AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCB ವಿಚಾರಣೆ ವೇಳೆ ನಿರ್ದೇಶಕ ಇಂದ್ರಜಿತ್ ಭಯಭೀತರಾಗಲು ಕಾರಣ ಏನು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರುವ ಬಗ್ಗೆ ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಿನ್ನೆ CCB ವಿಚಾರಣೆಗೆ ಬಂದಿದ್ದ ವೇಳೆ ಕೊಂಚ ಭಯಭೀತರಾಗಿದ್ದರು ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ. ವಿಚಾರಣೆ ವೇಳೆ CCB ಅಧಿಕಾರಿಗಳು ಕಳೆದ 3 ದಿನದಿಂದ ಬೇರೆ ಬೇರೆ ಕ್ಯಾಮರಾಗಳ ಎದುರು ಹೇಳಿಕೆ ನೀಡಿದ್ರಿ. ಈಗ ಈ ಕ್ಯಾಮರಾ ಎದುರು ಹೇಳಿಕೆ ನೀಡಿ ಎಂದು ಹೇಳಿದರಂತೆ. ಈ ಮಾತು ಕೇಳಿ ಇಂದ್ರಜಿತ್ ಲಂಕೇಶ್​ ಸ್ವಲ್ಪ ಭಯಪಟ್ಟರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದ್ರಜಿತ್​ […]

CCB ವಿಚಾರಣೆ ವೇಳೆ ನಿರ್ದೇಶಕ ಇಂದ್ರಜಿತ್ ಭಯಭೀತರಾಗಲು ಕಾರಣ ಏನು?
KUSHAL V
|

Updated on:Sep 01, 2020 | 10:47 AM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿರುವ ಬಗ್ಗೆ ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಿನ್ನೆ CCB ವಿಚಾರಣೆಗೆ ಬಂದಿದ್ದ ವೇಳೆ ಕೊಂಚ ಭಯಭೀತರಾಗಿದ್ದರು ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ವಿಚಾರಣೆ ವೇಳೆ CCB ಅಧಿಕಾರಿಗಳು ಕಳೆದ 3 ದಿನದಿಂದ ಬೇರೆ ಬೇರೆ ಕ್ಯಾಮರಾಗಳ ಎದುರು ಹೇಳಿಕೆ ನೀಡಿದ್ರಿ. ಈಗ ಈ ಕ್ಯಾಮರಾ ಎದುರು ಹೇಳಿಕೆ ನೀಡಿ ಎಂದು ಹೇಳಿದರಂತೆ. ಈ ಮಾತು ಕೇಳಿ ಇಂದ್ರಜಿತ್ ಲಂಕೇಶ್​ ಸ್ವಲ್ಪ ಭಯಪಟ್ಟರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇಂದ್ರಜಿತ್​ ಹೇಳಿಕೆಯನ್ನ ಲಿಖಿತವಾಗಿ ದಾಖಲಿಸಿದ ಪೊಲೀಸರು ನಂತರ ಪ್ರತಿ ಹೇಳಿಕೆಯ ವಿಡಿಯೋ ರೆಕಾರ್ಡ್​ ಸಹ ಮಾಡಿಸಿದರಂತೆ. ಮಾಹಿತಿ ನೀಡೋ ಮುನ್ನ ತನ್ನ ಸ್ವವಿವರ ಸಲ್ಲಿಸಿದ ಇಂದ್ರಜಿತ್ ತಮ್ಮ ಹೆಸರು, ಉದ್ಯೋಗ, ಹಿನ್ನೆಲೆ ಹಾಗೂ ಸಿನಿಮಾ ರಂಗದ ನಂಟಿನ ಬಗ್ಗೆ ಮಾಹಿತಿ ನೀಡಿದರಂತೆ. ಜೊತೆಗೆ, ಪತ್ರಕರ್ತ ಮತ್ತು ಚಿತ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಹ ಕೊಟ್ಟರಂತೆ.

ಇದಲ್ಲದೆ, ಇಂದ್ರಜಿತ್ ನಿನ್ನೆ ಕೆಲವು ಫೋಟೋಗಳು ಮತ್ತು ಕ್ಲಿಪ್ಪಿಂಗ್ಸ್​ ​​ ಸಲ್ಲಿಸಿದ್ದಾರೆ. ಜೊತೆಗೆ, ಅವರ ಸುಮಾರು 6 ಪುಟಗಳ ಹೇಳಿಕೆಯನ್ನು CCB ಪೊಲೀಸರು ದಾಖಲಿಸಿಕೊಂಡರು. ‘ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ, ಸಾಕ್ಷಿದಾರನಲ್ಲ’ CCB ಪೊಲೀಸರಿಗೆ ದಾಖಲೆ ಸಲ್ಲಿಕೆ ವೇಳೆ ಇಂದ್ರಜಿತ್ ಒಂದು ಮನವಿ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಮ್ಮನ್ನು ಯಾವುದೇ ರೀತಿ ಸಾಕ್ಷಿದಾರನನ್ನಾಗಿಸದಂತೆ ಮನವಿ ಮಾಡಿಕೊಂಡಿರುವ ಲಂಕೇಶ್​ ನಾನು ಕೇವಲ ಮಾಹಿತಿ ಹಂಚಿಕೆದಾರ ಅಷ್ಟೆ. ನಾನು ಸಾಕ್ಷಿದಾರನಲ್ಲ ಎಂದು ಹೇಳಿದ್ದಾರಂತೆ.

ನನ್ನ ಬಳಿ ಇರುವ ಮಾಹಿತಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಬಹುದು. ಆದರೆ, ನನ್ನನ್ನು ಸಾಕ್ಷಿದಾರನನ್ನಾಗಿಸಿ ಕೋರ್ಟ್‌ಗೆ ಕರೆಯಬೇಡಿ ಎಂದು ನಿನ್ನೆ CCB ಪೊಲೀಸರ ಎದುರು ಇಂದ್ರಜಿತ್ ಮನವಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

Published On - 10:37 am, Tue, 1 September 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?