ಜೂ ಎನ್ಟಿಆರ್ ಎದುರಾಗಿ ಸಿನಿಮಾ ಘೋಷಿಸಿದ ಧನುಶ್
Dhanush and Jr NTR: ಜೂ ಎನ್ಟಿಆರ್ ಸಿನಿಮಾಕ್ಕೆ ‘ಗಾಡ್ ಆಫ್ ವಾರ್’ ಎಂದು ಹೆಸರಿಡಲಾಗಿದೆ. ಆದರೆ ಈ ಸಿನಿಮಾದ ಟೀಸರ್ ಮತ್ತು ಪೋಸ್ಟರ್ ವಿವಾದ ಹುಟ್ಟುಹಾಕಿತ್ತು. ಸಿನಿಮಾಕ್ಕೆ ತಮಿಳುನಾಡಿನ ಜನ ಆಕ್ಷೇಪ ಎತ್ತಿದ್ದರು. ರಾಜಕಾರಣಿ ಸೀಮನ್ ಸಹ ಈ ಬಗ್ಗೆ ಕಟು ಟೀಕೆ, ನಿಂದೆಗಳನ್ನು ಮಾಡಿದ್ದರು. ಅದೆಲ್ಲ ಆದ ಬೆನ್ನಲ್ಲೆ ತಮಿಳು ನಟ ಧನುಶ್, ಜೂ ಎನ್ಟಿಆರ್ ಸಿನಿಮಾಕ್ಕೆ ಎದುರಾಗಿ ಮುರುಗನ್ ಕುರಿತಾಗಿಯೇ ಸಿನಿಮಾ ಘೋಷಿಸಿದ್ದಾರೆ.

ನಟ ಜೂ ಎನ್ಟಿಆರ್ (Jr NTR) ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಜೂ ಎನ್ಟಿಆರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಲಿರುವ ಸಿನಿಮಾನಲ್ಲಿ ಜೂ ಎನ್ಟಿಆರ್ ನಟಿಸಲಿದ್ದು, ಸಿನಿಮಾವು ಮುರುಗನ್ ದೇವರ ಕುರಿತು ಆಧರಿಸಿದ್ದಾಗಿದೆ. ಸಿನಿಮಾಕ್ಕೆ ‘ಗಾಡ್ ಆಫ್ ವಾರ್’ ಎಂದು ಹೆಸರಿಡಲಾಗಿದೆ. ಆದರೆ ಈ ಸಿನಿಮಾದ ಟೀಸರ್ ಮತ್ತು ಪೋಸ್ಟರ್ ವಿವಾದ ಹುಟ್ಟುಹಾಕಿತ್ತು. ಸಿನಿಮಾಕ್ಕೆ ತಮಿಳುನಾಡಿನ ಜನ ಆಕ್ಷೇಪ ಎತ್ತಿದ್ದರು. ರಾಜಕಾರಣಿ ಸೀಮನ್ ಸಹ ಈ ಬಗ್ಗೆ ಕಟು ಟೀಕೆ, ನಿಂದೆಗಳನ್ನು ಮಾಡಿದ್ದರು. ಅದೆಲ್ಲ ಆದ ಬೆನ್ನಲ್ಲೆ ತಮಿಳು ನಟ ಧನುಶ್, ಜೂ ಎನ್ಟಿಆರ್ ಸಿನಿಮಾಕ್ಕೆ ಎದುರಾಗಿ ಮುರುಗನ್ ಕುರಿತಾಗಿಯೇ ಸಿನಿಮಾ ಘೋಷಿಸಿದ್ದಾರೆ.
ಜೂ ಎನ್ಟಿಆರ್ ಅವರ ಸಿನಿಮಾನಲ್ಲಿ ಮುರುಗನ್ ಅನ್ನು ಉತ್ತರ ಭಾರತದ ಮೂಲದ ದೇವರು ಎಂದು ಹೇಳಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪವನ್ನು ಮುರುಗನ್ ಅನ್ನು ಆರಾಧ್ಯ ದೈವವಾಗಿ ಪೂಜಿಸುವ ತಮಿಳರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಧನುಶ್ ಅವರು ‘ತಮಿಳ್ ಮುರುಗನ್’ ಹೆಸರಿನಲ್ಲಿ ಸಿನಿಮಾ ಘೋಷಿಸಿದ್ದಾರೆ. ಧನುಶ್ ಅವರ ಸಿನಿಮಾ ಸಹ ಮುರುಗನ್ ದೇವರ ಕುರಿತಾಗಿಯೇ ಆಗಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಧನುಶ್, ಕೈಯಲ್ಲಿ ಮುರುಗನ್ ದೇವರ ಆಯುಧ ಹಿಡಿದು ಆನೆಯ ಕೂತಿರುವ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಮುರುಗನ್, ದಕ್ಷಿಣ ಭಾರತೀಯ, ಆತ ತಮಿಳುನಾಡಿನಲ್ಲೇ ಜನಿಸಿದ, ಇಲ್ಲಿಯೇ ನೆಲೆಸಿದ ದೇವರು ಎಂದು ತಮಿಳರು ವಾದಿಸಿದ್ದರು. ಆದರೆ ಜೂ ಎನ್ಟಿಆರ್ ಅವರ ಸಿನಿಮಾ ತಂಡದಿಂದ ಅಥವಾ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅದರ ಬೆನ್ನಲ್ಲೆ ಈಗ ಧನುಶ್ ಸಿನಿಮಾ ಘೋಷಿಸಿದ್ದಾರೆ. ಮಾತ್ರವಲ್ಲದೆ, ಮುರುಗನ್, ತಮಿಳ ಎಂದು ಒತ್ತಿ ಹೇಳುವ ಸಲುವಾಗಿ ‘ತಮಿಳ್ ಮುರುಗನ್’ ಎಂದೇ ಸಿನಿಮಾಕ್ಕೆ ಹೆಸರಿಡಲಾಗಿದೆ.
ಇದನ್ನೂ ಓದಿ:ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಈ ಸಿನಿಮಾ ಮೂಲಕ ಐದನೇ ಭಾರಿ ವೆಟ್ರಿಮಾರನ್ ಮತ್ತು ಧನುಶ್ ಒಂದಾಗುತ್ತಿದ್ದಾರೆ. ಈ ಹಿಂದೆ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿರುವ ಜೊತೆಗೆ ರಾಷ್ಟ್ರಪ್ರಶಸ್ತಿಗಳನ್ನು ಸಹ ಬಾಚಿಕೊಂಡಿವೆ. ‘ಪೊಲ್ಲಾಧವನ್’, ‘ಆಡುಕುಲಂ’, ‘ವಡಾ ಚೆನ್ನೈ’ ಮತ್ತು ‘ಅಸುರನ್’ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿದೆ. ಇದೀಗ ‘ತಮಿಳ್ ಮುರುಗನ್’ ಸಿನಿಮಾಕ್ಕೆ ಮತ್ತೊಮ್ಮೆ ಇವರಿಬ್ಬರೂ ಒಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




