AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದ ಸಿನಿಮಾಗಳು, ರಿಷಬ್ ಶೆಟ್ಟಿ ಸಿನಿಮಾ ಸಹ ಪಟ್ಟಿಯಲ್ಲಿದೆ

OTT Release: ಈ ವಾರವೂ ಕೆಲವು ಒಳ್ಳೆಯ ಸಿನಿಮಾಗಳು ಒಟಿಟಿಗೆ ಬಂದಿವೆ. ಜೊತೆಗೆ ಕೆಲವು ಫ್ಲಾಪ್ ಸಿನಿಮಾಗಳು ಸಹ ಈ ವಾರ ತೆರೆಗೆ ಬಂದಿವೆ. ಕೆಲವು ಹೊಸ ವೆಬ್ ಸರಣಿಗಳು ಸಹ ಈ ವಾರ ಬಿಡುಗಡೆ ಆಗುತ್ತಿವೆ. ಕನ್ನಡ ಸಿನಿಮಾಗಳು ಒಟಿಟಿಗೆ ಬರುವುದೇ ಕಡಿಮೆ ಆದರೆ ಈ ವಾರ ಕನ್ನಡ ಸಿನಿಮಾ ಒಂದು ಒಟಟಿಗೆ ಬರುತ್ತಿದೆ. ಅದೂ ಸಾಮಾನ್ಯ ಸಿನಿಮಾ ಅಲ್ಲ ಪ್ರಶಸ್ತಿ ವಿಜೇತ ಸಿನಿಮಾ.

ಮಂಜುನಾಥ ಸಿ.
|

Updated on: Apr 04, 2025 | 12:01 PM

Share
ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ‘ಶಿವಮ್ಮ’ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಶಿವಮ್ಮ ಸಿನಿಮಾ ಭಿನ್ನಕತೆಯಳ್ಳ ಸಿನಿಮಾ ಆಗಿದ್ದು, ಕೆಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿದೆ. ಹಳ್ಳಿಗಾಡಿನ ಹೆಂಗಸೊಬ್ಬರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿಸಿರುವವರು ತರಬೇತಿ ಪಡೆದ ನಟರಲ್ಲ, ಬದಲಿಗೆ ಹಳ್ಳಿಗರೇ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸನ್ ನೆಕ್ಸ್ಟ್​ನಲ್ಲಿ ಇಂದಿನಿಂದ ವೀಕ್ಷಣೆಗೆ ಲಭ್ಯ ಇದೆ.

ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ‘ಶಿವಮ್ಮ’ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಶಿವಮ್ಮ ಸಿನಿಮಾ ಭಿನ್ನಕತೆಯಳ್ಳ ಸಿನಿಮಾ ಆಗಿದ್ದು, ಕೆಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿದೆ. ಹಳ್ಳಿಗಾಡಿನ ಹೆಂಗಸೊಬ್ಬರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿಸಿರುವವರು ತರಬೇತಿ ಪಡೆದ ನಟರಲ್ಲ, ಬದಲಿಗೆ ಹಳ್ಳಿಗರೇ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸನ್ ನೆಕ್ಸ್ಟ್​ನಲ್ಲಿ ಇಂದಿನಿಂದ ವೀಕ್ಷಣೆಗೆ ಲಭ್ಯ ಇದೆ.

1 / 5
ಕನ್ನಡಿಗ ದೀಕ್ಷಿತ್ ಶೆಟ್ಟಿ, ನವದೀಪ್ ಕೋಮಲಿ ಪ್ರಸಾದ್ ನಟಿಸಿರುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ‘ಟಚ್ ಮೀ ನಾಟ್’ ಜಿಯೋ ಹಾಟ್​​ಸ್ಟಾರ್​ನಲ್ಲಿ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿಗೆ ವಿಶೇಷ ಶಕ್ತಿಗಳಿರುತ್ತವೆ. ಇದೊಂದು ಕ್ರೈಂ ಥ್ರಿಲ್ಲರ್ ಕತೆಯಾಗಿದ್ದು ಸಖತ್ ಆಕ್ಷನ್ ಜೊತೆಗೆ ಹಾಸ್ಯ ಮತ್ತು ಲವ್ ಸ್ಟೋರಿ ಸಹ ಇದೆ. ಸಿನಿಮಾದ ಟ್ರೈಲರ್ ಕುತೂಹಲ ಹುಟ್ಟಿಸುವಂತಿದೆ.

ಕನ್ನಡಿಗ ದೀಕ್ಷಿತ್ ಶೆಟ್ಟಿ, ನವದೀಪ್ ಕೋಮಲಿ ಪ್ರಸಾದ್ ನಟಿಸಿರುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ‘ಟಚ್ ಮೀ ನಾಟ್’ ಜಿಯೋ ಹಾಟ್​​ಸ್ಟಾರ್​ನಲ್ಲಿ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿಗೆ ವಿಶೇಷ ಶಕ್ತಿಗಳಿರುತ್ತವೆ. ಇದೊಂದು ಕ್ರೈಂ ಥ್ರಿಲ್ಲರ್ ಕತೆಯಾಗಿದ್ದು ಸಖತ್ ಆಕ್ಷನ್ ಜೊತೆಗೆ ಹಾಸ್ಯ ಮತ್ತು ಲವ್ ಸ್ಟೋರಿ ಸಹ ಇದೆ. ಸಿನಿಮಾದ ಟ್ರೈಲರ್ ಕುತೂಹಲ ಹುಟ್ಟಿಸುವಂತಿದೆ.

2 / 5
ಆರ್ ಮಾಧವನ್, ಸಿದ್ಧಾರ್ಥ್, ನಯನತಾರಾ ನಟಿಸಿರುವ ‘ಟೆಸ್ಟ್’ ಸಿನಿಮಾ ಏಪ್ರಿಲ್ ನಾಲ್ಕರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಕ್ರಿಕೆಟ್, ಭ್ರಷ್ಟಾಚಾರ, ವಿಜ್ಞಾನದ ವಿಷಯಗಳನ್ನು ಒಳಗೊಂಡಿದೆ. ಇದರ ಜೊತೆಗೆ ಒಂದು ಕೌಟುಂಬಿಕ ಕತೆಯೂ ಸಿನಿಮಾದಲ್ಲಿದೆ. ಸಿದ್ಧಾರ್ಥ್ ಕ್ರಿಕೆಟ್ ಆಟಗಾರನಾಗಿ, ಮಾಧವನ್ ವಿಜ್ಞಾನಿಯಾಗಿ ನಟಿಸಿದ್ದಾರೆ.

ಆರ್ ಮಾಧವನ್, ಸಿದ್ಧಾರ್ಥ್, ನಯನತಾರಾ ನಟಿಸಿರುವ ‘ಟೆಸ್ಟ್’ ಸಿನಿಮಾ ಏಪ್ರಿಲ್ ನಾಲ್ಕರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಕ್ರಿಕೆಟ್, ಭ್ರಷ್ಟಾಚಾರ, ವಿಜ್ಞಾನದ ವಿಷಯಗಳನ್ನು ಒಳಗೊಂಡಿದೆ. ಇದರ ಜೊತೆಗೆ ಒಂದು ಕೌಟುಂಬಿಕ ಕತೆಯೂ ಸಿನಿಮಾದಲ್ಲಿದೆ. ಸಿದ್ಧಾರ್ಥ್ ಕ್ರಿಕೆಟ್ ಆಟಗಾರನಾಗಿ, ಮಾಧವನ್ ವಿಜ್ಞಾನಿಯಾಗಿ ನಟಿಸಿದ್ದಾರೆ.

3 / 5
ಸಮುದ್ರದಡದಲ್ಲಿ ನಡೆಯುವ ಅದ್ಭುತ ಥ್ರಿಲ್ಲರ್ ಕತೆ ಒಳಗೊಂಡಿರುವ ‘ಕಿಂಗ್​ಸ್ಟನ್’ ಏಪ್ರಿಲ್ 4 ರಂದು ಜೀ 5ನಲ್ಲಿ ಬಿಡುಗಡೆ ಆಗಿದೆ. ಜಿವಿ ಪ್ರಕಾಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಹಾರರ್, ಥ್ರಿಲ್ಲರ್ ಜೊತೆಗೆ ಆಕ್ಷನ್ ಅನ್ನು ಒಳಗೊಂಡಿದೆ. ಸಮುದ್ರದಾಳದಲ್ಲಿರುವ ನಿಧಿ, ಅದಕ್ಕೆ ತಟ್ಟಿರುವ ಶಾಪ ಅದನ್ನೆಲ್ಲ ದಾಟಿ ನಿಧಿಯನ್ನು ಹುಡುಕಿ ಕೊರಟ ಕಡಲ ಮಕ್ಕಳ ಕತೆ ಈ ಸಿನಿಮಾದಲ್ಲಿದೆ.

ಸಮುದ್ರದಡದಲ್ಲಿ ನಡೆಯುವ ಅದ್ಭುತ ಥ್ರಿಲ್ಲರ್ ಕತೆ ಒಳಗೊಂಡಿರುವ ‘ಕಿಂಗ್​ಸ್ಟನ್’ ಏಪ್ರಿಲ್ 4 ರಂದು ಜೀ 5ನಲ್ಲಿ ಬಿಡುಗಡೆ ಆಗಿದೆ. ಜಿವಿ ಪ್ರಕಾಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಹಾರರ್, ಥ್ರಿಲ್ಲರ್ ಜೊತೆಗೆ ಆಕ್ಷನ್ ಅನ್ನು ಒಳಗೊಂಡಿದೆ. ಸಮುದ್ರದಾಳದಲ್ಲಿರುವ ನಿಧಿ, ಅದಕ್ಕೆ ತಟ್ಟಿರುವ ಶಾಪ ಅದನ್ನೆಲ್ಲ ದಾಟಿ ನಿಧಿಯನ್ನು ಹುಡುಕಿ ಕೊರಟ ಕಡಲ ಮಕ್ಕಳ ಕತೆ ಈ ಸಿನಿಮಾದಲ್ಲಿದೆ.

4 / 5
ನಿಜ ಘಟನೆ ಆಧರಿಸಿದ ಸಿನಿಮಾ ‘ಕಾಫಿರ್’ ಜೀ5ನಲ್ಲಿ ಇದೇ ವಾರ ತೆರೆಗೆ ಬಂದಿದೆ. ಪಾಕಿಸ್ತಾನಿ ಮಹಿಳೆಯೊಬ್ಬಾಕೆ ತಪ್ಪಿ ಭಾರತದ ಬಾರ್ಡರ್ ದಾಟಿ ಬಂದು ಇಲ್ಲಿ ಸೆರೆ ಸಿಕ್ಕಿ ಬಿಡುತ್ತಾಳೆ. ಆ ನಂತರ ಬಹಳ ಕಠಿಣವಾದ ಕಾನೂನು ಹೋರಾಟವನ್ನು ಆ ಮಹಿಳೆ ಮಾಡಬೇಕಾಗುತ್ತದೆ. ಇದರ ಕತೆಯನ್ನು ಕಾಫಿರ್ ಒಳಗೊಂಡಿದ್ದು, ಸಿನಿಮಾದಲ್ಲಿ ದಿಯಾ ಮಿರ್ಜಾ ನಾಯಕಿಯಾಗಿ ನಟಿಸಿದ್ದಾರೆ.

ನಿಜ ಘಟನೆ ಆಧರಿಸಿದ ಸಿನಿಮಾ ‘ಕಾಫಿರ್’ ಜೀ5ನಲ್ಲಿ ಇದೇ ವಾರ ತೆರೆಗೆ ಬಂದಿದೆ. ಪಾಕಿಸ್ತಾನಿ ಮಹಿಳೆಯೊಬ್ಬಾಕೆ ತಪ್ಪಿ ಭಾರತದ ಬಾರ್ಡರ್ ದಾಟಿ ಬಂದು ಇಲ್ಲಿ ಸೆರೆ ಸಿಕ್ಕಿ ಬಿಡುತ್ತಾಳೆ. ಆ ನಂತರ ಬಹಳ ಕಠಿಣವಾದ ಕಾನೂನು ಹೋರಾಟವನ್ನು ಆ ಮಹಿಳೆ ಮಾಡಬೇಕಾಗುತ್ತದೆ. ಇದರ ಕತೆಯನ್ನು ಕಾಫಿರ್ ಒಳಗೊಂಡಿದ್ದು, ಸಿನಿಮಾದಲ್ಲಿ ದಿಯಾ ಮಿರ್ಜಾ ನಾಯಕಿಯಾಗಿ ನಟಿಸಿದ್ದಾರೆ.

5 / 5
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ