
ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ (Dhurandhar 2) ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ಈ ಟ್ರೇಲರ್ ಗಮನ ಸೆಳೆದಿದೆ. ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ರಣವೀರ್ ಸಿಂಗ್ ಅವರು ಟ್ರೇಲರ್ ಅಲ್ಲಿ ರಕ್ತ ಹರಿಸಿದ್ದಾರೆ. ಟ್ರೇಲರ್ ನೋಡಿದರೆ ಸಿನಿಮಾ 2 ಸಾವಿರ ಕೋಟಿ ಕಲೆಕ್ಷನ್ ಮಾಡೋದು ಪಕ್ಕಾ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿವೆ. ಆದರೂ ಒಂದು ಕೊರತೆ ಕಾಣುತ್ತಿದೆ.
‘ಧುರಂಧರ್ 2’ ಸಿನಿಮಾ ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಮೆರೆಯಲಾಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಅದ್ಭುತ ಫೀಲ್ ಆಗಿದೆ. ಹಮ್ಜಾ ಅಲಿ ಮಜಾರಿ ಪಾಕಿಸ್ತಾನದಲ್ಲಿ ರೆಹಮಾನ್ ಡಕಾಯಿತ್ನ ಕೊಲೆ ಮಾಡುತ್ತಾನೆ. ಈ ಕೊಲೆ ಬಳಿಕ ಹಮ್ಜಾ ಪಾಕಿಸ್ತಾನದ ಡಾನ್ ಆಗುವ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲದೆ, ಹಮ್ಜಾನ ಹಿಂದಿನ ಕಥೆಯನ್ನು ಕೂಡ ತೋರಿಸಲಾಗಿದೆ.
ಟ್ರೇಲರ್ ಉದ್ದಕ್ಕೂ ‘ಧುರಂದರ್ 2’ ಚಿತ್ರದಲ್ಲಿ ಆ್ಯಕ್ಷನ್ ಇದೆ. ಇದು ಆ್ಯಕ್ಷನ್ ಪ್ರಿಯರಿಗೆ ಸಾಕಷ್ಟು ಇಷ್ಟ ಆಗುವ ಸಾಧ್ಯತೆ ಇದೆ. ಆದರೆ, ಟ್ರೇಲರ್ ಅಲ್ಲಿ ಎಲ್ಲಿಯೂ ಅಕ್ಷಯ್ ಖನ್ನಾ ಕಾಣಿಸಿಲ್ಲ. ಮೊದಲ ಭಾಗದಲ್ಲಿ ಅವರು ರೆಹಮಾನ್ ಡಕಾಯಿತ್ ಪಾತ್ರ ಮಾಡಿದ್ದರು. ಈ ಪಾತ್ರ ಎಲ್ಲಿಯೂ ತೋರಿಸಿಲ್ಲ. ಇದು ಕೆಲವರ ಬೇಸರಕ್ಕೆ ಕಾರಣ ಆಗಿದೆ. ಕೆಲವು ದೃಶ್ಯಗಳಲ್ಲಿಯಾದರೂ ಅವರು ಕಾಣಿಸಿಕೊಳ್ಳಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
Ab Pakistan ka mustakbil, Hindustan tey karega
Trailer Out Now.
Book Now for Paid Previews on 18th March only.
🔗- https://t.co/9oK8N3bbsE#DhurandharTheRevenge releases worldwide on 19 March, on Gudi Padwa, Ugadi, and Eid.Hindi | Telugu | Tamil | Kannada | Malayalam… pic.twitter.com/XbRyfy5uxr
— Jio Studios (@jiostudios) March 7, 2026
ಇದನ್ನೂ ಓದಿ: ಆ್ಯಕ್ಷನ್, ಆ್ಯಕ್ಷನ್, ಆ್ಯಕ್ಷನ್; ಬೀಸ್ಟ್ ಮೋಡ್ನಲ್ಲಿ ರಿವೇಂಜ್ಗೆ ಇಳಿದ ರಣವೀರ್
‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋ ಜೊತೆ ಆದಿತ್ಯ ಧಾರ್ ಕೂಡ ಸಿನಿಮಾದ ನಿರ್ಮಾಪಕ. ಭಾರತದ ವ್ಯಕ್ತಿಯೋರ್ವ ಪಾಕಿಸ್ತಾನದಲ್ಲಿ ಸ್ಪೈ ಆಗುತ್ತಾನೆ. ಅಲ್ಲಿಯವರ ಜೊತೆ ಸೇರಿ, ಭಾರತದ ಪರವಾಗಿ ಕೆಲಸ ಮಾಡುತ್ತಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.