‘ನಿಮಗಿಂತ ನನಗೆ ಹೆಚ್ಚು ನೋವಾಗಿದೆ’; ‘ದೇವರ’ ಈವೆಂಟ್ ಕ್ಯಾನ್ಸಲ್ ಬಗ್ಗೆ ಜೂ. ಎನ್​​ಟಿಆರ್ ವಿಷಾದ

|

Updated on: Sep 23, 2024 | 11:41 AM

‘ದೇವರ’ ಪ್ರೀ ರಿಲೀಸ್ ಇವೆಂಟ್​ನಲ್ಲಿ ಪ್ರತಿ ನಿಮಿಷವೂ ಜನ ದಟ್ಟಣೆ ಹೆಚ್ಚುತ್ತಲೇ ಹೋಯಿತು. ಕೆಲವರು ಅಲ್ಲಿದ್ದ ವಸ್ತುಗಳಿಗೆ ಹಾನಿ ಕೂಡ ಮಾಡಿದರು. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬುದನ್ನು ತಿಳಿದ ಬಳಿಕ ಕೆಲವು ಸೆಲೆಬ್ರಿಟಿಗಳು ಅಲ್ಲಿಂದ ಕಾಲ್ಕಿತ್ತರು.

‘ನಿಮಗಿಂತ ನನಗೆ ಹೆಚ್ಚು ನೋವಾಗಿದೆ’; ‘ದೇವರ’ ಈವೆಂಟ್ ಕ್ಯಾನ್ಸಲ್ ಬಗ್ಗೆ ಜೂ. ಎನ್​​ಟಿಆರ್ ವಿಷಾದ
ಜೂನಿಯರ್ ಎನ್​ಟಿಆರ್
Follow us on

ಜೂನಿಯರ್​ ಎನ್​​ಟಿಆರ್ ಅವರ ‘ದೇವರ’ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ಸೆಪ್ಟೆಂಬರ್ 22ರಂದು ನಡೆಯಬೇಕಿತ್ತು. ಕೆಲವೇ ಸಾವಿರ ಜನರು ನಡೆಯುವ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದರಿಂದ ಅದನ್ನು ಕ್ಯಾನ್ಸಲ್ ಮಾಡಲಾಯಿತು. ಭಾರೀ ರಾದ್ದಾಂತ ನಡೆದಿದ್ದರಿಂದ ಬಂದ ಸೆಲೆಬ್ರಿಟಿಗಳು ತೊಂದರೆ ಅನುಭವಿಸಬೇಕಾಯಿತು. ಈ ಘಟನೆ ಬಗ್ಗೆ ಜೂನಿಯರ್ ಎನ್​ಟಿಆರ್ ಪ್ರತಿಕ್ರಿಯೆ ನೀಡಿದ್ದಾರೆ.

‘ದೇವರ ಈವೆಂಟ್ ಕ್ಯಾನ್ಸಲ್ ಆಗಿದೆ ಎಂದು ತಿಳಿದು ಬೇಸರ ಆಯಿತು. ಈ ಇವೆಂಟ್​ಗಾಗಿ ನಾನು ಕಾದಿದ್ದೆ. ನಾನು ನಿಮ್ಮೊಂದಿಗೆ ಸಮಯ ಕಳೆಯಲು ಮತ್ತು ದೇವರ ಬಗ್ಗೆ ಅನೇಕ ಆಸಕ್ತಿದಾಯಕ ವಿವರಗಳನ್ನು ಹಂಚಿಕೊಳ್ಳಲು ಕಾದಿದ್ದೆ. ಈ ಸಿನಿಮಾಗಾಗಿ ಹಾಕಿದ ಶ್ರಮದ ಬಗ್ಗೆ ತಿಳಿಸಲು ಕಾದಿದ್ದೆ. ಆದರೆ, ಭದ್ರತೆಯ ಕಾರಣದಿಂದ ಈ ಕಾರ್ಯಕ್ರಮ ನಡೆಯಲಿಲ್ಲ. ನಿಮಗಿಂತ ಹೆಚ್ಚು ನೋವು ನನಗೆ ಆಗಿದೆ. ಈ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದಕ್ಕೆ ನಿರ್ಮಾಪಕರು ಹಾಗೂ ಸಂಘಟಕರನ್ನು ಬಯ್ಯೋದು ತಪ್ಪು’ ಎಂದಿದ್ದಾರೆ ಅವರು.

‘ದೇವರ’ ಈವೆಂಟ್​ಗೆ ಫ್ಯಾನ್ಸ್ ಕಾದಿದ್ದರು. ಕಳೆದ ಆರು ವರ್ಷಗಳಲ್ಲಿ ಜೂನಿಯರ್ ಎನ್​ಟಿಆರ್ ಸೋಲೋ ಹೀರೋ ಆಗಿ ನಟಿಸಿದ ಸಿನಿಮಾ ಇದು. ಈ ಸಿನಿಮಾ ಮಾಡುವಾಗ ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಈಗ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವಾಗ ಈ ರೀತಿ ಆಗಿದೆ.

ಇದನ್ನೂ ಓದಿ: ಇನ್ನೊಂದು ಟ್ರೇಲರ್​ ಬಿಡುಗಡೆ ಮಾಡಿದ ‘ದೇವರ’ ಚಿತ್ರತಂಡ; ಜನರಿಗೆ ಇಷ್ಟ ಆಯ್ತಾ?

‘ದೇವರ’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮವನ್ನು ಕೆಲವೇ ಸಾವಿರ ಜನರು ಸೇರಬಹುದಾದ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದು ಚಿತ್ರತಂಡದವರು ಮಾಡಿದ ಮೊದಲ ತಪ್ಪು. ಇವೆಂಟ್​ ನಡೆಯಬೇಕಿದ್ದ ಸ್ಥಳದಲ್ಲಿ ಅಂದಾಜು 15ರಿಂದ 20 ಸಾವಿರ ಜನರು ನೆರೆದಿದ್ದರು. ಎಲ್ಲರಿಗೂ ಜಾಗ ಸಿಗದ ಕಾರಣ ವಿಐಪಿ ಅತಿಥಿಗಳಿಗೆ ಮೀಸಲಾಗಿದ್ದ ಕುರ್ಚಿಗಳತ್ತ ಕೆಲವರು ನುಗ್ಗಿದರು. ಇದರಿಂದ ತೊಂದರೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:33 am, Mon, 23 September 24