ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ?

Bollywood on Attack: ಬಾಲಿವುಡ್​​ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ ಎದರಿಸಿದ್ದಾರೆ. ಕೆಲವು ನಟ-ನಟಿಯರು ಈ ಪಾತಕಿಗಳೊಟ್ಟಿಗೆ ಆತ್ಮೀಯ ಬಂಧವನ್ನೂ ಇರಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡಿದ್ದಿದೆ. ಕೆಲವರು ಈ ಪಾತಕಿಗಳ ಮನೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿದ್ದೂ ಸಹ ಇದೆ. ಕೆಲವು ಸೆಲೆಬ್ರಿಟಿಗಳ ಕೊಲೆಯನ್ನೂ ಸಹ ಭೂಗತ ಪಾತಕಿಗಳು ಮಾಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಬಾಲಿವುಡ್​​ಗೆ ಭೂಗತ ಪಾತಕಿಗಳ ಕಾಟ ತುಸು ತಪ್ಪಿತ್ತು. ಆದರೆ ಈಗ ಮತ್ತೆ ಶುರುವಾಗಿದೆ.

ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ?
Bollywood

Updated on: Feb 01, 2026 | 9:52 PM

ಬಾಲಿವುಡ್ (Bollywood) ಮತ್ತು ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ದಾವೂದ್ ಇಬ್ರಾಹಿಂಗಿಂತಲೂ ಮುಂಚಿನಿಂದಲೂ ಭೂತದ ಪಾತಕಿಗಳು ಬಾಲಿವುಡ್​​ ಜೊತೆಗೆ ಸಕ್ರಿಯ ನಂಟು ಹೊಂದಿದ್ದಾರೆ. ಬಾಲಿವುಡ್​​ನಲ್ಲಿರುವ ರಾಶಿ-ರಾಶಿ ಹಣ ಭೂಗತ ಜಗತ್ತನ್ನು ಅದರತ್ತ ಸೆಳೆದಿದೆ. ದಾವೂದ್ ಕಾಲದಿಂದಲೂ ಸಿನಿಮಾಗಳ ನಿರ್ಮಾಣ, ನಟ-ನಟಿಯರ ಆಯ್ಕೆ, ಹಫ್ತಾ ವಸೂಲಿ, ಲಾಭ ಹಂಚಿಕೆ, ಸಿನಿಮಾ ಫೈನ್ಯಾನ್ಸ್ ಇನ್ನೂ ಹಲವು ವಿಷಯಗಳಲ್ಲಿ ಭೂಗತ ಲೋಕದವರು ಬಾಲಿವುಡ್​​ ಮೇಲೆ ಪ್ರಭಾವ ಬೀರುತ್ತಲೇ ಬರುತ್ತಿದ್ದಾರೆ.

ಬಾಲಿವುಡ್​​ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ ಎದರಿಸಿದ್ದಾರೆ. ಕೆಲವು ನಟ-ನಟಿಯರು ಈ ಪಾತಕಿಗಳೊಟ್ಟಿಗೆ ಆತ್ಮೀಯ ಬಂಧವನ್ನೂ ಇರಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡಿದ್ದಿದೆ. ಕೆಲವರು ಈ ಪಾತಕಿಗಳ ಮನೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿದ್ದೂ ಸಹ ಇದೆ. ಕೆಲವು ಸೆಲೆಬ್ರಿಟಿಗಳ ಕೊಲೆಯನ್ನೂ ಸಹ ಭೂಗತ ಪಾತಕಿಗಳು ಮಾಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಬಾಲಿವುಡ್​​ಗೆ ಭೂಗತ ಪಾತಕಿಗಳ ಕಾಟ ತುಸು ತಪ್ಪಿತ್ತು. ಆದರೆ ಈಗ ಮತ್ತೆ ಶುರುವಾಗಿದೆ.

ಕಳೆದ ಕೆಲವಾರು ವರ್ಷಗಳಿಂದ ಬಾಲಿವುಡ್​ ಮೇಲೆ ಮತ್ತೆ ಭೂಗತ ಪಾತಕಿಗಳ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್ ಮನೆ ಮೇಲೆ ಹಲವು ಬಾರಿ ದಾಳಿ ಮಾಡಲಾಯ್ತು. ಈ ಸಂಬಂಧ ಕೆಲವರ ಬಂಧನವೂ ಆಯ್ತು. ಖ್ಯಾತ ಕಮಿಡಿಯನ್ ಕಪಿಲ್ ಶರ್ಮಾಗೆ ಸೇರಿದ ರೆಸ್ಟೊರೆಂಟ್ ಮೇಲೆ ಸತತ ದಾಳಿಗಳು ನಡೆದಿವೆ. ನಿರ್ಮಾಪಕ, ರಾಜಕಾರಣಿ ಹಾಗೂ ಸಲ್ಮಾನ್, ಶಾರುಖ್ ಅವರಿಗೆ ಆಪ್ತವಾಗಿದ್ದ ಬಾಬಾ ಸಿದ್ಧಿಖಿಯನ್ನು ಕೊಲೆ ಮಾಡಲಾಯ್ತು. ಗಾಯಕ ಅರಿಜಿತ್ ಸಿಂಗ್​​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ದೂರು ಸಹ ದಾಖಲಾಗಿದೆ. ಗಾಯಕ ಹನಿ ಸಿಂಗ್ ಅವರಿಗೂ ಕೊಲೆ ಬೆದರಿಕೆಗಳು ಬಂದಿವೆ. ಗಾಯಕ ದಿಲ್ಜೀತ್ ದೊಸ್ಸಾಂಜ್ ಅವರಿಗೂ ಬೆದರಿಕೆ ಬಂದಿವೆ.

ಇದನ್ನೂ ಓದಿ:ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್​​ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?

ಇಂದು ಬೆಳ್ಳಂಬೆಳಿಗ್ಗೆ ಖ್ಯಾತ ನಿರ್ದೇಶಕ, ನಿರ್ಮಾಪಕರೂ ಆಗಿರುವ ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಲಾಗಿದೆ. ಕೆಲವರು ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಇವರಷ್ಟೆ ಅಲ್ಲದೆ, ಬಾಲಿವುಡ್​ನ ಇನ್ನೂ ಕೆಲವು ನಟ, ನಿರ್ಮಾಪಕರುಗಳಿಗೆ ಸಹ ಭೂಗತ ಪಾತಕಿಗಳ ಬೆದರಿಕೆಗಳು ಬಂದಿವೆ. ಒಟ್ಟಾರೆ ಮತ್ತೆ ಭೂಗತ ಜಗತ್ತು ಬಾಲಿವುಡ್​ ಮೇಲೆ ಕಣ್ಣು ಹಾಕಿದೆ. ಇದು ಬಾಲಿವುಡ್​ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ