ಹೆಂಡತಿ ಮಾತು ಕೇಳಿ ಬಿಗ್​ ಬಾಸ್​ ಮನೆಯಲ್ಲಿ ಮಜಾ ಮಾಡಿದೆ, ಆದರೆ; ರಘುಗೆ ಸ್ಟಾರ್ಟ್​ ಆಯ್ತು ಆತಂಕ

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಗೌಡ ಹೆಚ್ಚು ಆಪ್ತರಾಗಿದ್ದರು. ಅವರ ನಡುವೆ ಉತ್ತಮ ಗೆಳೆತನ ಬೆಳೆದಿದೆ. ಈ ವಿಚಾರ ಮನೆಯಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿತ್ತು.

ಹೆಂಡತಿ ಮಾತು ಕೇಳಿ ಬಿಗ್​ ಬಾಸ್​ ಮನೆಯಲ್ಲಿ ಮಜಾ ಮಾಡಿದೆ, ಆದರೆ; ರಘುಗೆ ಸ್ಟಾರ್ಟ್​ ಆಯ್ತು ಆತಂಕ
ರಘು ಗೌಡ-ವಿದ್ಯಾಶ್ರೀ
Follow us
|

Updated on: May 12, 2021 | 4:44 PM

ಕೊರೊನಾ ವೈರಸ್​ ಕಾರಣದಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಂತಿದೆ. ಹೀಗಾಗಿ ಎಲ್ಲಾ 11 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಭಾನುವಾರ ಏನೆಲ್ಲ ಆಯ್ತು ಎಂಬುದನ್ನು ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡಲಾಗಿದೆ. ಕೊನೆಯ ಎಪಿಸೋಡ್​ನಲ್ಲಿ ರಘು ಗೌಡಗೆ ಹೆಂಡತಿ ಬಗ್ಗೆ ಭಯ ಕಾಡಿದೆ. ಈ ಬಗ್ಗೆ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.

ಕೆಲ ವಾರಗಳ ಹಿಂದೆ ರಘು ಗೌಡ ಕ್ಯಾಪ್ಟನ್​ ಆಗಿದ್ದರು. ಈ ವೇಳೆ ರಘು ಪತ್ನಿ ಅವರ ವಾಯ್ಸ್​ ಮೆಸೇಜ್​ ಬಂದಿತ್ತು. ಹಾಯ್ ರಘು ಹೇಗಿದ್ದೀಯಾ? ತುಂಬಾ ಚೆನ್ನಾಗಿ ಆಡುತ್ತಾ ಇದೀಯಾ. ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ನಿಭಾಯಿಸು. ಕಿಚ್ಚನ ಚಪ್ಪಾಳೆ ಬಂದಿದ್ದು ಖುಷಿ ಆಯ್ತು. ನಿನ್ನ ಜತೆ ಜಗಳ ಆಡೋದನ್ನು ನಾನು ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ನಡೆಯುವುದನ್ನು ನಾನು ಸ್ಪೋರ್ಟೀವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಮಜಾ ಮಾಡು. ಹಾಯಾಗಿರು. ಬೇರೆಯವರನ್ನು ನಗಿಸು ಎಂದು ರಘುಗೆ ಹೇಳಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಗೌಡ ಹೆಚ್ಚು ಆಪ್ತರಾಗಿದ್ದರು. ಅವರ ನಡುವೆ ಉತ್ತಮ ಗೆಳೆತನ ಬೆಳೆದಿದೆ. ಈ ವಿಚಾರ ಮನೆಯಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿತ್ತು. ಈ ವಿಚಾರವನ್ನು ಪರೋಕ್ಷವಾಗಿ ಉಲ್ಲೇಖಿಸಿ ರಘು ಪತ್ನಿ ಹೇಳಿದ್ದರು ಎನ್ನಲಾಗಿತ್ತು. ಈ ವಿಚಾರ ಕೊನೆಯ ದಿನವೂ ಚರ್ಚೆಗೆ ಬಂದಿದೆ.

‘ನಾಳೆ ಎಲ್ಲರೂ ಏಳುವುದಕ್ಕೆ ಮುಂಚೆ ಅಡುಗೆ ಮನೆಯಲ್ಲಿ ಇರುತ್ತೀರಾ’’ ಎಂದು ರಘುವನ್ನು ಕಣ್ಮಣಿ ಕೊನೆಯ ದಿನ ಪ್ರಶ್ನೆ ಮಾಡಿದ್ದಾಳೆ. ‘ಅಡುಗೆ ಮನೆಯಲ್ಲಿರುತ್ತೇನೆ. ಆದರೆ, ಅಲ್ಲಿ ನನ್ನ ಹೆಂಡತಿ ಇರುತ್ತಾಳೆ’ ಎಂದು ರಘು ಮಾತು ಆರಂಭಿಸುತ್ತಿದ್ದಂತೆ ‘ಇವತ್ತು ಮನೆಯಲ್ಲಿ ಹೆಂಡತಿ ಬಿಟ್ಕೊಂಡ್ರೆ ತಾನೇ’ ಎಂದರು ಅರವಿಂದ್​.

‘ಹೆಂಡತಿ ಹೇಳಿದಂತೆ ನಾನು ಬಿಗ್​ ಬಾಸ್​ ಮನೆಯಲ್ಲಿ ಮಜಾ ಏನೋ ಮಾಡಿದೆ. ಈಗ ಮನೆಗೆ ಹೋಗಬೇಕೋ ಅಥವಾ ಬೇರೆಕಡೆ ಹೋಗಬೇಕೋ’ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ನಕ್ಕಿದ್ದಾರೆ. ಈ ಮಾತು ಕೇಳಿ ಮನೆಯವರೂ ಮನಸಾರೆ ನಕ್ಕಿದ್ದಾರೆ.

ಇದನ್ನೂ ಓದಿ: Raghu Gowda: ರಘು ಗೌಡಗೆ ಸಿನಿಮಾ ಆಫರ್​; ‘ದ್ವಿಪಾತ್ರ’ದಲ್ಲಿ ಕನ್ನಡ ಬಿಗ್​ ಬಾಸ್​ ಸ್ಪರ್ಧಿ

ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್