
ರಣವೀರ್ ಸಿಂಗ್ ಅವರು (Ranveer Singh) ಇತ್ತೀಚೆಗೆ ಸುದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರೋದು ಅವರು ನಡೆದುಕೊಂಡ ರೀತಿ. ರಣವೀರ್ ಸಿಂಗ್ ಅವರು ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದು, ನಡೆದುಕೊಂಡಿದ್ದು ಗೊತ್ತೇ ಇದೆ. ಈ ವಿಷಯ ಚರ್ಚೆ ಹುಟ್ಟುಹಾಕಿತ್ತು. ದೈವ ಅನುಕರಿಸಿ ಟೀಕೆಗೆ ಒಳಗಾದರು. ಈ ವಿಡಿಯೋ ಈಗಲೂ ವೈರಲ್ ಆಗುತ್ತದೆ ಮತ್ತು ಪ್ರಕರಣ ಇನ್ನೂ ಜಾರಿಯಲ್ಲಿದೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಟೀಕೆ ಎದುರಿಸಿದ್ದಾರೆ.
ರಣವೀರ್ ಸಿಂಗ್ ಅವರು ಈ ಮೊದಲು ವೇದಿಕೆ ಮೇಲೆ ಮಾತನಾಡಿದ್ದರು. ಈ ವೇದಿಕೆ ಮೇಲೆ ಮಾತನಾಡುವಾಗ ಅವರು ಒಂದು ವಿಷಯವನ್ನು ಹೇಳಿದ್ದರು. ಅನಿರುದ್ಧ್ ಅವರು ಅದ್ಭುತ ಮ್ಯೂಸಿಕ್ ನೀಡುತ್ತಾರೆ. ಈ ವಿಷಯವಾಗಿ ಮಾತನಾಡುವಾಗ, ‘ನನ್ನ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡೋದು ಯಾವಾಗ’ ಎಂದು ಕೇಳಿದ್ದರು. ಚೆನ್ನೈಗೆ ಬರುತ್ತೇನೆ ರ್ಯಾಪ್ ಸಾಂಗ್ ಮಾಡೋಣ ಎಂದು ಕೂಡ ಹೇಳಿದ್ದರು.
ಆ ಮೇಲೆ ಅವರು ನಿರಂತರವಾಗಿ ಮಾತನಾಡಲು ಆರಂಭಿಸಿದರು. ಆ ಬಳಿಕ ಅವರಿಗೆ ಏನನ್ನಿಸಿತೋ ಏನೋ, ‘ವೇದಿಕೆ ಮೇಲೆ ನಿಲ್ಲಿಸಿ, ನನ್ನ ಕೈಗೆ ಮೈಕ್ ಕೊಡೋದು ಅತ್ಯಂತ ಡೇಂಜರಸ್ ಕೆಲಸ’ ಎಂದು ರಣವೀರ್ ಸಿಂಗ್ ಈ ಮೊದಲೇ ಹೇಳಿದ್ದರು. ಅದು ನಿಜವಾಗಿ ಹೋಗಿದೆ ಎಂದೇ ಹೇಳಬಹುದು.
ಇದನ್ನೂ ಓದಿ: ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ರಣವೀರ್ ಸಿಂಗ್ ಅವರು ಮಾತನಾಡುವಾಗ ಅವರೇ ತೊಂದರೆ ಮಾಡಿಕೊಂಡಿದ್ದರು. ದೈವದ ಬಗ್ಗೆ ಕೀಳಾಗಿ ಮಾತನಾಡಿ ಟೀಕೆ ಎದುರಿಸಿದ್ದರು. ಇದು ನಿರಂತರವಾಗಿ ನಡೆದೇ ಇದೆ. ಈ ವಿಷಯದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸಬೇಕಾಯಿತು. ರಣವೀರ್ ಸಿಂಗ್ ಅವರ ಮೇಲೆ ಈಗಲೂ ಕೇಸ್ ನಡೆಯುತ್ತಿದೆ. ಈ ಕೇಸ್ನಿಂದ ಅವರು ಯಾವಾಗ ಮುಕ್ತಿ ಪಡೆಯುತ್ತಾರೋ ಗೊತ್ತಿಲ್ಲ. ಅವರ ನಟನೆಯ ‘ಧುರಂದರ್ 2’ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿ ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರ ಎಷ್ಟು ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.