ಉಮಾಶ್ರೀ ಹೇಳಿದ ಆ ಒಂದು ಮಾತಿಗೆ ಕಣ್ಣೀರು ಹಾಕಿದ್ದ ಎಸ್​. ಜಾನಕಿ

ಖ್ಯಾತ ಗಾಯಕಿ ಎಸ್. ಜಾನಕಿ ನಿಧನದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಜಾನಕಿ, 2014ರ ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲಿ ಉಮಾಶ್ರೀ 'ಅಮ್ಮ' ಎಂದಾಗ ಭಾವುಕರಾಗಿದ್ದರು. ಅಭಿಮಾನಿಗಳ ಅಪಾರ ಪ್ರೀತಿಗೆ ಮನಸೋತು ಪ್ರಶಸ್ತಿ ಸ್ವೀಕರಿಸಿದ್ದಾಗಿ ಹೇಳಿದ್ದರು. ಅವರ ಕನ್ನಡಾಭಿಮಾನ ಮತ್ತು ಅಭಿಮಾನಿಗಳೊಂದಿಗಿನ ಬಾಂಧವ್ಯ ಸದಾ ಸ್ಮರಣೀಯ.

ಉಮಾಶ್ರೀ ಹೇಳಿದ ಆ ಒಂದು ಮಾತಿಗೆ ಕಣ್ಣೀರು ಹಾಕಿದ್ದ ಎಸ್​. ಜಾನಕಿ
ಉಮಾಶ್ರೀ-ಜಾನಕಿ

Updated on: Jul 11, 2026 | 9:56 PM

ಮುಖ್ಯಾಂಶಗಳು

  • ಗಾಯಕಿ ಎಸ್. ಜಾನಕಿ ನಿಧನ
  • ಸಂಗೀತ ಸಾಮ್ರಾಜ್ಯಕ್ಕೆ ತುಂಬಲಾರದ ನಷ್ಟ
  • ಕನ್ನಡ ನಾಡು ಮತ್ತು ಕನ್ನಡಿಗರ ಮೇಲೆ ಅಗಾಧ ಪ್ರೀತಿ

ಖ್ಯಾತ ಗಾಯಕಿ ಎಸ್​. ಜಾನಕಿ ಅವರು ಇಂದು (ಜುಲೈ 11) ರಾತ್ರಿ 7.30ರ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಅವರ ನಿಧನವು ಸಂಗೀತ ಲೋಕಕ್ಕೆ ದೊಡ್ಡ ನಷ್ಟವನ್ನು ತಂದಿದೆ. ಜಾನಕಿ ಅವರು ಆಂಧ್ರದವರು. ಆದರೆ, ಅವರಿಗೆ ಕನ್ನಡದ ಬಗ್ಗೆ ವಿಶೇಷ ಗೌರವ ಇತ್ತು. ಇಲ್ಲಿನ ಜನರು ಕೊಡುತ್ತಿದ್ದ ಪ್ರೀತಿಗೆ ಅವರು ಮನಸೋತಿದ್ದರು. ಅವರು ಈ ಮೊದಲು ಕನ್ನಡದಲ್ಲೇ ಮಾತನಾಡಿ, ಇಲ್ಲಿನ ಜನರು ತೋರಿಸಿದ್ದ ಪ್ರೀತಿಗೆ ಖುಷಿ ಹೊರಹಾಕಿದ್ದರು.

2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕಾರ್ಯಕ್ರಮದಲ್ಲಿ ಜಾನಕಿ ಅವರು ಭಾಗಿ ಆಗಿ, ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದರು. ‘ನಾನು 1957ರಲ್ಲಿ ಚಿತ್ರರಂಗಕ್ಕೆ ಬಂದೆ. ಅಂದಿನಿಂದ ಎಷ್ಟೋ ಹಾಡುಗಳನ್ನು ಹಾಡಿದ್ದೇನೆ. ನಾನು ಹೆಚ್ಚು ಹಾಡನ್ನು ಹಾಡಿದ್ದು ಕನ್ನಡದಲ್ಲಿ. ನಂತರ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಅಭಿಮಾನಿಗಳ ಮನಸ್ಸಿನಲ್ಲಿ ತುಂಬಿಕೊಂಡಿದ್ದೇನೆ. ಅವರು ನನಗೆ ಕೊಡೋ ಪ್ರಶಸ್ತಿ ತುಂಬಾ ದೊಡ್ಡದು. ನನಗೂ ಒಂದು ಪ್ರಶಸ್ತಿ ಕೊಟ್ಟರು. ತುಂಬಾ ಖುಷಿ ಆಯಿತು’ ಎಂದಿದ್ದರು ಜಾನಕಿ.

YouTube video player

‘ಉಮಾಶ್ರೀ ಅವರು ಕರೆ ಮಾಡಿ ನನಗೆ ಅವಾರ್ಡ್ ಕೊಡೋ ಬಗ್ಗೆ ಹೇಳಿದರು. ಬರಬೇಕು ಎಂದು ಆಹ್ವಾನ ಕೊಟ್ಟರು. ನನಗೆ ಕಮಿಟ್​​ಮೆಂಟ್ ಇದೆ, ಒಂದು ವಾರ ಆದರೂ ಮೊದಲು ಹೇಳಬೇಕಿತ್ತು ಎಂದಿದ್ದೆ. ಬರಲೇಬೇಕು ಎಂದು ಹಠ ಹಿಡಿದರು. ನೀವು ನನ್ನ ತಾಯಿ ಹಾಗೆ ಎಂದರು. ಅಮ್ಮ ಎಂದಾಗ ನನಗೆ ಅಳು ಬಂದುಹೋಯ್ತು. ಎಲ್ಲಾ ಅಭಿಮಾನಿಗಳು ನನ್ನ ಅಮ್ಮ ಎನ್ನುತ್ತಾರೆ. ಅಭಿಮಾನಿಗಳಿಗೋಸ್ಕರ ಪ್ರಶಸ್ತಿ ಸ್ವೀಕರಿಸಿದ್ದಾರೆ’ ಎಂದಿದ್ದರು ಜಾನಕಿ.

ಇದನ್ನೂ ಓದಿ: S Janaki Obituary: ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ

‘ನನಗೆ ಸಾಕಷ್ಟು ಫೋನ್ ಹಾಗೂ ಮೆಸೇಜ್​​ಗಳು ಬಂದಿದ್ದವು. ನೀವು ಪ್ರಶಸ್ತಿ ಸ್ವೀಕರಿಸಬೇಕು ಎಂದಿದ್ದರು. ನಿಮಗೋಸ್ಕರ ಅವಾರ್ಡ್ ಸ್ವೀಕರಿಸಿದ್ದೇನೆ’ ಎಂದು ಅವರು ಕನ್ನಡದಲ್ಲೇ ಮಾತನಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us