ಮಗಳು ಬೆಳೆದು ದೊಡ್ಡವಳಾದಮೇಲೆ ಬಾಯ್​​ಫ್ರೆಂಡ್ ಮಾಡಿಕೊಂಡ್ರೆ? ಕಿಯಾರಾ ಕೊಟ್ಟ ಉತ್ತರ ಏನು?

ಮಕ್ಕಳು ತಮ್ಮ ಜೀವನದ ಹಾದಿಯಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಪೋಷಕರ ಅನುಭವದ ಕನ್ನಡಕದಿಂದ ಜೀವನವನ್ನು ನೋಡುವ ಬದಲು, ಮಗಳು ಸ್ವತಃ ಲೋಕವನ್ನು ನೋಡಿ ಕಲಿಯಬೇಕು ಎಂಬುದು ಕಿಯಾರಾ ಅವರ ಆಸೆ. ಜೀವನವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಿ, ಯಾವುದು ಸರಿ ಯಾವುದು ತಪ್ಪು ಎಂದು ಅವಳೇ ನಿರ್ಧರಿಸುವ ಸ್ವಾತಂತ್ರ್ಯ ನೀಡಲು ಇಚ್ಛಿಸುತ್ತಾರೆ.

ಮಗಳು ಬೆಳೆದು ದೊಡ್ಡವಳಾದಮೇಲೆ ಬಾಯ್​​ಫ್ರೆಂಡ್ ಮಾಡಿಕೊಂಡ್ರೆ? ಕಿಯಾರಾ ಕೊಟ್ಟ ಉತ್ತರ ಏನು?
ಕಿಯಾರಾ
Edited By:

Updated on: May 16, 2026 | 8:00 AM

ಬಾಲಿವುಡ್‌ನ ಕ್ಯೂಟ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ 2023ರಲ್ಲಿ ವಿವಾಹವಾದರು. 2025ರಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದರು. ಈ ಮುಗುವಿಗೆ ಸರಾಯಾ ಮಲ್ಹೋತ್ರಾ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಕಿಯಾರಾ ತಮ್ಮ ಮಗಳ ಪಾಲನೆ ಮತ್ತು ಆಧುನಿಕ ಜಗತ್ತಿನಲ್ಲಿ ಅವಳು ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ನನ್ನ ತಂದೆ ತಾಯಿ ಲವ್ ಮಾಡಿದ್ದರು. ನಂತರ ಮದುವೆ ಆದರು. ನಾನು ಕೂಡ ಅದೇ ನಂಬಿಕೆಯಲ್ಲಿ ಬೆಳೆದಿದ್ದೆ’ ಎಂದು ಅವರು ಹೇಳಿದ್ದರು. ‘ನನ್ನ ಮಗಳು ಮದುವೆ ಅಥವಾ ಪ್ರೀತಿಯ ಬಗ್ಗೆ ಯಾವುದೇ ಪೂರ್ವಗ್ರಹ ಪೀಡಿತ ಆಲೋಚನೆಗಳೊಂದಿಗೆ ಬೆಳೆಯುವುದು ನನಗೆ ಇಷ್ಟವಿಲ್ಲ. ಅವಳಿಗೆ ಇಷ್ಟವಿದ್ದರೆ ಮದುವೆಯಾಗಲಿ, ಇಲ್ಲದಿದ್ದರೆ ಬೇಡ. ಅವಳ ನಿರ್ಧಾರ ಅವಳದ್ದೇ ಆಗಿರಬೇಕು’ ಎಂದು ಕಿಯಾರಾ ಹೇಳಿದ್ದಾರೆ.

ಮಕ್ಕಳು ತಮ್ಮ ಜೀವನದ ಹಾದಿಯಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಪೋಷಕರ ಅನುಭವದ ಕನ್ನಡಕದಿಂದ ಜೀವನವನ್ನು ನೋಡುವ ಬದಲು, ಮಗಳು ಸ್ವತಃ ಲೋಕವನ್ನು ನೋಡಿ ಕಲಿಯಬೇಕು ಎಂಬುದು ಕಿಯಾರಾ ಅವರ ಆಸೆ. ಜೀವನವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಿ, ಯಾವುದು ಸರಿ ಯಾವುದು ತಪ್ಪು ಎಂದು ಅವಳೇ ನಿರ್ಧರಿಸುವ ಸ್ವಾತಂತ್ರ್ಯ ನೀಡಲು ಇಚ್ಛಿಸುತ್ತಾರೆ.

ಭವಿಷ್ಯದಲ್ಲಿ ಮಗಳು ಬಾಯ್‌ಫ್ರೆಂಡ್ ಮಾಡಿಕೊಂಡರೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕಿಯಾರಾ ಒಮ್ಮೆ ಸಿದ್ಧಾರ್ಥ್ ಅವರನ್ನು ಕೇಳಿದ್ದರಂತೆ. ಅದಕ್ಕೆ ಸಿದ್ಧಾರ್ಥ್ ನೀಡಿದ ಉತ್ತರ ಕಿಯಾರಾ ಅವರಿಗೆ ಅಚ್ಚರಿ ಮೂಡಿಸಿದೆ. ‘ಪೋಷಕರಾಗಿ ನಮ್ಮ ಕೆಲಸ ಅವಳನ್ನು ನಿರ್ಬಂಧಿಸುವುದಲ್ಲ. ಬದಲಾಗಿ, ಅವಳು ತನಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಸ್ವತಃ ಆಯ್ಕೆ ಮಾಡುವಂತೆ ಬೆಳೆಸುವುದಷ್ಟೇ ನಮ್ಮ ಜವಾಬ್ದಾರಿ’ ಎಂದು ಸಿದ್ಧಾರ್ಥ್ ಹೇಳಿದ್ದರಂತೆ.

ಇದನ್ನೂ ಓದಿ: ‘ಟಾಕ್ಸಿಕ್’ ಶೂಟಿಂಗ್ ವೇಳೆ ವ್ಯಾನ್ ಅಲ್ಲಿ ಕುಳಿತು ಹೊಟ್ಟೆಯಲ್ಲಿರೋ ಮಗು ಜೊತೆ ಮಾತನಾಡುತ್ತಿದ್ದ ಕಿಯಾರಾ

‘ಕಿಯಾರಾ’ ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಶೀಘ್ರವೇ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us