AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಟ್ನೆಸ್​ ಕಾಪಾಡಲು ‘ವಜ್ರಕಾಯ’ ನಟಿ ಇದನ್ನ ಅಚ್ಚುಕಟ್ಟಾಗಿ ಪಾಲಿಸ್ತಾರೆ

ವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿಯಾಗಿ ಸಿಡಿದಿದ್ದ ನಭಾ ನಟೇಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಭಾ ನಟೇಶ್ ಸ್ಯಾಂಡಲ್​ವುಡ್ ಚಿತ್ರದ ಮೂಲಕ ಸಿನಿಜರ್ನಿ ಆರಂಭಿಸಿದ ತಾರೆ. ಆದರೆ ಆ ಬಳಿಕ ಸಾಹೇಬ ಎಂಬ ಚಿತ್ರದಲ್ಲಿ ಬಣ್ಣಹಚ್ಚಿದ್ದು ಬಿಟ್ಟರೆ ಕನ್ನಡದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಇವರು ಟಾಲಿವುಡ್​ನಲ್ಲಿ ಮಾತ್ರ ಸಕ್ರಿಯ ನಟಿಯಾಗಿದ್ದಾರೆ. ಬ್ಯೂಟಿಫುಲ್ ನಭಾ ಅವರ ಅಭಿನಯ ಮತ್ತು ಸೌಂದರ್ಯಕ್ಕೆ ಪ್ರೇಕ್ಷಕರು ಬಹುಪರಾಕ್ ಅಂದಿದ್ದಾರೆ. ಹಾಲುಗೆನ್ನೆ ಚೆಲುವೆ ನಭಾ ನಟೇಶ್ ನಟನೆಯ ಜೊತೆಗೆ ಸೌಂದರ್ಯದಲ್ಲೂ ಪರ್ಪೆಕ್ಟ್. ಬ್ಯೂಟಿಫುಲ್ ನಭಾ ಅವರ […]

ಫಿಟ್ನೆಸ್​ ಕಾಪಾಡಲು 'ವಜ್ರಕಾಯ' ನಟಿ ಇದನ್ನ ಅಚ್ಚುಕಟ್ಟಾಗಿ ಪಾಲಿಸ್ತಾರೆ
Follow us
ಸಾಧು ಶ್ರೀನಾಥ್​
|

Updated on:Oct 30, 2019 | 2:06 PM

ವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿಯಾಗಿ ಸಿಡಿದಿದ್ದ ನಭಾ ನಟೇಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಭಾ ನಟೇಶ್ ಸ್ಯಾಂಡಲ್​ವುಡ್ ಚಿತ್ರದ ಮೂಲಕ ಸಿನಿಜರ್ನಿ ಆರಂಭಿಸಿದ ತಾರೆ. ಆದರೆ ಆ ಬಳಿಕ ಸಾಹೇಬ ಎಂಬ ಚಿತ್ರದಲ್ಲಿ ಬಣ್ಣಹಚ್ಚಿದ್ದು ಬಿಟ್ಟರೆ ಕನ್ನಡದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಇವರು ಟಾಲಿವುಡ್​ನಲ್ಲಿ ಮಾತ್ರ ಸಕ್ರಿಯ ನಟಿಯಾಗಿದ್ದಾರೆ.

ಬ್ಯೂಟಿಫುಲ್ ನಭಾ ಅವರ ಅಭಿನಯ ಮತ್ತು ಸೌಂದರ್ಯಕ್ಕೆ ಪ್ರೇಕ್ಷಕರು ಬಹುಪರಾಕ್ ಅಂದಿದ್ದಾರೆ. ಹಾಲುಗೆನ್ನೆ ಚೆಲುವೆ ನಭಾ ನಟೇಶ್ ನಟನೆಯ ಜೊತೆಗೆ ಸೌಂದರ್ಯದಲ್ಲೂ ಪರ್ಪೆಕ್ಟ್. ಬ್ಯೂಟಿಫುಲ್ ನಭಾ ಅವರ ಫಿಟ್ನೆಸ್ ಗುಟ್ಟು ನಿತ್ಯ ಪಾಲಿಸುವ ಡಯಟ್ ಚಾರ್ಟ್ ಅಂತೆ. ನಭಾ ಅಚ್ಚುಕಟ್ಟಾಗಿ ಫುಡ್ ಮೆನು ಪಾಲಿಸ್ತಾರೆ. ಬೆಳಗಿನ ಒಂದು ಲೋಟ ಬಿಸಿನೀರು ಕುಡಿಯುವುದರೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸ್ತಾರಂತೆ ನಭಾ.

ಇನ್ನು ಡಯಟ್ ಚಾರ್ಟ್​ನಲ್ಲಿ ಇವರು ಆಹಾರದ ಪ್ರಮಾಣ, ಗುಣಮಟ್ಟ ಮತ್ತು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದರ ಕಡೆಗೆ ಹೆಚ್ಚಿನ ಗಮನ ಹರಿಸ್ತಾರೆ. ಯಾಕಂದ್ರೆ ನಾವು ಸೇವಿಸುವ ಆಹಾರ ಫಿಟ್ನೆಸ್​ ಮತ್ತು ಸೌಂದರ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಆರೋಗ್ಯಕರ ಮೈಕಟ್ಟಿನ ಸೂತ್ರ ಅಂತಾರೆ ಫಿಟ್ನೆಸ್ ಪ್ರೀಕ್ ನಭಾ.

ಈ ಕಾರಣದಿಂದ ರಾತ್ರಿ ಊಟವನ್ನು ಇವರು 7.30 ಹೊತ್ತಿಗೆ ಮಾಡ್ತಾರಂತೆ. ಇದ್ರ ನಂತ್ರ ಯಾವುದೇ ಹೆವೀ ಫುಡ್ ಸೇವಿಸಲ್ವಂತೆ. ಮಲಗುವ ಟೈಮ್​ಗೆ ಆಹಾರ ಸೇವಿಸದೆ, ರಾತ್ರಿ ಊಟವನ್ನು ಬೇಗನೇ ಮಾಡಿ ಮುಗಿಸಿ ಅನ್ನೋ ಕಿವಿಮಾತು ಕೂಡಾ ಹೇಳ್ತಾರೆ. ಹಾಗೆಯೇ ಕೂದಲಿನ ಆರೈಕೆಗಾಗಿ ನಭಾ ಕನಿಷ್ಟ ಮೂರು ಅಥವಾ ನಾಲ್ಕು ಬಾರಿ ಆಯಿಲ್ ಮಸಾಜ್ ಮಾಡ್ತಾರಂತೆ. 

Published On - 8:27 am, Wed, 30 October 19

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್