AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಕ್ಕೆ ಸಿದ್ಧವಾಗ್ತಿವೆ ಸಾಲು ಸಾಲು ಸಿನಿಮಾಗಳು.. 2021ಕ್ಕೆ ಸ್ಯಾಂಡಲ್​ವುಡ್ ರಸದೌತಣ

ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಸ್ಯಾಂಡಲ್​ವುಡ್​ಗೂ ಹೊಸ ಹುರುಪು ಬಂದಿದೆ. ಕನ್ನಡ ಸಿನಿ ಇಂಡಸ್ಟ್ರಿ, ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಡಲು ಸಜ್ಜಾಗಿದೆ. ಹಾಗಾದ್ರೆ 2021 ಕನ್ನಡ ಚಿತ್ರರಂಗದ ಪಾಲಿಗೆ ಹೇಗಿರತ್ತೆ? ಯಾವೆಲ್ಲಾ ಸಿನಿಮಾಗಳು ಹೈಪ್ ಕ್ರಿಯೇಟ್ ಮಾಡಿವೆ? ಯಾರ ಪಾತ್ರಗಳು ಅಭಿಮಾನಿಗಳನ್ನು ಕಾಡುತ್ತಿವೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

ಹೊಸ ವರ್ಷಕ್ಕೆ ಸಿದ್ಧವಾಗ್ತಿವೆ ಸಾಲು ಸಾಲು ಸಿನಿಮಾಗಳು.. 2021ಕ್ಕೆ ಸ್ಯಾಂಡಲ್​ವುಡ್ ರಸದೌತಣ
ಆಯೇಷಾ ಬಾನು
|

Updated on: Dec 25, 2020 | 6:53 AM

Share

ಕೊರೊನಾ.. ಕೊರೊನಾ.. ಅಂತಾ 2020ನ್ನು ತಳ್ಳಿ ಹಾಕಿದ್ದು ಆಯ್ತು. ಜಗತ್ತು ಕೊರೊನಾ ಸುಳಿಗಾಳಿಗೆ ಸಿಲುಕಿ ನಲುಗಿದ್ದಾಯ್ತು. ಇದು ಸಿನಿಮಾ ಮಂದಿಯನ್ನೂ ಬಿಡಲಿಲ್ಲ. ಹಾಲಿವುಡ್​ನಿಂದ ಹಿಡಿದು ಸ್ಯಾಂಡಲ್​ವುಡ್ ತನಕ ಈ ವರ್ಷ ನಷ್ಟ ಅನುಭವಿಸಿದ್ದೇ ಆಯ್ತು. ಆದರೆ ಇನ್ನೇನು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2021 ಆರಂಭಕ್ಕೆ ಜಸ್ಟ್ 6 ದಿನ ಬಾಕಿ ಇದೆ. ಈ ಹೊತ್ತಲ್ಲೇ ಸ್ಯಾಂಡಲ್​ವುಡ್ ಅಭಿಮಾನಿಗಳಿಗೆ ಹೊಸವರ್ಷದಲ್ಲಿ ರಸದೌತಣ ನೀಡಲು ಸಿನಿ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಹಲವು ನಿರೀಕ್ಷೆಗಳೊಂದಿಗೆ 2021ರ ಆರಂಭಕ್ಕೆ ಕಾಯುತ್ತಿದ್ದಾರೆ.

2021ಕ್ಕೆ ಬಹಳಷ್ಟು ಹೊಸ ಪ್ಲ್ಯಾನ್ ಮಾಡ್ಕೊಂಡಿದೆ ಸ್ಯಾಂಡಲ್​ವುಡ್. ಅದರಲ್ಲೂ ಸ್ಟಾರ್ ನಟರಂತೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಘರ್ಜಿಸೋಕೆ ರೆಡಿಯಾಗಿದ್ದಾರೆ. ಮುಂದಿನ ವರ್ಷ ಒಂದಷ್ಟು ಸಿನಿಮಾಗಳು ತೆರೆಗೆ ಬಂದ್ರೆ ಮತ್ತೊಂದಷ್ಟು ಸಿನಿಮಾಗಳ ಶೂಟಿಂಗ್ ಶುರುವಾಗಲಿದೆ. ಮೊದಲಿನಂತೆ ವರ್ಷಗಟ್ಟಲೇ ಬ್ರೇಕ್ ಪಡೆಯುವ ಯೋಚನೆಯನ್ನೇ ಸ್ಟಾರ್ ನಟರು ಕೈಬಿಟ್ಟಿದ್ದಾರಂತೆ.

ಅಂದಹಾಗೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಮುಂದಿನ ವರ್ಷ ತೆರೆಕಂಡ್ರೆ, ನಂತ್ರ ಜೇಮ್ಸ್ ಶೂಟಿಂಗ್ನಲ್ಲಿ ಅಪ್ಪು ಬ್ಯೂಸಿಯಾಗಿರ್ತಾರೆ. ರಾಬರ್ಟ್ ರಿಲೀಸ್ ಬೆನ್ನಲ್ಲೇ ದರ್ಶನ್​ರ ಹೊಸ ಚಿತ್ರಗಳು ಸೆಟ್ಟೇರುತ್ತವೆ. ತರುಣ್ ನಿರ್ದೇಶನದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ 2021ಕ್ಕೆ ಆರಂಭ ಆಗಲಿದೆ.

ಕಿಚ್ಚ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ‘ಕೋಟಿಗೊಬ್ಬ-3’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಅತ್ತ ಅನುಪ್ ನಿರ್ದೇಶನದ ಫ್ಯಾಂಟಮ್ ಕೂಡ ಬಹುತೇಕ ಮುಕ್ತಾಯವಾಗಿದೆ. ಫ್ಯಾಂಟಮ್ ನಂತ್ರ ಅನುಪ್ ಸಾರಥ್ಯದಲ್ಲಿ ಅಶ್ವಥಾಮ ಶೂಟಿಂಗ್ ಹಾಗೂ ಜೊತೆಗೆ ‘ಬಿಲ್ಲ ರಂಗ ಭಾಷಾ’ ಕೂಡ ಗಲ್ಲಾ ಪೆಟ್ಟಿಗೆ ಸದ್ದು ಮಾಡಲು ಹೆಜ್ಜೆ ಇಡಲಿದೆ.

‘ಭಜರಂಗಿ-2’ ಜೊತೆಗೆ ಸಿದ್ಧವಾಗಿರೊ ಶಿವಣ್ಣ ಅಭಿನಯದ ಶಿವಪ್ಪ ಕೂಡ 2021ಕ್ಕೆ ತೆರೆಗೆ ಬರಲಿದೆ. ಇನ್ನೂ ಪೊಗರು ಮುಗಿಸಿರೊ ಧ್ರುವ, ದುಬಾರಿ ಚಿತ್ರದ ಶೂಟಿಂಗ್​ ಶುರು ಮಾಡಲಿದ್ದಾರೆ. ಜೊತೆಗೆ ನಿರ್ದೇಶಕ ರಾಘವೇಂದ್ರ ಹೆಗ್ಡೆ ಸಿನಿಮಾದಲ್ಲಿ ಸೈನಿಕನಾಗಿ ಕಾಣಿಸಿಕೊಳ್ಳೋದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ 2020 ಚಂದನವನ ನಲುಗುವಂತೆ ಮಾಡಿತ್ತು. ಆದ್ರೆ ಕೊರೊನಾ ಕಾಟದಿಂದ ಕುಂದದ ಸ್ಯಾಂಡಲ್​ವುಡ್ ಹೊಸ ಹುರುಪಿನಲ್ಲಿ ಹೊಸ ಹೊಸ ಸಿನಿಮಾಗಳನ್ನ ಕೈಗೆತ್ತಿಕೊಂಡಿದೆ. 2021ರ ಹೊಸ ಭರವಸೆಯಲ್ಲಿ ಮುನ್ನುಗ್ಗುತ್ತಿದೆ.

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!