ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?

ನಟಿ ಇಲಿಯಾನ‌ ಪತಿಯೊಂದಿಗಿನ ಬ್ರೇಕಪ್ ಬಳಿಕ ಸಿನಿಮಾರಂಗದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಗುಟ್ಟಾಗಿ ಮದುವೆ ಆಗಿ ಬ್ರೇಕಪ್ ಆಗಿದ್ದು ಯಾಕೆ ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲಿಯಾನಾ ತೆಲುಗು ಚಿತ್ರರಂಗದ ಮೂಲಕ ಟಾಲಿವುಡ್​ಗೆ ಎಂಟ್ರಿಕೊಟ್ಟು, ಕಾಲಿವುಡ್​ ಬಾಲಿವುಡ್​ನಲ್ಲೂ ಮೋಡಿ ಮಾಡಿದ ಬೆಡಗಿ. ಆರು ವರ್ಷಗಳಿಂದ ಬಾಲಿವುಡ್​ನಲ್ಲೇ ಬ್ಯುಸಿಯಾಗಿದ್ದ ಇಲಿಯಾನಾ, ಸಿಕ್ಕ ಗ್ಯಾಪ್​ನಲ್ಲಿ ಲವ್​ ಮೂಡ್​ನಲ್ಲಿದ್ರು. ಇಲಿಯಾನ ಸೀಕ್ರೆಟ್ ಮ್ಯಾರೇಜ್: ರೀಲ್​ನಂತೆ ರಿಯಲ್ ಲೈಫ್​ನಲ್ಲೂ ಲವ್​ ಮಾಡ್ತಿದ್ರೂ, ಇದ್ಯಾವುದೂ ಅಭಿಮಾನಿಗಳಿಗೇ ಗೊತ್ತೇ ಆಗದಂತೆ ಮೆಂಟೇನ್ ಮಾಡಿದ್ರು. ಆದ್ರೆ, ಎರಡು ವರ್ಷಗಳ […]

ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?
ಸಾಧು ಶ್ರೀನಾಥ್​ Edited By:

Updated on: Nov 24, 2020 | 7:47 AM

ನಟಿ ಇಲಿಯಾನ‌ ಪತಿಯೊಂದಿಗಿನ ಬ್ರೇಕಪ್ ಬಳಿಕ ಸಿನಿಮಾರಂಗದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಗುಟ್ಟಾಗಿ ಮದುವೆ ಆಗಿ ಬ್ರೇಕಪ್ ಆಗಿದ್ದು ಯಾಕೆ ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇಲಿಯಾನಾ ತೆಲುಗು ಚಿತ್ರರಂಗದ ಮೂಲಕ ಟಾಲಿವುಡ್​ಗೆ ಎಂಟ್ರಿಕೊಟ್ಟು, ಕಾಲಿವುಡ್​ ಬಾಲಿವುಡ್​ನಲ್ಲೂ ಮೋಡಿ ಮಾಡಿದ ಬೆಡಗಿ. ಆರು ವರ್ಷಗಳಿಂದ ಬಾಲಿವುಡ್​ನಲ್ಲೇ ಬ್ಯುಸಿಯಾಗಿದ್ದ ಇಲಿಯಾನಾ, ಸಿಕ್ಕ ಗ್ಯಾಪ್​ನಲ್ಲಿ ಲವ್​ ಮೂಡ್​ನಲ್ಲಿದ್ರು.

ಇಲಿಯಾನ ಸೀಕ್ರೆಟ್ ಮ್ಯಾರೇಜ್:
ರೀಲ್​ನಂತೆ ರಿಯಲ್ ಲೈಫ್​ನಲ್ಲೂ ಲವ್​ ಮಾಡ್ತಿದ್ರೂ, ಇದ್ಯಾವುದೂ ಅಭಿಮಾನಿಗಳಿಗೇ ಗೊತ್ತೇ ಆಗದಂತೆ ಮೆಂಟೇನ್ ಮಾಡಿದ್ರು. ಆದ್ರೆ, ಎರಡು ವರ್ಷಗಳ ಹಿಂದೆ ಇನ್​ಸ್ಟ್ರಾಗ್ರಾಂನಲ್ಲಿ ಫೋಟೊವೊಂದನ್ನ ಅಪ್​ಲೋಡ್ ಮಾಡಿ, ಮೈ ಹಬ್ಬಿ ಅಂತಾ ಕ್ಯಾಪ್ಷನ್ ಕೊಟ್ಟಿದ್ರು. ಆಗ್ಲೇ ಇಲಿಯಾನ ಗುಟ್ಟಾಗಿ ಮದುವೆ ಆಗಿದ್ದಾರೆ ಅನ್ನೋ ವಿಚಾರ ತಿಳಿದಿದ್ದು.

ಪ್ರೀತಿ ಮತ್ತು ಮದುವೆ ಬಗ್ಗೆ ಎಲ್ಲೂ ಬಾಯ್ಬಿಡದ ಇಲಿಯಾನಾ, ಏಕಾಏಕಿ ಬ್ರೇಕ್ ಅಪ್​ ಆಗಿದ್ದು ಸದ್ದು ಮಾಡ್ತಿದೆ. ಇಲಿಯಾನಾ ತನ್ನ ವಿದೇಶಿ ಪತಿಯಿಂದ ದೂರವಾಗಿದ್ದು ಯಾಕೆ ಅನ್ನೋ ಸುದ್ದಿ ಸಿನಿರಂಗದ ಗಲ್ಲಿಯಲ್ಲಿ ಓಡಾಡ್ತಿದೆ. ಪತಿ ಆ್ಯಂಡ್ಯೂ ನೀಬೋನ್ ಮತ್ತು ತನ್ನ ನಡುವೆ ಬಿರುಕು ಮೂಡಲು ಕಾರಣ ಏನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.

ಪತಿ ಪತ್ನಿ ಪ್ರೀತಿಯಲ್ಲಿ ಬಿರುಕು:
ಆಂಡ್ರ್ಯೂ ನೀಬೋನ್ ಮತ್ತು ಇಲಿಯಾನಾ ನಡುವೆ ಹೊಂದಾಣಿಕೆ ಸರಿಯಿ ಇರಲಿಲ್ಲವಂತೆ. ಹಲವು ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು. ಮನಸ್ತಾಪ ಹೆಚ್ಚಾದ ಮೇಲೆ ಈ ಜೋಡಿ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿತು ಎನ್ನಲಾಗಿದೆ.

ಇನ್ನೂ ಬ್ರೇಕಪ್ ಆಗುತ್ತಿದ್ದಂತೆಯೇ ಆಂಡ್ರ್ಯೂ ನೀಬೋನ್ ಜೊತೆಗಿನ ಫೊಟೋಗಳೆಲ್ಲವನ್ನು ಸೋಷಿಯಲ್ ಮೀಡಿಯಾದಿಂದ ಇಲಿಯಾನ ಡಿಲಿಟ್ ಮಾಡಿದ್ದಾರೆ. ಸದ್ಯ ಬ್ರೇಕಪ್ ಬಗೆಗಿನ ಬೇಸರ ಮರೆತು ಸಿನಿಮಾಗಳಲ್ಲಿ ಬ್ಯುಸಿಯಾಗಲು ಇಲಿಯಾನ ಮುಂದಾಗಿದ್ದಾರೆ. ಆದ್ರೆ, ಥೇಟ್ ಸಿನಿಮಾದಂತೆ ಟ್ವಿಸ್ಟ್ ಕೊಟ್ಟಿದ್ದ ನಟಿಯ ಬದುಕಲ್ಲೂ ಬ್ರೇಕ್ ಅಪ್ ಟ್ವಿಸ್ಟ್ ಕೊಟ್ಟಿದ್ದು ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗಿದೆ.

Published On - 3:13 pm, Fri, 22 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us