AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗಲಿದ ‘ರಾಜ ಮಾರ್ತಾಂಡ’ನಿಗೆ ದನಿಗೂಡಿಸಲಿದ್ದಾರೆ ದರ್ಶನ್, ಧ್ರುವ

ಬೆಂಗಳೂರು: ಸ್ಯಾಂಡಲ್​ವುಡ್​ನ ಉತ್ತುಂಗಕ್ಕೆ ಏರುತ್ತಿದ್ದ ಯುವ ನಟ, ಅಗಾಧ ಪ್ರತಿಭೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರ ಹಠಾತ್​ ನಿಧನ ಎಲ್ಲರನ್ನೂ ದಂಗು ಬಡಿಸಿತ್ತು. ತನ್ನ ಸರಳ ಸ್ವಭಾವ ಹಾಗೂ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಚಿರು ಈಗ ಎಲ್ಲರನ್ನು ಬಿಟ್ಟು ಬಹುದೂರ ಹೋಗಿದ್ದಾರೆ. ಈ ಮಧ್ಯೆ ತಾವು ನಟಿಸುತ್ತಿದ್ದ ಕೆಲವು ಸಿನಿಮಾಗಳು ಅಪೂರ್ಣವಾಗಿ ಉಳಿದಿವೆ. ಅವುಗಳಲ್ಲಿ ರಾಜ ಮಾರ್ತಾಂಡ ಸಿನಿಮಾ ಕೂಡಾ ಒಂದು. ಶೂಟಿಂಗ್​ ಭಾಗ ಮುಗಿದಿದ್ದ ಚಿತ್ರಕ್ಕೆ ಲಾಕ್​ಡೌನ್ ಎದುರಾಗಿ ಡಬ್ಬಿಂಗ್ ಮಾಡುವುದು ಮಾತ್ರ ಬ್ಯಾಲೆನ್ಸ್ […]

ಅಗಲಿದ ‘ರಾಜ ಮಾರ್ತಾಂಡ’ನಿಗೆ ದನಿಗೂಡಿಸಲಿದ್ದಾರೆ ದರ್ಶನ್, ಧ್ರುವ
KUSHAL V
| Updated By: |

Updated on:Jun 28, 2020 | 4:53 PM

Share

ಬೆಂಗಳೂರು: ಸ್ಯಾಂಡಲ್​ವುಡ್​ನ ಉತ್ತುಂಗಕ್ಕೆ ಏರುತ್ತಿದ್ದ ಯುವ ನಟ, ಅಗಾಧ ಪ್ರತಿಭೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರ ಹಠಾತ್​ ನಿಧನ ಎಲ್ಲರನ್ನೂ ದಂಗು ಬಡಿಸಿತ್ತು. ತನ್ನ ಸರಳ ಸ್ವಭಾವ ಹಾಗೂ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಚಿರು ಈಗ ಎಲ್ಲರನ್ನು ಬಿಟ್ಟು ಬಹುದೂರ ಹೋಗಿದ್ದಾರೆ.

ಈ ಮಧ್ಯೆ ತಾವು ನಟಿಸುತ್ತಿದ್ದ ಕೆಲವು ಸಿನಿಮಾಗಳು ಅಪೂರ್ಣವಾಗಿ ಉಳಿದಿವೆ. ಅವುಗಳಲ್ಲಿ ರಾಜ ಮಾರ್ತಾಂಡ ಸಿನಿಮಾ ಕೂಡಾ ಒಂದು. ಶೂಟಿಂಗ್​ ಭಾಗ ಮುಗಿದಿದ್ದ ಚಿತ್ರಕ್ಕೆ ಲಾಕ್​ಡೌನ್ ಎದುರಾಗಿ ಡಬ್ಬಿಂಗ್ ಮಾಡುವುದು ಮಾತ್ರ ಬ್ಯಾಲೆನ್ಸ್ ಉಳಿದಿತ್ತು. ಆದ್ರೆ ಚಿರು ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಅವರ ವಾಯ್ಸ್​ ಡಬ್ಬಿಂಗ್​ ಭಾಗವು ಹಾಗೇ ಉಳಿದುಬಿಟ್ಟಿತ್ತು. ಹೀಗಾಗಿ ಚಿತ್ರದ ನಿರ್ಮಾಪಕರಿಗೆ ತುಸು ಚಿಂತೆ ಶುರುವಾಗಿತ್ತು.

ರಾಜ ಮಾರ್ತಾಂಡನಿಗೆ ವಾಯ್ಸ್​ ನೀಡಲಿದ್ದಾರೆ ದರ್ಶನ್​, ಧ್ರುವ ಆದರೆ, ಅಗಲಿದ ಅಣ್ಣನಿಗೆ ಬಲಗೈ ಭಂಟನಂತಿದ್ದ ತಮ್ಮ ಧ್ರುವ ಇದೀಗ ಸಿನಿಮಾದ ನಿರ್ಮಾಪಕರಿಗೆ ಅರ್ಧಕ್ಕೆ ನಿಂತ ಚಿತ್ರವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಚಿರು ಪುಣ್ಯತಿಥಿ ನಡೆದ ದಿನದಂದು ಧ್ರುವ ನಿರ್ಮಾಪಕರಿಗೆ ಮಾತು ಕೊಟ್ಟಿದ್ದಾರೆ. ಇದರ ಜೊತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ನೆರವಿನ ಹಸ್ತ ಚಾಚಿದ್ದು ಅಗತ್ಯ ಬಿದ್ದರೆ ಸ್ವತಃ ತಾವೇ ವಾಯ್ಸ್ ಡಬ್ ಮಾಡೋದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ ನೋವಲ್ಲೂ ಸ್ಟಾರ್ ನಟರು ನೀಡಿರೋ ಮಾತಿಗೆ ಚಿತ್ರತಂಡ ಸಂತಸಗೊಂಡಿದೆ.

Published On - 4:52 pm, Sun, 28 June 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ