ಮಹತ್ವದ ಘಟ್ಟದಲ್ಲಿ ‘ಆಸೆ’ ಧಾರಾವಾಹಿ; ರೋಹಿಣಿಯೇ ಕ್ರಿಶ್ ತಾಯಿ ಅಂತ ಎಲ್ಲರಿಗೂ ತಿಳಿಯುವ ಸಮಯ

ಈಗಾಗಲೇ ರೋಹಿಣಿಯನ್ನು ಆಕೆಯ ಅತ್ತೆ ಶಾಂತಿಯು ಒಮ್ಮೆ ಮನೆಯಿಂದ ಹೊರಹಾಕಿದ್ದಳು. ಇದಕ್ಕೆ ಕಾರಣ ಆಗಿದ್ದು, ಆಕೆಯ ಮಲೇಷ್ಯಾ ಸುಳ್ಳು ವಿಷಯ. ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಕೊನೆಗೆ ಶಾಂತಿಯ ಮನಸ್ಸು ಬದಲಿಸಿ ರೋಹಿಣಿಯನ್ನು ಮರಳಿ ಕರೆತರಲಾಯಿತು. ಈಗ ಈ ವಿಷಯ ಗೊತ್ತಾದರೆ, ಅತ್ತೆ ಜೀವಂತ ಉಳಿಸೋದಿಲ್ಲ ಎನ್ನುವ ಭಯ ಅವಳನ್ನು ಬಹುವಾಗಿ ಕಾಡುತ್ತಿದೆ.

ಮಹತ್ವದ ಘಟ್ಟದಲ್ಲಿ ‘ಆಸೆ’ ಧಾರಾವಾಹಿ; ರೋಹಿಣಿಯೇ ಕ್ರಿಶ್ ತಾಯಿ ಅಂತ ಎಲ್ಲರಿಗೂ ತಿಳಿಯುವ ಸಮಯ
ಆಸೆ ಧಾರಾವಾಹಿ
Image Credit source: Star Suvarna
Edited By:

Updated on: Apr 10, 2026 | 7:35 AM

ಸ್ಟಾರ್ ಸುವರ್ಣದ ‘ಆಸೆ’ ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಧಾರಾವಾಗೆ ದೊಡ್ಡ ಅಭಿಮಾನಿ ಬಳಗ ಇದ್ದಿರೋದು ಗೊತ್ತೇ ಇದೆ. ಈಗ ‘ಆಸೆ’ ಧಾರಾವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಕ್ರಿಶ್ ಸೂರ್ಯನ ಮಗ ಎಂಬುದು ನಾಯಕಿ ಮೀನಾಗೆ ಗೊತ್ತಾಗಿ ಹೋಗಿದೆ. ಈ ವಿಷಯವನ್ನು ಮನೆಯ ಎಲ್ಲರಿಗೂ ಹೇಳುವಂತೆ ಆಕೆ ಒತ್ತಡ ಹೇರುವುದನ್ನು ನೀವು ಧಾರಾವಾಹಿಯಲ್ಲಿ ಕಾಣಬಹುದು.

‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಪತಿಗೆ ಹಾಗೂ ಕುಟುಂಬಕ್ಕೆ ಮೋಸ ಮಾಡುತ್ತಲೇ ಬರುತ್ತಿದ್ದಾಳೆ. ಈ ವಿಷಯದಲ್ಲಿ ಆಕೆಗೆ ಯಾವುದೇ ಬೇಸರ ಇಲ್ಲ. ಆಕೆ ಮೋಸ ಮಾಡುವುದರಲ್ಲೇ ನಿರತರಾಗಿದ್ದಾಳೆ. ಮೊದಲು ತನ್ನ ತಂದೆ ಮಲೇಷಿಯಾದಲ್ಲಿದ್ದಾನೆ ಎಂದು ನಂಬಿಸಿ ಮನೋಜ್ ಜೊತೆ ಮದುವೆ ಆದಳು. ಆ ಬಳಿಕ ಅದು ಸುಳ್ಳು ಎಂಬುದು ಗೊತ್ತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ತನಗೆ ಮಗು ಇರುವ ವಿಷಯವನ್ನು ಆಕೆ ಮುಚ್ಚಿಟ್ಟಿದ್ದಳು.

ಈಗ ಅದು ಹೊರಗೆ ಬಂದಿದೆ. ಮೀನಾಗೆ ಈ ವಿಷಯ ಗೊತ್ತಾಗಿದೆ. ಆಕೆಗೆ ಸತ್ಯ ಗೊತ್ತಾದಾಗಿನಿಂದ ಆಕೆಯ ಮನಸ್ಸು ನಿಲ್ಲುತ್ತಿಲ್ಲ. ಈ ಸತ್ಯವನ್ನು ಎಲ್ಲರಿಗೂ ಹೇಳುವಂತೆ ಒತ್ತಡ ಹೇರುತ್ತಿದ್ದಾಳೆ. ಆದರೆ, ಇದನ್ನು ತೆಗೆದುಕೊಳ್ಳಲು ಆಕೆ ರೆಡಿ ಇಲ್ಲ. ಅವಳು ಒದ್ದಾಡುತ್ತಿದ್ದಾಳೆ. ಜೊತೆಗೆ ರೋಹಿಣಿಗೆ ಸತ್ಯ ಹೇಳುವಂತೆ ಒತ್ತಡ ಹೇರುತ್ತಿದ್ದಾಳೆ. ಇದರಿಂದ ಆಕೆ ಕಂಗಾಲಾಗಿ ಹೋಗಿದ್ದಾಳೆ.

ಇದನ್ನೂ ಓದಿ: ‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಈಗಾಗಲೇ ರೋಹಿಣಿಯನ್ನು ಆಕೆಯ ಅತ್ತೆ ಶಾಂತಿಯು ಒಮ್ಮೆ ಮನೆಯಿಂದ ಹೊರಹಾಕಿದ್ದಳು. ಇದಕ್ಕೆ ಕಾರಣ ಆಗಿದ್ದು, ಆಕೆಯ ಮಲೇಷ್ಯಾ ಸುಳ್ಳು ವಿಷಯ. ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಕೊನೆಗೆ ಶಾಂತಿಯ ಮನಸ್ಸು ಬದಲಿಸಿ ರೋಹಿಣಿಯನ್ನು ಮರಳಿ ಕರೆತರಲಾಯಿತು. ಈಗ ಈ ವಿಷಯ ಗೊತ್ತಾದರೆ, ಅತ್ತೆ ಜೀವಂತ ಉಳಿಸೋದಿಲ್ಲ ಎನ್ನುವ ಭಯ ಅವಳನ್ನು ಬಹುವಾಗಿ ಕಾಡುತ್ತಿದೆ. ಈ ಮಧ್ಯೆ ಕ್ರಿಶ್ ಮನೆಯಲ್ಲೇ ಬಂದು ಉಳಿದುಕೊಳ್ಳುವಂತೆ ಮಾಡಿದ್ದಾಳೆ ಮೀನಾ. ಇದರಿಂದ ರೋಹಿಣಿಗೆ ಸಂಕಷ್ಟ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us