Sign In

By signing in or creating an account, you agree with Associated Broadcasting Company's Terms & Conditions and Privacy Policy.

MN Kumar: ‘ಸುದೀಪ್​ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್​. ಕುಮಾರ್​ ಮರುಪ್ರಶ್ನೆ

Kichcha Sudeep: ಅಡ್ವಾನ್ಸ್ ಹಣ ಪಡೆಯುವ ಹೀರೋಗಳು ನಂತರ ಅದೇ ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಎಂ.ಎನ್​. ಕುಮಾರ್​ ವಿವರಿಸಿದ್ದಾರೆ.

MN Kumar: ‘ಸುದೀಪ್​ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್​. ಕುಮಾರ್​ ಮರುಪ್ರಶ್ನೆ
ಎಂ.ಎನ್​. ಕುಮಾರ್​, ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: Jul 08, 2023 | 6:25 PM

ನಿರ್ಮಾಪಕ ಎಂ.ಎನ್​. ಕುಮಾರ್​ (Producer MN Kumar) ಮತ್ತು ನಟ ಕಿಚ್ಚ ಸುದೀಪ್​ ನಡುವಿನ ಜಟಾಪಟ ಮತ್ತೊಂದು ಹಂತಕ್ಕೆ ಏರಿದೆ. ಕಾನೂನಿನ ಮೂಲಕ ವಿವಾದ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಎಂ.ಎನ್​. ಕುಮಾರ್​ಗೆ ಸುದೀಪ್​ (Kichcha Sudeep) ಅವರು ಲೀಗಲ್​ ನೋಟೀಸ್​ ಕಳಿಸಿದ್ದಾರೆ. ಅಡ್ವಾನ್ಸ್​ ಹಣ ಪಡೆದು ಕಾಲ್​ಶೀಟ್​ ನೀಡಿಲ್ಲ ಎಂಬ ಆರೋಪಕ್ಕೆ ದಾಖಲೆ ಇದೆಯೇ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ಆ ಮಾತಿಗೆ ಎಂ.ಎನ್​. ಕುಮಾರ್​ ಅವರು ಮರು ಪ್ರಶ್ನೆ ಹಾಕಿದ್ದಾರೆ. ಸುದೀಪ್​ ಮಾಡಿರುವ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯೇ ಎಂದು ಎಂ.ಎನ್​. ಕುಮಾರ್​ ಪ್ರಶ್ನಿಸಿದ್ದಾರೆ.

‘ಸುದೀಪ್​ ಅವರು 45 ಸಿನಿಮಾ ಮಾಡಿದ್ದಾರೆ. ಆ 45 ಸಿನಿಮಾಗಳ ಅಗ್ರಿಮೆಂಟ್​ ತಂದು ಮಾಧ್ಯಮಗಳ ಮುಂದೆ ಕೊಡಲು ಹೇಳಿ. ಯಾವುದಕ್ಕಾದರೂ ಅಗ್ರಿಮೆಂಟ್​ ಮಾಡಿದ್ದಾರಾ. ಸಿನಿಮಾ ಕ್ಷೇತ್ರ ನಡೆಯುವುದೇ ನಂಬಿಕೆ ಮೇಲೆ. ಪ್ರಪಂಚದಲ್ಲಿ ಬೇರೆ ಯಾವ ವ್ಯವಹಾರ ಈ ರೀತಿ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ’ ಎಂದು ಎಂ.ಎನ್​. ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ಜುಲೈ 6 ಎಂದರೆ ಸುದೀಪ್​ ಪಾಲಿಗೆ ಭಾರಿ ವಿಶೇಷ; ‘ಹುಚ್ಚ’ ಚಿತ್ರ ತೆರೆಕಂಡು ಕಳೆಯಿತು 22 ವರ್ಷ

ಮೊದಲು ಅಡ್ವಾನ್ಸ್ ಹಣ ಪಡೆಯುವ ಹೀರೋಗಳು ನಂತರ ಅದೇ ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ ಎಂಬ ಆರೋಪ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಎಂ.ಎನ್​. ಕುಮಾರ್​ ವಿವರಿಸಿದ್ದಾರೆ. ‘ಇಂದು ಒಬ್ಬ ಹೀರೋ ಸಂಭಾವನೆ 1 ಕೋಟಿ ರೂಪಾಯಿ ಇರುತ್ತದೆ. ಅವರಿಗೆ ನಾವು 50 ಲಕ್ಷ ರೂಪಾಯಿ ಅಡ್ವಾನ್ಸ್​ ಕೊಡುತ್ತೇವೆ. ಅವರು ನಮ್ಮ ಜೊತೆ ಸಿನಿಮಾ ಮಾಡುವಷ್ಟರಲ್ಲಿ ಅವರ ಸಂಭಾವನೆ 5 ಕೋಟಿ ರೂಪಾಯಿ ಆಗಿರುತ್ತದೆ. ಆಗ ಅವರಿಗೆ ಒಂದು ಕೋಟಿ ರೂಪಾಯಿಗೆ ಸಿನಿಮಾ ಮಾಡಲು ಮನಸ್ಸು ಇರುವುದಿಲ್ಲ. 5 ಕೋಟಿ ರೂಪಾಯಿ ಕೇಳೋಕೆ ಆಗಲ್ಲ. ಅದಕ್ಕೆ ಹೀಗೆಲ್ಲ ಮಾಡ್ತಾರೆ’ ಎಂದು ಎಂ.ಎನ್​. ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ಕ್ಯಾನ್ಸರ್​ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸೆ ಈಡೇರಿಸಿದ ಕಿಚ್ಚ ಸುದೀಪ್​

ಲೀಗಲ್​ ನೋಟೀಸ್​ಗೆ ಎಂ.ಎನ್​. ಕುಮಾರ್​ ರಿಯಾಕ್ಷನ್​:

‘ವಾಟ್ಸಪ್​ ಮೂಲಕ ಬಂದಿದ್ದೆಲ್ಲ ನಿಜವಲ್ಲ. ಅಧಿಕೃತವಾಗಿ ನೋಟೀಸ್​ ಬರಲಿ. ಅದಕ್ಕೆ ಸೂಕ್ತವಾಗಿ ಉತ್ತರ ನೀಡೋಣ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೂ ವಕೀಲರು ಇರುತ್ತಾರೆ. ನಿರ್ಮಾಪಕರಲ್ಲೂ ಲಾಯರ್​ಗಳಿದ್ದಾರೆ. ಅವರೆಲ್ಲ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ರೆಡಿ ಇರುತ್ತೇನೆ’ ಎಂದು ಎಂ.ಎನ್​. ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್