AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಂಧನ’ ಚಿತ್ರದ ಯಶಸ್ಸು ತಡೆಯಲು ನಡೆದಿತ್ತು ಹುನ್ನಾರ; ಆದರೂ ಗೆದ್ದು ಬೀಗಿದ್ದ ವಿಷ್ಣು ಸಿನಿಮಾ

ವಿಷ್ಣುವರ್ಧನ್ ನಟನೆಯ ‘ಬಂಧನ’ ಸಿನಿಮಾ ರಿಲೀಸ್ ಆಗಿದ್ದು 1984ರ ಆಗಸ್ಟ್ 24ರಂದು. ಈ ಸಿನಿಮಾ ರಿಲೀಸ್ ಆಗಿ 40 ವರ್ಷಗಳು ಕಳೆದಿವೆ. ಈಗಲೂ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಸಿನಿಮಾದಿಂದ ವಿಷ್ಣುವರ್ಧನ್ ಅವರು ಗೆಲುವಿನ ನಗೆ ಬೀರಿದ್ದರು.

‘ಬಂಧನ’ ಚಿತ್ರದ ಯಶಸ್ಸು ತಡೆಯಲು ನಡೆದಿತ್ತು ಹುನ್ನಾರ; ಆದರೂ ಗೆದ್ದು ಬೀಗಿದ್ದ ವಿಷ್ಣು ಸಿನಿಮಾ
ಬಂಧನ
ರಾಜೇಶ್ ದುಗ್ಗುಮನೆ
|

Updated on: Aug 23, 2024 | 11:39 AM

Share

ವಿಷ್ಣುವರ್ಧನ್ ನಟನೆಯ ‘ಬಂಧನ’ ಸಿನಿಮಾ ರಿಲೀಸ್ ಆಗಿ ನಾಳೆಗೆ (ಆಗಸ್ಟ್ 24) ಬರೋಬ್ಬರಿ 40 ವರ್ಷ. 1984ರಲ್ಲಿ ರಿಲೀಸ್ ಆದ ಈ ಚಿತ್ರ ವಿಷ್ಣುವರ್ಧನ್ ಅವರ ವೃತ್ತಿ ಜೀವನದಲ್ಲಿ ಪ್ರಮುಖ ಎನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ವಿಷ್ಣು ಹಾಗೂ ಸುಹಾಸಿನಿ ಕೆಮಿಸ್ಟ್ರಿ ಜನರಿಗೆ ಇಷ್ಟ ಆಯಿತು. ಈ ಚಿತ್ರಕ್ಕೆ ರಾಷ್ಟ್ರ, ರಾಜ್ಯ ಹಾಗೂ  ಫಿಲ್ಮ್​ಫೇರ್​ ಪ್ರಶಸ್ತಿಗಳು ಬಂದವು. ಈ ಚಿತ್ರ ಯಶಸ್ಸು ಕಾಣಬಾರದು ಎಂದು ಅನೇಕರು ಹುನ್ನಾರ ನಡೆಸಿದ್ದರು. ಆದರೆ, ಅದನ್ನೂ ಮೀರಿ ಸಿನಿಮಾ ಗೆಲುವು ಕಂಡಿತ್ತು.

‘ಬಂಧನ’ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಅವರೇ ನಿರ್ಮಾಣ ಕೂಡ ಮಾಡಿದ್ದರು. ಉಶಾ ನವರತ್ನರಾಮ್ ಬರೆದ ‘ಬಂಧನ’ ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಲಾಯಿತು. ಈ ಚಿತ್ರಕ್ಕೆ ಈಗ 40ರ ಸಂಭ್ರಮ. ಈ ಸಿನಿಮಾ 1985ರಲ್ಲಿ ತಮಿಳಿಗೆ ‘ಪ್ರೇಮ ಪಾಶಂ’ ಹೆಸರಲ್ಲಿ ರಿಮೇಕ್ ಆಯಿತು. ‘ಡಾ. ನಂದಿನಿ’ ಎಂಬ ಹೆಸರಲ್ಲಿ ತೆಲುಗಿಗೆ ಈ ಸಿನಿಮಾ ಡಬ್ ಆಯಿತು. ಈ ಚಿತ್ರವನ್ನು ಮಲಯಾಳಂ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಈ ಸಿನಿಮಾದಲ್ಲಿ ಬರೋ ನಂದಿನಿ ಪಾತ್ರ ಸಾಕಷ್ಟು ಜನಪ್ರಿಯತೆ ಪಡೆಯಿತು.

ವಿಷ್ಣು ಅಂದಿನ ಕಾಲಕ್ಕೆ ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದರು. ಅವರು ಲವ್​​ಸ್ಟೋರಿ ಸಿನಿಮಾ ಮಾಡುತ್ತಾರೆ ಎಂದಾಗ ಅನೇಕರು ನಕ್ಕಿದ್ದರಂತೆ. ಅವರಲ್ಲರಿಗೂ ‘ಬಂಧನ’ ಸಿನಿಮಾದಿಂದ ಉತ್ತರ ಸಿಕ್ಕಿತ್ತು. 25 ಕೇಂದ್ರಗಳಲ್ಲಿ ಈ ಸಿನಿಮಾ 25 ವಾರ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಸಿನಿಮಾನ ತೆಗೆಸಲಾಯಿತು. ಈ ಸಿನಿಮಾಗೆ ಯಶಸ್ಸು ಸಿಗಬಾರದು ಎಂದು ಕೆಲವರು ಬಂದ ಪ್ರೇಕ್ಷಕರಿಗೆ ಥಿಯೇಟರ್​ನಲ್ಲಿ ಖಾರದಪುಡಿ ಎರಚಿದ್ದರು. ಕೆಲವರು ಬ್ಲೇಡ್​ನಲ್ಲಿ ಹೊಡೆಯುವ ಕೆಲಸ ಕೂಡ ಮಾಡಿದರು. ಆದಾಗ್ಯೂ ಸಿನಿಮಾ ಗೆದ್ದಿತ್ತು.

ಇದನ್ನೂ ಓದಿ: ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ

ವಿಷ್ಣುವರ್ಧನ್ ಅವರಿಗೆ ಕಪಾಳಕ್ಕೆ ಹೊಡೆಯೋ ದೃಶ್ಯ ಇತ್ತು. ಇದನ್ನು ಮಾಡೋಕೇ ಸುಹಾಸಿನಿ ಒಪ್ಪಿರಲಿಲ್ಲ. ‘ವಿಷ್ಣುವರ್ಧನ್​ಗೆ ಕಪಾಳಕ್ಕೆ ಹೊಡೆಯೋ ದೃಶ್ಯ ಇಟ್ಟಿದೀರಲ್ಲ’ ಎಂದು ರಾಜೇಂದ್ರ ಸಿಂಗ್ ಬಾಬು ಜೊತೆ ಸುಹಾಸಿನಿ ಶೂಟಿಂಗ್​ನ ಮೊದಲ ದಿನವೇ ಜಗಳ ಕೂಡ ಮಾಡಿದ್ದರು. ವಿಷ್ಟು ಅಭಿಮಾನಿಗಳು ಹಾಗೂ ಸಿನಿಪ್ರಿಯರು ಈ ಚಿತ್ರವನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ