ದೊಡ್ಡ ಪರದೆಯಲ್ಲೂ ವೀಕ್ಷಿಸಬಹದು ರಾಮ ಮಂದಿರ ಕಾರ್ಯಕ್ರಮ; 100 ರೂ. ಟಿಕೆಟ್

ಬುಕ್ ಮೈ ಶೋನಲ್ಲಿ ಇನ್ನೂ ಟಿಕೆಟ್​ ಬುಕಿಂಗ್ ಆರಂಭ ಆಗಿಲ್ಲ. ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.  

ದೊಡ್ಡ ಪರದೆಯಲ್ಲೂ ವೀಕ್ಷಿಸಬಹದು ರಾಮ ಮಂದಿರ ಕಾರ್ಯಕ್ರಮ; 100 ರೂ. ಟಿಕೆಟ್
ರಾಮ ಮಂದಿರ

Updated on: Jan 20, 2024 | 6:51 AM

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandira) ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೋಟ್ಯಂತರ ಮಂದಿ ಸಾಕ್ಷಿ ಆಗಲಿದ್ದಾರೆ. ಕೆಲವರು ಅಯೋಧ್ಯೆಗೆ ತೆರಳಲು ಸಿದ್ಧತೆ ಮಾಡಿಕೊಂಡರೆ ಇನ್ನೂ ಕೆಲವರು ಟಿವಿಯಲ್ಲಿ ಇದನ್ನು ವೀಕ್ಷಿಸಲಿದ್ದಾರೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಈ ಕಾರ್ಯಕ್ರಮವನ್ನು ನೀವು ದೊಡ್ಡಪರದೆಯಲ್ಲೂ ವೀಕ್ಷಿಸಬಹುದು. ಇದಕ್ಕೆ ಪಿವಿಆರ್​ ಹಾಗೂ ಐನಾಕ್ಸ್ ಅವಕಾಶ ಮಾಡಿಕೊಡುತ್ತಿವೆ.

ಜನವರಿ 22ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ತೆರಳುವ ಅವಕಾಶ ಎಲ್ಲರಿಗೂ ಇರುವುದಿಲ್ಲ. ಹೀಗಾಗಿ, ಪಿವಿಆರ್​ ಹಾಗೂ ಐನಾಕ್ಸ್ ದೇಶದ ಪ್ರಮುಖ 70 ನಗರಗಳಲ್ಲಿ 170ಕ್ಕೂ ಅಧಿಕ ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲಿದೆ. ಬೆಳಿಗ್ಗೆ 11 ಗಂಟೆಯಿಂದ ಆರಂಭ ಆಗಿ, ಮಧ್ಯಾಹ್ನ 3 ಗಂಟೆವರೆಗೆ ಈ ಕಾರ್ಯಕ್ರಮ ವೀಕ್ಷಿಸಬಹುದು. ಇದಕ್ಕೆ ಕೇವಲ 100 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದು ಕೇವಲ ಸಿನಿಮಾ ಟಿಕೆಟ್ ದರ ಅಲ್ಲ, ಇದರಲ್ಲಿ ತಂಪು ಪಾನೀಯ ಹಾಗೂ ಪಾಪ್​ಕಾರ್ನ್​ ಕಾಂಬೋದ ಹಣವೂ ಸೇರಿದೆ ಅನ್ನೋದು ವಿಶೇಷ. ಈ ಮೊದಲು ಪಿವಿಆರ್ ವಿಶ್ವಕಪ್ ಕ್ರಿಕೆಟ್​ನ ಲೈವ್ ಪ್ರಸಾರ ಮಾಡಿತ್ತು.

ಇದೊಂದು ಐತಿಹಾಸಿಕ ಕ್ಷಣ. ಹೀಗಾಗಿ ಇದನ್ನು ದೊಡ್ಡ ಪರದೆಯಲ್ಲಿ ನೋಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಪಿವಿಆರ್​ ಐನಾಕ್ಸ್​ನ ಸಹ ಸಿಇಒ ಗೌತಮ್ ದತ್ತ ಹೇಳಿದ್ದಾರೆ. ಬುಕ್ ಮೈ ಶೋನಲ್ಲಿ ಇನ್ನೂ ಟಿಕೆಟ್​ ಬುಕಿಂಗ್ ಆರಂಭ ಆಗಿಲ್ಲ. ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಶ್ರೀರಾಮ ಕರೆ ಕಳಿಸಿದ್ದಾನೆ; ನನ್ನ ಪೂರ್ವಜನ್ಮದ ಪುಣ್ಯ’: ಅಯೋಧ್ಯೆಯ ಆಹ್ವಾನ ಸ್ವೀಕರಿಸಿದ ರಿಷಬ್​ ಶೆಟ್ಟಿ

ರಣಬೀರ್ ಕಪೂರ್, ಅಮಿತಾಭ್ ಬಚ್ಚನ್, ರಿಷಬ್ ಶೆಟ್ಟಿ, ಯಶ್​, ಕಂಗನಾ ರಣಾವತ್, ಆಲಿಯಾ ಭಟ್ ಸೇರಿ ಚಿತ್ರರಂಗದ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್​, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್​ ಅವರಂಥ ಗಣ್ಯರೂ ಇರಲಿದ್ದಾರೆ. ಜನವರಿ 22ರಂದು ಮಧ್ಯಾಹ್ನ 12:15ರಿಂದ ಕಾರ್ಯಕ್ರಮ ಆರಂಭ ಆಗಿ 12:45ಕ್ಕೆ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:33 am, Sat, 20 January 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us