Daali Dhananjay: ‘ಉತ್ತರಕಾಂಡ’ಕ್ಕೆ ಡಾಲಿ ಧನಂಜಯ್​ ಸಜ್ಜು; ಮತ್ತೆ ಒಂದಾಯ್ತು ‘ರತ್ನನ್​ ಪ್ರಪಂಚ’ ಟೀಮ್​

| Updated By: ಮದನ್​ ಕುಮಾರ್​

Updated on: Nov 02, 2022 | 7:31 AM

Uttarakaanda | KRG Studios: ‘ಉತ್ತರಕಾಂಡ’ ಸಿನಿಮಾಗೆ ರೋಹಿತ್​ ಪದಕಿ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 6ರಂದು ಈ ಚಿತ್ರಕ್ಕೆ ಅದ್ದೂರಿಯಾಗಿ ಪೂಜೆ ನೆರವೇರಿಸಲಾಗುತ್ತದೆ.

Daali Dhananjay: ‘ಉತ್ತರಕಾಂಡ’ಕ್ಕೆ ಡಾಲಿ ಧನಂಜಯ್​ ಸಜ್ಜು; ಮತ್ತೆ ಒಂದಾಯ್ತು ‘ರತ್ನನ್​ ಪ್ರಪಂಚ’ ಟೀಮ್​
ಉತ್ತರಕಾಂಡ ಪೋಸ್ಟರ್​, ಡಾಲಿ ಧನಂಜಯ್
Follow us on

ನಟ ಡಾಲಿ ಧನಂಜಯ್​ (Daali Dhananjay) ಅವರ ಪ್ರತಿ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭರವಸೆ ಮೂಡಿದೆ. ಪ್ರತಿ ಚಿತ್ರದಲ್ಲೂ ಅವರು ಏನಾದರೊಂದು ಹೊಸತನ್ನು ಪ್ರಯತ್ನಿಸುತ್ತಾರೆ. ಒಂದು ಪಾತ್ರ ಹಿಟ್​ ಆಯ್ತು ಎಂದ ಮಾತ್ರಕ್ಕೆ ಅದೇ ಮಾದರಿಯ ಪಾತ್ರಕ್ಕೆ ಗಂಟು ಬೀಳುವವರಲ್ಲ ಧನಂಜಯ್​. ಈಗಾಗಲೇ ಹಲವು ಸಿನಿಮಾಗಳ ಮೂಲಕ ಅವರು ಅದನ್ನು ಸಾಬೀತು ಮಾಡಿದ್ದಾಗಿದೆ. ಇತ್ತೀಚೆಗೆ ಅವರ ‘ಹೆಡ್​ ಬುಷ್​’ (Head Bush) ಚಿತ್ರ ತೆರೆಕಂಡು ಸಾಕಷ್ಟು ಸದ್ದು ಮಾಡಿತು. ಈಗ ಅವರ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ಕೇಳಿಬಂದಿದೆ. ಈ ಚಿತ್ರಕ್ಕೆ ‘ಉತ್ತರಕಾಂಡ’ (Uttarakaanda) ಎಂದು ಶೀರ್ಷಿಕೆ ಇಡಲಾಗಿದೆ. ಪ್ರೀ-ಪ್ರೊಡಕ್ಷನ್​ ಕೆಲಸಗಳು ಕೊನೇ ಹಂತದಲ್ಲಿವೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ಅವರು ನಿರ್ಮಿಸುತ್ತಿದ್ದಾರೆ.

‘ಉತ್ತರಕಾಂಡ’ ಸಿನಿಮಾಗೆ ರೋಹಿತ್​ ಪದಕಿ ನಿರ್ದೇಶನ ಮಾಡಲಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಚಿತ್ರದ ಬಗ್ಗೆ ಅಪ್​ಡೇಟ್​ ನೀಡಲಾಗಿದೆ. ನವೆಂಬರ್ 6ರಂದು, ಮಧ್ಯಾಹ್ನ 3.22ಕ್ಕೆ ಚಿತ್ರದ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ. ಚಿತ್ರತಂಡದ ಬಗ್ಗೆ ಮತ್ತು ಸಿನಿಮಾದ ಇನ್ನಿತರ ಅಂಶಗಳ ಕುರಿತು ಮತ್ತಷ್ಟು ವಿವರಗಳನ್ನು ಆ ದಿನ ಹಂಚಿಕೊಳ್ಳಲಾಗುತ್ತದೆ. ಡಾಲಿ ಧನಂಜಯ್​ ವೃತ್ತಿಬದುಕಿನಲ್ಲಿ ಈ ಸಿನಿಮಾ ಕೂಡ ಡಿಫರೆಂಟ್​ ಆಗಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ
‘ಹೆಡ್​ ಬುಷ್​’ ಚಿತ್ರದ ವೀರಗಾಸೆ ವಿವಾದ: ಧನಂಜಯ್ ಸುದ್ದಿಗೋಷ್ಠಿಯ ಲೈವ್ ನೋಡಿ
ಮೂರು ದಿನಕ್ಕೆ ಬಂಗಾರದ ಬೆಳೆ ತೆಗೆದ ‘ಹೆಡ್​ ಬುಷ್​’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ
Head Bush: ಡಾಲಿ ಧನಂಜಯ್​ ಮೇಲೆ ಹೂಮಳೆ ಸುರಿಸಿದ ಫ್ಯಾನ್ಸ್​; ಚಿತ್ರದುರ್ಗದಲ್ಲಿ ‘ಹೆಡ್​ ಬುಷ್​’ ತಂಡಕ್ಕೆ ಭರ್ಜರಿ ಸ್ವಾಗತ
Head Bush: ಸೈಕಲ್​ ಏರಿ ಅಪ್ಪು ಸಮಾಧಿಗೆ ಬಂದ ಡಾಲಿ ಧನಂಜಯ್; ‘ಹೆಡ್​ ಬುಷ್​’ ಚಿತ್ರಕ್ಕೆ ಡಿಫರೆಂಟ್​ ಪ್ರಚಾರ

‘ಟಗರು’ ಸಿನಿಮಾದಲ್ಲಿ ಡಾಲಿ ಎಂಬ ವಿಲನ್​​​ ಪಾತ್ರ ಮಾಡಿದ ಬಳಿಕ ಧನಂಜಯ್​ ಅವರ ಬದುಕು ಬದಲಾಯ್ತು. ‘ಪುಷ್ಪ’ ಚಿತ್ರದಲ್ಲೂ ಖಳನಟನಾಗಿ ಅಬ್ಬರಿಸುವ ಅವಕಾಶ ಅವರಿಗೆ ಸಿಕ್ತು. ಹಾಗಂತ ಅವರು ಅಷ್ಟಕ್ಕೇ ಮಿತಿ ಹೇರಿಕೊಳ್ಳಲಿಲ್ಲ. ‘ರತ್ನನ್​ ಪ್ರಪಂಚ’ ರೀತಿಯ ಎಮೋಷನಲ್​ ಆದಂತಹ ಕಥೆಯನ್ನೂ ಆಯ್ಕೆ ಮಾಡಿಕೊಂಡರು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ರೋಹಿತ್​ ಪದಕಿ. ನಿರ್ಮಾಣ ಮಾಡಿದ್ದು ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​. ಈಗ ಈ ನಾಲ್ಕು ಜನರ ಕಾಂಬಿನೇಷನ್​ನಲ್ಲಿ ‘ಕೆಆರ್​ಜಿ ಸ್ಟುಡಿಯೋಸ್​’ ಮೂಲಕ ‘ಉತ್ತರ ಕಾಂಡ’ ಮೂಡಿಬರಲಿದೆ. ಈ ಚಿತ್ರವನ್ನು ವಿಜಯ್​ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿದ್ದಾರೆ.

ವಿಷೇಶವೆಂದರೆ, ‘ಉತ್ತರಕಾಂಡ’ ಸಿನಿಮಾದ ಪೂರ್ತಿ ಕಥೆ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣಗೊಳ್ಳಲಿದೆ. ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ಸ್ವಾಮಿ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕೆ ಇರಲಿದೆ. ‘ಉತ್ತರಕಾಂಡ’ ಚಿತ್ರದ ಶೀರ್ಷಿಕೆ ವಿನ್ಯಾಸ ಮತ್ತು ಪೋಸ್ಟರ್ ಗಮನ ಸೆಳೆಯುತ್ತಿದೆ. ಇನ್ನಷ್ಟು ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Wed, 2 November 22