AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್

[lazy-load-videos-and-sticky-control id=”WHM48MIcDI8″] ಡ್ರಗ್ಸ್ ದುನಿಯಾದ ನಂಟು ಚಂದನವನವನ್ನೇ ದಂಗಾಗಿಸಿದೆ. ಅಮಲಿನ ಜಾಲ ಬೇಧಿಸಲು ಅಧಿಕಾರಿಗಳು ಹೊರಟಿದ್ದು, ಹೊತ್ತಿಗೊಂದು ವಿಷ್ಯ ಬಯಲಾಗ್ತಿದೆ. ಅದ್ರಲ್ಲೂ, ನಟಿ ರಾಗಿಣಿಗೆ ಶಾಕ್​ ತಟ್ಟಿದೆ. ಯಾಕಂದ್ರೆ, ನಟಿಯ ಸ್ನೇಹಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಜತೆಗೆ ರಾಗಿಣಿಗೂ ವಿಚಾರಣೆ ಭಯ ಶುರುವಾಗಿದೆ. ಕೌಂಟ್​ಡೌನ್.. ಕಿಕ್ಕೇರಿಸಿಕೊಂಡು ಕುಣಿದವ್ರಿಗೆ.. ಮತ್ತಿನ ಅಮಲಲ್ಲಿ ತೇಲಾಡಿದವ್ರಿಗೆ.. ನಂಜಿನ ನಂಟು ಹೊಂದಿರೋ ನಟ-ನಟಿಯರಿಗೆ ಕೌಂಟ್​ಡೌನ್​​ ಶುರುವಾಗಿದೆ. ಯಾಕಂದ್ರೆ, ಡ್ರಗ್ಸ್ ದುನಿಯಾದ ಇಂಚಿಂಚನ್ನೂ ಜಾಲಾಡ್ತಿರೋ ಅಧಿಕಾರಿಗಳು ತಮ್ಮ ಶಿಕಾರಿ ಶುರುಮಾಡಿದ್ದಾರೆ. ಈ ಪೈಕಿ ಸ್ಟಾರ್​​ […]

ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್
ಆಯೇಷಾ ಬಾನು
|

Updated on:Sep 03, 2020 | 12:45 PM

Share

[lazy-load-videos-and-sticky-control id=”WHM48MIcDI8″]

ಡ್ರಗ್ಸ್ ದುನಿಯಾದ ನಂಟು ಚಂದನವನವನ್ನೇ ದಂಗಾಗಿಸಿದೆ. ಅಮಲಿನ ಜಾಲ ಬೇಧಿಸಲು ಅಧಿಕಾರಿಗಳು ಹೊರಟಿದ್ದು, ಹೊತ್ತಿಗೊಂದು ವಿಷ್ಯ ಬಯಲಾಗ್ತಿದೆ. ಅದ್ರಲ್ಲೂ, ನಟಿ ರಾಗಿಣಿಗೆ ಶಾಕ್​ ತಟ್ಟಿದೆ. ಯಾಕಂದ್ರೆ, ನಟಿಯ ಸ್ನೇಹಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಜತೆಗೆ ರಾಗಿಣಿಗೂ ವಿಚಾರಣೆ ಭಯ ಶುರುವಾಗಿದೆ.

ಕೌಂಟ್​ಡೌನ್.. ಕಿಕ್ಕೇರಿಸಿಕೊಂಡು ಕುಣಿದವ್ರಿಗೆ.. ಮತ್ತಿನ ಅಮಲಲ್ಲಿ ತೇಲಾಡಿದವ್ರಿಗೆ.. ನಂಜಿನ ನಂಟು ಹೊಂದಿರೋ ನಟ-ನಟಿಯರಿಗೆ ಕೌಂಟ್​ಡೌನ್​​ ಶುರುವಾಗಿದೆ. ಯಾಕಂದ್ರೆ, ಡ್ರಗ್ಸ್ ದುನಿಯಾದ ಇಂಚಿಂಚನ್ನೂ ಜಾಲಾಡ್ತಿರೋ ಅಧಿಕಾರಿಗಳು ತಮ್ಮ ಶಿಕಾರಿ ಶುರುಮಾಡಿದ್ದಾರೆ. ಈ ಪೈಕಿ ಸ್ಟಾರ್​​ ನಟಿಯ ಸ್ನೇಹಿತನನ್ನ ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್​​ ಜಾಲದ ನಂಟಿನ ಶಂಕೆ.. ನಟಿ ರಾಗಿಣಿ ಸ್ನೇಹಿತ ವಶಕ್ಕೆ ಡ್ರಗ್ಸ್​ ದುನಿಯಾದ ನಂಟು, ಚಂದನವನಕ್ಕೆ ಕಪ್ಪು ಚುಕ್ಕೆ ಯಾಗ್ತಿದೆ. ಅಮಲಿನ ಜಾಲದ ಆಳ-ಅಗಲವನ್ನ ಬಗೆಯುತ್ತಿರೋ ಸಿಸಿಬಿ ಪಡೆ, ತನ್ನ ಮೊದಲ ಬೇಟೆಯಾಡಿದೆ. ಸ್ಯಾಂಡಲ್​ವುಡ್​ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ನೇಹಿತ ರವಿಶಂಕರ್​ರನ್ನ ವಶಕ್ಕೆ ಪಡೆದಿದ್ದಾರೆ. ಹಾಗೇ, ರಾಗಿಣಿಗೂ ವಿಚಾರಣೆ ತೂಗುಗತ್ತಿ ಎದುರಾಗಿದೆ.

ಸ್ನೇಹಿತನ ವಿಚಾರಣೆ.. ರಾಗಿಣಿಗೂ ನೋಟಿಸ್..!? ಕನ್ನಡದ ಕೆಲ ಸಿನಿಮಾಗಳಲ್ಲಿ ರವಿಶಂಕರ್​ ನಟಿಸಿದ್ದು, ಸದ್ಯ ಆತನನ್ನ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸ್ತಿದೆ. ಇನ್ನು, ರಾಗಿಣಿಗೂ ನೋಟಿಸ್​ ನೀಡುವ ಸಾಧ್ಯತೆ ಇದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಅವ್ರು ಸಿಸಿಬಿ ಕಚೇರಿಗೆ ಬರಲಿದ್ದಾರೆ ಎನ್ನಲಾಗ್ತಿದೆ. ಅಂದಹಾಗೇ, ಈ ಹಿಂದೆ ಅಶೋಕ್​ನಗರದ ಪಬ್​ವೊಂದ್ರಲ್ಲಿ ಗಲಾಟೆಯಾಗಿತ್ತು. ಈ ವೇಳೆ ರವಿಶಂಕರ್ ಮತ್ತು​​​​​ ರಾಗಿಣಿಯ ಮತ್ತೊಬ್ಬ ಸ್ನೇಹಿತನ ನಡುವೆ ಗಲಾಟೆಯಾಗಿತ್ತು.

ವಿಚಾರಣೆಗೆ ಬರುವಂತೆ ನಟ-ನಟಿಯರಿಗೆ ನೋಟಿಸ್ ಇನ್ನು, ನಂಜಿನ ನಂಟು ಹೊಂದಿರುವ ಆರೋಪದಡಿ ಹಲವು ನಟ-ನಟಿಯರಿಗೆ ಸಿಸಿಬಿ ನೋಟಿಸ್​ ಕೊಟ್ಟಿದೆ. ಎರಡು ದಿನದೊಳಗೆ ಅವ್ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮತ್ತೊಂದೆಡೆ, ಡ್ರಗ್ಸ್​ ದಂಧೆಯಲ್ಲಿ ಬಂಧಿತನಾಗಿರೋ ಅನೂಪ್​ಗೆ ಮಲಯಾಳಂ ನಟರ ಜತೆ ಲಿಂಕ್​ ಇರೋದು ಗೊತ್ತಾಗಿದೆ. ಅನೂಪ್​​​​ ನಡೆಸ್ತಿದ್ದ ರೆಸ್ಟೋರೆಂಟ್​​ಗೆ ನಟ ಬಿನೀಶ್​ ಕೊಡಿಯೇರಿ ಫಂಡಿಂಗ್​ ಮಾಡಿರೋದು ಎನ್​​ಸಿಬಿ ವಿಚಾರಣೆಯಲ್ಲಿ ಗೊತ್ತಾಗಿದೆ. ಅಲ್ಲದೆ, 2015ರಲ್ಲಿ ಕಮ್ಮನಹಳ್ಳಿಯಲ್ಲಿ ಅನೂಪ್ ರೆಸ್ಟೋರೆಂಟ್​​​​​​​​​ ಆರಂಭಿಸಿದ್ದು, ಆಫ್ರಿಕನ್​ ಪ್ರಜೆಗಳಿಂದ ಎಂಡಿಎಂಎ ಖರೀದಿ ಮಾಡ್ತಿದ್ದೆ ಅಂತ ಬಾಯ್ಬಿಟ್ಟಿದ್ದಾನೆ.

ಒಟ್ನಲ್ಲಿ, ಡ್ರಗ್ಸ್​ ದಂಧೆ ಪ್ರಕರಣದಿಂದಾಗಿ ಗಂಧದಗುಡಿಗೆ ಗರಬಡಿದಂತೆ ಆಗ್ಬಿಟ್ಟಿದೆ. ಪ್ರಕರಣದಲ್ಲಿ ಸದ್ಯ ಸಿಸಿಬಿ ಶಿಕಾರಿ ಆರಂಭಿಸಿದ್ದು, ಅದ್ಯಾವ ನಟರ ಹೆಸ್ರು ಹೊರ ಬರುತ್ತೋ ನೋಡ್ಬೇಕು.

Published On - 7:29 am, Thu, 3 September 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ