AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ. ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ […]

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ
ಆಯೇಷಾ ಬಾನು
| Edited By: |

Updated on:Jun 28, 2020 | 12:33 PM

Share

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ.

ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ ಮಾತುಗಾರನಾಗಿದ್ದ. ತನ್ನ ಕನಸುಗಳನ್ನ ಬೆನ್ನಟ್ಟುತ್ತಿದ್ದ ರೀತಿ, ಆತನ ನಗು, ನಕ್ಷತ್ರಗಳ ಮೇಲಿದ್ದ ಸುಶಾಂತ್​ಗಿದ್ದ ಕುತೂಹಲ, ಸದಾ ಆ ನಕ್ಷತ್ರಗಳನ್ನ ನೋಡುತ್ತಿದ್ದ ಟೆಲಿಸ್ಕೋಪ್ ಎಲ್ಲವೂ ನಟನ ನೆನಪು.

ಮರೆಯಾದ ಮಗನ ನೆನೆಪಿಗೆ ಫೌಂಡೇಷನ್ ಸ್ಥಾಪನೆ ಸುಶಾಂತ್ ಅನುಪಸ್ಥಿತಿ ಕುಟುಂಬವನ್ನ ಸದಾ ಕಾಡುತ್ತಲೇ ಇರುತ್ತೆ. ಹೀಗಾಗಿ ಸುಶಾಂತ್ ಸಿಂಗ್ ರಾಜಪುತ್ ನೆನಪು ಹಾಗೂ ಪರಂಪರೆಯನ್ನ ಮುಂದುವರೆಸಲು ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್(SSRP) ಅನ್ನ ತೆರೆಯಲು ಕುಟುಂಬ ನಿರ್ಧರಿಸಿದೆ. ಈ ಫೌಂಡೇಷನ್ ಸಿನಿಮಾ, ಕ್ರೀಡೆ ಹಾಗೂ ವಿಜ್ಞಾನ ವಿಭಾಗದ ಯುವ ಪ್ರತಿಭೆಗಳಿಗೆ ಅಗತ್ಯ ನೆರವು ನೀಡಲಿದೆ.

ಇಷ್ಟೇ ಅಲ್ಲ.. ಸುಶಾಂತ್ ಸಿಂಗ್ ರಾಜಪೂತ್ ಬಾಲ್ಯ ಕಳೆದ ಪಾಟ್ನಾದ ರಾಜೀವ್​ನಗರದ ಮನೆಯನ್ನ ಸ್ಮಾರಕವನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಸುಶಾಂತ್ ಅಭಿಮಾನಿಗಳಿಗಾಗಿ ಸ್ಮರಣಿಕೆಗಳು, ವಸ್ತುಗಳು, ಸಾವಿರಾರು ಪುಸ್ತಕಗಳು, ಟೆಲಿಸ್ಕೋಪ್, ಫ್ಲೈಟ್ ಸಿಮ್ಯೂಲೇಟರ್ ಇತ್ಯಾದಿಗಳು ಇರಿಸಲಾಗುತ್ತೆ. ಅಲ್ಲದೆ ಸುಶಾಂತ್ ಸಿಂಗ್ ರಾಜಪೂತ್ ನೆನಪುಗಳನ್ನ ಜೀವಂತವಾಗಿರಿಸಲು ಇನ್ಸ್​ಟಾಗ್ರಾಂ, ಟ್ವಿಟರ್, ಫೇಸ್​ಬುಕ್ ಖಾತೆಯನ್ನ ಜೀವಂತವಾಗಿಡಲು ತೀರ್ಮಾನಿಸಲಾಗಿದ್ದು, ಕುಟುಂಬಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Published On - 12:24 pm, Sun, 28 June 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ