AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Together as One: ಲಾಕ್​ಡೌನ್​ ಸಂತ್ರಸ್ತ ಸಂಗೀತಗಾರರ ನೆರವಿಗೆ ಧಾವಿಸಿದ ದಿಗ್ಗಜರು

ಬೆಂಗಳೂರು: ಕೊವಿಡ್​ ಮಹಾಮಾರಿಯಿಂದ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಯುನೈಟೆಡ್​ ಸಿಂಗರ್ಸ್​ ಚಾರಿಟೇಬಲ್​ ಟ್ರಸ್ಟ್​ ಎಂಬ ಸಂಸ್ಥೆಯು ಮುಂದಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಶ್ರೀನಿವಾಸ್​ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ರಾಹುಲ್​ ನಂಬಿಯಾರ್​, ರಂಜೀತ್ ಗೋವಿಂದ್​ ಹಾಗೂ ಸುಜಾತಾ ಮೋಹನ್​ ಸಹ ಕೈಜೋಡಿಸಿದ್ದಾರೆ. ಇದೀಗ, ಸಂಸ್ಥೆಯು ಒಂದಾಗಿ ಬಾಳೋಣ (Together as one) ಎಂಬ ಶೀರ್ಷಿಕೆಯಡಿ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ AR ರಹಮಾನ್​, ಕನ್ನಡ ನಟ […]

Together as One: ಲಾಕ್​ಡೌನ್​ ಸಂತ್ರಸ್ತ ಸಂಗೀತಗಾರರ ನೆರವಿಗೆ ಧಾವಿಸಿದ ದಿಗ್ಗಜರು
KUSHAL V
| Edited By: |

Updated on: Aug 15, 2020 | 11:45 AM

Share

ಬೆಂಗಳೂರು: ಕೊವಿಡ್​ ಮಹಾಮಾರಿಯಿಂದ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಯುನೈಟೆಡ್​ ಸಿಂಗರ್ಸ್​ ಚಾರಿಟೇಬಲ್​ ಟ್ರಸ್ಟ್​ ಎಂಬ ಸಂಸ್ಥೆಯು ಮುಂದಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಶ್ರೀನಿವಾಸ್​ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ರಾಹುಲ್​ ನಂಬಿಯಾರ್​, ರಂಜೀತ್ ಗೋವಿಂದ್​ ಹಾಗೂ ಸುಜಾತಾ ಮೋಹನ್​ ಸಹ ಕೈಜೋಡಿಸಿದ್ದಾರೆ.

ಇದೀಗ, ಸಂಸ್ಥೆಯು ಒಂದಾಗಿ ಬಾಳೋಣ (Together as one) ಎಂಬ ಶೀರ್ಷಿಕೆಯಡಿ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ AR ರಹಮಾನ್​, ಕನ್ನಡ ನಟ ಯಶ್​, ಮಲಯಾಳಂ ನಟ ಮೋಹನ್​ಲಾಲ್​ ಮತ್ತು ತೆಲುಗು ನಟ ರಾಮ್​ಚರಣ್​ ಸಹ ಸೇರಿ ಈ ಹಾಡಿನ ಸಿ.ಡಿ.ಯನ್ನ ಬಿಡುಗಡೆ ಮಾಡಿದರು.

AR ರಹಮಾನ್​ರ ಪ್ರಸಿದ್ಧ ಹಾಡೊಂದರ ಅವತರಣಿಕೆಯಾದ ಈ ಸಾಂಗ್​ಗೆ ಐದು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ 65 ಜನ ಗಾಯಕರು ದನಿಗೂಡಿಸಿದ್ದಾರೆ. ಲಹರಿ ಮ್ಯೂಸಿಕ್​ ಕಂಪನಿಯಿಂದ ಬಿಡುಗಡೆಯಾದ ಈ ಹಾಡಿಗೆ ಎಲ್ಲಾ ಗಾಯಕರು ಲಾಕ್​ಡೌನ್​ ವೇಳೆ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದು ಹಾಡಿದ್ದಾರೆ.

ಹಾಡಿನಿಂದ ಬರುವ ಆದಾಯವನ್ನ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಬಳಸಲು ತೀರ್ಮಾನಿಸಲಾಗಿದೆ. ಜೊತೆಗೆ, ಬರುವ ಸೆಪ್ಟೆಂಬರ್​ನಲ್ಲಿ ಜಾಗತಿಕ ಸಂಗೀತ ಸಮ್ಮೇಳನ ನಡೆಸಿ ಮತ್ತಷ್ಟು ಅನುದಾನ ಪಡೆಯಲು ಮುಂದಾಗಿದ್ದಾರೆ.

Follow Us
KUSHAL V
KUSHAL V
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ