AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ. ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ […]

ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jun 28, 2020 | 12:33 PM

Share

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ.

ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ ಮಾತುಗಾರನಾಗಿದ್ದ. ತನ್ನ ಕನಸುಗಳನ್ನ ಬೆನ್ನಟ್ಟುತ್ತಿದ್ದ ರೀತಿ, ಆತನ ನಗು, ನಕ್ಷತ್ರಗಳ ಮೇಲಿದ್ದ ಸುಶಾಂತ್​ಗಿದ್ದ ಕುತೂಹಲ, ಸದಾ ಆ ನಕ್ಷತ್ರಗಳನ್ನ ನೋಡುತ್ತಿದ್ದ ಟೆಲಿಸ್ಕೋಪ್ ಎಲ್ಲವೂ ನಟನ ನೆನಪು.

ಮರೆಯಾದ ಮಗನ ನೆನೆಪಿಗೆ ಫೌಂಡೇಷನ್ ಸ್ಥಾಪನೆ ಸುಶಾಂತ್ ಅನುಪಸ್ಥಿತಿ ಕುಟುಂಬವನ್ನ ಸದಾ ಕಾಡುತ್ತಲೇ ಇರುತ್ತೆ. ಹೀಗಾಗಿ ಸುಶಾಂತ್ ಸಿಂಗ್ ರಾಜಪುತ್ ನೆನಪು ಹಾಗೂ ಪರಂಪರೆಯನ್ನ ಮುಂದುವರೆಸಲು ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್(SSRP) ಅನ್ನ ತೆರೆಯಲು ಕುಟುಂಬ ನಿರ್ಧರಿಸಿದೆ. ಈ ಫೌಂಡೇಷನ್ ಸಿನಿಮಾ, ಕ್ರೀಡೆ ಹಾಗೂ ವಿಜ್ಞಾನ ವಿಭಾಗದ ಯುವ ಪ್ರತಿಭೆಗಳಿಗೆ ಅಗತ್ಯ ನೆರವು ನೀಡಲಿದೆ.

ಇಷ್ಟೇ ಅಲ್ಲ.. ಸುಶಾಂತ್ ಸಿಂಗ್ ರಾಜಪೂತ್ ಬಾಲ್ಯ ಕಳೆದ ಪಾಟ್ನಾದ ರಾಜೀವ್​ನಗರದ ಮನೆಯನ್ನ ಸ್ಮಾರಕವನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಸುಶಾಂತ್ ಅಭಿಮಾನಿಗಳಿಗಾಗಿ ಸ್ಮರಣಿಕೆಗಳು, ವಸ್ತುಗಳು, ಸಾವಿರಾರು ಪುಸ್ತಕಗಳು, ಟೆಲಿಸ್ಕೋಪ್, ಫ್ಲೈಟ್ ಸಿಮ್ಯೂಲೇಟರ್ ಇತ್ಯಾದಿಗಳು ಇರಿಸಲಾಗುತ್ತೆ. ಅಲ್ಲದೆ ಸುಶಾಂತ್ ಸಿಂಗ್ ರಾಜಪೂತ್ ನೆನಪುಗಳನ್ನ ಜೀವಂತವಾಗಿರಿಸಲು ಇನ್ಸ್​ಟಾಗ್ರಾಂ, ಟ್ವಿಟರ್, ಫೇಸ್​ಬುಕ್ ಖಾತೆಯನ್ನ ಜೀವಂತವಾಗಿಡಲು ತೀರ್ಮಾನಿಸಲಾಗಿದ್ದು, ಕುಟುಂಬಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Published On - 12:24 pm, Sun, 28 June 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ