Ram Charan
ರಾಮ್ ಚರಣ್ ಅವರು ಜನಿಸಿದ್ದು 1985ರ ಮಾರ್ಚ್ 27ರಂದು. ತೆಲುಗು ಚಿತ್ರರಂಗದಲ್ಲಿ ಅವರು ಪ್ರಮುಖನಾಗಿ ಗುರುತಿಸಿಕೊಂಡಿದ್ದಾರೆ. ಕೊನಿಡೆಲಾ ರಾಮ್ ಚರಣ್ ತೇಜ್ ಎಂದೂ ಕರೆಯಲ್ಪಡುವ ಅವರು ಪ್ರಸಿದ್ಧ ಚಲನಚಿತ್ರ ಕುಟುಂಬದಿಂದ ಬಂದವರು. 2007ರಲ್ಲಿ ‘ಚಿರುತಾ’ ಚಿತ್ರದ ಮೂಲಕ ಅಭಿನಯಕ್ಕೆ ಪಾದಾರ್ಪಣೆ ಮಾಡಿದ ಅವರು ತಮ್ಮ ಅಮೋಘ ಅಭಿನಯ ಮತ್ತು ಅಸಾಧಾರಣ ನೃತ್ಯ ಕೌಶಲ್ಯಕ್ಕಾಗಿ ಶೀಘ್ರವಾಗಿ ಖ್ಯಾತಿಯನ್ನು ಗಳಿಸಿದರು. ‘ಮಗಧೀರ’, ‘ಆರ್ಆರ್ಆರ್’ ಮುಂತಾದ ಗಮನಾರ್ಹ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಅವರು ಮಾಡಿದ ಪಾತ್ರಗಳು ಅವರಿಗೆ ವ್ಯಾಪಕವಾದ ಮೆಚ್ಚುಗೆಯನ್ನು ತಂದುಕೊಟ್ಟಿವೆ. ಫಿಲ್ಮ್ ಫೇರ್, ನಂದಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟನಾಗಿರುವ ರಾಮ್ ಚರಣ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲೂ ಫೇಮಸ್ ಆಗಿದ್ದಾರೆ.
ಇನ್ನೂ ಹೆಚ್ಚು ಓದಿಥಿಯೇಟರ್ ಬಿಸ್ನೆಸ್ಗೆ ಎಂಟ್ರಿ ಕೊಡಲು ಸಜ್ಜಾದ ರಾಮ್ ಚರಣ್-ಎನ್ಟಿಆರ್?
ಟಾಲಿವುಡ್ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಥಿಯೇಟರ್ ಬಿಸಿನೆಸ್ಗೆ ಕಾಲಿಟ್ಟಿದ್ದಾರೆ. ಹೈದರಾಬಾದ್ನಲ್ಲಿ ಹೊಸ ಮಲ್ಟಿಪ್ಲೆಕ್ಸ್ ಲಾಂಚ್ ಮಾಡಲು ಇಬ್ಬರು ನಟರು ಸಜ್ಜಾಗಿದ್ದು, ಚಿತ್ರರಂಗದಲ್ಲಿದ್ದುಕೊಂಡೇ ಚಿತ್ರಮಂದಿರ ಉದ್ಯಮ ಪ್ರವೇಶಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Jul 31, 2026
- 2:51 pm
ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಕೊಯಮತ್ತೂರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾಮ್ ಚರಣ್ ಭೇಟಿ
ಖ್ಯಾತ ನಟ ರಾಮ್ ಚರಣ್ ಅವರು ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಬಳಿಕ ಅವರು ದೇವರ ದರ್ಶನ ಪಡೆದಿದ್ದಾರೆ. ಪತ್ನಿ ಜೊತೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬಂದಿರುವ ರಾಮ್ ಚರಣ್ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
- Madan Kumar
- Updated on: Jul 29, 2026
- 7:01 pm
ರಾಮ್ ಚರಣ್ ಆಸ್ಪತ್ರೆ ಫೋಟೋ ವೈರಲ್; 8 ವಾರ ವಿಶ್ರಾಂತಿ ಕಡ್ಡಾಯ
'ಪೆದ್ದಿ' ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟ ರಾಮ್ ಚರಣ್ ಅವರ ಬಲಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಸರ್ಜರಿ ನಡೆದಿದ್ದು ವೈದ್ಯರು ಎಂಟು ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಸದ್ಯ ಚಿರಂಜೀವಿ ಕುಟುಂಬ ನಟನ ಜೊತೆಯಲ್ಲಿದ್ದು ಅಭಿಮಾನಿಗಳು ಶೀಘ್ರ ಗುಣಮುಖರಾಗಲು ಹಾರೈಸುತ್ತಿದ್ದಾರೆ.
- Rajesh Duggumane
- Updated on: Jul 29, 2026
- 11:54 am
ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ; ಆತಂಕ್ಕೆ ಒಳಗಾದ ಟಾಲಿವುಡ್ ಫ್ಯಾನ್ಸ್
ಟಾಲಿವುಡ್ನ ಖ್ಯಾತ ನಟರಾದ ಎನ್ಟಿಆರ್, ರಾಮ್ ಚರಣ್, ಬಾಲಕೃಷ್ಣ ಮತ್ತು ಪವನ್ ಕಲ್ಯಾಣ್ ಸಾಲು ಸಾಲಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನೆಚ್ಚಿನ ತಾರೆಯರ ಆರೋಗ್ಯದ ಏರುಪೇರಿನಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಘಟನೆಗಳು ಸಿನಿಮಾ ಸೆಟ್ಗಳಲ್ಲಿನ ಸುರಕ್ಷತಾ ಕ್ರಮಗಳ ಜಾಗೃತಿಗೆ ಎಚ್ಚರಿಕೆಯ ಗಂಟೆಯಾಗಿವೆ.
- Rajesh Duggumane
- Updated on: Jul 28, 2026
- 1:35 pm
ರಾಮ್ ಚರಣ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು
ರಾಮ್ ಚರಣ್ ಅವರ 'RC17' ಚಿತ್ರದ ನಿರ್ಮಾಣದ ವೇಗ ಈಗ ಟ್ರೇಡ್ ಮೂಲಗಳಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. 'RRR' ಚಿತ್ರ ತಂದುಕೊಟ್ಟ ಜಾಗತಿಕ ಇಮೇಜ್ ಉಳಿಸಿಕೊಳ್ಳಲು ಚರಣ್ ತಮ್ಮ ಸಿನಿಮಾಗಳ ವೇಗವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ನಿರ್ದೇಶಕ ಸುಕುಮಾರ್ ಅವರ ವಿಳಂಬದ ಶೈಲಿ ಚರಣ್ ವೃತ್ತಿಜೀವನಕ್ಕೆ ಸವಾಲಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿದ್ದು, ಈ ಬಾರಿ ಹೊಸ ಜಾನರ್ನ ಒಂದೇ ಭಾಗದ ಕಥೆಯೊಂದಿಗೆ ಚಿತ್ರತಂಡ ಸಜ್ಜಾಗುತ್ತಿದೆ.
- Shreelaxmi H
- Updated on: Jul 20, 2026
- 8:03 am
ಮಿಶ್ರ ಪ್ರತಿಕ್ರಿಯೆ ನಡುವೆಯೂ ಒಟಿಟಿಯಲ್ಲಿ ಟ್ರೆಂಡ್ ಆಗುತ್ತಿರುವ ‘ಪೆದ್ದಿ’ ಸಿನಿಮಾ
Peddi Movie OTT: ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿರುವ ‘ಪೆದ್ದಿ’ ಸಿನಿಮಾಗೆ ವಿವಿಧ ರೀತಿಯ ವಿಮರ್ಶೆ ಸಿಗುತ್ತಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಈ ಸಿನಿಮಾ ನೆಟ್ಫ್ಲಿಕ್ಸ್ ಟ್ರೆಂಡಿಂಗ್ನ 3ನೇ ಸ್ಥಾನದಲ್ಲಿದೆ. ರಾಮ್ ಚರಣ್, ಜಾನ್ವಿ ಕಪೂರ್, ಶಿವರಾಜ್ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
- Madan Kumar
- Updated on: Jul 15, 2026
- 7:01 pm
ನೆಟ್ಫ್ಲಿಕ್ಸ್ನಲ್ಲಿ ‘ಪೆದ್ದಿ’ ಬಿಡುಗಡೆ: ಜಾನ್ವಿ ಕಪೂರ್ ನಟನೆಯ ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ
‘ಪೆದ್ದಿ’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಕೆಲವು ಕಾರಣಗಳಿಂದ ಟೀಕೆಗೆ ಗುರಿ ಆಗಿತ್ತು. ನಟಿ ಜಾನ್ವಿ ಕಪೂರ್ ಅವರು ಕಾಣಿಸಿಕೊಂಡ ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ಕೆಲವರು ತಕರಾರು ತೆಗೆದಿದ್ದರು. ಈಗ ಒಟಿಟಿ ವರ್ಷನ್ನಲ್ಲಿ ಆ ದೃಶ್ಯಗಳನ್ನು ತೆಗೆದುಹಾಕಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Jul 9, 2026
- 5:56 pm
‘ಪೆದ್ದಿ’ ಸಿನಿಮಾ ಬಗೆಗಿನ ಟ್ರೋಲ್ ಬಗ್ಗೆ ಕೊನೆಗೂ ಮೌನ ಮುರಿದ ರಾಮ್ ಚರಣ್
ನಟ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಜಾನ್ವಿ ಕಪೂರ್ ಪಾತ್ರದ ಬಗ್ಗೆ ಟೀಕೆಗಳು ವ್ಯಕ್ತವಾದಾಗ, ರಾಮ್ ಚರಣ್ ಹೈದರಾಬಾದ್ನಲ್ಲಿ ನಡೆದ ಸಕ್ಸಸ್ ಮೀಟ್ನಲ್ಲಿ ಚಿತ್ರವನ್ನು ಸಮರ್ಥಿಸಿಕೊಂಡರು. ಪ್ರೇಕ್ಷಕರ ಬೆಂಬಲಕ್ಕೆ ಧನ್ಯವಾದ ಹೇಳಿದ ಅವರು, ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಿದ ನಂತರವೂ ಸಿನಿಮಾ 332 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.
- Shreelaxmi H
- Updated on: Jun 25, 2026
- 7:49 am
‘ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್’; ತಮ್ಮ ಬಿರುದನ್ನು ಮಗನಿಗೆ ಕೊಟ್ಟ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಅವರು 'ಪೆದ್ದಿ' ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಗ ರಾಮ್ ಚರಣ್ ಅವರನ್ನು 'ಹೊಸ ತಲೆಮಾರಿನ ಮೆಗಾಸ್ಟಾರ್' ಎಂದು ಶ್ಲಾಘಿಸಿದರು. ‘ಪೆದ್ದಿ’ ಚಿತ್ರದಲ್ಲಿ ಚರಣ್ ಪಾತ್ರವಾಗಿ ಜೀವಿಸಿದ್ದಾನೆ ಎಂದ ಚಿರಂಜೀವಿ ಭಾವುಕರಾದರು. ಮಗನ ಯಶಸ್ಸಿಗೆ ತಂದೆಯಾಗಿ ತಮಗೆ ಅತೀವ ಸಂತಸವಿದೆ ಎಂದು ಚಿರಂಜೀವಿ ಹೇಳಿದ್ದು, ಅವರ ಮಾತುಗಳು ವೈರಲ್ ಆಗಿವೆ.
- Rajesh Duggumane
- Updated on: Jun 24, 2026
- 7:40 am
ಕೊನೆಗೂ ಮಗಳ ಮುಖ ತೋರಿಸಿದ ರಾಮ್ ಚರಣ್, ಉಪಾಸನಾ; ಕ್ಲಿನ್ ಕಾರಾ ಯಾರ ರೀತಿ ಇದ್ದಾಳೆ ನೋಡಿ..
ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ಅವರು ಇದೇ ಮೊದಲ ಬಾರಿಗೆ ಮಗಳು ಕ್ಲಿನ್ ಕಾರಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ಹ್ಯಾಪಿ ಬರ್ತ್ಡೇ ಕ್ಲಿನ್ ಕಾರಾ, ನಮ್ಮ ಮುದ್ದಾದ ಪುಟ್ಟ ಕಂದಮ್ಮ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಫೋಟೋ ನೋಡಿದ ಕೂಡಲೇ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರೀತಿಯಿಂದ ಕಮೆಂಟ್ ಮಾಡಿದ್ದಾರೆ.
- Madan Kumar
- Updated on: Jun 21, 2026
- 7:17 am
‘ಗೇಮ್ ಚೇಂಜರ್ ಚಿತ್ರದ ಸೋಲು ನನ್ನ ವೈಫಲ್ಯ, ವಿಷಾದವಿದೆ’; ಮುಕ್ತವಾಗಿ ಒಪ್ಪಿಕೊಂಡ ನಿರ್ಮಾಪಕ
ನಿರ್ಮಾಪಕ ದಿಲ್ ರಾಜು 'ಗೇಮ್ ಚೇಂಜರ್' ಚಿತ್ರದ ನಿರ್ಮಾಣ ಅನುಭವವನ್ನು ತಮ್ಮ ವೃತ್ತಿಜೀವನದ ದೊಡ್ಡ ತಪ್ಪು ಎಂದು ಬಣ್ಣಿಸಿದ್ದಾರೆ. ಚಿತ್ರದ ಅತಿಯಾದ ಅವಧಿ ಮತ್ತು ಅಂತಿಮ ಕಟ್ ನೋಡಲು ಸಾಧ್ಯವಾಗದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡುವ ಸವಾಲುಗಳು, ನಿರ್ಮಾಪಕರಾಗಿ ತಮ್ಮ ವೈಫಲ್ಯವನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಭವಿಷ್ಯದಲ್ಲಿ ಸ್ಪಷ್ಟ ಒಪ್ಪಂದಗಳಿಲ್ಲದೆ ಇಂತಹ ದೊಡ್ಡ ಯೋಜನೆಗಳಿಂದ ದೂರವಿರುವುದಾಗಿ ಹೇಳಿದ್ದು, ತಂಡದ ಹೊಂದಾಣಿಕೆಯ ಮಹತ್ವವನ್ನು ಒತ್ತಿಹೇಳಿದ್ದಾರೆ.
- Shreelaxmi H
- Updated on: Jun 19, 2026
- 8:04 am
ಸುಕುಮಾರ್ ಹೊಸ ಸಿನಿಮಾ ಮತ್ತಷ್ಟು ತಡ? ಪೆದ್ದಿ ನಟನಿಗೆ ವರವಾಯ್ತು ವಿಳಂಬ
ರಾಮ್ ಚರಣ್ ಮತ್ತು ಸುಕುಮಾರ್ ಅವರ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ ವಿಳಂಬವಾಗಿದೆ. ನಿರ್ದೇಶಕ ಸುಕುಮಾರ್ ಕಥೆಯನ್ನು ಅಂತಿಮಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. 'ಪೆದ್ದಿ' ಯಶಸ್ಸಿನಲ್ಲಿರುವ ರಾಮ್ ಚರಣ್ ಅವರಿಗೆ ಈ ವಿಳಂಬ ವರದಾನವಾಗಿದೆ, ಏಕೆಂದರೆ ಇದು ಗಾಯದಿಂದ ಚೇತರಿಸಿಕೊಳ್ಳಲು ಸಮಯ ನೀಡಿದೆ. ದಸರಾ ಹಬ್ಬದ ನಂತರ ಚಿತ್ರದ ಅಧಿಕೃತ ಲಾಂಚ್ ನಿರೀಕ್ಷಿಸಲಾಗಿದೆ, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
- Rajesh Duggumane
- Updated on: Jun 15, 2026
- 10:43 am