AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ. ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ […]

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jun 28, 2020 | 12:33 PM

Share

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ.

ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ ಮಾತುಗಾರನಾಗಿದ್ದ. ತನ್ನ ಕನಸುಗಳನ್ನ ಬೆನ್ನಟ್ಟುತ್ತಿದ್ದ ರೀತಿ, ಆತನ ನಗು, ನಕ್ಷತ್ರಗಳ ಮೇಲಿದ್ದ ಸುಶಾಂತ್​ಗಿದ್ದ ಕುತೂಹಲ, ಸದಾ ಆ ನಕ್ಷತ್ರಗಳನ್ನ ನೋಡುತ್ತಿದ್ದ ಟೆಲಿಸ್ಕೋಪ್ ಎಲ್ಲವೂ ನಟನ ನೆನಪು.

ಮರೆಯಾದ ಮಗನ ನೆನೆಪಿಗೆ ಫೌಂಡೇಷನ್ ಸ್ಥಾಪನೆ ಸುಶಾಂತ್ ಅನುಪಸ್ಥಿತಿ ಕುಟುಂಬವನ್ನ ಸದಾ ಕಾಡುತ್ತಲೇ ಇರುತ್ತೆ. ಹೀಗಾಗಿ ಸುಶಾಂತ್ ಸಿಂಗ್ ರಾಜಪುತ್ ನೆನಪು ಹಾಗೂ ಪರಂಪರೆಯನ್ನ ಮುಂದುವರೆಸಲು ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್(SSRP) ಅನ್ನ ತೆರೆಯಲು ಕುಟುಂಬ ನಿರ್ಧರಿಸಿದೆ. ಈ ಫೌಂಡೇಷನ್ ಸಿನಿಮಾ, ಕ್ರೀಡೆ ಹಾಗೂ ವಿಜ್ಞಾನ ವಿಭಾಗದ ಯುವ ಪ್ರತಿಭೆಗಳಿಗೆ ಅಗತ್ಯ ನೆರವು ನೀಡಲಿದೆ.

ಇಷ್ಟೇ ಅಲ್ಲ.. ಸುಶಾಂತ್ ಸಿಂಗ್ ರಾಜಪೂತ್ ಬಾಲ್ಯ ಕಳೆದ ಪಾಟ್ನಾದ ರಾಜೀವ್​ನಗರದ ಮನೆಯನ್ನ ಸ್ಮಾರಕವನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಸುಶಾಂತ್ ಅಭಿಮಾನಿಗಳಿಗಾಗಿ ಸ್ಮರಣಿಕೆಗಳು, ವಸ್ತುಗಳು, ಸಾವಿರಾರು ಪುಸ್ತಕಗಳು, ಟೆಲಿಸ್ಕೋಪ್, ಫ್ಲೈಟ್ ಸಿಮ್ಯೂಲೇಟರ್ ಇತ್ಯಾದಿಗಳು ಇರಿಸಲಾಗುತ್ತೆ. ಅಲ್ಲದೆ ಸುಶಾಂತ್ ಸಿಂಗ್ ರಾಜಪೂತ್ ನೆನಪುಗಳನ್ನ ಜೀವಂತವಾಗಿರಿಸಲು ಇನ್ಸ್​ಟಾಗ್ರಾಂ, ಟ್ವಿಟರ್, ಫೇಸ್​ಬುಕ್ ಖಾತೆಯನ್ನ ಜೀವಂತವಾಗಿಡಲು ತೀರ್ಮಾನಿಸಲಾಗಿದ್ದು, ಕುಟುಂಬಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Published On - 12:24 pm, Sun, 28 June 20

Follow Us
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ