‘ಪೆದ್ದಿ’ ಸಿನಿಮಾಕ್ಕೆ ಬರಲಿದೆಯೇ ಸೀಕ್ವೆಲ್? ಕತೆಯಲ್ಲಿ ಇದೆಯೇ ಸುಳಿವು?

Peddi movie sequel: ರಾಮ್ ಚರಣ್ ಬಹಳ ಶ್ರಮ ಹಾಕಿ ‘ಪೆದ್ದಿ’ ಸಿನಿಮಾ ಮಾಡಿದ್ದಾರೆಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೊದಲ ದಿನವೇ ದೇಶದಾದ್ಯಂತ ರಾಮ್ ಚರಣ್ ಅವರ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ. ರಾಮ್ ಚರಣ್ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಇಬ್ಬರೂ ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಅಂದಹಾಗೆ ‘ಪೆದ್ದಿ’ ಸಿನಿಮಾದ ಸೀಕ್ವೆಲ್ ಬರಲಿದೆಯೇ?

‘ಪೆದ್ದಿ’ ಸಿನಿಮಾಕ್ಕೆ ಬರಲಿದೆಯೇ ಸೀಕ್ವೆಲ್? ಕತೆಯಲ್ಲಿ ಇದೆಯೇ ಸುಳಿವು?
Ram Charan Peddi

Updated on: Jun 04, 2026 | 6:53 PM

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 04) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಮ್ ಚರಣ್ ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೊದಲ ದಿನವೇ ದೇಶದಾದ್ಯಂತ ರಾಮ್ ಚರಣ್ ಅವರ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ. ರಾಮ್ ಚರಣ್ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಇಬ್ಬರೂ ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗುವ ದೊಡ್ಡ ಬಜೆಟ್​​ನ ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲ ಸೀಕ್ವೆಲ್​​ಗಳು ಬರುತ್ತಿವೆ. ಇತ್ತೀಚೆಗಂತೂ ಸೀಕ್ವೆಲ್​​ಗಳ ಕಾಲವಾಗಿದೆ. ಕೆಲವರಂತೂ ‘ಸಿನಿಮ್ಯಾಟಿಕ್ ಯೂನಿವರ್ಸ್​​’ ಸಹ ಮಾಡುತ್ತಿದ್ದಾರೆ. ಈಗ ‘ಪೆದ್ದಿ’ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಸೀಕ್ವೆಲ್ ಸಹ ಬರಲಿದೆಯೇ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಸಹಜವಾಗಿದೆ. ಈ ಪ್ರಶ್ನೆಗೆ ಕೆಲ ದಿನಗಳ ಹಿಂದೆಯೇ ನಿರ್ದೇಶಕ ಬುಚ್ಚಿಬಾಬು ಸನಾ ಉತ್ತರ ನೀಡಿದ್ದಾರೆ.

ಸಾಮಾನ್ಯವಾಗಿ ಸೀಕ್ವೆಲ್ ಮಾಡುವ ಉದ್ದೇಶವುಳ್ಳ ನಿರ್ದೇಶಕರು ಸಿನಿಮಾದ ಅಂತ್ಯದಲ್ಲಿ ಸುಳಿವು ನೀಡುತ್ತಾರೆ. ಆದರೆ ‘ಪೆದ್ದಿ’ ಸಿನಿಮಾದ ಅಂತ್ಯದಲ್ಲಿ ಸೀಕ್ವೆಲ್ ಬರುವುದರ ಬಗ್ಗೆ ಯಾವುದೇ ಸುಳಿವನ್ನು ನೀಡಲಾಗಿಲ್ಲ. ಕೆಲ ದಿನಗಳ ಹಿಂದಷ್ಟೆ ಈ ಬಗ್ಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬುಚ್ಚಿಬಾಬು ಸನಾ, ತಮಗೆ ‘ಪೆದ್ದಿ’ಯ ಕತೆ ಕೇವಲ ಒಂದು ಕತೆಯಾಗಿ ಹೊಳೆದಿತ್ತು, ಹಾಗಾಗಿ ಅದನ್ನು ಒಂದೇ ಸಿನಿಮಾ ಮಾಡಿದ್ದೇನೆ. ‘ಪೆದ್ದಿ’ ಬರುತ್ತಾನೆ, ಆತ ಸಾಧಿಸುತ್ತಾನೆ, ಆತನ ಕತೆ ಮುಗಿಯುತ್ತದೆ ಅಷ್ಟೆ, ಸೀಕ್ವೆಲ್​​ಗಾಗಿ ಅದನ್ನು ಹಿಗ್ಗಿಸುವ ಅವಶ್ಯಕತೆ ಇಲ್ಲ’ ಎಂದಿದ್ದರು.

ಇದನ್ನೂ ಓದಿ:Peddi Movie review: ‘ಪೆದ್ದಿ’: ರಾಮ್ ಚರಣ್ ಸಿಕ್ಸರ್, ನಿರ್ದೇಶಕ ರನೌಟ್

‘ಪೆದ್ದಿ’ ಸಿನಿಮಾವು ಒಂದು ಘನ ಉದ್ದೇಶವನ್ನು ಈಡೇರಿಸಲೆಂದು ಕ್ರೀಡಾಪಟುವಾಗುವ ಸಣ್ಣ ಗ್ರಾಮದ ಮಾಮೂಲಿ ಯುವಕನೊಬ್ಬನ ಕತೆ. ಸಿನಿಮಾನಲ್ಲಿ ನಟ ರಾಮ್ ಚರಣ್ ಅವರು ಕ್ರಿಕೆಟ್, ಕುಸ್ತಿ ಮತ್ತು ಮತ್ತೊಂದು ಕ್ರೀಡೆಯನ್ನು ಆಡುತ್ತಾರೆ. ಆಟದ ಮೂಲಕ ತಮಗಾಗಿ ಒಂದು ಐಡೆಂಟಿಟಿಯನ್ನು ಕಟ್ಟಿಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಕುಸ್ತಿ ಗುರುವಾಗಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ರತ್ನವೇಲು ಕ್ಯಾಮೆರಾ ಇದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us