
ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ (Peddi Movie) ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ತೆಲುಗು ಭಾಷೆಯ ಜೊತೆಗೆ ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ರಾಮ್ ಚರಣ್ ಹೀರೋ. ಆದರೆ, ಈ ಚಿತ್ರದ ಕಥೆಯನ್ನು ಮೊದಲು ಜೂನಿಯರ್ ಎನ್ಟಿಆರ್ಗಾಗಿ ಸಿದ್ಧಪಡಿಸಲಾಗಿತ್ತು ಎಂಬ ಮಾತಿದೆ. ಈ ವಿಷಯದ ಕುರಿತು ಬುಚ್ಚಿ ಬಾಬು ಸನಾ ಅವರು ಮಾತನಾಡಿದ್ದಾರೆ.
‘ಪೆದ್ದಿ’ ಸಿನಿಮಾ ಪಕ್ಕಾ ಕ್ರೀಡಾಧಾರಿತ ಚಿತ್ರ. ಸಿನಿಮಾದ ಟ್ರೇಲರ್ನಲ್ಲಿ ತೋರಿಸಿದಂತ ರಾಮ್ ಚರಣ್ ಅವರು ಹಲವು ರೀತಿಯ ಕ್ರೀಡೆಗಳನ್ನು ಆಡುತ್ತಾರೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಕೂಡ ನಟಿಸಿದ್ದಾರೆ. ಈ ಸಿನಿಮಾದ ಕಥೆಯನ್ನು ಜೂನಿಯರ್ ಎನ್ಟಿಆರ್ ಅವರನ್ನು ಇಟ್ಟುಕೊಂಡು ಮಾಡಲಾಗಿತ್ತು ಎಂಬ ವರದಿ ಇದೆ. ಆದರೆ, ಕಾಲ್ಶೀಟ್ ಸಿಗದ ಕಾರಣ ರಾಮ್ ಚರಣ್ ಮೊರೆ ಹೋಗಬೇಕಾಯಿತು ಎಂದು ವರದಿ ಆಗಿತ್ತು.
ಆದರೆ, ಇದನ್ನು ಬುಚ್ಚಿ ಬಾಬು ಸನಾ ಅವರು ಅಲ್ಲಗಳೆದಿದ್ದಾರೆ. ಸಂಪೂರ್ಣವಾಗಿ ರಾಮ್ ಚರಣ್ ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆ ಇದಾಗಿದೆ. ಜೂನಿಯರ್ ಎನ್ಟಿಆರ್ ಸಿಕ್ಕಿಲ್ಲ, ಅದಕ್ಕೆ ರಾಮ್ ಚರಣ್ಗೆ ಕಥೆ ಹೇಳಬೇಕಾಯಿತು ಎಂಬುದೆಲ್ಲ ಸುಳ್ಳು ಎಂಬುದನ್ನು ಬುಚ್ಚಿ ಬಾಬು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘ಪೆದ್ದಿ’ಗೆ ಹೆದರಿದ ವರುಣ್ ಧವನ್ ಸಿನಿಮಾ? ಮೊದಲ ದಿನವೇ ಟಿಕೆಟ್ ಮೇಲೆ ಶೆ.50 ಆಫರ್
‘ಪೆದ್ದಿ’ ಸಿನಿಮಾಗೆ ಮತ್ತೊಂದು ಟ್ರೇಲರ್ ಬರಲಿದೆ ಎಂದು ಕೂಡ ವರದಿ ಆಗಿತ್ತು. ಆದರೆ, ನಿರ್ಮಾಪಕರಿಗೆ ಸದ್ಯಕ್ಕಂತೂ ಆ ರೀತಿಯ ಯೋಜನೆ ಇಲ್ಲ. ಈ ಚಿತ್ರದಲ್ಲಿ ದಿವ್ಯೇಂದು ಶರ್ಮ, ಜಾನ್ವಿ ಕಪೂರ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ತೆಲುಗು ಜೊತೆಗೆ ಹಿಂದಿ ಭಾಷೆಯಲ್ಲೂ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಹಿಂದಿ ಭಾಷೆಯ ಸಿನಿಮಾಗಳಿಗೂ ‘ಪೆದ್ದಿ’ ಸ್ಪರ್ಧೆ ನೀಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:40 pm, Wed, 3 June 26