AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan

Ram Charan

ರಾಮ್ ಚರಣ್ ಅವರು ಜನಿಸಿದ್ದು 1985ರ ಮಾರ್ಚ್ 27ರಂದು. ತೆಲುಗು ಚಿತ್ರರಂಗದಲ್ಲಿ ಅವರು ಪ್ರಮುಖನಾಗಿ ಗುರುತಿಸಿಕೊಂಡಿದ್ದಾರೆ. ಕೊನಿಡೆಲಾ ರಾಮ್ ಚರಣ್ ತೇಜ್ ಎಂದೂ ಕರೆಯಲ್ಪಡುವ ಅವರು ಪ್ರಸಿದ್ಧ ಚಲನಚಿತ್ರ ಕುಟುಂಬದಿಂದ ಬಂದವರು. 2007ರಲ್ಲಿ ‘ಚಿರುತಾ’ ಚಿತ್ರದ ಮೂಲಕ ಅಭಿನಯಕ್ಕೆ ಪಾದಾರ್ಪಣೆ ಮಾಡಿದ ಅವರು ತಮ್ಮ ಅಮೋಘ ಅಭಿನಯ ಮತ್ತು ಅಸಾಧಾರಣ ನೃತ್ಯ ಕೌಶಲ್ಯಕ್ಕಾಗಿ ಶೀಘ್ರವಾಗಿ ಖ್ಯಾತಿಯನ್ನು ಗಳಿಸಿದರು. ‘ಮಗಧೀರ’, ‘ಆರ್​ಆರ್​ಆರ್’ ಮುಂತಾದ ಗಮನಾರ್ಹ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಅವರು ಮಾಡಿದ ಪಾತ್ರಗಳು ಅವರಿಗೆ ವ್ಯಾಪಕವಾದ ಮೆಚ್ಚುಗೆಯನ್ನು ತಂದುಕೊಟ್ಟಿವೆ. ಫಿಲ್ಮ್​ ಫೇರ್​, ನಂದಿ ಅವಾರ್ಡ್​ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿರುವ ರಾಮ್​ ಚರಣ್​ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲೂ ಫೇಮಸ್​ ಆಗಿದ್ದಾರೆ.

ಇನ್ನೂ ಹೆಚ್ಚು ಓದಿ

‘ಚಿಕಿರಿ’ ಹಾಡಿನ ಶೂಟ್​ಗೆ ರಾಮ್ ಚರಣ್ ಹಾಗೂ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

‘ಪೆದ್ದಿ’ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಈ ಚಿತ್ರದಿಂದ ಬಿಡುಗಡೆಯಾದ ಟೀಸರ್, ಗ್ಲಿಂಪ್ಸ್ ಮತ್ತು ಹಾಡುಗಳಿಗೆ ಈಗಾಗಲೇ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಇತ್ತೀಚೆಗೆ ಬಿಡುಗಡೆಯಾದ ‘ಚಿಕಿರಿ’ ಹಾಡು ಯೂಟ್ಯೂಬ್ ಅಲ್ಲ ಟ್ರೆಂಡ್ ಸೃಷ್ಟಿಸಿದೆ. ಈ ಹಾಡು ಈಗಾಗಲೇ ಎಲ್ಲಾ ಭಾಷೆಗಳಲ್ಲಿ 100 ಮಿಲಿಯನ್ ಗಡಿ ದಾಟಿದೆ.

‘ಪೆದ್ದಿ’ ಸಿನಿಮಾದ ‘ಚಿಕಿರಿ ಚಿಕಿರಿ’ ಸಾಂಗ್ ರಿಲೀಸ್; ಹೇಗಿದೆ ನೋಡಿ

ರಾಮ್ ಚರಣ್ ಅವರ 'ಪೆದ್ದಿ' ಸಿನಿಮಾದ ಬಹುನಿರೀಕ್ಷಿತ 'ಚಿಕಿರಿ ಚಿಕಿರಿ' ಹಾಡು ಬಿಡುಗಡೆಯಾಗಿದೆ. ಎ.ಆರ್. ರೆಹಮಾನ್ ಸಂಗೀತದಲ್ಲಿ ಮೂಡಿಬಂದಿರುವ ಈ ಗೀತೆ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ಸಂಚಿತ್ ಹೆಗಡೆ ಹಾಡಿದ್ದಾರೆ. ಶಿವರಾಜ್‌ಕುಮಾರ್, ಜಾನ್ವಿ ಕಪೂರ್ ನಟಿಸಿರುವ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮೈಸೂರಿನಲ್ಲಿ ರಾಮ್ ಚರಣ್: ಗೌರಿ ಗಣೇಶ ಹಬ್ಬದ ನಡುವೆಯೂ ‘ಪೆದ್ದಿ’ ಚಿತ್ರೀಕರಣ

ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ಸಿನಿಮಾ ಕೆಲಸಕ್ಕೆ ಬಿಡುವು ನೀಡಿ ಗೌರಿ-ಗಣೇಶ ಹಬ್ಬ ಮಾಡುತ್ತಿದ್ದಾರೆ. ಆದರೆ ಟಾಲಿವುಡ್ ಹೀರೋ ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮೈಸೂರಿನಲ್ಲಿ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಬೃಹತ್ ಸೆಟ್​​​ನಲ್ಲಿ ಹಾಡಿನ ಶೂಟಿಂಗ್ ಮಾಡಲಾಗುತ್ತಿದೆ.

200 ಬಾರಿ ಮೊಬೈಲ್ ನಂಬರ್ ಬದಲಿಸಿರುವ ನಟ ರಾಮ್ ಚರಣ್

ಸೆಲೆಬ್ರಿಟಿಗಳು ಪದೇ ಪದೇ ಫೋನ್ ನಂಬರ್ ಬದಲಿಸುತ್ತಾರೆ. ರಾಮ್ ಚರಣ್ ಕೂಡ ಈ ಮಾತಿಗೆ ಹೊರತಲ್ಲ. ಈಗಾಗಲೇ ಅವರು ನೂರಾರು ಬಾರಿ ತಮ್ಮ ಫೋನ್ ನಂಬರ್ ಬದಲಾಯಿಸಿದ್ದಾರೆ. ಆ ಬಗ್ಗೆ ಅವರ ಪತ್ನಿ ಉಪಾಸನಾ ಅವರು ಮಾತಾಡಿದ್ದಾರೆ. ಇಲ್ಲಿದೆ ಆ ಬಗ್ಗೆ ಇನ್ನಷ್ಟು ಮಾಹಿತಿ..

ರಾಮ್ ಚರಣ್ ಜಿಮ್ ಫೋಟೋ ವೈರಲ್; ‘ಪೆದ್ದಿ’ ಸಿನಿಮಾಗಾಗಿ ಇಷ್ಟೆಲ್ಲ ವರ್ಕೌಟ್

‘ಗೇಮ್ ಚೇಂಜರ್’ ಬಳಿಕ ನಟ ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾ ಗೆಲ್ಲಲೇಬೇಕಿದೆ. ಅದಕ್ಕಾಗಿ ಅವರು ತುಂಬ ಕಷ್ಟಪಡುತ್ತಿದ್ದಾರೆ. ‘ಪೆದ್ದಿ’ ಸಿನಿಮಾದ ಪಾತ್ರಕ್ಕಾಗಿ ರಾಮ್ ಚರಣ್ ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.

ಕೇಳಿದಷ್ಟು ಸಂಬಳ ಕೊಟ್ಟು ಜಾನ್ವಿ ಕಪೂರ್ ಜೇಬು ತುಂಬಿಸಿದ ಟಾಲಿವುಡ್ ನಿರ್ಮಾಪಕರು

ಶ್ರೀದೇವಿ ಮಗಳು ಜಾನ್ವಿ ಕಪೂರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆ ಕೂಡ ಜಾಸ್ತಿ ಆಗುತ್ತಿದೆ. ಪೆದ್ದಿ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾಗಾಗಿ ಅವರು ಪಡೆದಿರುವ ಬಹುಕೋಟಿ ರೂಪಾಯಿ ಸಂಭಾವನೆಯ ವಿಷಯವೇ ಈಗ ಟಾಕ್​ ಆಫ್​ ದಿ ಟೌನ್ ಆಗಿದೆ.

ಗೇಮ್ ಚೇಂಜರ್ ಚಿತ್ರದಿಂದ ಆದ ನಷ್ಟ ಎಷ್ಟು?  ವಿವರಿಸಿದ ದಿಲ್ ರಾಜು

Dil Raju: ರಾಮ್‌ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರವು ದಿಲ್ ರಾಜು ಅವರಿಗೆ ಭಾರಿ ನಷ್ಟವನ್ನು ತಂದಿದೆ. ಕಳಪೆ ಕಥೆ ಮತ್ತು ನೆಗೆಟಿವ್ ಟಾಕ್ ಇದಕ್ಕೆ ಕಾರಣ. ಆದರೆ, ಅವರೇ ನಿರ್ಮಿಸಿದ ‘ಸಂಕ್ರಾಂತಿಕಿ ವಸ್ತುನ್ನಾಮ್’ ಚಿತ್ರದ ಲಾಭದಿಂದ ಈ ನಷ್ಟವನ್ನು ಭರಿಸಿಕೊಂಡಿದ್ದಾರೆ.

ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್ ಕಲ್ಯಾಣ್

ತ್ರಿವಿಕ್ರಂ ಅವರ ಇತ್ತೀಚಿನ ಚಿತ್ರಗಳ ವೈಫಲ್ಯದ ನಂತರ, ಅವರಿಗೆ ಸ್ಟಾರ್ ನಟರ ಕಾಲ್ ಶೀಟ್ ಸಿಗುತ್ತಿರಲಿಲ್ಲ. ಪವನ್ ಕಲ್ಯಾಣ್ ಅವರ ಸಲಹೆಯ ಮೇರೆಗೆ, ರಾಮ್ ಚರಣ್ ಅವರು ತ್ರಿವಿಕ್ರಂ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ ಈ ಚಿತ್ರವನ್ನು ನಿರ್ಮಿಸುವ ಸಾಧ್ಯತೆಯಿದೆ.

‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ಬಾಕ್ಸ್ ಆಫೀಸ್ ವೈಫಲ್ಯವು ರಾಮ್ ಚರಣ್ ಅವರ ಮುಂಬರುವ ಚಿತ್ರ ‘ಪೆದ್ದಿ’ಗೆ ಆತಂಕವನ್ನುಂಟು ಮಾಡಿದೆ. ಎರಡೂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಖ್ಯಾತ ಸಂಗೀತ ನಿರ್ದೇಶಕ ಎಆರ್​ ರೆಹಮಾನ್. ‘ಥಗ್ ಲೈಫ್’ ಚಿತ್ರದ ಸಂಗೀತದ ವಿಫಲತೆಯು ‘ಪೆದ್ದಿ’ ಚಿತ್ರದ ಯಶಸ್ಸಿನ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವಿದೆ.

7 ಗಂಟೆ ಇತ್ತು ‘ಗೇಮ್ ಚೇಂಜರ್’ ಸಿನಿಮಾ ಅವಧಿ; ಶಂಕರ್ ಕೆಟ್ಟ ನಿರ್ದೇಶಕ ಎಂದ ಎಡಿಟರ್ 

'ಗೇಮ್ ಚೇಂಜರ್' ಸಿನಿಮಾದ ಸಂಪಾದಕ ಶಮೀರ್ ಮಹ್ಮದ್ ಅವರು ನಿರ್ದೇಶಕ ಶಂಕರ್ ಅವರ ಕೆಲಸದ ಶೈಲಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 7.5 ಗಂಟೆಗಳಷ್ಟು ಅವಧಿಯ ಚಿತ್ರವನ್ನು 3 ಗಂಟೆಗಳಿಗೆ ಇಳಿಸುವಲ್ಲಿ ಅವರು ಒಂದು ವರ್ಷ ಕಳೆದಿದ್ದಾರೆ ಎಂದು ಹೇಳಿದ್ದಾರೆ. ಶಂಕರ್ ಅವರ ಅನಿಯಮಿತ ಕೆಲಸದ ವೇಳಾಪಟ್ಟಿ ಮತ್ತು ವಿಳಂಬದ ಕಾರಣ ಅವರಿಗೆ ಕೆಟ್ಟ ಅನುಭವವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ