರೋಪಕ್ಕೆ ಬಿಗ್​​ಬಾಸ್ ವೇದಿಕೆ ಮೇಲೆ ಉತ್ತರ ನೀಡಿದ ಕಿಚ್ಚ

ಅಭಿಷೇಕ್ ಅವರು ಬಿಗ್​​ಬಾಸ್ ಸೀಸನ್ 12ರ ಜಂಟಲ್​​ಮ್ಯಾನ್ ಆಗಿದ್ದರು. ಚೆನ್ನಾಗಿ ಟಾಸ್ಕ್ ಆಡುತ್ತಿದ್ದರು. ಮನೆಯ ನಿಯಮಗಳನ್ನು ಮೀರುತ್ತಿರಲಿಲ್ಲ. ಯಾರೊಟ್ಟಿಗೂ ಜಗಳ ಮಾಡುತ್ತಿರಲಿಲ್ಲ. ಯಾರ ಬಗ್ಗೆಯೂ ವಿನಾ ಕಾರಣ ಮಾತನಾಡುತ್ತಿರಲಿಲ್ಲ. ಯಾರ ಬೆನ್ನ ಹಿಂದೆಯೂ ನಿಂದನೆ ಮಾಡುತ್ತಿರಲಿಲ್ಲ. ದರ್ಪ ತೋರಿಸುತ್ತಿರಲಿಲ್ಲ, ಹಾಸ್ಯದ ಹೆಸರಲ್ಲಿ ತೇಜೋವಧೆ ಮಾಡುತ್ತಿರಲಿಲ್ಲ. ಒಟ್ಟಾರೆ ಒಬ್ಬ ಜಂಟಲ್​​ಮ್ಯಾನ್ ರೀತಿ ಬಿಗ್​​ಬಾಸ್ ಮನೆಯಲ್ಲಿದ್ದರು. ಆದರೆ ಅದೇ ಅವರಿಗೆ ಮುಳುವಾಯ್ತು. ಅಭಿಷೇಕ್ ಅವರು ಹೊರಗೆ ಬಂದ ಮೇಲೂ ಸಹ ಸುದೀಪ್ ಅವರು, ‘ನೀವೊಬ್ಬ ಒಳ್ಳೆಯ ವ್ಯಕ್ತಿ’ ಎಂದು ಬೆನ್ನುತಟ್ಟಿದರು. ಅಲ್ಲದೆ, ನೀವು ಹೊರಗೆ ಇದ್ದಂತೆ ಬಿಗ್​​ಬಾಸ್ ಮನೆಯಲ್ಲಿ ಇದ್ದಿರಿ ಬಹುಷಃ ಹಾಗೆ ಇರಬಾರದಿತ್ತೇನೋ ಎಂದರು. ಏನೇ ಆಗಲಿ ಒಬ್ಬ ಒಳ್ಳೆಯ ಸ್ಪರ್ಧಿ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ