AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCB ವಿಚಾರಣೆ ವೇಳೆ ನಿರ್ದೇಶಕ ಇಂದ್ರಜಿತ್ ಭಯಭೀತರಾಗಲು ಕಾರಣ ಏನು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರುವ ಬಗ್ಗೆ ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಿನ್ನೆ CCB ವಿಚಾರಣೆಗೆ ಬಂದಿದ್ದ ವೇಳೆ ಕೊಂಚ ಭಯಭೀತರಾಗಿದ್ದರು ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ. ವಿಚಾರಣೆ ವೇಳೆ CCB ಅಧಿಕಾರಿಗಳು ಕಳೆದ 3 ದಿನದಿಂದ ಬೇರೆ ಬೇರೆ ಕ್ಯಾಮರಾಗಳ ಎದುರು ಹೇಳಿಕೆ ನೀಡಿದ್ರಿ. ಈಗ ಈ ಕ್ಯಾಮರಾ ಎದುರು ಹೇಳಿಕೆ ನೀಡಿ ಎಂದು ಹೇಳಿದರಂತೆ. ಈ ಮಾತು ಕೇಳಿ ಇಂದ್ರಜಿತ್ ಲಂಕೇಶ್​ ಸ್ವಲ್ಪ ಭಯಪಟ್ಟರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದ್ರಜಿತ್​ […]

CCB ವಿಚಾರಣೆ ವೇಳೆ ನಿರ್ದೇಶಕ ಇಂದ್ರಜಿತ್ ಭಯಭೀತರಾಗಲು ಕಾರಣ ಏನು?
KUSHAL V
|

Updated on:Sep 01, 2020 | 10:47 AM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರುವ ಬಗ್ಗೆ ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಿನ್ನೆ CCB ವಿಚಾರಣೆಗೆ ಬಂದಿದ್ದ ವೇಳೆ ಕೊಂಚ ಭಯಭೀತರಾಗಿದ್ದರು ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ವಿಚಾರಣೆ ವೇಳೆ CCB ಅಧಿಕಾರಿಗಳು ಕಳೆದ 3 ದಿನದಿಂದ ಬೇರೆ ಬೇರೆ ಕ್ಯಾಮರಾಗಳ ಎದುರು ಹೇಳಿಕೆ ನೀಡಿದ್ರಿ. ಈಗ ಈ ಕ್ಯಾಮರಾ ಎದುರು ಹೇಳಿಕೆ ನೀಡಿ ಎಂದು ಹೇಳಿದರಂತೆ. ಈ ಮಾತು ಕೇಳಿ ಇಂದ್ರಜಿತ್ ಲಂಕೇಶ್​ ಸ್ವಲ್ಪ ಭಯಪಟ್ಟರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇಂದ್ರಜಿತ್​ ಹೇಳಿಕೆಯನ್ನ ಲಿಖಿತವಾಗಿ ದಾಖಲಿಸಿದ ಪೊಲೀಸರು ನಂತರ ಪ್ರತಿ ಹೇಳಿಕೆಯ ವಿಡಿಯೋ ರೆಕಾರ್ಡ್​ ಸಹ ಮಾಡಿಸಿದರಂತೆ. ಮಾಹಿತಿ ನೀಡೋ ಮುನ್ನ ತನ್ನ ಸ್ವವಿವರ ಸಲ್ಲಿಸಿದ ಇಂದ್ರಜಿತ್ ತಮ್ಮ ಹೆಸರು, ಉದ್ಯೋಗ, ಹಿನ್ನೆಲೆ ಹಾಗೂ ಸಿನಿಮಾ ರಂಗದ ನಂಟಿನ ಬಗ್ಗೆ ಮಾಹಿತಿ ನೀಡಿದರಂತೆ. ಜೊತೆಗೆ, ಪತ್ರಕರ್ತ ಮತ್ತು ಚಿತ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಹ ಕೊಟ್ಟರಂತೆ.

ಇದಲ್ಲದೆ, ಇಂದ್ರಜಿತ್ ನಿನ್ನೆ ಕೆಲವು ಫೋಟೋಗಳು ಮತ್ತು ಕ್ಲಿಪ್ಪಿಂಗ್ಸ್​ ​​ ಸಲ್ಲಿಸಿದ್ದಾರೆ. ಜೊತೆಗೆ, ಅವರ ಸುಮಾರು 6 ಪುಟಗಳ ಹೇಳಿಕೆಯನ್ನು CCB ಪೊಲೀಸರು ದಾಖಲಿಸಿಕೊಂಡರು. ‘ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ, ಸಾಕ್ಷಿದಾರನಲ್ಲ’ CCB ಪೊಲೀಸರಿಗೆ ದಾಖಲೆ ಸಲ್ಲಿಕೆ ವೇಳೆ ಇಂದ್ರಜಿತ್ ಒಂದು ಮನವಿ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಮ್ಮನ್ನು ಯಾವುದೇ ರೀತಿ ಸಾಕ್ಷಿದಾರನನ್ನಾಗಿಸದಂತೆ ಮನವಿ ಮಾಡಿಕೊಂಡಿರುವ ಲಂಕೇಶ್​ ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ. ನಾನು ಸಾಕ್ಷಿದಾರನಲ್ಲ ಎಂದು ಹೇಳಿದ್ದಾರಂತೆ.

ನನ್ನ ಬಳಿ ಇರುವ ಮಾಹಿತಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಬಹುದು. ಆದರೆ, ನನ್ನನ್ನು ಸಾಕ್ಷಿದಾರನನ್ನಾಗಿಸಿ ಕೋರ್ಟ್‌ಗೆ ಕರೆಯಬೇಡಿ ಎಂದು ನಿನ್ನೆ CCB ಪೊಲೀಸರ ಎದುರು ಇಂದ್ರಜಿತ್ ಮನವಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

Published On - 10:37 am, Tue, 1 September 20

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್