AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deadly 3: ‘ಡೆಡ್ಲಿ 3’​ ಸಿನಿಮಾ ಶುರುಮಾಡಿದ ರವಿ ಶ್ರೀವತ್ಸ; ಆದರೆ ಈ ಬಾರಿ ಆದಿತ್ಯ ಹೀರೋ ಅಲ್ಲ

Deadly Soma: ನಮ್ಮ ಹೀರೋ 6.2 ಅಡಿ ಇದ್ದಾನೆ. ಬಾಲ್ಯದಿಂದಲೂ ಹೀರೋ ಆಗಬೇಕು ಎಂಬ ಕನಸು ಕಂಡಿದ್ದಾನೆ. ನಟನೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾನೆ ಎಂದು ಹೊಸ ಹೀರೋ ದೀಕ್ಷಿತ್​ ಬಗ್ಗೆ ರವಿ ಶ್ರೀವತ್ಸ ಮಾಹಿತಿ ನೀಡಿದ್ದಾರೆ.

Deadly 3: ‘ಡೆಡ್ಲಿ 3’​ ಸಿನಿಮಾ ಶುರುಮಾಡಿದ ರವಿ ಶ್ರೀವತ್ಸ; ಆದರೆ ಈ ಬಾರಿ ಆದಿತ್ಯ ಹೀರೋ ಅಲ್ಲ
ರವಿ ಶ್ರೀವತ್ಸ
Follow us
ಮದನ್​ ಕುಮಾರ್​
|

Updated on: May 31, 2021 | 8:26 AM

2005ರಲ್ಲಿ ‘ಡೆಡ್ಲಿ ಸೋಮ’ ಸಿನಿಮಾ ಸೂಪರ್​ ಹಿಟ್​ ಆಯಿತು. ನಟ ಆದಿತ್ಯ ಅವರಿಗೆ ಆ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಿತು. ನಿರ್ದೇಶಕ ರವಿ ಶ್ರೀವತ್ಸ ಅವರು ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡರು. ರಿಯಲ್​ ಲೈಫ್​ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಆ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ನಂತರ 2010ರಲ್ಲಿ ಈ ಚಿತ್ರಕ್ಕೆ ಸೀಕ್ವೆಲ್​ ಮಾಡಲಾಯಿತು. ‘ಡೆಡ್ಲಿ 2’ ಹೆಸರಲ್ಲಿ ಆ ಸಿನಿಮಾ ಮೂಡಿಬಂತು. ಅದಕ್ಕೂ ರವಿ ಶ್ರೀವತ್ಸ ನಿರ್ದೇಶನ ಮಾಡಿದ್ದರು. ನಾಯಕನಾಗಿ ಆದಿತ್ಯ ಮುಂದುವರಿದಿದ್ದರು. ಈಗ ‘ಡೆಡ್ಲಿ 3’ ಸಿನಿಮಾ ಘೋಷಣೆ ಆಗಿದೆ. ಮತ್ತೆ ರವಿ ಶ್ರೀವತ್ಸ ನಿರ್ದೇಶನ ಮಾಡಲಿದ್ದಾರೆ. ಆದರೆ ಆ ಬಾರಿ ಆದಿತ್ಯ ಹೀರೋ ಅಲ್ಲ!

ಈ ಬಗ್ಗೆ ಸ್ವತಃ ರವಿ ಶ್ರೀವತ್ಸ ಮಾಹಿತಿ ನೀಡಿದ್ದಾರೆ. ಹೊಸ ಹೀರೋ ಎಂಆರ್​ ದೀಕ್ಷಿತ್​ ‘ಡೆಡ್ಲಿ 3’ ಸಿನಿಮಾದಲ್ಲಿ ನಟಿಸಲಿದ್ದಾರೆ. ಯಾರು ಈ ದೀಕ್ಷಿತ್​? ‘ಡೆಡ್ಲಿ ಸೋಮ’ ಸಿನಿಮಾಗೆ ಬಂಡವಾಳ ಹೂಡಿದ್ದ ಶೋಭಾ ರಾಜಣ್ಣ ಅವರ ಪುತ್ರ. ‘ಡೆಡ್ಲಿ ಸೋಮ’ ಚಿತ್ರದಲ್ಲಿ ಸೋಮನ ಬಾಲ್ಯದ ಪಾತ್ರವನ್ನು ಮಾಡಿದ್ದು ಇದೇ ದೀಕ್ಷಿತ್​. ಈಗ ‘ಡೆಡ್ಲಿ 3’ ಚಿತ್ರಕ್ಕೆ ದೀಕ್ಷಿತ್​ ಹೀರೋ. ಮೇ 31ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಈ ಸುದ್ದಿಯನ್ನು ರವಿ ಶ್ರೀವತ್ಸ ಬಹಿರಂಗಪಡಿಸಿದ್ದಾರೆ.

‘ನಮ್ಮ ಹೀರೋ 6.2 ಅಡಿ ಇದ್ದಾನೆ. ಬಾಲ್ಯದಿಂದಲೂ ಹೀರೋ ಆಗಬೇಕು ಎಂಬ ಕನಸು ಕಂಡಿದ್ದಾನೆ. ನಟನೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾನೆ. ಡ್ಯಾನ್ಸ್​, ಫೈಟ್​, ನಟನೆಯ ಕ್ಲಾಸ್​ಗಳಿಗೆ ತೆರಳಿ ಎಲ್ಲವನ್ನೂ ಕಲಿತಿದ್ದಾನೆ. ಸಿನಿಮಾದಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಅವನಿಗೆ ಇದೆ. ‘ಟೈಗರ್​ ಗಲ್ಲಿ’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಕೊಟ್ಟಿದ್ದೆ. ಅವನು ಹೀರೋ ಆಗಿ ಬೆಳೆಯುತ್ತಾನೆ ಎಂದು ಭರವಸೆ ಆಗಲೇ ನನಗೆ ಮೂಡಿತ್ತು’ ಎಂದು ರವಿಶ್ರೀವತ್ಸ ಹೇಳಿದ್ದಾರೆ.

‘ದೀಕ್ಷಿತ್​ನನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಎಷ್ಟೋ ಜನರು ನಮ್ಮನ್ನು ಹಂಗಿಸಿದರು. ಇವನು ಹೀರೋನಾ ಅಂತ ಕೇಳಿದರು. ಆದರೆ ಮುಂದೊಂದು ದಿನ ಎಲ್ಲರೂ ಗೌರವ ಕೊಡುವಂತಹ ವ್ಯಕ್ತಿಯಾಗಿ ಇವನು ಬೆಳೆದು ನಿಲ್ಲುತ್ತಾನೆ’ ಎಂದು ಭರವಸೆಯ ಮಾತುಗಳನ್ನು ರವಿ ಶ್ರೀವತ್ಸ ಹೇಳಿದ್ದಾರೆ. ಚಿತ್ರದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ? ತಂತ್ರಜ್ಞರು ಯಾರು ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

ಇದನ್ನೂ ಓದಿ:

‘ಮುಂದುವರೆದ ಅಧ್ಯಾಯ’ ಸಿನಿಮಾಗೆ ಯುಟ್ಯೂಬ್ ಗಳಲ್ಲಿ ಕೆಟ್ಟ ವಿಮರ್ಶೆ: ನಟ ಆದಿತ್ಯ ಆಕ್ರೋಶ

ಸುದೀಪ್​ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್​ ರೋಣ’ ಪೋಸ್ಟರ್​; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ