AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ. ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ […]

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ
ಆಯೇಷಾ ಬಾನು
| Updated By: |

Updated on:Jun 28, 2020 | 12:33 PM

Share

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ.

ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ ಮಾತುಗಾರನಾಗಿದ್ದ. ತನ್ನ ಕನಸುಗಳನ್ನ ಬೆನ್ನಟ್ಟುತ್ತಿದ್ದ ರೀತಿ, ಆತನ ನಗು, ನಕ್ಷತ್ರಗಳ ಮೇಲಿದ್ದ ಸುಶಾಂತ್​ಗಿದ್ದ ಕುತೂಹಲ, ಸದಾ ಆ ನಕ್ಷತ್ರಗಳನ್ನ ನೋಡುತ್ತಿದ್ದ ಟೆಲಿಸ್ಕೋಪ್ ಎಲ್ಲವೂ ನಟನ ನೆನಪು.

ಮರೆಯಾದ ಮಗನ ನೆನೆಪಿಗೆ ಫೌಂಡೇಷನ್ ಸ್ಥಾಪನೆ ಸುಶಾಂತ್ ಅನುಪಸ್ಥಿತಿ ಕುಟುಂಬವನ್ನ ಸದಾ ಕಾಡುತ್ತಲೇ ಇರುತ್ತೆ. ಹೀಗಾಗಿ ಸುಶಾಂತ್ ಸಿಂಗ್ ರಾಜಪುತ್ ನೆನಪು ಹಾಗೂ ಪರಂಪರೆಯನ್ನ ಮುಂದುವರೆಸಲು ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್(SSRP) ಅನ್ನ ತೆರೆಯಲು ಕುಟುಂಬ ನಿರ್ಧರಿಸಿದೆ. ಈ ಫೌಂಡೇಷನ್ ಸಿನಿಮಾ, ಕ್ರೀಡೆ ಹಾಗೂ ವಿಜ್ಞಾನ ವಿಭಾಗದ ಯುವ ಪ್ರತಿಭೆಗಳಿಗೆ ಅಗತ್ಯ ನೆರವು ನೀಡಲಿದೆ.

ಇಷ್ಟೇ ಅಲ್ಲ.. ಸುಶಾಂತ್ ಸಿಂಗ್ ರಾಜಪೂತ್ ಬಾಲ್ಯ ಕಳೆದ ಪಾಟ್ನಾದ ರಾಜೀವ್​ನಗರದ ಮನೆಯನ್ನ ಸ್ಮಾರಕವನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಸುಶಾಂತ್ ಅಭಿಮಾನಿಗಳಿಗಾಗಿ ಸ್ಮರಣಿಕೆಗಳು, ವಸ್ತುಗಳು, ಸಾವಿರಾರು ಪುಸ್ತಕಗಳು, ಟೆಲಿಸ್ಕೋಪ್, ಫ್ಲೈಟ್ ಸಿಮ್ಯೂಲೇಟರ್ ಇತ್ಯಾದಿಗಳು ಇರಿಸಲಾಗುತ್ತೆ. ಅಲ್ಲದೆ ಸುಶಾಂತ್ ಸಿಂಗ್ ರಾಜಪೂತ್ ನೆನಪುಗಳನ್ನ ಜೀವಂತವಾಗಿರಿಸಲು ಇನ್ಸ್​ಟಾಗ್ರಾಂ, ಟ್ವಿಟರ್, ಫೇಸ್​ಬುಕ್ ಖಾತೆಯನ್ನ ಜೀವಂತವಾಗಿಡಲು ತೀರ್ಮಾನಿಸಲಾಗಿದ್ದು, ಕುಟುಂಬಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Published On - 12:24 pm, Sun, 28 June 20

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?