AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೌನ್ ಬನೇಗಾ ಕರೋಡ್​ ಪತಿ: ಕೋಟಿ ಗೆದ್ದ IPS ಅಧಿಕಾರಿ ಮೋಹಿತಾ ಶರ್ಮ!

ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ ಪತಿ ಜನಸಾಮಾನ್ಯರ ಪಾಲಿಗೆ ಅದೃಷ್ಟದ ಬಾಗಿಲು. ತಮ್ಮ ಬುದ್ಧಿವಂತಿಕೆ ಹಾಗೂ ಅದೃಷ್ಟ ಪರೀಕ್ಷೆಯ ಮೂಲಕ ಕೋಟಿ ರೂಪಾಯಿ ಗೆಲ್ಲಲು ದೇಶಾದ್ಯಂತ ಸಾವಿರಾರು ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಅದರಲ್ಲೂ ಈ ಬಾರಿ ಪ್ರಸಾರವಾಗುತ್ತಿರುವ ಕೆಬಿಸಿ ಕಾರ್ಯಕ್ರಮದ 12ನೇ ಆವೃತ್ತಿ ದಿನೇ ದಿನೇ ಸಂಚಲನ ಮೂಡಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾಜಿಯಾ ನಸೀಮ್ ಎಂಬ ಮಹಿಳೆ ಒಂದು ಕೋಟಿ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಇದೀಗ […]

ಕೌನ್ ಬನೇಗಾ ಕರೋಡ್​ ಪತಿ: ಕೋಟಿ ಗೆದ್ದ IPS ಅಧಿಕಾರಿ ಮೋಹಿತಾ ಶರ್ಮ!
ಸಾಧು ಶ್ರೀನಾಥ್​
|

Updated on:Nov 17, 2020 | 2:53 PM

Share

ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ ಪತಿ ಜನಸಾಮಾನ್ಯರ ಪಾಲಿಗೆ ಅದೃಷ್ಟದ ಬಾಗಿಲು. ತಮ್ಮ ಬುದ್ಧಿವಂತಿಕೆ ಹಾಗೂ ಅದೃಷ್ಟ ಪರೀಕ್ಷೆಯ ಮೂಲಕ ಕೋಟಿ ರೂಪಾಯಿ ಗೆಲ್ಲಲು ದೇಶಾದ್ಯಂತ ಸಾವಿರಾರು ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಅದರಲ್ಲೂ ಈ ಬಾರಿ ಪ್ರಸಾರವಾಗುತ್ತಿರುವ ಕೆಬಿಸಿ ಕಾರ್ಯಕ್ರಮದ 12ನೇ ಆವೃತ್ತಿ ದಿನೇ ದಿನೇ ಸಂಚಲನ ಮೂಡಿಸುತ್ತಿದೆ.

ಕೆಲ ದಿನಗಳ ಹಿಂದಷ್ಟೇ ನಾಜಿಯಾ ನಸೀಮ್ ಎಂಬ ಮಹಿಳೆ ಒಂದು ಕೋಟಿ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಇದೀಗ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಕೋಟಿ ಗೆದ್ದಿರುವ ಪ್ರೊಮೊವನ್ನು ವಾಹಿನಿ ಬಿಡುಗಡೆಗೊಳಿಸಿದ್ದು ವೀಕ್ಷಕರು ಮತ್ತಷ್ಟು ಕುತೂಹಲ ಭರಿತರಾಗಿದ್ದಾರೆ.

ಈಗ ಹೊರಬಿದ್ದಿರುವ ಪ್ರೊಮೊದಲ್ಲಿ ಬಿಗ್ ಬಿ ಒಂದು ಕೋಟಿ ಎಂದು ಅಚ್ಚರಿಯಿಂದ ಉದ್ಘರಿಸುತ್ತಿರುವ ದೃಶ್ಯವಿದ್ದು ನಂತರದಲ್ಲಿ ಏಳು ಕೋಟಿಯ ಪ್ರಶ್ನೆಗೂ ಮೋಹಿತಾ ಶರ್ಮಾ ಕಾಲಿಟ್ಟಿರುವುದು ಬಹಿರಂಗವಾಗಿದೆ. ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬುದು ನನ್ನ ಪತಿಯ ಕನಸಾಗಿತ್ತು.

ಅದಕ್ಕಾಗಿ ಅವರು ಬಾಲ್ಯದಿಂದಲೂ ಪ್ರಯತ್ನ ಪಡುತ್ತಿದ್ದರು. ಆದರೆ, ಈಗ ನಾನು ಭಾಗವಹಿಸುವ ಅವಕಾಶ ಲಭಿಸಿತು ಎಂದಿದ್ದಾರೆ. ಕೊನೆಯಲ್ಲಿ ಎಷ್ಟು ಹಣ ಗೆಲ್ಲುತ್ತೇನೆ ಎನ್ನುವುದಕ್ಕಿಂತ ಇಲ್ಲಿಂದ ಏನು ಪಡೆದುಕೊಂಡೆ ಎನ್ನುವುದು ತೃಪ್ತಿ ನೀಡಬೇಕು ಎಂದಿರುವ ಮೋಹಿತಾ ಏಳು ಕೋಟಿ ಪ್ರಶ್ನೆಗೆ ಸರಿ ಉತ್ತರ ನೀಡಿದ್ದಾರಾ ಇಲ್ಲವಾ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ನಾಜೀಯಾ ನಸೀಮ್ ಬಳಿಕ 12ನೇ ಆವೃತ್ತಿಯಲ್ಲಿ ಕೋಟಿ ಗೆಲ್ಲುತ್ತಿರುವ ಸ್ಪರ್ಧಿ ಮೋಹಿತಾ ಶರ್ಮ ಆಗಿದ್ದು ಇಬ್ಬರೂ ಮಹಿಳಾ ಸ್ಪರ್ಧಿಗಳಾಗಿರುವುದು ವಿಶೇಷ.

Published On - 2:52 pm, Tue, 17 November 20

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್